<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-2189102912389204330</id><updated>2011-07-08T08:10:17.389+05:30</updated><title type='text'>ಕನಸಿನರಮನೆ</title><subtitle type='html'>ಇದು ನನ್ನ ಲೋಕ...</subtitle><link rel='http://schemas.google.com/g/2005#feed' type='application/atom+xml' href='http://kanasinaramane.blogspot.com/feeds/posts/default'/><link rel='self' type='application/atom+xml' href='http://www.blogger.com/feeds/2189102912389204330/posts/default?max-results=100'/><link rel='alternate' type='text/html' href='http://kanasinaramane.blogspot.com/'/><link rel='hub' href='http://pubsubhubbub.appspot.com/'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><generator version='7.00' uri='http://www.blogger.com'>Blogger</generator><openSearch:totalResults>36</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-2189102912389204330.post-1868578934990155787</id><published>2008-09-20T20:07:00.000+05:30</published><updated>2008-09-20T20:11:21.696+05:30</updated><title type='text'>ಕನಸಿನರಮನೆಯ ಅತಿಥಿ ದೇವರುಗಳ ಗಮನಕ್ಕೆ</title><content type='html'>&lt;span style="font-size:130%;"&gt;&lt;span style="font-weight: bold; color: rgb(51, 51, 255);"&gt;ನಾನು ಜಾಗ ಬದಲಿಸಿದ್ದೇನೆ. ಅಂದರೆ ಈವರೆಗೆ ಬ್ಲಾಕ್‌ಸ್ಪಾಟ್‌ನಲ್ಲಿದ್ದ ನನ್ನ ಬ್ಲಾಗ್, ಇನ್ಮುಂದೆ ವರ್ಡ್‌ಪ್ರೆಸ್‌ನಲ್ಲಿ ಮುಂದುವರಿಯಲಿದೆ. ಬದಲಾದ ಹೊಸ ವಿಳಾಸ;  &lt;a href="http://kanasinaramane.wordpress.com/"&gt;http://kanasinaramane.wordpress.com/ &lt;/a&gt;&lt;/span&gt;&lt;br /&gt;&lt;span style="font-weight: bold; color: rgb(51, 51, 255);"&gt;ಅಲ್ಲಿಗೆ ದಯಮಾಡಿ ಬನ್ನಿ.. &lt;/span&gt;&lt;/span&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-1868578934990155787?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/1868578934990155787/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=1868578934990155787' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/1868578934990155787'/><link rel='self' type='application/atom+xml' href='http://www.blogger.com/feeds/2189102912389204330/posts/default/1868578934990155787'/><link rel='alternate' type='text/html' href='http://kanasinaramane.blogspot.com/2008/09/blog-post.html' title='ಕನಸಿನರಮನೆಯ ಅತಿಥಿ ದೇವರುಗಳ ಗಮನಕ್ಕೆ'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-430311801116039721</id><published>2008-08-18T00:01:00.002+05:30</published><updated>2008-08-18T00:09:08.688+05:30</updated><title type='text'>ದೊಡ್ಡ ಮುಳ್ಳು, ಚಿಕ್ಕಮುಳ್ಳು ಮತ್ತು ನಾನು!</title><content type='html'>&lt;a href="http://3.bp.blogspot.com/_eDo9m8Nl3wg/SKhv-u1KB8I/AAAAAAAAAE8/Bz0s_yR83Uk/s1600-h/h.jpg"&gt;&lt;img id="BLOGGER_PHOTO_ID_5235557690331760578" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_eDo9m8Nl3wg/SKhv-u1KB8I/AAAAAAAAAE8/Bz0s_yR83Uk/s320/h.jpg" border="0" /&gt;&lt;/a&gt; ಒಂದು ದೊಡ್ಡಮುಳ್ಳು, ಇನ್ನೊಂದು ಚಿಕ್ಕ ಮುಳ್ಳು.. ಜತೆಗೊಂದು ಸೆಕೆಂಡ್ ಮುಳ್ಳು.. ಈ ಮುಳ್ಳುಗಳ ಗೊಂದಲದಲ್ಲಿ ಗಡಿಯಾರದಲ್ಲಿ ಟೈಮ್ ಹೇಳೋದು ನನ್ಗೆ ಗೊತ್ತಾಗುತ್ತಿರಲಿಲ್ಲ. ಆ ಕೆಲಸ ಅಂಬರದ ಚುಕ್ಕೆಗಳನ್ನು ಎಣಿಸಿದಷ್ಟೆ ತ್ರಾಸದಾಯಕ ಅನ್ನಿಸಿತ್ತು. ಗಡಿಯಾರ ನೋಡಿ ಟೈಮ್ ಹೇಳೋರನ್ನು ಜಾಣರೆಂದು, ವಿದ್ಯಾವಂತರೆಂದು ಆಗ ಪರಿಗಣಿಸಲಾಗಿತ್ತು. ನಾನಂತೂ ೫ನೇ ಕ್ಲಾಸ್ ದಾಟಿದರೂ ಮುಳ್ಳಿನ ಗೊಂದಲದಿಂದ ಹೊರಬಂದಿರಲಿಲ್ಲ. ಆಗಷ್ಟೆ ಬಂದಿದ್ದ ನಂಬರ್ ವಾಚುಗಳು ನನಗೆ ಇಷ್ಟವಾಗಿದ್ದವು. ಮುಳ್ಳುಗಳಿಲ್ಲ ಎಂಬುದು, ನನ್ನ ಇಷ್ಟಕ್ಕೆ ಇನ್ನೊಂದು ಕಾರಣ.&lt;br /&gt;ಅಂಕೆಗಳಿಲ್ಲದಿದ್ದರೂ ಗೆರೆಗಳನ್ನು ನೋಡಿ ಕಾಲ ಹೇಳುವ ಪರಿ ನನ್ನಲ್ಲಾಗ ಕುತೂಹಲದ ವಿಷಯ. ಮೊದಮೊದಲು ‘ನೀನು ದೊಡ್ಡವನಾಗು ಗೊತ್ತಾಗುತ್ತೆ ’ ಎಂದು ಮನೆಯಲ್ಲಿ ಹೇಳುತ್ತಿದ್ದರು. ಕೆಲವು ಸಲ ಅಣ್ಣ, ಅಮ್ಮ, ಅಪ್ಪ -ಹೀಗೆ ಎಲ್ಲರೂ ಟೈಮ್ ನೋಡೋದನ್ನು ಕಲಿಸಲು ತಿಣುಕಿ ವಿಫಲರಾಗಿ, ಕೈಚೆಲ್ಲಿದ್ದರು. ಹಾಗೆಂದು ನಾನು ಲೆಕ್ಕದಲ್ಲಿ ವೀಕೇನು ಇರಲಿಲ್ಲ.&lt;br /&gt;ಅಣ್ಣ ಆಗಷ್ಟೆ ಎಸ್‌ಎಸ್‌ಎಲ್‌ಸಿ ಪಾಸ್ ಮಾಡಿದ್ದ. ಅವನಿಗೆ ಬಂದಿದ್ದ ಸ್ಕಾಲರ್‌ಶಿಪ್‌ನಲ್ಲಿ ಒಂದು ಎಚ್‌ಎಂಟಿ ವಾಚನ್ನು ಬೆಂಗಳೂರಿಂದ ಅಪ್ಪ ತಂದುಕೊಟ್ಟಿದ್ದರು. ಜಗಳ ಮಾಡ್ತೀನಿ ಅಂಥ ಒಂದು ಶೆಲ್ ವಾಚನ್ನು ನನಗೆ ತಂದಿದ್ದರು. ‘ನೀನು ಎಸ್ಸೆಸ್ಸೆಲ್ಸಿಯಲ್ಲಿ ಒಳ್ಳೆ ನಂಬರ್ ತಗೊಂಡ್ರೆ ನಿನಗೂ ವಾಚ್ ಕೊಡಿಸ್ತೀವಿ’ ಎಂದಿದ್ದರು. ಎಚ್‌ಎಂಟಿ ವಾಚ್‌ಗಿಂತಲೂ ಅದರ ಬಾಕ್ಸೇ ನನಗಾಗ ಬಲು ಇಷ್ಟ. ಅಣ್ಣನಂತೂ ವಾಚ್ ಧರಿಸಿ ಠೀವಿಯಿಂದ ಹೆಜ್ಜೆಹಾಕುತ್ತಿದ್ದ. ಮನೆಗೆ ಬಂದ ತಕ್ಷಣ ಬಾಕ್ಸ್‌ನಲ್ಲಿ ಶಿಸ್ತಿನಿಂದ ಬಿಚ್ಚಿಡುತ್ತಿದ್ದ. ನಾನು ಅವನಿಲ್ಲದ ಹೊತ್ತಲ್ಲಿ ಮನೆಯಲ್ಲಿಯೇ ಗಡಿಯಾರ ಧರಿಸಿ ಖುಷಿಪಡುತ್ತಿದ್ದೆ.&lt;br /&gt;ನನಗೆ ಅಪ್ಪ ತಂದು ಕೊಟ್ಟಿದ್ದ ಶೆಲ್ ವಾಚ್‌ನ ಚೈನ್ ಎರಡು ದಿನಕ್ಕೆ ತುಂಡಾಗಿತ್ತು. ಅಪ್ಪ ಮನೆಯಲ್ಲಿನ ಚಾಕು, ಕಟಿಂಗ್ ಪ್ಲೇಯರ್ ತಕೊಂಡು ಸರಿಮಾಡಿದ್ದರು. ಆದರೂ ಆ ಚೈನ್ ಆಗಾಗ ಕಳಚಿ ಬೀಳುತ್ತಿತ್ತು. ಆಮೇಲಾಮೇಲೆ ನಾನೇ ರಿಪೇರಿ ಮಾಡೋದನ್ನು ಕಲಿತೆ. ರಿಪೇರಿ ಮಾಡೋದರಲ್ಲಿ ನಾನು ಮೊದಲಿಂದಲೂ ಎತ್ತಿದ ಕೈ. ಯಾರಾದರೂ ಟೈಮ್ ಕೇಳಿದರೆ, ೧೦.೧೬ ಅನ್ನುತ್ತಿದ್ದೆ. ೧೧.೨೯ಅನ್ನುತ್ತಿದ್ದೆ. ನಿಮಿಷಗಳು ಬದಲಾಗುವ ಪರಿ, ಈಗಲೂ ನನ್ನ ಪಾಲಿಗೆ ದೊಡ್ಡ ಬೆರಗು.&lt;br /&gt;ಈ ಕೈಗಡಿಯಾರದ ವಿಷಯಕ್ಕೆ ಆಮೇಲೆ ಬರೋಣ. ಟೈಮನ್ನು ಪಕ್ಕದ ಮಸೀದಿಯವರು ಅಲ್ಲಾ ಕೂಗೋದನ್ನು ಅನುಸರಿಸಿ ಅಮ್ಮ ಹೇಳುತ್ತಿದ್ದಳು. ‘ಓ ಈಗ ೮ ಗಂಟೆ, ಆಗಲೇ ೧೨ ಗಂಟೆಯಾಯ್ತಾ..’ ಎಂದು ಅಮ್ಮ ಗೊಣಗುತ್ತಿದ್ದದ್ದು ಈಗಲೂ ಒಂದು ಸವಿನೆನಪು. ಮನೆಯಲ್ಲಿ ಆಗ ಗಡಿಯಾರ ಅಂಥ ಇದ್ದಿದ್ದು, ಅಪ್ಪನದೊಂದೆ. ಅಪ್ಪ ಸ್ಕೂಲ್ ಮೇಷ್ಟ್ರು. ಅಪ್ಪನ ಎಚ್‌ಎಂಟಿ ವಾಚಿನ ಮೇಲೆ ನಮಗೆಲ್ಲ ಏನೋ ಮೋಹ. ಅದರ ಟಿಕ್‌ಟಿಕ್ ನಾದ, ಮುಳ್ಳುಗಳು ಸುತ್ತೋ ಶಿಸ್ತು ನಿಜಕ್ಕೂ ಇಷ್ಟವಾಗಿತ್ತು.&lt;br /&gt;ಬೆಳಬೆಳಗ್ಗೆ ಪೇಪರ್ ಓದಲು ಅಪ್ಪ ಬಸ್ ಸ್ಟಾಂಡ್‌ನತ್ತ ಹೆಜ್ಜೆ ಹಾಕುತ್ತಿದ್ದರು. ಪೇಪರ್ ಎಲ್ಲಾ ಮುಗಿಸಿ ದೇಶ ಮತ್ತು ಊರಿನ ಸಮಾಚಾರವನ್ನು ಚೆನ್ನಪ್ಪನ ಹೋಟೆಲ್‌ನಲ್ಲಿ ಚರ್ಚಿಸಿ, ಗೆಳೆಯರ ಕಾಲೆಳೆದು ಅಲ್ಲಿ ಮಾತಿನ ಮಂಟಪ ಕಟ್ಟುವಲ್ಲಿ ಅಪ್ಪ ಎತ್ತಿದ ಕೈ. ಆ ಸುಖದಲ್ಲಿ ಸಮಯ ಹೋಗಿದ್ದು ಅವರಿಗೆ ಗೊತ್ತಾಗುತ್ತಿರಲಿಲ್ಲ. ಹೋಟೆಲ್ ಹಿಂದೆಯೇ ಇದ್ದ ಶಾಲೆಯ ಗಂಟೆ ಹೊಡೆದ ತಕ್ಷಣ , ಅಪ್ಪ ಮನೆಯತ್ತ ಬಿರಬಿರನೆ ಬರ್ತಾಯಿದ್ದರು. ೫-೧೦ ನಿಮಿಷದಲ್ಲಿಯೇ ಅವರ ಸ್ನಾನ-ತಿಂಡಿ ಎಲ್ಲಾ ಮುಗಿದು, ಶಾಲೆಯ ಪ್ರಾರ್ಥನೆ ಮುಗಿವ ಹೊತ್ತಿಗೆ ಶಾಲೆಯಲ್ಲವರು ಹಾಜರು.&lt;br /&gt;ಇಲ್ಲಿ ಅಪ್ಪ ಇಲ್ಲದ ಹೊತ್ತಿನಲ್ಲಿ ನಮಗೆ ಸಮಯ ತಿಳಿಯುತ್ತಿರಲಿಲ್ಲ. ನಾನು ಮತ್ತು ಅಣ್ಣ ರಸ್ತೆಯಲ್ಲಿ ನಿಂತು, ಹೋಗಿ ಬರೋರ ಬಳಿ ಸಮಯ ಕೇಳ್ತಾಯಿದ್ವಿ. ‘ಅಣ್ಣಾ ಟೈಮೆಷ್ಟಣ್ಣ ’, ‘ಸಾರ್ ಟೈಮೆಷ್ಟಾಯಿತು ಸಾರ್’ ಎಂಬ ನಮ್ಮ ದಿನನಿತ್ಯದ ಪ್ರಶ್ನೆ, ಆ ರಸ್ತೆಯಲ್ಲಿ ಸುತ್ತಾಡುವ ಅನೇಕರಿಗೆ ಚಿರಪರಿಚಿತ. ಅವರು ೯.೩೦ ಅಂದರೆ, ಕೂಡಲೇ ಮನೆಗೆ ಬಂದು ‘ಅಮ್ಮಾ ಆಗಲೇ ೧೦ ಗಂಟೆ ಆಯಿತು, ಬೇಗ ತಿಂಡಿ ರೆಡಿ ಮಾಡು.. ಸ್ಕೂಲ್‌ಗೆ ಟೈಮಾಯ್ತು’ ಎಂದು ಪೀಡಿಸುತ್ತಿದ್ದೆವು.&lt;br /&gt;ರಸ್ತೆಯಲ್ಲಿ ಬರೋ ೧೦ ಜನರಲ್ಲಿ ಒಬ್ಬರೋ ಇಬ್ಬರೋ ಗಡಿಯಾರ ಹೊಂದಿರುತ್ತಿದ್ದರು. ನಾವು ಟೈಂ ಕೇಳಿದಾಗ, ಠೀವಿಯಿಂದ ಕೈಯೆತ್ತಿ ಸಮಯ ಹೇಳುತ್ತಿದ್ದರು. ಕೆಲವರಿಗೆ ಸಮಯ ಹೇಳೋದು ಗೊತ್ತಿರಲಿಲ್ಲ. ಅವರು ಫ್ಯಾಷನ್‌ಗಾಗಿ ಕಟ್ಟುತ್ತಿದ್ದರು. ಅಂಥವರು ‘ಗಡಿಯಾರ ಯಾಕೋ ಬೆಳಗ್ಗೆಯಿಂದ ನಿಂತೋಗಯ್ತೆ..’ ಎನ್ನುತ್ತಾ ನಮ್ಮಿಂದ ತಪ್ಪಿಸಿಕೊಳ್ಳುತ್ತಿದ್ದರು.&lt;br /&gt;‘ಮಕ್ಕಳು ರಸ್ತೆಯಲ್ಲಿ ನಿಂತು ಕಂಡೋರ ಬಳಿ ಟೈಮ್ ಕೇಳೋದನ್ನು ನೋಡೋಕೆ ಆಗೋದಿಲ್ಲ. ಮೊದಲು ಗೋಡೆ ಗಡಿಯಾರ ತನ್ನಿ’ ಎಂದು ಅಮ್ಮ ಕೇಳುತ್ತಿದ್ದಳು. ಅಪ್ಪ , ‘ತರೋಣ. ಈ ಸಲ ಪೇಪರ್ ವ್ಯಾಲ್ಯುಯೇಷನ್‌ಗೆ ಬೆಂಗಳೂರ್‌ಗೆ ಹೋದಾಗ ತರ್ತಿನಿ’ ಎನ್ನುತ್ತಿದ್ದರು. ಈ ಮಧ್ಯೆ ವೀರಗಾನಹಳ್ಳಿಯಲ್ಲಿದ್ದ ಚಿಕ್ಕಪ್ಪನ ಮನೆಯ ಗೋಡೆಯನ್ನು ‘ಮಾಸ್ಟರ್ ಬಿಂ-ಬಾಂ’ ಗಡಿಯಾರ ಅಲಂಕರಿಸಿತ್ತು. ಮಧುಗಿರಿಯಲ್ಲಿ ಸಿಕ್ಕಿದ್ದ ಚಿಕ್ಕಪ್ಪನ ಮಗ ರವಿ, ಈ ವಿಷಯವನ್ನು ನನ್ನ ಕಿವಿಗೆ ಹಾಕಿದ್ದ. ಅವನು ಅದ್ಯಾಕೆ ಹೇಳಿದನೋ ಗೊತ್ತಿಲ್ಲ.&lt;br /&gt;ಈ ಮಧ್ಯೆ ಅಪ್ಪ-ಅಮ್ಮ ಮತ್ತು ನಾನು ವೀರಗಾನಹಳ್ಳಿಗೆ ಹೋಗಿದ್ದೆವು. ಮಾರಮ್ಮನ ಹಬ್ಬವೋ ಅಥವಾ ಇನ್ನೇನೋ ಇತ್ತು. ಹಬ್ಬಕ್ಕಿಂತಲೂ ನಮಗೆ ಗೋಡೆ ಗಡಿಯಾರದ ಮೇಲೆಯೇ ಗಮನ. ಅದು ಗಂಟೆಗೊಮ್ಮೆ ಬಿಂ-ಬಾಂ ಎಂದು ಸದ್ದು ಮಾಡಿದಾಗಲೆಲ್ಲ, ಎದೆಯಲ್ಲಿ ಪುಳಕ. ಕೆಲವೇ ದಿನಗಳಲ್ಲಿ ಅಂಥದ್ದೇ ಗಡಿಯಾರ ತರಲು ಮನೆಯಲ್ಲಿ ಸಿದ್ಧತೆಗಳು ನಡೆದವು. ತುಮಕೂರಿಂದ ನಾವಿದ್ದ ಪಟ್ಟನಾಯ್ಕನಳ್ಳಿಗೆ ಬರ್‍ತಾಯಿದ್ದ ಸದಾಶಿವಯ್ಯ ಮೇಷ್ಟ್ರು ಗಡಿಯಾರ ತರುವ ಹೊಣೆ ಹೊತ್ತುಕೊಂಡರು. ಮಾಸ್ಟರ್ ಬಿಂ-ಬಾಂ ತರಲು, ಗಡಿಯಾರದಂಗಡಿಗೆ ಹೋಗಿದ್ದ ಅವರಿಗೆ, ಅದು ಓಲ್ಡ್ ಫ್ಯಾಷನ್‌ನಂತೆ ಕಂಡಿರಬೇಕು. ಅವರು ಕೀ ರಗಳೆ ಇಲ್ಲದ ಅಜಂತ ಕ್ವಾರ್ಟ್ಜ್ ಗಡಿಯಾರ ತಂದಿದ್ದರು. ಆ ಗಡಿಯಾರಕ್ಕಾಗಿ ಅವರು ಇನ್ನೂ ೫೦ ರೂಪಾಯಿ ಸೇರಿಸಿದ್ದರು.&lt;br /&gt;ಆ ಗಡಿಯಾರ ನೋಡಿದ ಅಪ್ಪನಿಗೆ ಇಷ್ಟವಾಯಿತು. ಆದರೆ ನಮಗ್ಯಾರಿಗೂ ಸುತಾರಾಂ ಇಷ್ಟವಾಗಲಿಲ್ಲ. ರಾತ್ರಿ ೧೨ಗಂಟೆಗೆ ೧೨ ಸಲ ಗಂಟೆ ಹೊಡೆದರೆ, ನಿದ್ದೆ ಹೋಗುತ್ತೆ, ಇದು ಚೆನ್ನಾಗಿದೆ. ಕೀ ಕೊಡಬೇಕಿಲ್ಲ. ವರ್ಷಕ್ಕೊಂದು ಸೆಲ್ ಹಾಕಿದರೆ ಸಾಕು’ ಎಂದು ಸದಾಶಿವಯ್ಯ ಮೇಷ್ಟ್ರು ಏನೇನೋ ವಿವರಣೆ ನೀಡಿ, ನಮ್ಮನ್ನು ಒಪ್ಪಿಸಲು ನೋಡಿದರು. ಒಲ್ಲದ ಮನಸ್ಸಿನಲ್ಲಿಯೇ ಗೋಡೆಗೆ ಮೊಳೆ ಹೊಡೆದು ನೇತು ಹಾಕಿದೆವು. ಯಾಕೋ ಅದರ ಅಸ್ತಿತ್ವ ಯಾರಿಗೂ ಕಾಣಿಸುತ್ತಿಲ್ಲ ಎಂದು ನಮಗೆಲ್ಲ ಅನ್ನಿಸಿತ್ತು. ಗಂಟೆ ಬದಲಿಗೆ ಅದು ಮಂಜುಳ ನಿನಾದವನ್ನು ಹೊರಚೆಲ್ಲುತ್ತಿತ್ತು.&lt;br /&gt;ರಾತ್ರಿ ವೇಳೆ ಆ ಸುಮಧುರ ಸಂಗೀತ ಬಂದ್! ರಾತ್ರಿ ೧೦ ಗಂಟೆ ತನಕ ಮ್ಯೂಸಿಕ್ ನುಡಿಸೋ ಗಡಿಯಾರ, ಆಮೇಲೇಕೆ ಸುಮ್ಮನಾಗುತ್ತೆ ಅನ್ನೋದು ನಮಗೆಲ್ಲ ಚಿದಂಬರ ರಹಸ್ಯ. ಗಡಿಯಾರದ ಮೇಲೆ ಬೆಳಕು ಬಿದ್ದರಷ್ಟೆ ಮ್ಯೂಸಿಕ್ ಬರುತ್ತೆ ಅನ್ನೋದನ್ನು ನಾನು ಕಂಡು ಹಿಡಿದು ಜಾಣನಂತೆ ಬೀಗಿದೆ. ಅಪ್ಪ ನನ್ನ ವಾದವನ್ನು ಒಪ್ಪಿಕೊಂಡರು.&lt;br /&gt;ಗಡಿಯಾರದ ಬಗ್ಗೆ ನಮ್ಮ ಪ್ರೀತಿ ಚಿಗುರಲೇ ಇಲ್ಲ. ಯಾಕೋ ಅದನ್ನು ಕಂಡಾಗಲೆಲ್ಲಾ ಎಲ್ಲೋ ಮೋಸ ಹೋದೆವು ಅನ್ನಿಸುತ್ತಿತ್ತು. ನಮ್ಮ ಮನಸ್ಥಿತಿ ಸದಾಶಿವಯ್ಯ ಮೇಷ್ಟ್ರುಗೆ ಅರ್ಥವಾಯಿತು ಅನ್ನಿಸುತ್ತೆ. ಅವರು ಹೊಸದೊಂದು ಮಾಸ್ಟರ್ ಬಿಂ-ಬಾಂ ಗಡಿಯಾರ ತಂದು ಕೊಟ್ಟರು. ಅಜಂತ ಕ್ವಾರ್ಟ್ಜ್ ಗಡಿಯಾರವನ್ನು ತಮ್ಮ ಮನೆಯಲ್ಲಿ ಹಾಕಿಕೊಂಡರು. ಹೊಸ ಗಡಿಯಾರ ಬಂದ ದಿನ ನಮಗೆಲ್ಲ ಏನೋ ಸಡಗರ. ಅಮ್ಮ ಅರಿಷಿಣ-ಕುಂಕುಮ ಇಟ್ಟು ಪೂಜೆ ಮಾಡಿದರು. ಪೆಂಡಿಲಮ್‌ಗೂ ಅರಿಷಿಣ-ಕುಂಕುಮದ ಜತೆ ವಿಭೂತಿ ಸವರಿದೆವು. ಅದು ಗಂಟೆಗೆ ಮತ್ತು ಅರ್ಧ ಗಂಟೆಗೆ ಸದ್ದು ಮಾಡುತ್ತಿತ್ತು. ಹನ್ನೆರಡು ಗಂಟೆ ಬರೋದನ್ನು ಕಾಯುತ್ತಿದ್ದೆವು. ಗಡಿಯಾರ ಒಂದೊಂದು ಗಂಟೆ ಹೊಡೆದಾಗಲೂ ನಾವು ಒಂದು, ಎರಡು, ಮೂರು.. ಹನ್ನೊಂದು, ಹನ್ನೆರಡು ಎಂದು ಎಚ್ಚರಿಕೆಯಿಂದ ಎಣಿಸುತ್ತಿದ್ದೆವು.&lt;br /&gt;ವಾರಕ್ಕೊಮ್ಮೆ ಕೀ ಕೊಡಲು ಅಪ್ಪ ಕುರ್ಚಿ ಮೇಲೆ ಹತ್ತುತ್ತಿದ್ದರು. ಅವರಿಗೆ ಕುರ್ಚಿ ತಂದು ಕೊಡುವುದು ಮತ್ತು ಕೀ ನೀಡುವ ಪ್ರಕ್ರಿಯೆ ವೀಕ್ಷಿಸುತ್ತಿದ್ದೆ. ಆರಂಭದಲ್ಲಿ ಹಿತವಾಗಿದ್ದ ಘಂಟಾನಾದ, ನಂತರ ಕರ್ಣ ಕಠೋರ ಅನ್ನಿಸತೊಡಗಿತು. ಆಮೇಲಾಮೇಲೆ ಕೀ ಕೊಡುವ ಉತ್ಸಾಹ ಅಪ್ಪ ಮತ್ತು ನನ್ನಲ್ಲಿ ಇಲ್ಲವಾಯಿತು. ‘ಮನೆಯಲ್ಲಿನ ಗಡಿಯಾರ ನಿಲ್ಲ ಬಾರದು, ಕೀ ಕೊಡಿ’ ಎಂದು ಅಮ್ಮ ಹೇಳುತ್ತಿದ್ದಳು. ಅವಳ ಬಲವಂತಕ್ಕೆ ಕೀ ಕೊಡುತ್ತಿದ್ದೆವು. ನಮ್ಮ ನಿರುತ್ಸಾಹ ಕಂಡು ಗಡಿಯಾರಕ್ಕೆ ಬೇಸರವಾಗಿರಬೇಕು. ಒಂದು ಒಳ್ಳೆ ದಿನ ಅದು ಕೆಟ್ಟು ನಿಂತಿತು. ಅದನ್ನೇ ಕಾಯುತ್ತಿದ್ದ ನಾನು ಅದನ್ನೆತ್ತಿ ಅಟ್ಟದ ಮೇಲಿಟ್ಟೆ. ಆ ಜಾಗಕ್ಕೆ ಮತ್ತೆ ಕ್ವಾರ್ಟ್ಜ್ ಗಡಿಯಾರವನ್ನು ಅಣ್ಣ ತಂದು ಹಾಕಿದ.&lt;br /&gt;ಈಗ ಮತ್ತೆ ಕೈಗಡಿಯಾರದ ವಿಷಯಕ್ಕೆ ಬರೋಣ. ಆಗ ಯಾರದಾದ್ರೂ ಕೈಯಲ್ಲಿ ಚಿನ್ನದ ಬಣ್ಣದ ವಾಚು ಹೊಳೆಯುತ್ತಿದೆ ಎಂದರೆ, ಹೊಸದಾಗಿ ಮದುವೆಯಾಗಿದ್ದಾನೆ ಎಂದು ಸುಲಭವಾಗಿ ಊಹಿಸಬಹುದಿತ್ತು. ‘ವರದಕ್ಷಿಣೆ, ಉಂಗುರ ಮತ್ತು ಚೈನ್ ಜತೆಗೆ ಗೋಲ್ಡ್ ಕೇಸ್ ವಾಚ್ ಕೊಡಬೇಕು’ ಎಂಬ ಬೇಡಿಕೆಯನ್ನು ವರಮಹಾಶಯರು ಮುಂದಿಡುತ್ತಿದ್ದರು. ಅಂಥಾ ವಾಚ್ ಕಟ್ಟುವ ಬಯಕೆ ನಾವು ಹುಡುಗರಾಗಿದ್ದಾಗಲೇ ಎದೆಯಲ್ಲಿ ಗರಿಗೆದರಿತ್ತು. ನಾನು ಎಸ್ಸೆಸ್ಸೆಲ್ಸಿ ಯನ್ನು ಸೆಕಂಡ್ ಕ್ಲಾಸಲ್ಲಿ ಪಾಸ್ ಮಾಡಿದ್ದು ನಮ್ಮ ಮನೆಮಂದಿಗೆಲ್ಲಾ ಆಶ್ಚರ್ಯದ ಸಂಗತಿ! ಒಂದೋ ಎರಡೋ ಸಬ್ಜೆಕ್ಟ್‌ನಲ್ಲಿ ಡುಮ್ಕಿ ಹೊಡಿತಾನೆ ಎಂದು ಅವರು ಭಾವಿಸಿದ್ದರು. ಬೆಂಗಳೂರಿನಲ್ಲಿದ್ದ ಅಣ್ಣನಿಗಂತೂ ಖುಷಿಯೋ ಖುಷಿ. ಅವನು ಪ್ರತಿ ಸಲ ಊರಿಗೆ ಬಂದಾಗ ೧೦೦ ಗ್ರಾಂ ಚೌಚೌನ್ನು ನನಗಾಗಿ ತರ್ತಾಯಿದ್ದ. ಆ ಸಲ ಸ್ವೀಟನ್ನು ತಂದಿದ್ದ. ಅದೇ ಟೈಮಲ್ಲಿ ಅಪ್ಪನೊಂದಿಗೆ ಬೆಂಗಳೂರಿಗೆ ಹೋಗಿದ್ದೆ. ಜತೆಯಲ್ಲಿದ್ದ ಅಣ್ಣ, ‘ಅಪ್ಪಾ ಬಾಬುಗೊಂದು ಗಡಿಯಾರ ಕೊಳ್ಳೋಣವೇ’ ಎಂದ. ಎಚ್‌ಎಂಟಿ ಶೋರೂಂಗೆ ಹೊರಟಿತು ನಮ್ಮ ಸವಾರಿ.&lt;br /&gt;ಅಲ್ಲಿ ಕೀ ಕೊಡುವ ಗಡಿಯಾರಗಳನ್ನು ಅಪ್ಪಾ ನೋಡ್ತಾಯಿದ್ದರು. ಆದರೆ ಅಣ್ಣ, ಕ್ವಾರ್ಟ್ಜ್ ಗಡಿಯಾರಗಳನ್ನು ಕೈಯಲ್ಲಿಡಿದಿದ್ದ. ‘ಅವೆಲ್ಲಾ ಜಾಸ್ತಿ ರೇಟು, ಇದ್ಯಾವುದಾದರೂ ನೋಡು’ ಎಂದರು. ಆದರೆ ಅಣ್ಣ ಅತ್ತ ಸುಳಿಯಲೇ ಇಲ್ಲ. ೬೬೮ ರೂಪಾಯಿ ನೀಡಿ ಕ್ವಾರ್ಟ್ಜ್ ಗಡಿಯಾರ ಕೊಡಿಸಿದ. ಆಗಿನ ಕಾಲಕ್ಕೆ ಅದು ಒಳ್ಳೆ ಗಡಿಯಾರ(ಈಗಲೂ ಸಹಾ). ಹೀರೊ ಹೊಂಡಾ ಸರ್ವೀಸ್ ಸೆಂಟರ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಅವನಿಗೆ ಆಗ ಬರ್ತಾಯಿದ್ದ ಸಂಬಳ ಬರೀ ೪೦೦ ರೂಪಾಯಿ. ಗಡಿಯಾರ ಖರೀದಿಸಿದ ಮೇಲೆ ಹೋಟೆಲ್‌ಗೆ ಹೋಗಿ ಮಸಾಲೆ ದೋಸೆ ತಿಂದೆವು. ಬೆಂಗಳೂರಿನ ಅಂದಿನ ಟ್ರಾಫಿಕ್, ಬಿಎಂಟಿಸಿ ಬಸ್‌ಗಳು, ಜನ ಜಾತ್ರೆ -ಇವೆಲ್ಲವೂ ನನ್ನ ಕಣ್ಣಿಂದ ಕದಲದ ಚಿತ್ರಗಳು.&lt;br /&gt;ಅಣ್ಣ, ಗಡಿಯಾರ ಕೊಡಿಸಿ ಇಂದಿಗೆ ದಶಕಗಳು ಸವೆದಿವೆ. ಆಗಾಗ ಸೆಲ್ ಹಾಕಿಸಿದ್ದು ಬಿಟ್ಟರೇ ರಿಪೇರಿ ತಂಟೆಗೆ ಹೋಗಿಲ್ಲ. ಯಾಕೋ ಗಡಿಯಾರ ಕಂಡಾಗಲೆಲ್ಲ, ಅಣ್ಣ ನೆನಪಾಗುತ್ತಾನೆ. ಅಣ್ಣನೊಂದಿಗೆ ನಮ್ಮ ಮನೆಮಂದಿ ನೆನಪಾಗುತ್ತಾರೆ. ಬೆಂಗಳೂರಿಗೆ ಬಂದಾಗ ಅದು ನನ್ನ ಕೈಯಲ್ಲಿತ್ತು. ಅದರ ಗಾಜು ಒಡೆದದ್ದು, ಅದನ್ನು ಹಾಕಿಸಿದ್ದು ಬಿಟ್ಟರೆ ಬೇರೇನು ಕಿರಿಕಿರಿಗಳಿರಲಿಲ್ಲ. ಈ ಮಧ್ಯೆ ವಾಚನ್ನು ಎಲ್ಲಾದರೂ ನಾನು ಕಳೆದುಕೊಳ್ಳುತ್ತೇನೆ ಎಂದು ಮನಸಿಗೆ ಅನ್ನಿಸತೊಡಗಿತು. ಮತ್ತೊಬ್ಬ ಅಣ್ಣ ಮೊಬೈಲ್ ಕೊಡಿಸಿದ ಮೇಲೆ ಗಡಿಯಾರದ ಅವಶ್ಯಕತೆ ಇಲ್ಲ ಎಂದು ನನಗೆ ನಾನೇ ಅಂದುಕೊಂಡೆ. ಆ ನೆಪದಲ್ಲಿ ಅಣ್ಣನ ಎಚ್‌ಎಂಟಿ ವಾಚನ್ನು ಜೋಪಾನ ಮಾಡುವುದು ಒಳ ಹುನ್ನಾರ! ಅಂದಿನಿಂದ ಗಡಿಯಾರ ಮನೆಯ ಶೋಕೇಸ್‌ನಲ್ಲಿ ಭದ್ರವಾಗಿ ಕೂತು ಬಿಟ್ಟಿದೆ.&lt;br /&gt;ಗಡಿಯಾರ ಧರಿಸುವುದು ಹಿಂದೆ ದೌಲತ್ತಿನ ಸಂಕೇತ. ಜತೆಗೆ ಶ್ರೀಮಂತಿಕೆ ಮತ್ತು ಗಣ್ಯತೆ ಪ್ರದರ್ಶಿಸುವ ನೆಪವಾಗಿತ್ತು. ಆದರೆ ದಿನಗಳು ಬದಲಾಗಿವೆ. ಕಂಪನಿ ಸಿಇಒ ಸೇರಿದಂತೆ ಬಹುತೇಕರ ಕೈಯಲ್ಲೀಗ ಗಡಿಯಾರ ಉಳಿದಿಲ್ಲ. ಮಾತಿಗೂ, ಸಮಯಕ್ಕೂ ಎಲ್ಲಕ್ಕೂ ಎಲ್ಲರ ಕೈಯಲ್ಲೂ ಕಿಣಿಕಿಣಿ ಮೊಬೈಲ್.&lt;br /&gt;ಎಲ್‌ಕೆಜಿ ಓದುವ ಮಗಳಿಗೆ ಅಣ್ಣ ನಂಬರ್ ತೋರಿಸುವ ಗಡಿಯಾರ ತಂದುಕೊಟ್ಟಿದ್ದಾನೆ. ಬಯಸುವ ಮೊದಲೇ ಗಡಿಯಾರ ಅವಳ ಕಾಲಬುಡಕ್ಕೆ ಬಿದ್ದಿದೆ. ಹೀಗಾಗಿ ಅವಳಲ್ಲಿ ಗಡಿಯಾರದ ಕನಸಿಲ್ಲ. ಮುಳ್ಳುಗಳ ಗೊಂದಲಗಳೂ ಇಲ್ಲ.&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-430311801116039721?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/430311801116039721/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=430311801116039721' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/430311801116039721'/><link rel='self' type='application/atom+xml' href='http://www.blogger.com/feeds/2189102912389204330/posts/default/430311801116039721'/><link rel='alternate' type='text/html' href='http://kanasinaramane.blogspot.com/2008/08/blog-post_18.html' title='ದೊಡ್ಡ ಮುಳ್ಳು, ಚಿಕ್ಕಮುಳ್ಳು ಮತ್ತು ನಾನು!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eDo9m8Nl3wg/SKhv-u1KB8I/AAAAAAAAAE8/Bz0s_yR83Uk/s72-c/h.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-2877852226511023042</id><published>2008-08-13T21:32:00.001+05:30</published><updated>2008-08-13T21:39:31.064+05:30</updated><title type='text'>ಗ್ರಾಮೀಣ ಭಾರತದ ಇಷ್ಟ-ಕಷ್ಟಗಳು!</title><content type='html'>&lt;a href="http://2.bp.blogspot.com/_eDo9m8Nl3wg/SKMHForuR5I/AAAAAAAAAE0/lO887ZZvIxc/s1600-h/milkmaid.jpg"&gt;&lt;img id="BLOGGER_PHOTO_ID_5234034985336194962" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_eDo9m8Nl3wg/SKMHForuR5I/AAAAAAAAAE0/lO887ZZvIxc/s320/milkmaid.jpg" border="0" /&gt;&lt;/a&gt;&lt;br /&gt;&lt;div&gt;ಯಾರನ್ನಾದರೂ ಮಾತನಾಡಿಸಿ ನೋಡಿ, ತಮ್ಮ ಊರಿನ ವಿಷಯ ಬಂದಾಗ ಎಲ್ಲರೂ ಭಾವುಕರಾಗುತ್ತಾರೆ. ‘ನಮ್ಮ ಊರು(ಹಳ್ಳಿ) ಆಗಿದೆ, ಹೀಗಿದೆ.. ಇಲ್ಲೇನಿದೆ ಮಣ್ಣು’ ಎನ್ನುತ್ತಾ ತಮ್ಮ ನೆನಪಿನ ಮೆರವಣಿಗೆಗೆ ಕರೆದೊಯ್ಯುತ್ತಾರೆ. ‘ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ’ ಎಂಬ ವೈರಾಗ್ಯದ ಮಾತಾಡುತ್ತಾರೆ. ತಮ್ಮ ಜೀವನ ಸಂಧ್ಯಾಕಾಲವನ್ನು ಹಳ್ಳಿಯಲ್ಲಿ ಸವೆಸಬೇಕು ಎನ್ನುತ್ತಾರೆ.‘ಈಗಲೇ ಹೋಗಲು ಇಷ್ಟ, ಆದರೆ ನಮ್ಮ ಕಮಿಟ್‌ಮೆಂಟ್‌ಗಳು ನಾವು ನಮ್ಮಿಷ್ಟದಂತೆ ಬದುಕಲು ಬಿಡುತ್ತಿಲ್ಲ’ ಎಂದು ನೂರೊಂದು ಸಬೂಬು ಹೇಳುತ್ತಾರೆ. ಒಟ್ಟಿನಲ್ಲಿ ಹಳ್ಳಿಗಳ ಕುರಿತಾದ ರೊಮ್ಯಾಂಟಿಕ್ ಕಲ್ಪನೆ ಜಾರಿಯಲ್ಲಿದೆ. ಒಂದರ್ಥದಲ್ಲಿ ಹಳ್ಳಿಗಳು ಹಳ್ಳಿಗಳಾಗೇ ಇರಬೇಕಾ ಎಂಬ ಪ್ರಶ್ನೆಯೂ ಬರುತ್ತದೆ. ಆದರೆ ಒಂದರ್ಥದಲ್ಲಿ ಹಳ್ಳಿಗಳು ಬದಲಾಗಿವೆ. ಅತ್ತ ಪಟ್ಟಣಗಳೂ ಆಗದೇ, ಇತ್ತ ಹಳ್ಳಿಯ ಸೊಗಡನ್ನೂ ಕಳೆದುಕೊಂಡು ತ್ರಿಶಂಕು ಸ್ಥಿತಿಯಲ್ಲಿವೆ. ಸ್ವಾತಂತ್ರ್ಯಾನಂತರ ಹಳ್ಳಿಗಳ ಸ್ಥಿತಿ ಸುಧಾರಿಸಬೇಕಾಗಿತ್ತು. ಆದರೆ ಬಹುತೇಕ ಹಳ್ಳಿಗಳು ಇನ್ನೂ ವಿದ್ಯುತ್ ದೀಪವನ್ನೇ ಕಂಡಿಲ್ಲ. ರಸ್ತೆಗಳಿಲ್ಲದೇ ಅನೇಕ ಹಳ್ಳಿಗಳು ದ್ವೀಪದಂತೆ ಉಳಿದಿವೆ. ಒಂದು ಬೆಂಕಿಪೊಟ್ಟಣಕ್ಕಾಗಿ ಎರಡು ಮೂರು ಮೈಲು ಸವೆಸಬೇಕಾದ ಸ್ಥಿತಿ ಕೆಲವು ಹಳ್ಳಿಗಳಲ್ಲಿ ಈಗಲೂ ಇದೆ. ನನ್ನಳ್ಳಿಯ ಕಾಣುತ್ತಲೇ ಗ್ರಾಮೀಣ ಭಾರತವನ್ನು ಊಹಿಸುವ ಯತ್ನ ನನ್ನದು. ಹೊಟ್ಟೆಪಾಡಿಗಾಗಿ(ವೃತ್ತಿ) ಮಾಯಾನಗರಿ ಬೆಂಗಳೂರಿನಲ್ಲಿ ನಾನಿದ್ದರೂ, ನನ್ನ ಮೂಲ ಬೇರುಗಳು ನನ್ನೂರಿನಲ್ಲಿಯೇ ಇವೆ. ಆನೂಡಿ, ನನ್ನಮ್ಮನ ಊರು. ನನ್ನ ಊರು ಸಹಾ ಹೌದು. ಬಾಲ್ಯಕ್ಕೊಂದು ಬೆರಗುಕೊಟ್ಟ, ಬದುಕಿಗೊಂದಿಷ್ಟು ಮೌಲ್ಯಗಳನ್ನು ಬಳುವಳಿಯಾಗಿ ಕೊಟ್ಟ ಆನೂಡಿಯನ್ನು ಮರೆಯುವುದಾದರೂ ಹೇಗೆ? ಹೀಗಾಗಿಯೇ ಅಲ್ಲಿನ ತವಕ-ತಲ್ಲಣಗಳು ಈಗಲೂ ನನ್ನನ್ನು ಕಾಡುತ್ತವೆ. ಜನಪ್ರತಿನಿಗಳ ನಿರ್ಲಕ್ಷ್ಯ, ಜನ ಸಾಮಾನ್ಯರಲ್ಲಿ ಜಾಗೃತಿಯ ಕೊರತೆಯಿಂದಾಗಿ ನಾನಾ ಪರಿಸರ ಸಂಬಂ ಸಮಸ್ಯೆಗಳು ಇಂದೂ ಜೀವಂತವಾಗಿ ಉಳಿದಿವೆ, ನಾಳೆಯೂ ಸಮಸ್ಯೆಗಳು ತೀರುತ್ತವೆ ಎಂದು ನನಗನಿಸುವುದಿಲ್ಲ. ಯಾವುದಿದು ಆನೂಡಿ? ಎಲ್ಲಿಯದಿದು ಆನೂಡಿ? -ಆನೂಡಿಯನ್ನು ತಮ್ಮ ಹೆಸರಿಗೆ ಸೇರಿಸಿಕೊಂಡ ಖ್ಯಾತನಾಮರು ಇಲ್ಲದ ಕಾರಣ, ಈ ಬಗ್ಗೆ ತುಸು ಹೇಳುವುದು ಉಚಿತ. ಕೋಲಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನಲ್ಲಿದೆ ಆನೂಡಿ. ವಿಚಾರವಾದಿ ಎಚ್.ನರಸಿಂಹಯ್ಯ ಅವರ ಹುಟ್ಟೂರಾದ ಹೊಸೂರು ಪಕ್ಕದಲ್ಲಿರುವ ಆನೂಡಿಯ ಏಕೈಕ ಹೆಗ್ಗಳಿಕೆ, ಅಲ್ಲಿನ ಆಂಜನೇಯ ದೇವಸ್ಥಾನ. ಊರ ಹೃದಯ ಭಾಗದಲ್ಲಿ ತಲೆ ಎತ್ತಿ ನಿಂತಿರುವ ದೇವಸ್ಥಾನ ಬಿಟ್ಟರೆ, ಇಲ್ಲಿನ ಬಗ್ಗೆ ಮಾತನಾಡಲು ಇನ್ನೊಂದು ವಿಷಯ ಸಿಗುವುದಿಲ್ಲ.ಎಲ್ಲಾ ಹಳ್ಳಿಗಳಂತೆಯೇ ಆನೂಡಿಯಲ್ಲೂ ಶೌಚದ್ದೊಂದು ಸಮಸ್ಯೆ. ಬಯಲುಗಳಲ್ಲಿನ ಮೋಟು ಗಿಡಗಳ ಮರೆಯಲ್ಲಿ ಅಡಗಿ ಕೊಳ್ಳುವ ಪರಿಸ್ಥಿತಿ ಈಗಲೂ ಇದೆ. ಮೊದಲು ಊರ ಮುಂದಿನ ನಮ್ಮ ಬಣವೆಯಲ್ಲಿನ ತಿಪ್ಪೆ ಹೆಂಗಸರು ಮತ್ತು ಮಕ್ಕಳ ಶೌಚ ಕೇಂದ್ರವಾಗಿತ್ತು. ಅಲ್ಲಿನ ಅರಳೀಕಟ್ಟೆಯಲ್ಲಿ ಮೈಗಳ್ಳರ ಚೌಕಾಭಾರ, ಬಸವನಕಟ್ಟೆ, ಹೆಡ್ ಮತ್ತಿತರ ದುಡ್ಡಿನ ಆಟಗಳ ಪರಿಣಾಮ ಜನಸಂದಣಿ ಹೆಚ್ಚಿದ ಮೇಲೆ ಅಲ್ಲಿಗೆ ಹೋಗಲು ಹೆಣ್ಣು ಮಕ್ಕಳು ಹಿಂದೆ ಮುಂದೆ ನೋಡುವಂತಾಯಿತು. ಸೂರ್ಯ ಹುಟ್ಟುವ ಮುನ್ನ ಅಥವಾ ಸೂರ್ಯ ಮುಳುಗಿ ಕತ್ತಲಾದ ಮೇಲೆ ಇಬ್ಬರು ಮೂವರು ಹೆಂಗಸರು ಜತೆಯಾಗಿ ಬಣವೆ ಕಡೆ ಹೋಗುತ್ತಿದ್ದರು. ಶೌಚದ ಸ್ವಾಭಾವಿಕ ಪ್ರಕ್ರಿಯೆಗೆ, ಸಮಯ ಕಾಯುವಂಥ ಸ್ಥಿತಿ ನಿರ್ಮಾಣವಾಗಿತ್ತು. ಊರಿನ ಗಂಡಸರು ಕೆರೆ ಬದಿಗೋ, ತಮ್ಮ ಕರೆಂಟ್ ರೂಂನ ಬಳಿಗೋ ಹೋಗುತ್ತಾರೆ. ಮೂತ್ರ ವಿಸರ್ಜನೆ ನಂತರ, ಸ್ವಚ್ಛತಾ ಕಾರ್ಯಕ್ಕೆ ನೀರು ಬೇಕೇಬೇಕೆಂಬ ನಿಯಮ ಕೆಲವರಿಗಿಲ್ಲ. ಯಾವುದೋ ಹಸಿರು ಗಿಡದ ಸೊಪ್ಪೋ, ಅಂಗೈ ಅಗಲದ ಕಾಗದ ಸಿಕ್ಕಿದರೂ ಸಾಕು! ಆನೂಡಿ ರಸ್ತೆಯಲ್ಲಿ ಬಸ್ ಇಳಿದು, ಊರು ಪ್ರವೇಶಿಸಲಿರುವ ೪-೫ ಅಡಿ ಅಗಲದ ರಸ್ತೆಯಲ್ಲಿ ಬರುವ ಪ್ರತಿಯೊಬ್ಬರೂ, ಮೂಗಿಗೆ ಕರವಸ್ತ್ರವೊಡ್ಡುವುದು ಅನಿವಾರ್ಯ. ಪ್ರತಿಯೊಂದು ಹೆಜ್ಜೆಯನ್ನೂ ಬಹಳ ಲೆಕ್ಕಾಚಾರ ಹಾಕಿ, ರೇಖಾಗಣಿತದಲ್ಲಿ ರೇಖೆ ಎಳೆದಂತೆ, ಕೋನಗಳನ್ನು ಸೇರಿಸಿದಂತೆ ಹೆಜ್ಜೆ ಇಡಬೇಕು. ಇಲ್ಲದಿದ್ದರೆ ಕಾಲಿನ ಜತೆ ಗಲೀಜು ಸಂಬಂಧ ಬೆಳೆಸುತ್ತದೆ! ಯಾಕೆ ಹೀಗೆ? ಕಂಪ್ಯೂಟರ್ ಯುಗದಲ್ಲೂ ಇಂಥ ಅಜ್ಞಾನ ಉಳಿದಿರುವುದನ್ನು ಕಂಡಾಗ, ತುಸು ಬೇಸರವಾಗುತ್ತದೆ. ನೈರ್ಮಲ್ಯದ ಬಗ್ಗೆ ಕಾಳಜಿ ಮೂಡಿಸುವ ನಾನಾ ಕಾರ್ಯಕ್ರಮಗಳನ್ನು ಸರಕಾರ ಹಮ್ಮಿಕೊಂಡಿದ್ದರೂ, ಅವು ಆನೂಡಿಯನ್ನು ತಲುಪಿದಂತಿಲ್ಲ. ಜನರಿಗೆ ರಸ್ತೆಬದಿ ಕೂತು, ಹೊಟ್ಟೆಯಲ್ಲಿರುವುದನ್ನು ಖಾಲಿ ಮಾಡಿದರಷ್ಟೆ ಸಮಾಧಾನ! ನಿಮ್ಮೂರಿನಲ್ಲಿ ಏನಿಲ್ಲದಿದ್ದರೂ ಎಲ್ಲಾ ಕಾಲ ಸೂರ್ಯಕಾಂತಿ ಹೂವುಗಳು ರಸ್ತೆ ಬದಿಯಲ್ಲಿ ಮಾತ್ರವಲ್ಲ, ರಸ್ತೆ ಮೇಲೂ ಹರಡಿರುತ್ತವೆ ಎಂದು ಪಟ್ಟಣದ ಗೆಳೆಯನೊಬ್ಬ ಗೇಲಿ ಮಾಡುತ್ತಿರುತ್ತಾನೆ. ನಿರ್ಮಲ ಕರ್ನಾಟಕ ಯೋಜನೆಯಡಿ ಶೌಚಾಲಯ ನಿರ್ಮಾಣಕ್ಕೆ ಒಂದಿಷ್ಟು ಹಣವನ್ನು ಸರಕಾರ ನೀಡಿದ್ದು, ಜನರು ಆ ಹಣವನ್ನು ಪಡೆದದ್ದು ಎಲ್ಲವೂ ಆಗಿದೆ. ಕೆಲವು ಶೌಚಾಲಯಗಳು ಅರ್ಥದಲ್ಲೇ ನಿಂತಿವೆ. ಪೂರ್ಣಗೊಂಡಿರುವ ಕೆಲವು ಶೌಚಾಲಯಗಳನ್ನು ಸ್ಟೋರ್ ರೂಂನಂತೆ ಮೂಟೆಗಳನ್ನು ಹಾಕಲು ಬಳಸುತ್ತಿದ್ದಾರೆ!. ಶೌಚ ಕೊಠಡಿ ಬಳಸಲು ಇಲ್ಲಿನ ಜನರಿಗೆ ಎಂಥದ್ದೋ ಮುಜುಗರ! ಇಲ್ಲಿನ ಶೌಚ ಪುರಾಣ ಕೇಳಿ, ನಿಮಗೆ ಅಚ್ಚರಿಯಾಗಬಹುದು. ಆನೂಡಿಗೆ ಬಂದರೆ ಅದು ಅನುಭವಕ್ಕೆ ಬರುತ್ತದೆ. ದಟ್ಟ ಬಿಸಲಿನ ಬೆನ್ನುತಟ್ಟುವಂತೆ ಎದ್ದು ನಿಂತ ಜಾಲಿ ಗಿಡಗಳು, ಅವುಗಳ ಅಡಿಯಲ್ಲಿ ಮಲಮೂತ್ರದ ರಾಶಿ. ಅದರಿಂದ ಸೂಸುವ ತಾಜಾ ಪರಿಮಳ! ಆನೂಡಿ ಬಗ್ಗೆ ಅಸಹ್ಯ ಪಟ್ಟುಕೊಳ್ಳಲು, ಹೊಸಬರಿಗೆ ಇನ್ನೇನು ಬೇಕು? ಆನೂಡಿ ಎಂದಾಗ ಅಜ್ಜಿಮನೆಯ ಹಿತ್ತಲಿನಲ್ಲಿದ್ದ ದಾಳಿಂಬೆ ಗಿಡ ನೆನಪಾಗುತ್ತದೆ. ಗಿಡ ಸಣ್ಣದಾದರೂ, ಮೈತುಂಬ ಹಣ್ಣು! ಮನೆ ಮಗನಂತಿದ್ದ ನರಸಪ್ಪ (ನಾನು ಈ ಮನೆಯ ದೊಡ್ಡ ಮಗ ಎಂದು ಆತನೇ, ಊರು ಜನರಿಗೆ ಆಗಾಗ ಹೇಳುತ್ತಿದ್ದ. ಜೀತದ ಪರಿಕಲ್ಪನೆ ಆಗಂತೂ ಇರಲಿಲ್ಲ. ನನ್ನ ಅಜ್ಜಿಯ ಸೆರಗಿನಡಿಯಲ್ಲಿ ಸುಖ ಉಂಡಿದ್ದ ನರಸಪ್ಪ ಮನೆಯವನೇ ಆಗಿ ಬಿಟ್ಟಿದ್ದ) ತರುತ್ತಿದ್ದ ಹಲಸಿನ ಹಣ್ಣು, ಮಾವಿನ ಹಣ್ಣು ಈಗಲೂ ಬಾಯಲ್ಲಿ ನೀರೂರುತ್ತದೆ. ಕಬ್ಬನ್ನು ತಂದು, ಸಣ್ಣಗೆ ಪಿಚ್ಚಗೆ ಮಾಡಿ ಕೊಡುವಲ್ಲಿ ಆತನಿಗೆ ಎಂಥದ್ದೋ ಅಕ್ಕರೆ. ನಾವು ಸಾಕು ಎಂದಷ್ಟು, ಇನ್ನಷ್ಟು ಮತ್ತಷ್ಟು ಎಂದು ಕೊಡುತ್ತಲೇ ಇದ್ದ. ತೋಟಗಳು ಬೋಳಾಗಿ, ಈಗ ಅವೆಲ್ಲಾ ಸೈಟುಗಳಾಗಿವೆ. ಊರು ಮುಂದಿನ ನಮ್ಮಜ್ಜಿಯವರ ತಿಪ್ಪೆಯಿದ್ದ ಹೊಲವನ್ನು ಸರಕಾರವೇ ಖರೀದಿಸಿ, ಆಶ್ರಯ ಯೋಜನೆಯಡಿ ನಿವೇಶನವಾಗಿ ಪರಿವರ್ತಿಸಿದೆ. ಅಲ್ಲಿನ ನೀರಿನ ಆಸರೆಯಾಗಿದ್ದ ವೊಡ್ಡು ಮತ್ತು ಬಣವೆಯಲ್ಲಿದ್ದ ಹತ್ತಾರು ಹಣ್ಣಿನ ಮರಗಳು ಈಗ ನೆನಪಷ್ಟೆ. ಮಳೆಯನ್ನೇ ಕೃಷಿಗಾಗಿ ನಂಬಿರುವ ಇಲ್ಲಿನ ಜನರು ಮೊದಲು ಸಮೃದ್ಧವಾಗಿಯೇ ಇದ್ದರು. ಕಾಲಕಾಲಕ್ಕೆ ಮಳೆಯಾಗುತ್ತಿತ್ತು. ಕೆರೆಯಲ್ಲಿ ನೀರಿರುತ್ತಿತ್ತು. ಭತ್ತ, ಕಬ್ಬು, ರಾಗಿ, ಅಲಸಂದೆ, ಅವರೆ, ಹೆಸರುಕಾಳು, ಸೂರ್ಯಕಾಂತಿ, ಮೆಣಸಿನಕಾಯಿ -ಹೀಗೆ ಎಲ್ಲವನ್ನೂ ಬೆಳೆಯುತ್ತಿದ್ದರು. ಅವುಗಳನ್ನು ಕಟ್ಟಿಡಲು ಗೋಣಿ ಚೀಲಗಳು ಸಾಕಾಗದೇ, ಮನೆಯ ಮೂಲೆಗಳಿಗೆ ರಾಶಿ ಸುರಿಯುತ್ತಿದ್ದರು. ಮನೆಯಲ್ಲಿನ ವಾಡೆಗಳಲ್ಲಿ ಧಾನ್ಯ ಲಕ್ಷ್ಮಿ ನೆಲೆ ನಿಂತಿದ್ದಳು. ಭೂಮಿಯೊಳಗಿನ ಕಣಜಗಳು ಸಮೃದ್ಧವಾಗಿರುತ್ತಿದ್ದವು. ಮಾವಿನ ತೋಪು, ಆಲೆಮನೆ, ತೋಟಗಳು ಕಣ್‌ಕುಕ್ಕುವಂತಿದ್ದವು. ಬಾಂಬೆ ಮಿಠಾಯಿ, ಪಾಪನ್ ಪಪ್ಪು, ಐಸ್ ಕ್ಯಾಂಡಿ, ಬಟ್ಟೆ ಪಿನ್ -ಹೀಗೆ ಏನೇ ಬರಲಿ, ನಮ್ಮಜ್ಜಿ ದುಡ್ಡು ಕೊಟ್ಟದ್ದಕ್ಕಿಂತ ರಾಗಿ ಕೊಟ್ಟಿದ್ದೆ ಹೆಚ್ಚು. ಮೊರಗಳಲ್ಲಿ ತುಂಬಿತುಂಬಿ ಕೊಡುವುದು ನಮ್ಮಜ್ಜಿ ಪದ್ಧತಿಯಾಗಿತ್ತು. ಮನೆಯಲ್ಲಿ ಹಸು, ಎಮ್ಮೆ, ಎತ್ತು, ಕರು -ಹೀಗೆ ಜಾನುವಾರುಗಳಿಗೊಂಡು ಜಾಗ. ಮನೆಯಲ್ಲಿ ಬೆಣ್ಣೆ, ತುಪ್ಪ, ಮೊಸರಿಗೆ ಎಂದೂ ಕೊರತೆ ಇರಲಿಲ್ಲ. ಊರಿನ ನಾನಾ ಮಂದಿ ಮಜ್ಜಿಗೆ ಕೊಡಕ್ಕಾ, ಮೊಸರು ಕೊಡಕ್ಕಾ ಎಂದು ಬಟ್ಟಲಿಡಿದು ಬರುತ್ತಿದ್ದರು. ನಮ್ಮಜ್ಜಿ ಇಲ್ಲ ಎಂಥದ್ದು ನನಗಂತೂ ನೆನಪಿಲ್ಲ. ಆದರೆ ಅದೆಲ್ಲವೂ ಈಗ ಗತಕಾಲದ ವೈಭವ. ಕಳೆದ ೧೦-೧೫ ವರ್ಷಗಳಿಂದ ಪರಿಸ್ಥಿತಿ ಬದಲಾಗಿದೆ. ಬಾವಿಯಲ್ಲಿನ ನೀರು ಬತ್ತಿ ಬಹಳ ವರ್ಷಗಳಾಗಿವೆ. ಪೈಪೋಟಿಗೆ ಬಿದ್ದವರಂತೆ ಕೊರೆಸಿದ ಕೊಳಾಯಿಗಳಲ್ಲಿ ಕೆಲವು ಕಾಲೆತ್ತಿವೆ. ಬೋರು, ಮೋಟರ್‌ಗೆ ಸಾವಿರಾರು ರೂಪಾಯಿ ಸುರಿದ ಜನರು ಕಕ್ಕಾಬಿಕ್ಕಿಯಾಗಿದ್ದಾರೆ. ಕೆರೆ ತುಂಬಿ ಎಷ್ಟು ವರ್ಷವಾಯಿತೋ ಗೊತ್ತಿಲ್ಲ. ಮುತ್ಯಾಲಮ್ಮನ ಪರಿಸೆ ಮಾಡದ ಕಾರಣ, ಮಳೆಯಿಲ್ಲ ಎಂದು ಮೊನ್ನೆ ಪೂಜಾರಿ ಮೈತುಂಬಿಕೊಂಡಿದ್ದ ಆಂಜನೇಯ ಸ್ವಾಮಿ ಹೇಳಿದನಂತೆ. ನನ್ನಪ್ಪನಿಗೆ ನನ್ನಜ್ಜ ಬರೆಯುತ್ತಿದ್ದ ಬಹುತೇಕ ಕಾಗದಗಳಲ್ಲಿ, ‘ಇಲ್ಲಿ ಮಳೆಯಿಲ್ಲ‘ ಎಂಬ ಸಾಲು ಸಾಮಾನ್ಯವಾಗಿಬಿಟ್ಟಿದೆ. ಮೊನ್ನೆ ಸಿಕ್ಕಿದ್ದ ತಾತಾ, ಮಳೆ ಕೊರತೆಯ ಬಗ್ಗೆಯೇ ಮಾತಾಡುತ್ತಿದ್ದರು. ವ್ಯವಸಾಯ ಲಾಸಿನ ಬಾಬತ್ತು ಎಂದು ಇಲ್ಲಿನ ಜನರು ಭಾವಿಸಿದ್ದಾರೆ. ಮನೆ ಮಕ್ಕಳು ಪಟ್ಟಣ ಸೇರಿ, ಹೊಟ್ಟೆ ಪಾಡು ನೋಡಿಕೊಂಡಿದ್ದಾರೆ. ನಮ್ಮ ಕಾಲವಂತೂ ಹೀಗಾಯಿತು ಅವರಾದರೂ ಸುಖವಾಗಿರಲಿ ಎಂಬುದು ಅನೇಕರ ಮಾತು. ಹಸಿರ ಜಾಗದಲ್ಲೀಗ ಬರೀ ಸೀಮೆ ಜಾಲಿಯೇ ನಿಂತಿದೆ. ‘ಏಕೆ ಓಡುವಿರಿ ನಿಲ್ಲಿ ಮೋಡಗಳೇ, ನಾಲ್ಕು ಹನಿಯ ಚೆಲ್ಲಿ’ ಎಂಬ ಕೂಗು ಮುಷ್ಕರ ಹೂಡಿರುವ ಮಳೆ ಮೋಡಗಳಿಗೆ ಕೇಳಿಸುತ್ತಿಲ್ಲ. ಮನೆಮಂದಿಗಾಗುವಷ್ಟು ಬೆಳೆದು ಸಂತೃಪ್ತರಾಗಿದ್ದ ನನ್ನ ಅಜ್ಜಿ ಮನೆಯವರೇ ಈಗ, ಅಂಗಡಿಯಲ್ಲಿ ಅಕ್ಕಿ ತರುತ್ತಿದ್ದಾರೆ. ಆಲೆಮನೆ ಎಂಬುದು ಎಲ್ಲಿ ಹೋಯಿತೋ? ಬೆಲ್ಲದ ಘಮಲು ಮನೆಯಲ್ಲೀಗ ಉಳಿದಿಲ್ಲ. ಪ್ಲಾಸ್ಟಿಕ್ ಕವರ್‌ನಲ್ಲಿ ಕೆ.ಜಿ.ಲೆಕ್ಕದಲ್ಲಿ ಸಕ್ಕರೆ ತರುವ ನನ್ನ ತಾತನ ಕಂಡಾಗ, ಸಕ್ಕರೆ ರಾಜನಿಗೆ ಎಂಥಾ ಸ್ಥಿತಿ ಬಂತು ಅನ್ನಿಸುತ್ತದೆ? ಬೆಂಗಳೂರಿನಲ್ಲಿರುವ ಮಗ, ಜಮೀನನ್ನು ಮಾರೋಣ ಅನ್ನುತ್ತಿದ್ದಾನಂತೆ. ಹಳ್ಳಿಯಲ್ಲಿ ಭೂಮಿ ಕೇಳೋರಿಲ್ಲ. ಇಲ್ಲಿ ಆ ಹಣದಲ್ಲಿ ಸೈಟು ತೆಗೆದರೆ, ಒಂದೆರಡು ವರ್ಷಕ್ಕೆ ದ್ವಿಗುಣವಾಗುತ್ತೆ ಅನ್ನೋದು ಅವರ ಲೆಕ್ಕಾಚಾರ. &lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-2877852226511023042?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/2877852226511023042/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=2877852226511023042' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/2877852226511023042'/><link rel='self' type='application/atom+xml' href='http://www.blogger.com/feeds/2189102912389204330/posts/default/2877852226511023042'/><link rel='alternate' type='text/html' href='http://kanasinaramane.blogspot.com/2008/08/blog-post_13.html' title='ಗ್ರಾಮೀಣ ಭಾರತದ ಇಷ್ಟ-ಕಷ್ಟಗಳು!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_eDo9m8Nl3wg/SKMHForuR5I/AAAAAAAAAE0/lO887ZZvIxc/s72-c/milkmaid.jpg' height='72' width='72'/><thr:total>1</thr:total></entry><entry><id>tag:blogger.com,1999:blog-2189102912389204330.post-3777098739843963960</id><published>2008-08-03T21:15:00.000+05:30</published><updated>2008-08-03T21:16:57.197+05:30</updated><title type='text'>ಗಾಂಧಿ ‘ಹನಿ’ಗಳು</title><content type='html'>&lt;strong&gt;ಗಾಂಧಿ!&lt;/strong&gt;&lt;br /&gt;&lt;strong&gt;&lt;/strong&gt;&lt;br /&gt;ಕೈಲಾಗದ ಕಾರಣ&lt;br /&gt;ಅಹಿಂಸೆಯೆಂದನಲ್ಲ&lt;br /&gt;ಸುಳ್ಳು ಹೇಳಿದ್ನಲ್ಲ&lt;br /&gt;ಬೀಡಿ ಸೇದಿದ್ನಲ್ಲ&lt;br /&gt;ಕಳ್ಳತನ ಮಾಡಿದ್ನಲ್ಲ&lt;br /&gt;ಆ ಬೊಕ್ಕತಲೆಯ&lt;br /&gt;ಮಾಂಸವಿಲ್ಲದ&lt;br /&gt;ಬಡಕಲ ದೇಹದ&lt;br /&gt;ಹರೆ ಹುಚ್ಚಮುದುಕನೇ&lt;br /&gt;ತಾನೇಗಾಂಧಿ ಅಂದ್ರೆ!&lt;br /&gt;&lt;br /&gt;&lt;strong&gt;ವಿಳಾಸ&lt;/strong&gt;&lt;br /&gt;&lt;br /&gt;ಸ್ವಲ್ಪ ಮುಂದೆ ಹೋಗಿ&lt;br /&gt;ಅಲ್ಲಿದೆ ರಾಜೀವ್‌ ಗಾಂಧಿ&lt;br /&gt;ಸಮುದಾಯ ಭವನ !&lt;br /&gt;ಅದರ ಬಲಕ್ಕೆ ಕತ್ತು&lt;br /&gt;ತಿರುಗಿಸಿದರೆ ಕಾಣುತ್ತೆ&lt;br /&gt;ಶ್ರೀ ಬಸವೇಶ್ವರ ಆಸ್ಪತ್ರೆ!&lt;br /&gt;ಅದರ ಎಡದಲ್ಲಿದೆ&lt;br /&gt;ಬಿ.ಆರ್‌.ಅಂಬೇಡ್ಕರ್‌ ರಸ್ತೆ !&lt;br /&gt;ರಸ್ತೆಯ ಎಡ ಭಾಗದಲ್ಲಿ&lt;br /&gt;ನೆಹರು ಕ್ರೀಡಾಂಗಣವಿದೆ!&lt;br /&gt;ತಣ್ಣನೆಯ ಸೋನಿಯಾಗಾಂಧಿ ಉದ್ಯಾನವಿದೆ!&lt;br /&gt;ಇನ್ನು ಕಣ್ಣಳತೆಯ ದೂರದಲ್ಲಿದೆ&lt;br /&gt;ಇಂದಿರಾಗಾಂಧಿ ವಿಶ್ವವಿದ್ಯಾಲಯ!&lt;br /&gt;ಅಲ್ಲೇ ಅಲ್ಲೇ&lt;br /&gt;ನಮ್ಮ ಬಡ-ಬಡವ&lt;br /&gt;ಗಾಂಧಿಮನೆ...ಮನೆಯಲ್ಲ... ಗುಡಿಸಲು!&lt;br /&gt;&lt;br /&gt;&lt;strong&gt;ಕೊಲೆ&lt;/strong&gt;&lt;br /&gt;&lt;br /&gt;ಅಂದು ಗೋಡ್ಸೆಯಿಂದ&lt;br /&gt;ಗಾಂಧಿಯ ಭೌತಿಕ ಕೊಲೆ!&lt;br /&gt;ಇಂದು ನಮ್ಮಿಂದ&lt;br /&gt;ಗಾಂಧಿಯ ಸೈದ್ಧಾಂತಿಕ ಕೊಲೆ!&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-3777098739843963960?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/3777098739843963960/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=3777098739843963960' title='6 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/3777098739843963960'/><link rel='self' type='application/atom+xml' href='http://www.blogger.com/feeds/2189102912389204330/posts/default/3777098739843963960'/><link rel='alternate' type='text/html' href='http://kanasinaramane.blogspot.com/2008/08/blog-post_8119.html' title='ಗಾಂಧಿ ‘ಹನಿ’ಗಳು'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>6</thr:total></entry><entry><id>tag:blogger.com,1999:blog-2189102912389204330.post-7998137511251163300</id><published>2008-08-03T20:55:00.000+05:30</published><updated>2008-08-03T20:56:15.826+05:30</updated><title type='text'>ಸುರಿಯುತ್ತಲೇ ಇದೆ ಪಾಪಿ ಮಳೆ ಮುಗಿಯದ ಕಣ್ಣೀರಿನಂತೆ...</title><content type='html'>ನನಗೆ ಈಚೀಚೆಗೆ ಮಳೆ&lt;br /&gt;ಎಂದರೆ ಭಯ! ಅಸಹ್ಯ, ಜಿಗುಪ್ಸೆ..&lt;br /&gt;ಒಂದೊಂದು ಹನಿ&lt;br /&gt;ಮೈ ಮೇಲೆ ಬಿದ್ದರೂ ಯಾತನೆ&lt;br /&gt;ಅಲ್ಲೆಲ್ಲ ಬೊಬ್ಬೆಗಳು!&lt;br /&gt;&lt;br /&gt;ಸುರಿಯುತ್ತಲೇ ಇದೆ ಮಳೆ&lt;br /&gt;ಮುಗಿಯದ ಕಣ್ಣೀರಿನಂತೆ!   ?&lt;br /&gt;ಯಾಕೆ ಮಗು ಮಲಗಲಿಲ್ವೇ&lt;br /&gt;ನಿದ್ದೆ ಬರುತ್ತಿಲ್ವೇ ಎಂದು ಕೇಳೋರಿಲ್ಲ..&lt;br /&gt;ನಾನು ಎಚ್ಚರವಾಗಿದ್ದೇನೆ ದೆವ್ವದಂತೆ!&lt;br /&gt;&lt;br /&gt;ಹೊರಗಡೆ ಜಿಟಿಜಿಟಿ ಮಳೆ&lt;br /&gt;ಒಳಗೆ ನಾ ಒಂಟಿ&lt;br /&gt;ಮಳೆಯನ್ನು ನೋಡುವ&lt;br /&gt;ಬೆರಗು ನನ್ನಲ್ಲಿ ಉಳಿದಿಲ್ಲ..&lt;br /&gt;ನಾನು ನಿಜಕ್ಕೂ ಬದುಕಿದ್ದೇನೆಯೇ?&lt;br /&gt;&lt;br /&gt;ಗಡಿಯಾರ ಓಡುತ್ತಿದೆ.. 10,11,12..&lt;br /&gt;ನಿಂತ ಮಳೆ.. ಶುರುವಾದ ಮಳೆ&lt;br /&gt;ಎಲ್ಲವೂ ಗೊತ್ತಾಗುತ್ತಿದೆ...&lt;br /&gt;ದೀಪ ಆರಿಸಲು ಮನಸ್ಸಾಗುತ್ತಿಲ್ಲ..&lt;br /&gt;ನನ್ನ ಪಾಲಿಗೆ ಉಳಿದ ಬೆಳಕು ಅದೊಂದೇ ಸದ್ಯಕ್ಕೆ&lt;br /&gt;&lt;br /&gt;ಎಲ್ಲವೂ ಖಾಲಿ... ಹೆದರಿಸುವ ನಾಳೆಗಳು&lt;br /&gt;ನಿದ್ದೆ ಕೆಡಿಸುವ ದೆವ್ವಗಳು..&lt;br /&gt;ಮಳೆ ಬಂದು ಭೂಮಿ ತಂಪಾಗುತ್ತದೆ..&lt;br /&gt;ನನ್ನ ಎದೆ ನೆನೆಯುವಂತಹ ಮಳೆ&lt;br /&gt;ಮುಂದೆಯಾದರೂ ಇದೆಯೋ ಇಲ್ಲವೋ?&lt;br /&gt;&lt;br /&gt;ಎಲ್ಲೋ ಗುಡುಗಿದ ಶಬ್ದ.. ಮತ್ತೆ ಮಳೆ..&lt;br /&gt;ಹಾಸಿದ ಹಾಸಿಗೆ ಮೇಲೆ ನಾನು..&lt;br /&gt;ನನ್ನ ಜೊತೆಗೆ ದಿಂಬು, ಅದರ ಮೇಲೆ&lt;br /&gt;ಕಪ್ಪು ಹಸಿರು ಚೌಕಿನ ಉಲ್ಲನ್ ರಗ್ಗು..&lt;br /&gt;ಅವಕ್ಕೂ ನನ್ನ ಸಂಗ ಬೇಡವೆನ್ನಿಸಿರಬೇಕು!&lt;br /&gt;&lt;br /&gt;ಉಲ್ಲಾಸದ ಹೂಮಳೆ ಎಂದು ಹೊಟ್ಟೆ&lt;br /&gt;ತುಂಬಿದವರು ಕುಣಿದು ಕುಪ್ಪಳಿಸಲಿ..&lt;br /&gt;ದೇವರಿಗಿಂತಲೂ ಹೆಚ್ಚು ಮಳೆಯನ್ನು&lt;br /&gt;ನಾ ದ್ವೇಷಿಸುತ್ತೇನೆ.. ಸಾಧ್ಯವಿದ್ದಿದ್ದರೆ,&lt;br /&gt;ಕುತ್ತಿಗೆ ಹಿಡಿದು ಉಸಿರು ನಿಲ್ಲಿಸುತ್ತಿದ್ದೆ!&lt;br /&gt;&lt;br /&gt;ಓ ಸುತ್ತಲೂ ಅಂಧಕಾರ.. ಇದ್ದ&lt;br /&gt;ಒಂದೇ ಒಂದು ಬೆಳಕು ಸಹಾ ಕಣ್ಮರೆ..&lt;br /&gt;ಪಾಪಿ ಮಳೆ ದೀಪ ಆರಿಸಿತು.. ನೀನು&lt;br /&gt;ಏನು ಬೇಕಾದರೂ ಆರಿಸಬಹುದು&lt;br /&gt;ನನ್ನೆದೆಯ ಅಗ್ನಿಕುಂಡ ಆರಿಸಲಾರೇ..&lt;br /&gt;&lt;br /&gt;ತಾಕತ್ತಿದ್ದರೆ ಪ್ರಯತ್ನಿಸು..&lt;br /&gt;ನಿನಗೆ ಒಳ್ಳೆಯದಾಗಲಿ..&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-7998137511251163300?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/7998137511251163300/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=7998137511251163300' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/7998137511251163300'/><link rel='self' type='application/atom+xml' href='http://www.blogger.com/feeds/2189102912389204330/posts/default/7998137511251163300'/><link rel='alternate' type='text/html' href='http://kanasinaramane.blogspot.com/2008/08/blog-post_03.html' title='ಸುರಿಯುತ್ತಲೇ ಇದೆ ಪಾಪಿ ಮಳೆ ಮುಗಿಯದ ಕಣ್ಣೀರಿನಂತೆ...'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>1</thr:total></entry><entry><id>tag:blogger.com,1999:blog-2189102912389204330.post-1423271797925310938</id><published>2008-06-13T00:49:00.001+05:30</published><updated>2008-07-12T19:07:23.592+05:30</updated><title type='text'>ನಿನ್ನೆ ಅಲ್ಲಿ.. ಇಂದು ಇಲ್ಲಿ.. ನಾಳೆ ಎಲ್ಲೋ?</title><content type='html'>‘ ಸ್ಥಾವರಕ್ಕಳಿವುಂಡು, ಜಂಗಮಕ್ಕಳಿವಿಲ್ಲ ’ ಎಂಬ ಮಾತಿನಲ್ಲಿ ಈಗಿನ ಯುವಕರಿಗೆ ನಂಬಿಕೆ. ಈಗೀಗ ಕೆಲಸ ಹುಡುಕುವುದೆಷ್ಟು ಸಾಮಾನ್ಯವೋ, ಕೆಲಸ ಬಿಡುವ ಪ್ರವೃತ್ತಿಯೂ ಸಾಮಾನ್ಯವೆನ್ನಿಸಿದೆ. ಪದೇಪದೇ ಕೆಲಸ ಬದಲಿಸುವ ಮನಸ್ಥಿತಿಯನ್ನು ಯುವಕರು ಬೆಳೆಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಐಟಿ ರಂಗದಲ್ಲಿ ಈ ವಲಸೆಯಾಟ ಹೆಚ್ಚು.&lt;br /&gt;ಸರಕಾರಿ ಉದ್ಯೋಗ ಸಿಕ್ಕಿದರೆ, ಬದುಕು ಸಾರ್ಥಕವಾಯಿತು ಎನ್ನುವ ಭಾವನೆ ಮೊದಲು ಅನೇಕರಲ್ಲಿತ್ತು. ಆದರೆ, ಸಾಫ್ಟ್‌ವೇರ್ ಹಕ್ಕಿ ರೆಕ್ಕಿ ಬಿಚ್ಚಿದ ಮೇಲೆ ಪರಿಸ್ಥಿತಿ ಬದಲಾಗಿದೆ. ಡಾಲರ್‌ಗಳಲ್ಲಿ ಸಂಬಳವನ್ನು ಲೆಕ್ಕ ಹಾಕಲಾಗುತ್ತಿದ್ದು, ಸಂಬಳ ನಾಲ್ಕೈದು ಅಂಕೆಗಳನ್ನು ತಲುಪಿದೆ. ಕೆಲಸ ಎಲ್ಲಿ, ಹೇಗೆ ಅನ್ನುವುದಕ್ಕಿಂತಲು ಸಂಬಳ ಎಷ್ಟು ಅನ್ನೋದು ಈಗಿನ ಪೀಳಿಗೆಯ ಮೂಲಭೂತ ಪ್ರಶ್ನೆ. ಸಂಬಳದ ಅಂಕೆ-ಸಂಖ್ಯೆಗಳ ಬೆನ್ನತ್ತಿಯೋ ಅಥವಾ ಬೇರೆ ಕಾರಣಕ್ಕೋ, ಕಂಪನಿಯಿಂದ ಕಂಪನಿಗೆ ಜಿಗಿಯುತ್ತಲೇ ಇರುತ್ತಾರೆ.&lt;br /&gt;ಗೂಡಿಂದ ಗೂಡಿಗೆ ಹಾರುವ ಪ್ರವೃತ್ತಿ ತಡೆಯಲು, ಪ್ರತಿಭಾವಂತರು ಮತ್ತು ಅನುಭವಿಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಕಂಪನಿಗಳು ಅನೇಕ ಕಸರತ್ತುಗಳನ್ನು ಮಾಡುತ್ತವೆ. ಆರು ತಿಂಗಳಿಗೊಮ್ಮೆ ಸಂಬಳದಲ್ಲಿ ಹೆಚ್ಚಳ(ಕನಿಷ್ಠ ಶೇ.೧೫ರಿಂದ ೨೦), ವರ್ಷಕ್ಕೆರಡು ಸಲ ಮನರಂಜನೆಗಾಗಿ ಪಿಕ್ನಿಕ್, ಆಗಾಗ ಕೆಲಸದ ಒತ್ತಡ ಕಡಿಮೆ ಮಾಡಲು ನಾನಾ ಕಾರ್ಯಕ್ರಮ, ತರಬೇತಿ -ಹೀಗೆ ಕಂಪನಿಗಳು ಉದ್ಯೋಗಿಗಳನ್ನು ಹಿಡಿದಿಡಲು ಸೌಲತ್ತುಗಳನ್ನು ಒದಗಿಸುತ್ತವೆ. ಆದರೆ ಈ ಟೆಕ್ಕಿಗಳು ವರ್ಷಗಳಿರಲಿ ಒಂದಷ್ಟು ತಿಂಗಳೂ ಒಂದೆಡೆ ನಿಲ್ಲುವ ಜಾಯಮಾನವನ್ನೇ ಹೊಂದಿಲ್ಲ. ಕೆಲಸಕ್ಕೆ ಸೇರಿದ ದಿನವೇ, ಕಾಲು ತೆಗೆಯುವ ಲೆಕ್ಕಾಚಾರ ಅವರ ಮನದಲ್ಲಿ!&lt;br /&gt;&lt;span style="font-weight: bold;"&gt;ನುರಿತ ಕೆಲಸಗಾರನಿಗೆ ರತ್ನಗಂಬಳಿ    &lt;/span&gt;&lt;br /&gt;ಬಿಸಿಲಲ್ಲಿ ಅಲೆದಲೆದು ಕೆಲಸ ಹುಡುಕುವ ದಿನಗಳು ಇವಲ್ಲ. ಮರ್ಜಿ, ಬಕೆಟ್ ಹಿಡಿಯೋದು, ದಕ್ಷಿಣೆ ಸಲ್ಲಿಸೋದು ಇವೆಲ್ಲ ಇಲ್ಲಿಲ್ಲ. ‘ಕೆಲಸ ಗೊತ್ತಿದೆಯಾ? ನೀವು ನಮ್ಮಲ್ಲಿಗೆ ಬನ್ನಿ ’ ಎಂದು ಐಟಿ ಕಂಪನಿಗಳು ರತ್ನಗಂಬಳಿ ಹಾಸಿ ಕೈಬೀಸಿ ಕರೆಯುತ್ತವೆ. ಫೋನಲ್ಲಿಯೇ ಕೆಲವು ಸಲ ಸಂದರ್ಶನಗಳು ನಡೆಯುತ್ತವೆ. ಸಂಬಳದ ಬಗ್ಗೆ ಚೌಕಾಶಿ ನಡೆದು, ಕೊನೆಗೆ ಜಾಣರ ಬೆನ್ನತ್ತುತ್ತವೆ. ದಿನಕ್ಕೆ ಎರಡು ಸಲ ಕಾಲ್ ಮಾಡಿ, ಆಹ್ವಾನಿಸುತ್ತವೆ.&lt;br /&gt;ಒಂದಷ್ಟು ವೆಬ್‌ಸೈಟ್‌ಗಳಲ್ಲಿ ಬಯೋಡೇಟಾ ತೇಲಿಬಿಟ್ಟು, ದಿನವೂ ಇ-ಮೇಲ್ ಚೆಕ್ ಮಾಡುವುದು, ಈಗಿನ ಹುಡುಗರ ದಿನಚರಿ. ಕ್ಯಾಂಪಸ್ ಸಂದರ್ಶನಗಳು ಜನಪ್ರಿಯವಾಗುತ್ತಿದ್ದು, ಕೋರ್ಸ್ ಮುಗಿಸುವ ಮುನ್ನವೇ ಉದ್ಯೋಗ ಸಿದ್ಧವಾಗಿ ಕೂತಿರುತ್ತದೆ. ಡಿಗ್ರಿ ನಂತರ ಉದ್ಯೋಗ ಸಂಬಂ ಕೋರ್ಸ್‌ಗಳನ್ನು ಮುಗಿಸಿದರೆ , ಇಂಗ್ಲಿಷ್ ಭಾಷೆ ಮೇಲೆ ತುಸು ಹಿಡಿತ ಸಾಸಿ, ಪಿಯುಸಿ ಓದುವಾಗಲೇ ಒಂದಿಷ್ಟು ಕಂಪ್ಯೂಟರ್ ಕಲಿತು ಬಿಟ್ಟರೆ, ನಿರುದ್ಯೋಗದ ಶಾಪ ಎಂದಿಗೂ ಕಾಡುವುದಿಲ್ಲ. ಆರಂಭದಲ್ಲಿಯೇ ೬-೭ ಸಾವಿರದ ಕೆಲಸ ಸಿಕ್ಕೋದು ಕಷ್ಟ ಅಲ್ಲವೇ ಅಲ್ಲ. ಅನುಭವ ಹೆಚ್ಚಿದಂತೆಲ್ಲ, ಸಂಬಳ ಮತ್ತು ಸವಲತ್ತುಗಳು ಸಹಾ ಹೆಚ್ಚುತ್ತಿರುತ್ತದೆ. ಪಡೆದ ಅನುಭವ, ಇನ್ನೊಂದು ಕಂಪನಿ ಪ್ರವೇಶಿಸಲು ರಹದಾರಿ. ಹೀಗಾಗಿಯೇ ಬಿಇ ಮುಗಿಸಿದ ಯುವಕರು ಆರಂಭದಲ್ಲಿ ಐದಾರು ಸಾವಿರ ಸಂಬಳದ ಕೆಲಸ ಸಿಕ್ಕರೂ ನಿರಾಳವಾಗಿಯೇ ಕೆಲಸ ಮಾಡುತ್ತಾರೆ. ಸಣ್ಣಪುಟ್ಟ ಕಂಪನಿಗಳಲ್ಲಿ ಕೆಲಸ ಕಲಿಯುವುದು ಮತ್ತು ಅನುಭವ ಗಳಿಸುವುದು ಅವರ ಮುಂದಿರುವ ತಕ್ಷಣದ ಗುರಿ.&lt;br /&gt;ಕೇವಲ ಐದಾರು ಸಾವಿರದಿಂದ ವೃತ್ತಿ ಆರಂಭಿಸಿದ ನನ್ನ ಗೆಳೆಯ ಪ್ರಹ್ಲಾದನ ಈಗಿನ ಸಂಬಳ ೪೦ಸಾವಿರ ರೂಪಾಯಿ. ಬಿ.ಕಾಂ. ಮುಗಿಸಲಾಗದೇ ಒದ್ದಾಡುತ್ತಿದ್ದ ಆತ, ಡೇಟಾ ಎಂಟ್ರಿ ಕೆಲಸಕ್ಕೆ ಸೇರಿಕೊಂಡ. ಆರಂಭದಲ್ಲಿ ಟ್ರೈನಿಯಾಗಿ ಕಂಪನಿಯೊಂದಕ್ಕೆ ಪ್ರವೇಶ ಪಡೆದ. ಕಲಿಯುವ ಉತ್ಸಾಹವಿತ್ತು, ಅವಕಾಶವೂ ಇತ್ತು. ಸಮಯ ಪರಿಪಾಲನೆ, ಕೆಲಸದ ಮೇಲಿನ ಶ್ರದ್ಧೆಯಿಂದ ಕಂಪನಿಯ ಆಡಳಿತ ಮಂಡಳಿಗೆ ಆತ ಅಚ್ಚುಮೆಚ್ಚು. ಒಂದೊಂದೇ ಮೆಟ್ಟಿಲನ್ನು ಆತ ಏರಿದ್ದ. ಕೆಲಸದಲ್ಲಿ ಪರಿಣತನಾಗಿದ್ದ. ಟೀಮ್ ಮೆಂಬರ್ ಆಗಿ, ಟೀಮ್ ಲೀಡರ್ ಆಗಿ ಆತ ಈಗ ಬೆಳೆದು ನಿಂತಿದ್ದಾನೆ.&lt;br /&gt;ಆತನ ಗುರಿ ವಿಸ್ತಾರಗೊಂಡಿದೆ, ಪಯಣ ಇನ್ನಷ್ಟು ಬೆಳೆದಿದೆ. ‘ಒಬ್ಬರ ಕೈಕೆಳಗಿನ ಕೆಲಸ ಸಾಕು ಗುರೂ.. ಒಂದು ಚೂರು ದುಡ್ಡು ಸಿಕ್ಕರೆ, ನಾನೇ ಪುಟ್ಟದೊಂದು ಕಂಪನಿ ಶುರು ಮಾಡುತ್ತೇನೆ ’ ಎನ್ನುತ್ತಾನೆ ಪ್ರಹ್ಲಾದ.&lt;br /&gt;&lt;span style="font-weight: bold;"&gt;ಗೂಡು ಬಿಡಲೊಂದು ಕಾರಣ &lt;/span&gt;&lt;br /&gt;‘ನಿಮ್ಮ ಕೆಲಸ ನಮಗೆ ತೃಪ್ತಿಯಾಗುತ್ತಿಲ್ಲ’ ಎಂದು ಕೆಲವು ಸಲ ಕಂಪನಿಗಳೇ ಗೂಡು ಬಿಡಿಸುತ್ತವೆ. ಆದರೆ ಬಹುತೇಕ ಸಲ ಉದ್ಯೋಗಿಗಳೇ ಕೆಲಸ ಬದಲಿಸುತ್ತಾರೆ. &lt;br /&gt;ಸಂಬಳದ ಆಮಿಷ, ಪ್ರತಿಷ್ಠಿತ ಕಂಪನಿಗಳ ಬಗೆಗಿನ ಮೋಹ, ಇನ್ನಷ್ಟು ಕೆಲಸ ಕಲಿಯುವ ಬಯಕೆ, ಹೊಸತಿಗಾಗಿ ಅನ್ವೇಷಣೆ, ಹಾಲಿ ಕಂಪನಿಯಲ್ಲಿನ ಕೆಲವು ಕಿರಿಕಿರಿಗಳು -ಇವು ಕೆಲಸ ಬಿಡಲು ಮುಖ್ಯವಾದ ನಾಲ್ಕು ಕಾರಣಗಳು.&lt;br /&gt;ನೈಟ್ ಶಿಫ್ಟ್‌ಗಳ ಕಿರಿಕಿರಿ, ಅಕ ಕೆಲಸದೊತ್ತಡ, ರಜೆಗಳ ಕೊರತೆ, ಉದ್ಯೋಗದಲ್ಲಿ ಅಸ್ಥಿರತೆ ಅಂಶಗಳು ಕೆಲವರನ್ನು ಸರಕಾರಿ ನೌಕರಿಯತ್ತ ಸೆಳೆಯುತ್ತವೆ. ಆದರೆ ಇಂಥ ಉದಾಹರಣೆಗಳು ಅತಿ ವಿರಳ.&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-1423271797925310938?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/1423271797925310938/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=1423271797925310938' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/1423271797925310938'/><link rel='self' type='application/atom+xml' href='http://www.blogger.com/feeds/2189102912389204330/posts/default/1423271797925310938'/><link rel='alternate' type='text/html' href='http://kanasinaramane.blogspot.com/2008/06/blog-post.html' title='ನಿನ್ನೆ ಅಲ್ಲಿ.. ಇಂದು ಇಲ್ಲಿ.. ನಾಳೆ ಎಲ್ಲೋ?'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>1</thr:total></entry><entry><id>tag:blogger.com,1999:blog-2189102912389204330.post-8958993763381309958</id><published>2008-05-18T18:37:00.001+05:30</published><updated>2008-05-18T18:46:05.122+05:30</updated><title type='text'>ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ?</title><content type='html'>ನಿನ್ನನ್ನು ಬಿಟ್ಟಿರಲಾರೆ. ಏನೋ ಸೆಳೆತ, ಎಂಥದ್ದೋ ಮೋಹ? ಮೊದಲು ನಾನು ಹೀಗಿರಲಿಲ್ಲ.. ನಿನ್ನ ಸಹವಾಸ ಮಾಡಿದ ಮೇಲೆ ಹೀಗಾದೆ! ಎಲ್ಲರೂ ಹೇಳುವಂತೆ ಕೆಟ್ಟು ಗ್ಯಾರೇಜು ಸೇರಿದೆ. ನಾನಂತೂ ಹಾಗೆ ಭಾವಿಸಿಲ್ಲ. ನೀನು ನನ್ನವಳಾದ ಮೇಲೆ, ಹೊಸ ಲೋಕ ನನ್ನದಾಯಿತು. ಇನ್ನಷ್ಟು ಬೆಳೆದಿದ್ದೇನೆಂಬ ಭಾವ ಮೈಮನಗಳ ಸುಳಿಯಲ್ಲಿ.&lt;br /&gt;ಒಂದು ಕ್ಷಣ ನೀ ದೂರವಾದರೂ ತಲೆ ಗಿರ್ರೆನ್ನುತ್ತೆ. ನಿನ್ನ ಬಗ್ಗೆ ನನಗೆ ಮೊದಲಿಂದಲೂ ಕೆಟ್ಟ ಕುತೂಹಲ. ಮನೆಯಲ್ಲಿ ಯಾರು ಏನನ್ನುತ್ತಾರೋ ಎಂಬ ಅಳುಕಿನಿಂದ ನಿನ್ನನ್ನು ದೂರದಿಂದಲೇ ನೋಡಿ ಸುಮ್ಮನಾಗುತ್ತಿದ್ದೆ. ನಿನಗೆ ತಿಳಿದಿರಲಿಕ್ಕಿಲ್ಲ, ಸಮಯ ಸಿಕ್ಕಾಗಲೆಲ್ಲ ನಾನು ನಿನ್ನ ಬೆನ್ನು ಸವರುತ್ತಿದ್ದೆ. ತೊಡೆ ಚಿವುಟುತ್ತಿದ್ದೆ. ಗಲ್ಲ ಹಿಡಿದು ಏನೇ ಸುಂದರಿ ಎನ್ನುತ್ತಿದ್ದೆ. ನೀನು ನನ್ನನ್ನು ಗುರುತಿಸಿರಲಿಕ್ಕಿಲ್ಲ.&lt;br /&gt;ಶ್ವೇತವರ್ಣೆಯಾದ ನೀನು ಈ ಕರಿಯನಿಗೆ ಸ್ವಂತವಾದ ಆ ದಿನ ಚೆನ್ನಾಗಿ ನೆನಪಿದೆ. ಗೆಳೆಯರ ಬಳಗದ ಮಧ್ಯೆ ನನ್ನ ಪುರುಷತ್ವ ಪರೀಕ್ಷೆಗೊಳಗಾದ ಅಗ್ನಿ ಪರೀಕ್ಷೆಯ ಸಂದರ್ಭವದು! ನಿನ್ನೊಳಗೆ ಒಂದಾಗದ ಹೊರತು, ಅಂದು ಅನ್ಯಮಾರ್ಗವಿರಲಿಲ್ಲ. ಮೊದಲ ಮಿಲನ ಮಹೋತ್ಸವಕ್ಕೆ ಗೆಳೆಯರು ಹುರಿದುಂಬಿಸಿದರು. ಲಿಮಿಟ್ಟುಗಳ ಮೀರುವುದರಲ್ಲೇ ಮುದವಿದೆ, ಗೆಲುವಿದೆ ಎಂದು ನನಗ್ಯಾಕೋ ಅನ್ನಿಸಿತ್ತು.&lt;br /&gt;ಮೊದಲ ಸ್ಪರ್ಶಕ್ಕೇ ನಾ ನಿಜಕ್ಕೂ ಸೋತೆ. ಮುಖದ ಮೇಲೆ ಮೀಸೆ ಚಿಗುರುತ್ತಿವೆ ಎಂದು ಅನಿಸಿದ್ದು, ಆಗಲೇ.&lt;br /&gt;ಆ ಪ್ರಥಮ ಚುಂಬನ ಹಿತಕರವಾಗೇನೂ ಇರಲಿಲ್ಲ. ಪುಣ್ಯಕ್ಕೆ ಹಲ್ಲು ಬೀಳಲಿಲ್ಲ ಅಷ್ಟೆ! ನಿನ್ನ ಸಂಗ, ಬಿಸಿಯುಸಿರಿನ ಹಸಿಬಿಸಿ ಅಪ್ಪುಗೆ ಮೊದಮೊದಲು ಕಷ್ಟವಾಯಿತು. ನಿನ್ನಿಂದ ಬಿಡುಗಡೆ ಪಡೆದಾಗ ಮುಖದ ಮೇಲೆ ಬೆವರ ಹನಿಗಳ ಮುತ್ತಿನ ಮಾಲೆ. ಬರ್ತಾಬರ್ತಾ ನಿನ್ನ ಸಂಗ ಇಷ್ಟವಾಯಿತು. ನನ್ನ ಎದೆಗೂಡಲ್ಲಿ ನಿನಗೆ ಜಾಗ ಕೊಟ್ಟೆ(ನಾ ಕೊಡುವುದೇನು? ನೀನೇ ಬಂದು ಕೂತೆ! ) ‘ನೀನಿಲ್ಲದೇ ನನಗೇನಿದೆ.. ನಿನ್ನಲ್ಲೇ ಈ ಜೀವ ಒಂದಾಗಿದೆ ’ ಎಂಬ ಸಾಲುಗಳನ್ನು ನಮ್ಮಿಬ್ಬರ ಕಂಡೇ ಬರೆದಿರಬೇಕು!&lt;br /&gt;ನಿದ್ದೆ ಬಾರದ ರಾತ್ರಿಯಲ್ಲಿ ನೀನು ನೆನಪಾಗುವೆ. ಆದರೆ ಏನು ಮಾಡಲಿ? ನೀನಿಲ್ಲದ ಹೊತ್ತು, ಗಡಿಯಾರ ಮುಂದಕ್ಕೆ ಹೋಗುವುದೇ ಇಲ್ಲ. ಬೆಳಕಿನ ಸುರುಸುರು ಬತ್ತಿಗಳ ಹಿಡಿದು ಭೂಮಿಗಿಳಿಯಲು ಆ ಸೂರ್ಯನಿಗೇನು ದಾಡಿ? ಕಿಟಕಿಯ ತೆರೆದು ಕತ್ತಲಲ್ಲಿ ಬೆಳಕನ್ನು ಹುಡುಕುತ್ತೇನೆ. ವಿರಹ ವೇತನೆಯಿಂದ ಬಳಲಿ ಬೆಂಡಾದ ನನ್ನ ಮೇಲೆ ನಿನಗೆ ಒಂದಿಷ್ಟೂ ಅನುಕಂಪವಿಲ್ಲ!&lt;br /&gt;ನಿನ್ನ ಸಂಗ ಮಾಡಿದ ಮೇಲೆ, ಕೆಲವರು ನನ್ನಿಂದ ದೂರವಾದರು. ಹೋಗಲಿ ಬಿಡು, ನನಗೇನು? ಜಗತ್ತಿನಲ್ಲಿ ನೀನು ನನ್ನೊಟ್ಟಿಗಿದ್ದರೆ ಸಾಕು, ನೂರೇನು ಸಾವಿರ ವರ್ಷ ಬೇಕಿದ್ದರೂ ಬೆಂಗಳೂರಿನ ಹೊಗೆ ಕುಡಿದು, ಟ್ರಾಫಿಕ್ ಜಾಮ್‌ನಲ್ಲಿ ನರಳುತ್ತಾ ಬಾಳಬಲ್ಲೆ. ಯಾಕೆಂದರೆ; ನೀನು ಬಂದ ಮೇಲೆ ತಾನೇ ಇಷ್ಟು ಚೆಂದ ಈ ಬಾಳು.. ಹೌದು ನೀನು ನನ್ನೊಟ್ಟಿಗೆ ಹೆಜ್ಜೆ ಹಾಕುತ್ತಿರುವೆ. ನಮ್ಮಿಬ್ಬರ ಸಂಬಂಧವನ್ನು ಕೆಲವರು ತಮಗೆ ದೋಚಿದಂತೆ ಅರ್ಥೈಸುತ್ತಾರೆ. ಅದು ಅವರ ಲಿಮಿಟ್ಟು. ನಿನ್ನ ಸಂಗ ಬಿಡುವಂತೆ ನಾನಾ ರೀತಿ ಹೇಳುತ್ತಾರೆ. ನನ್ನ ಜೀವದ ಉಸಿರಲ್ಲಿ ನಿನ್ನ ಉಸಿರು ಬೆರೆತಿದೆ. ಹೀಗಾಗಿ ಬೇರೆಯಾಗುವುದಾದರೂ ಹೇಗೆ ಎಂದು ಯೋಚಿಸುವಾಗಲೇ, ಅಗಲಿಕೆಯ ದಿನ ಸಮೀಪಿಸಿದೆ.&lt;br /&gt;ನಾವಿಬ್ಬರೂ ಒಂದೇ ದೇಹವಾಗಿ ಸುಖಿಸುತ್ತಿರುವ ವೇಳೆಯಲ್ಲಿಯೇ ಅದ್ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ. ನಿನ್ನನ್ನು ಅಲ್ಲಿಗೆ ಕರೆದೊಯ್ಯಲು ನಾನಂತೂ ರೆಡಿ. ಆದರೆ ಅದೆಲ್ಲ ಆಗದ ಮಾತು. ನೀನಿಲ್ಲದೇ ನಾ ಹೇಗಿರಲಿ? ತಲೆ ಮತ್ತೆ ಗಿರ್ರೆನ್ನುತ್ತಿದೆ, ಬಾ ಕೊನೆಯದಾಗಿ ಒಂದು ಸಲ ಒಂದಾಗೋಣ. ಜಗತ್ತು ನಾಚುವಂತೆ, ಸುಖ ಉಣ್ಣೋಣ.&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-8958993763381309958?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/8958993763381309958/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=8958993763381309958' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/8958993763381309958'/><link rel='self' type='application/atom+xml' href='http://www.blogger.com/feeds/2189102912389204330/posts/default/8958993763381309958'/><link rel='alternate' type='text/html' href='http://kanasinaramane.blogspot.com/2008/05/blog-post_18.html' title='ಯಾರೋ ಪಾಪಿಗಳು ಬಾಗಿಲು ತಟ್ಟುತ್ತಿದ್ದಾರೆ?'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>1</thr:total></entry><entry><id>tag:blogger.com,1999:blog-2189102912389204330.post-1262235704713506443</id><published>2008-05-11T00:12:00.002+05:30</published><updated>2008-12-11T09:19:22.398+05:30</updated><title type='text'>ತೆರೆದಿದೆ ಮನೆ ಓ ಬಾ ಬೆಳಕೆ!</title><content type='html'>&lt;a href="http://2.bp.blogspot.com/_eDo9m8Nl3wg/SCXuL76b9PI/AAAAAAAAAEY/fY7kQgoJl0Q/s1600-h/sl.jpg"&gt;&lt;img id="BLOGGER_PHOTO_ID_5198823233697871090" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_eDo9m8Nl3wg/SCXuL76b9PI/AAAAAAAAAEY/fY7kQgoJl0Q/s320/sl.jpg" border="0" /&gt;&lt;/a&gt; &lt;span style="color:#006600;"&gt;ದುಡ್ಡಿಲ್ಲ.. ನಯಾ ಪೈಸೆ ಖರ್ಚಿಲ್ಲ. ಹೀಗಾಗಿ ಸೂರ್ಯನ ಬೆಳಕನ್ನು ಬಳಸಿಕೊಳ್ಳಲು ಏನೂ ಕಷ್ಟವಿಲ್ಲ. ಆದರೆ ಕೆಲವು ಮನೆಗಳನ್ನು ನೋಡಿ, ರಾತ್ರಿ ಯಾವುದೋ, ಹಗಲು ಯಾವುದೋ ಒಂದೂ ಗೊತ್ತಾಗುವುದಿಲ್ಲ. ಯಾವಾಗಲೂ ಆಂಧಕಾರ. ದೀಪವಿಲ್ಲದ ಹೊರತು, ಮನೆಯಲ್ಲಿ ಕ್ಷಣಕಾಲವೂ ನಿಲ್ಲಲಾಗದು.&lt;/span&gt;&lt;br /&gt;ಸೂರ್ಯನ ಬೆಳಕನ್ನು ಬಳಸಿಕೊಳ್ಳುವಲ್ಲಿ ನಮ್ಮ ಪೂರ್ವಿಕರು ಅತಿ ಜಾಣರು. ಸಂಪ್ರದಾಯದ ಹೆಸರಲ್ಲಿ, ಸೂರ್ಯನನ್ನು ಬಳಸಿಕೊಳ್ಳಲು ಅವರು ಪ್ರೇರಣೆ ನೀಡಿದ್ದಾರೆ. ಪೂರ್ವಕ್ಕೆ ಬಾಗಿಲು ಇಡಬೇಕು. ಸಾಧ್ಯವಾಗದ ಪಕ್ಷದಲ್ಲಿ ದಕ್ಷಿಣಕ್ಕಾದರೂ ಇಡಬೇಕು ಎನ್ನುವುದು ಹಿರಿ ತಲೆಗಳ ಮಾತಷ್ಟೇ ಅಲ್ಲ. ವಾಸ್ತು ಪಂಡಿತರು ಮತ್ತು ಎಂಜಿನಿಯರ್‌ಗಳು ಸಹಾ ಈ ಸಲಹೆಯನ್ನು ಸಮ್ಮತಿಸುತ್ತಾರೆ.&lt;br /&gt;ಮನೆಗೆ ಮುಖ್ಯವಾದದ್ದು ಮಾರ್ಬಲ್ ಅಲ್ಲ. ಟೀಕ್‌ವುಡ್ಡಿನ ಕಿಟಕಿ ಬಾಗಿಲುಗಳೂ ಅಲ್ಲ. ಗಾಳಿ-ಬೆಳಕು ಮನೆಯ ಸಮೃದ್ಧಿ ಸೂಚಕ. ಈ ಬಗ್ಗೆ ನಾವು ಗಮನ ನೀಡದೇ ಹೋದರೆ, ಮನೆ ಎಂಬುದು ನಮ್ಮ ಪಾಲಿಗೆ ಪಂಚರವಾಗುತ್ತದೆ. ಅದು ನರಕದ ಅನುಭವ ನೀಡುತ್ತದೆ. ಕಿಟಕಿಯಿಂದ ತೂರಿ ಬರುವ ಸೂರ್ಯನ ಬೆಳಗಿನ ಎಳೆಯ ಕಿರಣಗಳು, ‘ಬೆಳಗಾಯಿತು ಮೇಲೆ ಏಳೋ ಸೋಮಾರಿ’ ಎಂದು ನಮ್ಮ ಮೂತಿ ತಿವಿದು ಎಬ್ಬಿಸುತ್ತವೆ. ಸಮಯದ ಪರಿಕಲ್ಪನೆಯನ್ನು ಬೆಳಕು ನಮ್ಮಲ್ಲಿ ತುಂಬುತ್ತದೆ.&lt;br /&gt;&lt;strong&gt;ಬೆಳಕೆಂದರೆ ಬರೀ ಬೆಳಕಲ್ಲವೋ..&lt;br /&gt;&lt;/strong&gt;ಸೂರ್ಯನ ಬೆಳಕು ತನ್ನೊಳಗೆ ತಾಪವನ್ನೂ ಮೈಗೂಡಿಸಿಕೊಂಡಿದೆ. ಆ ಬೆಳಕಿನ ಬಿಸಿ ಒಮ್ಮೊಮ್ಮೆ ಕಚಗುಳಿಗೆ, ಪುಳಕಕ್ಕೆ, ಹಿಂಸೆಗೆ ಮತ್ತು ಅಹಿತಾನುಭವಕ್ಕೆ ಕಾರಣವಾಗುತ್ತದೆ.&lt;br /&gt;ಉತ್ತರ ದಿಕ್ಕಿನಿಂದ ಮನೆಗೆ ನುಗ್ಗುವ ಸೂರ್ಯನ ಬೆಳಕು ತಂಪಾಗಿರುತ್ತದೆ. ಬೇಸಿಗೆಯ ಮಧ್ಯದಲ್ಲಷ್ಟೇ, ತುಸು ಕಾವೇರುತ್ತದೆ. ಆಗಷ್ಟೆ ಸೂರ್ಯ, ತನ್ನ ನೇರ ಕಿರಣಗಳನ್ನು ಚಾಚಿ ಮಲಗುತ್ತಾನೆ. ದಕ್ಷಿಣ ದಿಕ್ಕಿನ ಕಿರಣಗಳು ಬಿಸಿಯೋ ಬಿಸಿ. ಹೀಗಾಗಿ ದಕ್ಷಿಣದಲ್ಲಿರುವ ಕೊಠಡಿಗಳ ಗೋಡೆಗಳು ದಟ್ಟ ಕಡು ಬಣ್ಣಗಳನ್ನು(ನೀಲಿ, ಹಸಿರು ಇತ್ಯಾದಿ) ಹೊಂದಿದ್ದರೆ ಒಳ್ಳೆಯದು.&lt;br /&gt;ಮನೆ ಬಾಗಿಲು ಪೂರ್ವದಲ್ಲಿದ್ದರೆ, ಮನೆಮಂದಿಗೆ ಸುಖಾನುಭವ. ಯಾವ ಬೇಸಿಗೆಯೂ ಇವರಿಗೆ ಕೇಡು ಮಾಡದು! ಪೂರ್ವದಲ್ಲಿ ಬೆಳಗ್ಗೆ ಚುಮುಚುಮು ಬಿಸಿಲು, ಮಧ್ಯಾಹ್ನ ತಂಪೋತಂಪು. ನೇರವಾಗಿ ಸೂರ್ಯ ಕಿರಣ ಬೀಳದ ಕಾರಣ, ಫ್ಯಾನಿನ ಬಳಕೆಯೂ ಕಡಿಮೆ, ಆ ಪರಿಣಾಮ ವಿದ್ಯುತ್ ಬಿಲ್ ಸಹಾಕಡಿಮೆ.&lt;br /&gt;ಇನ್ನು ಪಶ್ಚಿಮ ದಿಕ್ಕಿನಲ್ಲಿರುವ ಮಂದಿಗೆ ಸೂರ್ಯನ ಕಾಟ ಅಷ್ಟಿಷ್ಟಲ್ಲ. ಬೆಳಗ್ಗೆ ಸ್ವಲ್ಪ ಕಾಲ ಬಿಟ್ಟರೆ ಮಧ್ಯಾಹ್ನದಿಂದ ಸಂಜೆವರೆಗೆ ಬಿಸಿಲೋ ಬಿಸಿಲು. ಸಂಜೆಯ ನಂತರ ಬಿಸಿಲಿನ ಕಾವು. ಒಂದು ರೀತಿಯಲ್ಲಿ ಮಳೆ ನಿಂತರೂ ಮರದ ಹನಿ ನಿಲ್ಲದು ಎಂಬಂತೆ ಬಿಸಿಲಿನ ದರ್ಬಾರು.&lt;br /&gt;&lt;strong&gt;ಬೆಳಕಿನ ರಂಗವಲ್ಲಿ..&lt;/strong&gt;&lt;br /&gt;ಎಲ್ಲಕ್ಕೂ ಮಿತಿಯಿದೆ. ಬೆಳಕು ಹಿತಕರವಾಗಿರಬೇಕು... ಅದು ಅತಿಯಾದರೆ ಮತ್ತೆ ಅಪಾಯ. ಹೀಗಾಗಿ ನಿಮ್ಮ ಮನೆಯಲ್ಲಿ ಬೆಳಕನ್ನು ಸಮತೋಲನಗೊಳಿಸಲು, ತಜ್ಞರು ಸಲಹೆ ನೀಡುತ್ತಾರೆ. ಯಾವ ಕೊಠಡಿಗೆ ಯಾವ ಬಣ್ಣ ಸೂಕ್ತ ಎಂಬುದನ್ನು ಕೇಳಿ ತಿಳಿದುಕೊಳ್ಳಿ.&lt;br /&gt;ಕಿಟಕಿ, ಬಾಗಿಲು, ಗವಾಕ್ಷಿ ಹೀಗೆ ಸಾಧ್ಯವಿರುವ ಎಲ್ಲಾ ಕಡೆಯಿಂದ ಬೆಳಕು ತೂರಿ ಬರಲಿ. ಕಿಟಕಿ ಮತ್ತು ಬಾಗಿಲುಗಳಲ್ಲಿ ಬೆಳಕು ತೂರಲು ಸಾಧ್ಯವಾಗುವಂತೆ ವಿನ್ಯಾಸಗಳಿರಲಿ. ಕಿಟಕಿಗೆ ದೊಡ್ಡ ಬಾಗಿಲಿಗಿಂತಲೂ, ಅಲಂಕಾರಿಕಾ ಪುಟ್ಟ ಬಾಗಿಲುಗಳು ಒಳ್ಳೆಯದು. ಮನೆಯಲ್ಲಿ ಬೆಳಕು ಹಿಂಸೆ ನೀಡುವ ಕಡೆ ತಂಪು ಕಾಗದ ಅಂಟಿಸಬಹುದು, ಕಡಿಮೆ ಇರುವಕಡೆ ಬೆಳಕನ್ನು ದ್ವಿಗುಣಗೊಳಿಸುವ ಪಾರದರ್ಶಕ ಗಾಜನ್ನು ಬಳಸಬಹುದು. ಬೇಕಿದ್ದರೆ ಕನ್ನಡಿಗಳನ್ನು ಉಪಯೋಗಿಸಬಹುದು. ನಿಮ್ಮ ಕೊಠಡಿಗೆ ಬೆಳಕಿನ ಮೂಲಕ ಹೇಗೆ ಜೀವ ತುಂಬಲು ಸಾಧ್ಯ ಆಲೋಚಿಸಿ. ಅಂದ ಹಾಗೆ, ಮೈಕುಕ್ಕುವ ಬೆಳಕು ಮಲಗುವ ಮನೆಗೆ ಬೇಡವೇ ಬೇಡ. ಬೆಳಕು ನಿರೋಧಕ ದೀಪಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ, ಬಳಸಿ ನೋಡಿ.&lt;br /&gt;ಕಾಲ ಬದಲಾದಂತೆ ಸೂರ್ಯನ ಬೆಳಕು ವ್ಯತ್ಯಾಸವಾಗುತ್ತದೆ. ಹೀಗಾಗಿ ಪರ್ಯಾಯ ದೀಪಗಳು ಇದ್ದೇ ಇರಲಿ. ಸಹಜ ಬೆಳಕಿನ ಕೊರತೆ ನೀಗಿಸಲು, ಒಂದೆರಡು ಗಿಡಗಳು ಮನೆಯಲ್ಲಿರಲಿ. ಹಗಲು ವೇಳೆ ಕೊಠಡಿಗಳಿಗೆ ಸೂರ್ಯನ ಕಿರಣ ಪ್ರವೇಶವಿದ್ದರೆ ತುಂಬಾ ಒಳ್ಳೆಯದು. ಓದುವ ಕೊಠಡಿ ಮತ್ತು ಕಚೇರಿಯಲ್ಲಿ ಸೂರ್ಯನ ಬೆಳಕು ಹರಿದಾಡುತ್ತಿರಬೇಕು.&lt;br /&gt;&lt;strong&gt;ಬೆಳಕೆ, ನಿನಗೆ ಕೋಟಿ ನಮನ&lt;/strong&gt;&lt;br /&gt;ನಿಸರ್ಗದತ್ತ ಬೆಳಕು ಮನೆ ತುಂಬಿದಾಗ, ಮನೆಯಲ್ಲಿರುವವರಲ್ಲಿ ಲವಲವಿಕೆ ಪುಟಿಯುತ್ತದೆ. ಯಾವುದೇ ಖರ್ಚಿಲ್ಲದೇ ಮನೋಲ್ಲಾಸ ಬೆಳಿಕಿನಿಂದ ಲಭ್ಯ. ಸೂರ್ಯನ ಕಿರಣ ಮನೆಯಲ್ಲಿ ಹಾದು ಹೋದರೆ, ಕೊಠಡಿ ಮಿಂಚುತ್ತದೆ, ತಾಜಾತನ ಆವರಿಸುತ್ತದೆ. ಜತೆಗೆ ಆರೋಗ್ಯಕ್ಕೂ ಹಿತ. ಕಸ ಮತ್ತು ಬ್ಯಾಕ್ಟೀರಿಯಾಗಳಿಂದಲೂ ಬೆಳಕು ನಮ್ಮನ್ನು ಪಾರು ಮಾಡಬಲ್ಲದು.&lt;br /&gt;----------------------------------------------------------------------------------&lt;br /&gt;&lt;strong&gt;&lt;span style="color:#ff0000;"&gt;ಬೆಳಕು ತಂದ ಕಾಯಿಲೆ!&lt;/span&gt;&lt;/strong&gt;&lt;br /&gt;&lt;span style="color:#3333ff;"&gt;ಸೂರ್ಯನಿಂದ ವಿಟಮಿನ್-ಡಿ ಲಭ್ಯ ಎನ್ನುವುದು ಖುಷಿ ವಿಚಾರ. ಆದರೆ ಹೆಚ್ಚಿನ ಪ್ರಖರ ಬಿಸಿಲು ಚರ್ಮದ ಕ್ಯಾನ್ಸರ್‌ಗೂ ದಾರಿಯಾಗಬಹುದು ಎಂಬ ಅಂಶವನ್ನು ಮರೆಯುವಂತಿಲ್ಲ. ಅಪಾಯಕಾರಿ ಅತಿ ನೇರಳೆ ಕಿರಣಗಳಿಂದ ನಮ್ಮ ಚರ್ಮಕ್ಕೆ ರಕ್ಷಣೆ ನೀಡಬೇಕಾಗಿದೆ. ಈ ಉದ್ದೇಶಕ್ಕಾಗಿ ಅನೇಕ ಕ್ರೀಮ್‌ಗಳು ಮಾರುಕಟ್ಟೆಯಲ್ಲಿವೆ.&lt;/span&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-1262235704713506443?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/1262235704713506443/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=1262235704713506443' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/1262235704713506443'/><link rel='self' type='application/atom+xml' href='http://www.blogger.com/feeds/2189102912389204330/posts/default/1262235704713506443'/><link rel='alternate' type='text/html' href='http://kanasinaramane.blogspot.com/2008/05/blog-post_8913.html' title='ತೆರೆದಿದೆ ಮನೆ ಓ ಬಾ ಬೆಳಕೆ!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_eDo9m8Nl3wg/SCXuL76b9PI/AAAAAAAAAEY/fY7kQgoJl0Q/s72-c/sl.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-2002829418519125861</id><published>2008-05-11T00:04:00.001+05:30</published><updated>2008-05-11T00:10:23.280+05:30</updated><title type='text'>ಸುಮುಖದ ಜೈತ್ರಯಾತ್ರೆ : ಮಾಳ್ಕೋಡು ಛಲಕ್ಕೆ ಫಲ</title><content type='html'>&lt;span style="color:#006600;"&gt;ಕನ್ನಡದಲ್ಲಿ ಓದುಗರ ಸಂಖ್ಯೆ ಕಡಿಮೆ, ಮಾರುಕಟ್ಟೆ ಚಿಕ್ಕದು, ಇಲ್ಲಿ ಪುಸ್ತಕ ಪ್ರಕಟಿಸೋದು ಒಂದೇ, ಹಾಳು ಬಾವಿಗೆ ಬೀಳೋದು ಒಂದೇ ಎಂಬ ಮಾತುಗಳ ಮಧ್ಯೆಯೇ ‘ಸುಮುಖ’ ಪ್ರಕಾಶನ ಸದ್ದಿಲ್ಲದೇ ಗೆಲುವಿನತ್ತ ಮುಖಮಾಡಿದೆ. ತನ್ನ ಜೈತ್ರಯಾತ್ರೆಯನ್ನು ಮುಂದುವರಿಸಿರುವ ಈ ಪ್ರಕಾಶನ, ಅತಿ ಕಡಿಮೆ ಅವಯಲ್ಲಿ ಅಂದರೆ ಕೇವಲ ನಾಲ್ಕೂವರೆ ವರ್ಷಗಳಲ್ಲಿ ೨೦೦ ಪುಸ್ತಕಗಳ ಗಡಿ ದಾಟಿ, ಮುನ್ನಡೆದಿದೆ. ಬಹುಶಃ ಅಲ್ಪಕಾಲದಲ್ಲಿ ಈ ಮಟ್ಟದ ಸಾಧನೆ ಮಾಡಿದ ಇನ್ನೊಂದು ಪ್ರಕಾಶನ ಇರಲಿಕ್ಕಿಲ್ಲ.&lt;/span&gt;&lt;br /&gt;‘ಕಾಸಿಗಿಂತಲೂ ಖುಷಿಯೇ ಮುಖ್ಯ, ಕನ್ನಡ ಪ್ರೀತಿಯೇ ದೊಡ್ಡದು’ ಎಂದು ನಂಬಿಕೊಂಡಿರುವ ಸುಮುಖ ಪ್ರಕಾಶನದ ಮಾಲೀಕ ನಾರಾಯಣ ಮಾಳ್ಕೋಡು, ಬರೀ ವ್ಯಾಪಾರಿಯಲ್ಲ. ಅವರೊಬ್ಬ ಲೇಖಕರು, ಸಾಹಿತ್ಯ ಪರಿಚಾರಕರು. ಕನ್ನಡ ಪುಸ್ತಕಗಳನ್ನು ನಾಡಿನುದ್ದಕ್ಕೂ ತಲುಪಿಸುವ ಹಂಬಲ ಹೊಂದಿರುವ ಅವರದು ಕಲ್ಲು ಮುಳ್ಳಿನ ಹಾದಿ. ಗೆಲುವಿನ ಕಿರೀಟ ಧರಿಸಲು ಅವರು ಪಟ್ಟ ಪಾಡು ಒಂದೆರಡಲ್ಲ.&lt;br /&gt;&lt;strong&gt;ದರಿದ್ರ ವ್ಯವಸ್ಥೆ ವಿರುದ್ಧ ಬಂಡಾಯ&lt;br /&gt;&lt;/strong&gt;‘ಪ್ರಕಾಶನ ಆರಂಭಿಸಬೇಕು ಎನ್ನುವ ಹಂಬಲ ನಿಮ್ಮ ಮನದಲ್ಲಿ ಬಂದದ್ದೇಗೆ?’ ಎಂದರೆ , ‘ಈ ಹಿಂದೆ ಲೇಖಕರನ್ನು ಕೆಟ್ಟದಾಗಿ ನಡೆಸಿಕೊಳ್ಳಲಾಗುತ್ತಿತ್ತು. ಪ್ರಕಾಶಕರಿಂದ ಲೇಖಕರಿಗಾಗುತ್ತಿರುವ ಅನ್ಯಾಯ ನನ್ನ ಅನುಭವಕ್ಕೂ ಬಂದಿತ್ತು. ಒಂದು ಸಾವಿರ ಮುದ್ರಿಸುವುದಾಗಿ ಹೇಳಿ ೧೦ ಸಾವಿರ ಪ್ರತಿಗಳನ್ನು ಪ್ರಕಟಿಸುವುದು, ಲೇಖಕರಿಗೆ ಗೌರವ ಧನ ನೀಡದೇ ನಾಮ ಹಾಕುವ ದರಿದ್ರ ವ್ಯವಸ್ಥೆಯಿಂದ ನಾನು ಬೇಸತ್ತಿದ್ದೆ. ಪ್ರಾಮಾಣಿಕ ಪ್ರಕಾಶನ ತೆರೆಯುವ ಉದ್ದೇಶದಿಂದ ಸುಮುಖಕ್ಕೆ ಚಾಲನೆ ನೀಡಿದೆ ’ ಎನ್ನುತ್ತಾರೆ ಮಾಳ್ಕೋಡು. ಇನ್ನೂ ಒಂದೆಜ್ಜೆ ಮುಂದೆ ಹೋಗಿ ಪ್ರಕಾಶನ ಕ್ಷೇತ್ರದ ಹುಳುಕುಗಳನ್ನು ತೆರೆದಿಡುತ್ತಾರೆ.&lt;br /&gt;ಅವರು ಹೇಳುವಂತೆ ; ‘ನಮ್ಮಲ್ಲಿ ಲೈಬ್ರೆರಿ ಪ್ರಕಾಶಕರು ಮತ್ತು ಜನಹಿತ ಪ್ರಕಾಶಕರು ಎಂಬ ಎರಡು ಗುಂಪುಗಳಿವೆ. ನಮ್ಮಲ್ಲಿ ಲೈಬ್ರೆರಿ ಪ್ರಕಾಶಕರ ಸಂಖ್ಯೆ ದೊಡ್ಡದು. ಗ್ರಂಥಾಲಯ ಇಲಾಖೆಯ ದುಡ್ಡು ನಂಬಿ, ಇವರು ಬದುಕುತ್ತಾರೆ. ಇವರ ದೆಸೆಯಿಂದ ಪುಸ್ತಕಗಳು ಲೈಬ್ರೆರಿಯ ಕತ್ತಲೆ ಕೋಣೆಯಲ್ಲಿ ಕೊಳೆಯಬೇಕಾಗುತ್ತದೆ ’&lt;br /&gt;&lt;strong&gt;ಪುಸ್ತಕ&lt;/strong&gt; &lt;strong&gt;ನೀತಿ ಜಾರಿಗೆ ಬರಲಿ..&lt;br /&gt;&lt;/strong&gt;‘ನಮ್ಮಲ್ಲಿ ಸೂಕ್ತ ಜಲನೀತಿಯಿಲ್ಲ. ಅದೇ ರೀತಿ ಪುಸ್ತಕ ನೀತಿಯೂ ಇಲ್ಲ. ಪ್ರಕಾಶನಗಳಿಂದ ತಲಾ ಒಂದು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿಸುತ್ತದೆ. ಆದರೆ ಕೆಲವು ಪ್ರಕಾಶಕರು ಬೇರೆಬೇರೆ ಹೆಸರಲ್ಲಿ ೮-೧೦ ಪ್ರಕಾಶನಗಳನ್ನು ಹೊಂದಿದ್ದಾರೆ. ಇದು ಹಣ ನುಂಗಲು ದಾರಿಯಾಗಿದ್ದು, ಪ್ರಾಮಾಣಿಕ ಪ್ರಕಾಶಕರಿಗೆ ತೊಂದರೆಯಾಗಿದೆ. ಗೌರವ ಧನ ನೀಡದೇ ವಂಚಿಸುವ ಪ್ರಕಾಶಕನಿಗೆ ಪಾಠ ಕಲಿಸುವ ಅಥವಾ ಬರಹದ ಹಕ್ಕುಗಳನ್ನು ಮೂರುನಾಲ್ಕು ಪ್ರಕಾಶಕರಿಗೆ ಮಾರುವ ಲೇಖಕನಿಗೆ ಶಿಕ್ಷೆ ನೀಡುವ ಕಾನೂನುಗಳು ನಮ್ಮಲ್ಲಿಲ್ಲ. ಹೀಗಾಗಿ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. ನಕಲಿ ಪುಸ್ತಕಗಳ ಜಾಲ ವಿಸ್ತಾರಗೊಳ್ಳುತ್ತಿದೆ. ಹೀಗಾಗಿ ಸಮಗ್ರ ಪುಸ್ತಕ ನೀತಿ ಅತ್ಯಗತ್ಯ’ ಎನ್ನುವುದು ಮಾಳ್ಕೋಡು ಅಭಿಪ್ರಾಯ.&lt;br /&gt;&lt;strong&gt;ಬರೀ ಸುಳ್ಳು ನೆವಗಳು!&lt;/strong&gt;&lt;br /&gt;ಕನ್ನಡದ ಮಾರುಕಟ್ಟೆ ಚಿಕ್ಕದು, ಓದುಗರ ಕೊರತೆ ಇದೆ ಎನ್ನುವ ಮಾತನ್ನು ಮಾಳ್ಕೋಡು ಒಪ್ಪುವುದಿಲ್ಲ. ‘ಇಲ್ಲ.. ಇದು ತಪ್ಪು. ಓದುಗರಿಗೆ ಪುಸ್ತಕಗಳನ್ನು ತಲುಪಿಸಲು ಪ್ರಕಾಶಕರಿಗೆ ದಾರಿಗಳಿಲ್ಲ. ಇದೊಂದು ನೆಟ್‌ವರ್ಕ್ ಸಮಸ್ಯೆ. ಇನ್ನು ಕನ್ನಡ ಪುಸ್ತಕ ಪ್ರಾಕಾರ ಪ್ರಕಾಶನ ಸಂಸ್ಥೆಯಾಗಿ ಬದಲಾಗಿದೆ! ಅದು ಪ್ರಕಾಶಕರಿಂದ ಪುಸ್ತಕಗಳನ್ನು ಖರೀದಿ ಮಾಡಿ, ತಾಲೂಕು ಕೇಂದ್ರಗಳಲ್ಲಿ ಮಾರಾಟ ಮಾಡಬೇಕು. ಎಲ್ಲಾ ಕಡೆ ಪ್ರಕಾಶಕರೇ ಮಳಿಗೆ ತೆರೆಯುವ ವ್ಯವಸ್ಥೆ ಜಾರಿಗೆ ಬರಲು, ಇನ್ನೂ ಸಮಯ ಬೇಕು. ಆ ಮಟ್ಟಕ್ಕೆ ಕನ್ನಡ ಪ್ರಕಾಶಕರು ಬೆಳೆದಿಲ್ಲ. ಹೊಸ ಪುಸ್ತಕಗಳ ಬಗ್ಗೆ ಓದುಗರಿಗೆ ಮಾಹಿತಿ ಸಿಗುತ್ತಿಲ್ಲ. ಕನ್ನಡ ಪತ್ರಿಕೆಗಳನ್ನು ಈ ಬಗ್ಗೆ ದೂರುವಂತಿಲ್ಲ. ಪ್ರಕಟವಾಗುವ ಸಾವಿರಾರು ಪುಸ್ತಕಗಳಿಗೆ ಜಾಗ ನೀಡಲು ಪತ್ರಿಕೆಗಳಿಗೆ ಕಷ್ಟ. ಕನ್ನಡ ಪುಸ್ತಕಗಳ ಬಗ್ಗೆ ಮಾಹಿತಿ ನೀಡುವ ಪತ್ರಿಕೆಗಳನ್ನು ಆರಂಭಿಸಿ, ಆನೇಕರು ವಿಫಲರಾಗಿದ್ದಾರೆ ’ಎನ್ನುವ ಅವರು, ಓದುಗರನ್ನು ತಲುಪುವ ಹೊಸ ಹಾದಿಗಳತ್ತ ಚಿಂತನೆ ನಡೆಸಿದ್ದಾರೆ.&lt;br /&gt;&lt;strong&gt;ಕನ್ನಡ ಪುಸ್ತಕಗಳು ಬಲು ದುಬಾರಿ&lt;/strong&gt;&lt;br /&gt;‘ಓದುಗರು ಬೆಚ್ಚುವಷ್ಟು ಕೆಲವು ಕನ್ನಡ ಪುಸ್ತಕಗಳು ಬಲು ದುಬಾರಿ’ ಎನ್ನುವ ಮಾತನ್ನು ಅರ್ಧ ಒಪ್ಪುವ ಮಾಳ್ಕೋಡು, ‘ಓದುಗರು ಕೆಲವು ಸಂಗತಿಗಳನ್ನು ತಾಳೆ ಹಾಕಬೇಕು. ನಮ್ಮ ಪ್ರಕಾಶನವು ಪುಟಕ್ಕೆ ೪೦-೪೨ ಪೈಸೆ ನಿಗದಿ ಪಡಿಸುತ್ತದೆ. ಕೆಲವು ಪ್ರಕಾಶಕರು ಲಾಭದ ಆಸೆಯಿಂದ ೭೦-೮೦ ಪೈಸೆ ನಿಗದಿ ಮಾಡುತ್ತಾರೆ. ಯಾವ ಪ್ರಕಾಶಕರು ಸೂಕ್ತ ಎಂಬುದನ್ನು ಲೇಖಕರು ಮತ್ತು ಓದುಗರು ನಿರ್ಧರಿಸಬೇಕು’ ಎನ್ನುತ್ತಾರೆ.&lt;br /&gt;&lt;strong&gt;ಪ್ರಕಾಶಕ ಸಂಸ್ಕೃತಿಯ ಹರಿಕಾರ&lt;/strong&gt;&lt;br /&gt;ಲೇಖಕರು ಸಾಹಿತ್ಯದ ಹರಿಕಾರರಾದರೆ, ಪ್ರಕಾಶಕರು ಸಂಸ್ಕೃತಿಯ ಹರಿಕಾರರು ಎಂದು ಪ್ರತಿಪಾದಿಸುವ ಮಾಳ್ಕೋಡು, ಪ್ರಕಾಶಕರಿಗೆ ಸೂಕ್ತ ಸ್ಥಾನಮಾನ ದಕ್ಕಿಲ್ಲ ಎಂದು ವಿಷಾದಿಸುತ್ತಾರೆ. ‘ಭ್ರಷ್ಟ ಪ್ರಕಾಶಕರಿಗೆ ಮಣೆ ಹಾಕುವುದ ಬೇಡ. ಪ್ರಾಮಾಣಿಕ ಪ್ರಕಾಶಕರನ್ನು ಪ್ರಸ್ತುತ ಬೆಳೆಸಬೇಕಾಗಿದೆ. ನಾನಂತೂ ಪ್ರಕಾಶನವನ್ನು ಕೇವಲ ವ್ಯಾಪಾರವಾಗಿ ಪರಿಗಣಿಸಿಲ್ಲ. ಇದನ್ನು ದೇವರು ಎಂದು ಪರಿಭಾವಿಸಿದ್ದೇನೆ. ದುಡ್ಡು ಮಾಡುವುದೇ ನನ್ನ ಗುರಿಯಾಗಿದ್ದರೆ ಪ್ರಕಾಶನ ತೆರೆಯುತ್ತಿರಲಿಲ್ಲ. ಹೋಟೆಲ್ಲೋ ಅಥವಾ ಬೇಕರಿಯನ್ನೋ ತೆರೆಯುತ್ತಿದ್ದೆ ’ ಎನ್ನುತ್ತಾರೆ.&lt;br /&gt;&lt;strong&gt;ಅವು ತಾಳ್ಮೆ ಪರೀಕ್ಷೆಯ ದಿನಗಳು&lt;br /&gt;&lt;/strong&gt;ಎಸ್‌ಎಸ್‌ಎಲ್‌ಸಿಯಲ್ಲಿ ಶೇ.೮೮, ಪಿಯುಸಿಯಲ್ಲಿ ಶೇ.೮೬, ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಶೇ.೭೦ ಅಂಕ ಪಡೆದಿರುವ ಮಾಳ್ಕೋಡು ಮನಸ್ಸು ಮಾಡಿದ್ದರೆ ಸರಕಾರಿ ಕೆಲಸ ಗಿಟ್ಟಿಸುವುದು ಕಷ್ಟವಾಗುತ್ತಿರಲಿಲ್ಲ. ಆದರೆ ಅವರ ಆಲೋಚನೆಗಳೇ ವಿರುದ್ಧ ದಿಕ್ಕಿನಲ್ಲಿದ್ದವು. ೫೦೦ ರೂ. ಸಂಬಳಕ್ಕೆ ರಾಗಸಂಗಮ ಮತ್ತು ಚುಟುಕದಲ್ಲಿ ಕೆಲಸ ಮಾಡಿದ ಅವರಿಗೆ ಮೊದಲಿನಿಂದಲೂ ಅಕ್ಷರ ಸಹವಾಸ ಹಿತಕರವೆನಿಸಿತ್ತು. ಬರೆಯುವುದು ಮತ್ತು ಓದುವುದು ಅವರ ನೆಚ್ಚಿನ ಚಟಗಳಾಗಿದ್ದವು.&lt;br /&gt;ಮುದ್ರಣ ಮಾಧ್ಯಮದ ಒಳಹೊರಗನ್ನು ಅರಿತ ಅವರಿಗೆ ಪ್ರಕಾಶನ ಆರಂಭಿಸುವುದು ಕಷ್ಟವಾಗಲಿಲ್ಲ. ಕಷ್ಟಪಟ್ಟು ಕೂಡಿಟ್ಟಿದ್ದ ೨ ಲಕ್ಷ ರೂ. ಹಣವನ್ನು ಹಾಕಿ ೧೦ ಪುಸ್ತಕಗಳನ್ನು ಪ್ರಕಟಿಸಿ,ಸೆಪ್ಟೆಂಬರ್ ೭,೨೦೦೩ರಲ್ಲಿ ಸುಮುಖ ಪ್ರಕಾಶನಕ್ಕೆ ಚಾಲನೆ ನೀಡಿದರು. ಆಮೇಲೆ ಮಾರುಕಟ್ಟೆ ಕಷ್ಟ ಅವರ ಅನುಭವಕ್ಕೆ ಬಂತು. ಮುಂದಿನ ಹಾದಿಯನ್ನು ಆಯ್ಕೆ ಮಾಡಿಯಾಗಿತ್ತು. ಹೀಗಾಗಿ ಅಲ್ಲಿಯೇ ಮುಂದುವರಿಯಲು ಅವರು ಮನಸ್ಸು ಮಾಡಿದರು. ಪ್ರಕಾಶನಕ್ಕೆ ಪೂರಕವಾಗಲೆಂದು ಜನವರಿ ೧೮, ೨೦೦೪ರಲ್ಲಿ ಮಾಗಡಿ ರಸ್ತೆಯ ಟೋಲ್‌ಗೇಟ್ ವೃತ್ತದ ಬಳಿ ಸುಮುಖ ಬುಕ್‌ಹೌಸ್ ತೆರೆದರು. ಅದೊಂದು ಏಕವ್ಯಕ್ತಿ ಕೇಂದ್ರಿತ ಸಾಹಸ. ಕೇವಲ ೫೦೦ ಶೀರ್ಷಿಕೆಗಳ ಪುಸ್ತಕಗಳು ಅಲ್ಲಿದ್ದವು(ಈಗ ೧೦ ಸಾವಿರ ಶೀರ್ಷಿಕೆಯ ನಾನಾ ಪುಸ್ತಕಗಳು ಅಲ್ಲಿವೆ). ಬೆಳಗ್ಗೆ ೯ರಿಂದ ರಾತ್ರಿ ೯ರ ತನಕ ಅವರು ಅಂಗಡಿ ಬಿಟ್ಟು ಕದಲಲಿಲ್ಲ.&lt;br /&gt;ಆಗ ‘ಓ ಪುಸ್ತಕ ಪ್ರಕಾಶನವಾ?’ಎಂದು ಮೂಗು ಮುರಿದವರೇ ಹೆಚ್ಚು. ಮಗ ಹಾಳಾದ ಎಂಬ ಆತಂಕ ಹೆತ್ತವರಲ್ಲಿಯೂ ಇತ್ತು. ಈ ಅಂಶಗಳಿಗೆ ಪುಷ್ಟಿ ನೀಡುವಂತೆ ಮೊದಲ ತಿಂಗಳು ಅವರು ಪುಸ್ತಕ ಮಾರಿ ಸಂಪಾದಿಸಿದ್ದು, ಕೇವಲ ೮೦೦ ರೂಪಾಯಿ! ಅದರಲ್ಲಿ ಕಟ್ಟಡದ ಬಾಡಿಗೆ ೫೦೦ ರೂಪಾಯಿಯನ್ನು ನುಂಗಿತ್ತು. ಆಗ ಅವರು ತುಸು ಗಾಬರಿಗೊಂಡರು. ಎಲ್ಲೋ ತಪ್ಪು ಮಾಡಿದ ಭಯ ಕಾಡಿತು. ಎಡವಿದಂತೆ ಭಾಸವಾಯಿತು. ಆದರೆ ಅವರ ಒಲವು-ನಿಲುವು ಬದಲಾಗಲಿಲ್ಲ.&lt;br /&gt;&lt;strong&gt;ಅಕ್ಷರ ಬಂಧ-ಸಂಬಂಧ&lt;br /&gt;&lt;/strong&gt;ಸಾಹಿತ್ಯದ ನಂಟು ಬೆಸದ ಬಗ್ಗೆ ಹೇಳುತ್ತಾ ಅವರು ವಿದ್ಯಾರ್ಥಿ ದಿನಗಳಿಗೆ ಮರಳುತ್ತಾರೆ. "೯ನೇ ತರಗತಿಯಲ್ಲಿದ್ದಾಗಲೇ ನನ್ನದೊಂದು ಲೇಖನ ಪ್ರಜಾವಾಣಿಯ ಕರ್ನಾಟಕ ದರ್ಶನದಲ್ಲಿ ಪ್ರಕಟವಾಗಿತ್ತು. ೧೦ನೇ ತರಗತಿಯಲ್ಲಿದ್ದಾಗ ಧಾರವಾಡ ಆಕಾಶವಾಣಿಯಲ್ಲಿ ನನ್ನ ಕಾರ್ಯಕ್ರಮವೊಂದು ಪ್ರಸಾರವಾಗಿತ್ತು. ಆ ನಂತರ ಶಿಕ್ಷಣ ಮತ್ತಿತರ ವಿಷಯಗಳನ್ನು ಆಧರಿಸಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ೫೦-೬೦ ಕಾರ್ಯಕ್ರಮಗಳನ್ನು ಮಾಡಿದೆ. ಚಂದನದಲ್ಲಿ ‘ಬೆಳಗು’ ಎಂಬ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದೆ. ಮೊದಲಿನಿಂದಲೂ ಓದುವಿಕೆ ನಿರಂತರವಾಗಿತ್ತು. ಧಾರವಾಡದಲ್ಲಿ ಪಿಯೂಸಿ ಓದುವಾಗ, ಪತ್ರಿಕೋದ್ಯಮದತ್ತ ಸೆಳೆತ ಶುರುವಾಯಿತು. ಪಾಟೀಲ್ ಪುಟ್ಟಪ್ಪನವರ ಪರಿಚಯವಾಯಿತು. ಓದುತ್ತಲೇ ಕೆಲಸ ಮಾಡತೊಡಗಿದೆ. ವಿಶ್ವವಾಣಿ, ವಿಶಾಲ ಕರ್ನಾಟಕದಿಂದ ಕಾವೇರಿ ಮತ್ತು ಸುಪ್ರಪಾತ ಚಾನೆಲ್‌ವರೆಗೆ ಸುದ್ದಿಮನೆಯಲ್ಲಿ ಕೆಲಸಮಾಡಿದೆ. ರಾಗಸಂಗಮ ಮತ್ತು ಚುಟುಕವನ್ನು ಎರಡು ವರ್ಷಗಳ ಹಿಂದಷ್ಟೆ ಖರೀದಿಸಿದೆ. ನಾನು ಕೆಲಸ ಮಾಡಿದ ಸಂಸ್ಥೆ ಖರೀದಿಸಿದ್ದು, ಖುಷಿ ತಂದಿದೆ " ಎನ್ನುತ್ತಾರೆ.&lt;br /&gt;ಪ್ರಕಾಶನದಲ್ಲಿ ಕಳೆದು ಹೋಗದ ಅವರು ಆಗಸ್ಟ್ ೧೯, ೨೦೦೭ರಿಂದ ಸುಮುಖ, ಕಥಾಲೋಕ(೧೯೪೫ರ ನಂತರ ಕತೆಗಳಿಗೆ ಮೀಸಲಾದ ಪತ್ರಿಕೆ ಇರಲಿಲ್ಲ), ಸುಮ್‌ಸುಮ್ನೆ, ವಿನ್ ಎಂಬ ನಾಲ್ಕು ಮಾಸಪತ್ರಿಕೆಗಳನ್ನು ಮಾಳ್ಕೋಡು ಆರಂಭಿಸಿದ್ದು, ತಿಂಗಳಿಗೆ ೨ ಪುಸ್ತಕ ಪ್ರಕಟಿಸುವ ಗುರಿ ಹೊಂದಿದ್ದಾರೆ. ಅದೀಗ ದ್ವಿಗುಣಗೊಂಡಿದ್ದು, ತಿಂಗಳಿಗೆ ೪-೫ ಪುಸ್ತಕಗಳು ಹೊರಬರುತ್ತಿವೆ. ಹಿರಿಯ ಮತ್ತು ಕಿರಿಯ ಲೇಖಕರ ಪುಸ್ತಕಗಳನ್ನು ಪ್ರೀತಿಯಿಂದ ಅವರು ಪ್ರಕಟಿಸುತ್ತಿದ್ದಾರೆ.&lt;br /&gt;೩೬ವರ್ಷದ ಮಾಳ್ಕೋಡು ನೂರಾರು ವರ್ಷ ಬಾಳಲಿ, ಸಾವಿರಾರು ಪುಸ್ತಕಗಳನ್ನು ಪ್ರಕಟಿಸಲಿ ಎಂಬುದು ನಮ್ಮೆಲ್ಲರ ಹಾರೈಕೆ. ನಿಮ್ಮ ಹಾರೈಕೆಯೂ ಇದೇ ಆದರೆ ಈಗಲೇ ಶುಭಾಶಯ ತಿಳಿಸಿ(ಮೊಬೈಲ್ : ೯೮೪೪೨ ೭೮೭೯೨).&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-2002829418519125861?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/2002829418519125861/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=2002829418519125861' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/2002829418519125861'/><link rel='self' type='application/atom+xml' href='http://www.blogger.com/feeds/2189102912389204330/posts/default/2002829418519125861'/><link rel='alternate' type='text/html' href='http://kanasinaramane.blogspot.com/2008/05/blog-post_11.html' title='ಸುಮುಖದ ಜೈತ್ರಯಾತ್ರೆ : ಮಾಳ್ಕೋಡು ಛಲಕ್ಕೆ ಫಲ'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-5360806147591197853</id><published>2008-05-10T00:22:00.001+05:30</published><updated>2008-05-10T01:00:13.431+05:30</updated><title type='text'>ಮನೆಯ ಅನ್ನಪೂರ್ಣೆಗೊಂದು ಥ್ಯಾಂಕ್ಸ್ !</title><content type='html'>‘ದಿನಾ ಉಪ್ಪಿಟ್ಟಾ ?’ ಎಂದು ಆಗಾಗ ಗೊಣಗುತ್ತೇವೆ. ಉಪ್ಪಿಟ್ಟು ಪ್ರಿಯರು ಸಹಾ ಉಪ್ಪಿಟ್ಟಿನ ಜತೆಗೆ, ಕೇಸರಿಬಾತ್ ಬಯಸುವುದುಂಟು. ‘ಬೇಳೆ ಸಾರು ಬೇಜಾರು, ಅದರೊಟ್ಟಿಗೆ ಹಪ್ಪಳ ಮಾಡು’ ಎಂಬುದು ಮನೆಯಲ್ಲಿ ಪುರುಷ ಸಿಂಹಗಳ ಹಕ್ಕೊತ್ತಾಯ. ‘ಎಷ್ಟು ಸಲ ಹೇಳೋದು, ಸಾರಿಗೆ ಬದನೇ ಕಾಯಿ ಹಾಕಬೇಡ ಅನ್ತಾ.. ನಿನ್ ಊಟ ನೀನೇ ತಿಂದ್ಕೋ, ನಾನ್ ಹೊರಗಡೆ ಏನಾದ್ರೂ ನೋಡುಕೋತೀನಿ’ ಎಂದು ಒಂದಲ್ಲ ಒಂದ್ಸಲ ಗೊಣಗಿ, ಮುಖವನ್ನು ಸುಟ್ಟ ಬದನೇಕಾಯಿ ಥರಹಾ ಕಿವುಚುವುದರಲ್ಲಿ ಅದೇನಿದೆಯೋ ಆನಂದ!&lt;br /&gt;ಹೋಟೆಲ್‌ಗೆ ಹೋದರೆ ಇಡ್ಲಿ-ವಡೆ, ರವೆ ಇಡ್ಲಿ, ಮಲ್ಲಿಗೆ ಇಡ್ಲಿ, ಮಸಾಲೆ ದೋಸೆ, ಖಾಲಿ ದೋಸೆ, ಈರುಳ್ಳಿ ದೋಸೆ, ನೀರ್ ದೋಸೆ, ಪೂರಿ, ಪಲಾವ್, ಪುಳಿಯೋಗರೆ, ಚೌಚೌ ಬಾತ್.. ಹೀಗೆ ಹನುಮಂತನ ಬಾಲದಂತೆ ಪಟ್ಟಿಯನ್ನು ಸಪ್ಲೈಯರ್ ಒಪ್ಪಿಸುತ್ತಾನೆ. ಎಲ್ಲೆಡೆ ಆಯ್ಕೆ ಸ್ವಾತಂತ್ರ್ಯದ್ದೇ ಗದ್ದಲ. ಕಸದ ತೊಟ್ಟಿ ಯಲ್ಲಿ ಬೀದಿನಾಯಿಗಳ ಜತೆ ಎಂಜಲು ಎಲೆಗೆ ಕಿತ್ತಾಡುವ ನಿರ್ಭಾಗ್ಯ ಹುಡುಗರಿಗೆಲ್ಲಿದೆ ಆಯ್ಕೆ ಸ್ವಾತಂತ್ರ್ಯ?&lt;br /&gt;‘ಸಾರು ಉಪ್ಪು ರೋಸು.. ಇದೇನ್ ತಿನ್ನಲಿ ಅಂಥಾ ಮಾಡಿದ್ದಾ ಅಥ್ವಾ ಕಾಟಾಚಾರಕ್ಕೆ ಬೇಯಿಸಿದ್ದಾ ?’ ಎಂದು ಅಪ್ಪ ಗೊಣಗುವುದನ್ನು ಮಗ ಪಿಳಿಪಿಳಿ ಕಣ್ ಬಿಡುತ್ತಲೇ ಗಮನಿಸಿರುತ್ತಾನೆ. ದೊಡ್ಡವನಾದ ಮೇಲೆ ಇದೇ ಮಾತನ್ನು ಹೆಂಡ್ತಿ ಮುಂದೆ ಚೂರು ತಪ್ಪದಂತೆ ಒಪ್ಪಿಸಿರುತ್ತಾನೆ ! ಬಕಾಸುರನ ಅಣ್ಣ ತಮ್ಮಂದಿರಂತೆ ಊಟ-ತಿಂಡಿ ವಿಷಯದಲ್ಲಿ ಒದ್ದಾಡೋದರಲ್ಲಿ , ಕಿರುಚಾಡುವುದರಲ್ಲಿ ನಾವು ಸದಾ ಮುಂದೆ. ಬೆಳಗ್ಗೆ ಪೇಪರ್ ಬಿಡಿಸಿ ಕೂತರೇ, ಕಾಫಿ ಕೈಗೆ ಬರಬೇಕು. ಓದಿದ್ದು ಮುಗಿದ ತಕ್ಷಣ ತಿಂಡಿ ವಾಸನೆ ಮೂಗಿಗೆ ಬಡಿಯಬೇಕು. ರಾತ್ರಿ ಮನೆಗೋದ ತಕ್ಷಣ, ಹೆಂಡತಿ ಊಟಕ್ಕೆ ಕರೀಬೇಕು. ಊಟ ಮಾಡೋವಾಗ ಅವಳು ತರ್ಲೆ ತಾಪತ್ರಯ ಒಪ್ಪಿಸದೇ, ನಾಲ್ಕು ಕರ್ಣಾನಂದಕರ ನುಡಿಮುತ್ತುಗಳನ್ನು ಉಲಿಯಬೇಕು -ಹೀಗೆ ಬೇಕುಗಳಿಗೆ ಬರೀ ಅರ್ಧ ವಿರಾಮಗಳೇ.&lt;br /&gt;ಏಕತಾನತೆಯಿಂದ ಬೇಸರಿಸದೇ, ಮನೆ ಮಂದಿಯ ಮನಸ್ಥಿತಿಯಿಂದ ಕುಗ್ಗಿದರೂ ತೋರಿಸಿಕೊಳ್ಳದೇ, ಕಾಲಕಾಲಕ್ಕೆ ಬೇಸುವುದರಲ್ಲಿಯೇ ಮನೆಯ ಅನ್ನಪೂರ್ಣೆಗೆ ಸಾರ್ಥಕ್ಯದ ಭಾವ. ಅಡಿಗೆ ರುಚಿಯಾಗಿರಲಿ, ಮನೆ ಮಂದಿ ಹೊಟ್ಟೆ ತುಂಬಾ ತಿನ್ನಲೆಂದೇ ಆಕೆಯ ಹೃದಯ ಹಂಬಲಿಸುತ್ತದೆ. ಏನೋ ಆಗಿ ಸಾರಿಗೆ ಉಪ್ಪೋ, ಖಾರವೋ ಹೆಚ್ಚು ಕಡಿಮೆಯಾದರೆ ಅದಕ್ಕೆ ಅವಳು ಹೊಣೆಯೇ?&lt;br /&gt;ಉಪ್ಪು ಕಡಿಮೆಯಾಗಿದ್ದರೆ, ಸ್ವಲ್ಪ ಉಪ್ಪು ಸೇರಿಸಿಕೊಂಡರೆ ಕೈ ಬಿದ್ದೋಗುತ್ತಾ? ಈ ಬದುಕಿಗೆ ಇದೇ ಕಡೆಯ ಊಟವೇನೋ ಎಂಬಂತೆ ವರ್ತಿಸೋದು ನಿಜಕ್ಕೂ ವಿಚಿತ್ರ. ಏನೋ ಮಹಾಪರಾಧ ಮಾಡಿದಂತೆ, ಪ್ರಳಯವಾದಂತೆ ಗುಡುಗಿ, ಆಕೆ ಕಣ್ಣಲ್ಲಿ ತುಂತುರು ಮಳೆ ತರಿಸೋದರಲ್ಲಿ ಅದೇನಿದೆಯೋ ಪುರುಷಾರ್ಥ?&lt;br /&gt;ಮನೆಯಾಚೆ ಸುಮ್‌ಸುಮ್ನೆ ಥ್ಯಾಂಕ್ಸ್ ಎನ್ನುವ ಥ್ಯಾಂಕ್ಸಪ್ಪಗಳಿಗೆ ಮನೆಯಲ್ಲಿ ಗಂಠಲು ಮಟ್ಟ ತಿಂದರೂ, ಅನ್ನಪೂರ್ಣೆಗೊಂದು ಥ್ಯಾಂಕ್ಸ್ ಹೇಳಬೇಕು ಎಂದು ಅನ್ನಿಸೋದಿಲ್ಲ. ಥ್ಯಾಂಕ್ಸ್ ಬಿಡಿ, ಅದು ದೂರದ ಮಾತು. ಕಾಫಿ ಚೆನ್ನಾಗಿದೆ.. ಬಜ್ಜಿ ರುಚಿಯಾಗಿವೆ ಎಂದು ಹೇಳೋದರಲ್ಲಿ ಅದೇನು ಕಳ್ಕೊಳ್ಳುವರೋ ನಮ್ಮ ಪುರುಷ ಸಿಂಹಗಳು? ಜಿಪುಣಾಟಕ್ಕೊಂದು ಮಿತಿ ಬೇಡವೇ? ಛೇ! ಛೇ!!&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-5360806147591197853?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/5360806147591197853/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=5360806147591197853' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/5360806147591197853'/><link rel='self' type='application/atom+xml' href='http://www.blogger.com/feeds/2189102912389204330/posts/default/5360806147591197853'/><link rel='alternate' type='text/html' href='http://kanasinaramane.blogspot.com/2008/05/blog-post_1754.html' title='ಮನೆಯ ಅನ್ನಪೂರ್ಣೆಗೊಂದು ಥ್ಯಾಂಕ್ಸ್ !'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-3411895199050766301</id><published>2008-05-10T00:19:00.000+05:30</published><updated>2008-05-10T00:21:02.437+05:30</updated><title type='text'>ಅಪ್ಪನ ಜತೆ ಸವಿಸವಿ ಸಂತೆ</title><content type='html'>ಪ್ರತಿ ಗುರ್‍ವಾರ ಪಟ್ಟನಾಯಕನಹಳ್ಳಿಯಲ್ಲಿ ಸಂತೆ. ಆವತ್ತು ಸುತ್ತಲ ಕಾಮಗೊಂಡನಹಳ್ಳಿ, ಹೆಂದೊರೆ, ಪಾಳ್ಯ, ನಾದೂರು, ಕೆರೆಯಾಗಲಹಳ್ಳಿ, ಸೀಗಲಹಳ್ಳಿ, ಚಂಗಾವರ, ಯಾದಲಡಕು, ಹುಚ್ಚುಗೀರನಳ್ಳಿ ಸೇರಿದಂತೆ ಹತ್ತಾರು ಹಳ್ಳಿ ಜನ ನಮ್ಮೂರಿಗೆ ಬರ್ತಾ ಇದ್ದರು. ಸಂತೆದಿನ ಬಸ್ಸುಗಳು ದಿನತುಂಬಿದ ಗರ್ಭಿಣಿಯರಂತೆ ಇರ್ತಾ ಇದ್ದವು. ಹೆಜ್ಜೆ ಇಡೋದಕ್ಕೆ ಜಾಗವಿಲ್ಲ.&lt;br /&gt;ಬಸ್ಸುನ ಒಳಗೆ ಜಾಗವಿಲ್ಲದೇ ಬಾಗಿಲಲ್ಲಿ, ಏಣಿ ಮೇಲೆ, ಕಿಟಕಿ ಮೇಲೆ ಜನ ನೇತಾಡೋದು ಆವತ್ತು ಸಾಮಾನ್ಯ. ಟಾಪಲ್ಲಿ ಕೂತ ಜನರು ಬುಸುಬುಸು ಬೀಡಿ ಸೇದುತಾ, ತಮ್ಮ ಕಷ್ಟಸುಖ ಮಾತಾಡಿಕೊಳ್ಳೋರು. ದೇಶದ ರಾಜಕೀಯವನ್ನು ತಮ್ಮ ಮೂಗಿನ ನೇರದಲ್ಲಿ ವ್ಯಾಖ್ಯಾನಿಸೋರು. ಟಿಕೀಟು ಇಲ್ಲದೇ ಊರು ತಲುಪೋರು ಜಾಸ್ತಿ ಜನ ಇದ್ದ ಕಾರಣ, ನಾಲ್ಕೈದು ಜನ ದುಡ್ಡು ವಸೂಲಿಗೆ ಪರದಾಡೋರು. ನಮ್ಮ ವಿಜಿ ಮಾಮಾ ಹನುಮಾನ್ ಬಸ್ ಬುಕ್ ಮಾಡೋನು.&lt;br /&gt;ಸಂತೆ ಮಾಡ್ತಾಯಿದ್ದ ಅಮ್ಮ, ನಮಗೆಲ್ಲ ಸಂತೆಯಿಂದ ಏನಾದರೂ ತರೋಳು. ಸಂತೆಯಲ್ಲಿ ಉಳಿಸಿಕೊಂಡ ಹಣದಲ್ಲಿ ನಾಲ್ಕಾಣಿನೋ, ಎಂಟಾಣಿನೋ ಕೊಡೋಳು. ನಾವು ಬಟಾಣಿಯೋ, ಪೆಪ್ಪರ್‌ಮೆಂಟೋ ತಿಂದು ಖುಷಿಪಡುತ್ತಿದ್ದೆವು. ಅಮ್ಮನಿಗೆ ಹುಷಾರಿಲ್ಲದಿದ್ರೆ, ಅಪ್ಪ ಸಂತೆಗೆ ಹೊರಡೋನು. ನಾನು ಮತ್ತು ನನ್ನಣ್ಣ ಗೌರಜ್ಜಿ ಹೆಣೆದಿದ್ದ ಕಿತ್ತಲೆ ಬಣ್ಣದ ವೈರ್‌ಬ್ಯಾಗ್ ಹಿಡಿದು ಸ್ಕೂಲ್ ಹತ್ತಿರ ಹೋಗ್ತಾಯಿದ್ವಿ.&lt;br /&gt;ಊರಿಗೆ ಕಳಸದಂತಿರುವ ನಮ್ಮಪ್ಪನ ಸ್ಕೂಲ್‌ಗೆ ಹೋಗೋದೇ ನಮಗೆ ಪ್ರತಿಷ್ಠೆಯ ವಿಷಯವಾಗಿತ್ತು. ಮುಖಮುಸುಡಿ ತೊಳ್ಕಂಡು ಅಣ್ಣ ರೆಡಿಯಾಗ್ತಾಯಿದ್ದ. ನಾನು ಬೆಕ್ಕಿನಂತೆ ಮುಖ ತೊಳೆದು ಅಣ್ಣನ ಕೈಹಿಡಿದುಕೊಂಡು ಸ್ಕೂಲ್ ದಾರಿ ತುಳಿಯುತ್ತಿದ್ದೆ. ‘ಯಾಕ್ರೋ ಇಷ್ಟು ಲೇಟು’ ಎನ್ನುತ್ತಿದ್ದ ಅಪ್ಪ ನಮ್ಮನ್ನು ಸಂತೆಗೆ ಕರೆದುಕೊಂಡು ಹೋಗೋನು. ನಾನು ಎಲ್ಲಾದರೂ ತಪ್ಪಿಸಿಕೊಳ್ತಿನೇನೋ ಅಂತ ಅಪ್ಪ ನನ್ನ ಕೈಹಿಡಿಯುತ್ತಿದ್ದ. ಅಣ್ಣ ನನ್ನ ಇನ್ನೊಂದು ಕೈಹಿಡಿದುಕೊಳ್ಳುತ್ತಿದ್ದ.&lt;br /&gt;ಜನಗಳ ಮಧ್ಯೆ ತೂರಿಕೊಂಡು ಸಂತೆ ಬೀದಿಗೆ ಹೋಗ್ತಾಯಿದ್ವಿ. ನನಗೆ ಸಂತೆಯಲ್ಲಿ ಗಮನ ಸೆಳೆಯುತ್ತಿದ್ದದ್ದು, ಕಲ್ಲುಗಾಲಿಯ ರಥ. ಅದು ಬಿಸಿಲಿಗೆ ಒಣಗದಿರಲೆಂದು ರಥಕ್ಕೆ ತಗಡಿನ ಶೀಟುಗಳನ್ನು ಹೊದಿಸಿದ್ದರು. ನಾನು ಏನಾದ್ರೂ ಕಾಣುತ್ತೇನೋ ಅಂತ ಇಣುಕಿಣುಕಿ ನೋಡುತ್ತಿದ್ದೆ. ಜಾತ್ರೆ ಟೈಮಲ್ಲಿ ಈ ರಥಕ್ಕೆ ಸಿಂಗಾರಬಂಗಾರ ಮಾಡೋದು ನೆನೆದು, ಮನಸ್ಸು ಅರಳುತ್ತಿತ್ತು. ‘ಅಪ್ಪ ಯಾವಾಗ ಜಾತ್ರೆ?’ ಎನ್ನುತ್ತಿದ್ದೆ. ‘ಇನ್ನೂ ಅದು ದೂರ ಇದೆ. ಈಗ ಆಗಸ್ಟ್ ತಿಂಗಳು. ಜನವರಿಯಲ್ಲಿ ಜಾತ್ರೆ’ ಎಂದು ಅಪ್ಪ ಅನ್ನುತ್ತಿದ್ದ. ಜನವರಿ ಯಾವಾಗ ಬರುತ್ತೆ ಎಂದು ತಿಂಗಳುಗಳನ್ನು ನಾನು ಬೆರಳಲ್ಲಿಯೇ ಎಣಿಸ್ತಾಯಿದ್ದೆ.&lt;br /&gt;ಸಂತೆಯಲ್ಲಿನ ತರಕಾರಿ ಸೋಮಣ್ಣ ಎಲ್ಲರಿಗೂ ಪರಿಚಿತ. ಬ್ಯಾಂಕ್‌ನೋರು, ಮೇಷ್ಟ್ರುಗಳು, ಮೇಡಂಗಳು, ಪೊಲೀಸರು -ಹೀಗೆ ಅಫೀಸಿಯಲ್ಸ್ ಎಲ್ಲರೂ ಆತನ ಬಳಿಯೇ ತರಕಾರಿ ಖರೀದಿಸೋರು. ಚಿಲ್ಲರೆ ಕೊಡೋದರ ಜತೆಗೆ, ಪ್ರೀತಿಯಿಂದ ಆತ ಮಾತಾಡಿಸುತ್ತಿದ್ದ. ಐದಾರು ಜನರ ಜತೆ ಮಾತಾಡುತ್ತಲೇ, ಇನ್ನೈದು ಜನರ ಜತೆ ವ್ಯಾಪಾರ ಮಾಡ್ತಾಯಿದ್ದ. ಹುರುಳಿಕಾಯಿ, ಕ್ಯಾರೆಟ್, ಹೂಕೋಸು, ಬೀಡ್‌ರೂಟ್, ಗೆಡ್ಡೆ ಕೋಸು ಎಲ್ಲವನ್ನೂ ರಾಶಿ ಹಾಕಿಕೊಂಡಿರ್‍ತಾಯಿದ್ದ.&lt;br /&gt;ಕ್ಷಣ ಸಹಾ ಪುರಸೊತ್ತಿಲ್ಲದಂತೆ ಸೋಮಣ್ಣನ ವ್ಯಾಪಾರ ನಡೆಯುತ್ತಿತ್ತು. ಅಪ್ಪ ‘ಕಾಲು ಕೆ.ಜಿ. ಕ್ಯಾರೆಟ್ ಹಾಕಿ’ ಅಂದರೆ ಯಾವುದೋ ಕಲ್ಲನ್ನು ತಕ್ಕಡಿ ತಟ್ಟೆಗೆ ಎಸೆದು ತೂಗುತ್ತಲೆ, ‘ಆಮೇಲೆ ಹುರುಳಿಕಾಯಿ ಹಾಕ್ಲಾ ಮೇಷ್ಟ್ರೆ..’ ಎನ್ನುತ್ತಿದ್ದ. ಹುರುಳಿಕಾಯನ್ನು ಕೈಯಲ್ಲಿ ಮುರಿದ ಅಪ್ಪ, ‘ಹೂಂ ಹಾಕು’ ಅನ್ನೋರು. ತಕ್ಷಣ ಅರ್ಧ ಕೆ.ಜಿ. ಕಲ್ಲನ್ನು ತಟ್ಟೆಗೆ ಎಸೆಯೋನು. ನಮ್ಮ ಅರ್ಧ ಬ್ಯಾಗನ್ನು ಸೋಮಣ್ಣನ ಅಂಗಡಿಯಲ್ಲಿಯೇ ತುಂಬಿಸುತ್ತಿದ್ದೆವು.&lt;br /&gt;ಅಮೇಲೆ ಅದೇ ಸಾಲಲ್ಲಿ ಮುಂದಕ್ಕೆ ಹೋಗ್ತಾಯಿದ್ವಿ. ಅಲ್ಲಿ ಈರುಳ್ಳಿ ಬೆಳ್ಳುಳ್ಳಿ ರಾಶಿಗಳು. ಅಲ್ಲಿ ದಪ್ಪನೆಯ ಈರುಳ್ಳಿ ೨ ಕೆ.ಜಿ. ಖರೀದಿಸಿ, ಒಂದು ರೂಪಾಯಿ ನೀಡಿ, ಒಂದು ಗುಡ್ಡೆ ಬೆಳ್ಳುಳ್ಳಿ ತಗೊಳ್ಳುತ್ತಿದ್ದೆವು. ಅಮೇಲೆ ಟಮೊಟೊ ಖರೀದಿಗೆ ಅಪ್ಪ ಅತ್ತಿತ್ತ ಸುತ್ತಾಡೋನು. ಅಪ್ಪನ ಹಿಂದೆ ಕಣ್‌ಕಣ್ ಬಿಟ್ಟುಕೊಂಡು, ನಾನು ಅಣ್ಣ ಹೆಜ್ಜೆ ಹಾಕುತ್ತಿದ್ದೆವು. ಅಪ್ಪ ಜೋರಾಗಿ ಹೆಜ್ಜೆ ಹಾಕೋನು. ನನ್ನ ಎಳೆದುಕೊಂಡು ಅಪ್ಪನನ್ನು ಅಣ್ಣ ಹಿಂಬಾಲಿಸುತ್ತಿದ್ದ. ‘ಟಮೊಟೊನಾ ಕಡೆಗೆ ಕೊಳ್ಳಬೇಕು.. ಯಾಕಂದ್ರೆ ಮೊದ್ಲೆ ತಕೊಂಡ್ರೆ ಅವು ತಳ ಸೇರಿ ಅಜ್ಜಿಬಜ್ಜಿಯಾಗುತ್ತವೆ ’ ಎಂದು ಅಪ್ಪ ಸಲಹೆ ನೀಡೋನು. ನಾನು ಅಣ್ಣ ಹೂಂಗುಟ್ಟುತ್ತಿದ್ದೆವು.&lt;br /&gt;ಅಪ್ಪನ ಸ್ಟೂಡೆಂಟ್ಸ್ ಅನೇಕರು ತರಕಾರಿ ಮಾರೋರು. ಅವರೆಲ್ಲರೂ ‘ನಮಸ್ಕಾರ ಸಾರ್, ನಾನು ನಿಮ್ಮ ಸ್ಟೂಡೆಂಟ್ ಸಾರ್’ ಅನ್ನೋರು. ತರಕಾರಿ ಕೊಟ್ಟು ‘ದುಡ್ಡು ಬೇಡ ಸಾರ್’ ಎನ್ನೋರು. ಅಪ್ಪ ಬಲವಂತ ಮಾಡಿ ದುಡ್ಡು ಕೊಟ್ಟು ಮುಂದೆ ಹೋಗೋನು. ಅಪ್ಪನ ಪರಿಚಿತರು ಅನೇಕರು ಸಿಗ್ತಾಯಿದ್ದರು. ಆಗ ಒಂದೆರಡು ನಿಮಿಷ ಮಾತಾಡಿ, ಮುಂದೆ ಹೋಗುತ್ತಿದ್ದೆವು.&lt;br /&gt;ಸೊಪ್ಪು ಕೊಳ್ಳೋದಕ್ಕೆ ಸಂತೆ ಕೊನೆಗೆ ಅಂದರೆ ಮಠದ ಪ್ರವೇಶ ದ್ವಾರದ ಕಡೆಗೆ ಬರಬೇಕಿತ್ತು. ನನಗೆ ಅಲ್ಲಿಗೆ ಬರೋದಕ್ಕೆ ಭಯವಾಗುತ್ತಿತ್ತು. ಅಲ್ಲಿ ಎತ್ತುಗಳಿಗೆ ಇಮಾಂ ಸಾಬಿ ಮತ್ತು ಆತನ ಸೋದರರು ಲಾಳ ಕಟ್ಟೋರು. ಎತ್ತುಗಳು ಬೆದರದಿರಲಿ ಎಂದು ಸೇದೋ ಹಗ್ಗದಿಂದ ಕಾಲುಗಳ ಕಟ್ಟಿ ಹಾಕಿ, ಅದರ ಮೇಲೆ ಮೂರುನಾಲ್ಕು ಜನ ಕೂತಿರೋರು. ಸಾಬಿ ತಲೆಗೊಂದು ಟೋಪಿ ಸಿಕ್ಕಿಸಿಕೊಂಡು, ಸೂಕ್ತ ಲಾಳ ಹುಡುಕಿ ಪಾದದ ಮೇಲಿಟ್ಟು ಮೊಳೆ ಹೊಡೆಯೋನು. ಬೆದರಿದ ಎತ್ತುಗಳು ಒದ್ದಾಡುತ್ತಿದ್ದವು. ‘ಭಯ ಯಾಕೆ, ನಾನಿಲ್ವಾ?’ ಎನ್ನುತ್ತಾ ಅಪ್ಪ ಕರೆದುಕೊಂಡು ಹೋಗೋನು. ನಾನು ಎಷ್ಟು ನೋಡಬಾರದು ಅನ್ನಿಸಿದರೂ ಕಣ್ಣು ಅತ್ತಲೇ ಹೋಗುತ್ತಿದ್ದವು. ಅಣ್ಣನಿಗೂ ಭಯ ಇತ್ತು.&lt;br /&gt;‘ಅದನ್ನು ಲಾಳ ಕಟ್ಟೋದು ಅನ್ತಾರೆ. ನಾವು ಚಪ್ಪಲಿ ಹಾಕಿಕೊಳ್ಳೋದಿಲ್ವಾ.. ಅದೇ ರೀತಿ ಎತ್ತುಗಳಿಗೆ ಲಾಳ ಕಟ್ಟುತ್ತಾರೆ. ಅವುಗಳಿಗೆ ಅದರಿಂದ ಒಳ್ಳೆಯದು. ಒಂಚೂರು ನೋವಾಗೋದಿಲ್ಲ. ಉಗುರು ಕತ್ತರಿಸಿದರೆ ನಮಗೇನು ನೋವಾಗುತ್ತಾ? ಅದೇ ರೀತಿ ಎತ್ತುಗಳಿಗೆ ಲಾಳ ಕಟ್ಟೋದರಿಂದ ನೋವಾಗದು‘ ಎಂದು ಅಪ್ಪ ವಿವರಣೆ ನೀಡೋನು.&lt;br /&gt;ಸಂತೆಯಲ್ಲಿ ನನಗೆ ಭಯ ಹುಟ್ಟಿಸುತ್ತಿದ್ದ ಸಂಗತಿಗಳು ಇನ್ನೆರಡದಿದ್ವು. ಮೊಂಡರು ಅಪರೂಪಕ್ಕೆ ಸಂತೆಯಲ್ಲಿ ಕಾಣಿಸಿಕೊಳ್ಳೋರು, ಕೈ ಕೊಯ್ಯುಕೊಂಡು ದುಡ್ಡು ಕೇಳೋರು. ‘ಮೊಂಡೋರು ನಾವು ಮೊಂಡೋರು.. ದುಡ್ಡು ಕೊಡವ್ವಾ, ದುಡ್ಡು ಕೊಡೋ ತಂದೇ’ ಎಂದು ಬೇಡೋರು. ನನಗೆ ಅವರು, ಮೈತುಂಬ ಕಾಣಿಸೋ ಗಾಯಗಳು, ಅವರ ಪೊದೆಯಂಥ ತಲೆಗೂದಲು ನೋಡಿ ಸಕತ್ತು ಹೆದರಿಕೆಯಾಗುತ್ತಿತ್ತು.&lt;br /&gt;ಮೊಂಡರ ಜತೆಗೆ ಒಂದೊಂದು ಸಲ ಚಾಟಿ ಬಿಸೋರು ಬರೋರು. ಸೊಂಟದಲ್ಲಿ ಮಗು ನೇತಾಡಿಸಿಕೊಂಡ ಕೊಳಕು ಸೀರೆಯುಟ್ಟ ಹೆಂಗಸು ತಲೆ ಮೇಲೆ ದೇವರನ್ನು ಹೊತ್ತುಕೊಂಡಿರೋಳು. ತಲೆ ಮೇಲಿನ ಬುಟ್ಟಿಯಲ್ಲಿ ಅರಿಶಿಣ ಕುಂಕುಮ, ತಂಗಟೆ ಸೊಪ್ಪು ಮುಡಿದುಕೊಂಡಿದ್ದ ಆ ಹೆಣ್ಣು ದೇವರ ಮುಖವಾಡ, ದೇವರ ಕೋರೆ ಹಲ್ಲುಗಳ ಕಂಡು, ನಾನು ನಿಂತಲ್ಲೆ ಕೈಮುಗಿಯುತ್ತಿದ್ದೆ.&lt;br /&gt;ಚಾಟಿಯಿಂದ ಮೈಗೆ ಬಾಸುಂಡೆ ಬರುವಂತೆ ತೆಳ್ಳಗಿದ್ದ ವ್ಯಕ್ತಿಯೊಬ್ಬ ಹೊಡೆದುಕೊಳ್ಳುತ್ತಿದ್ದ. ಬಾಯಲ್ಲಿ ಬೆಳ್ಳಿ ಮೀಸೆ, ಮುಖದ ತುಂಬ ಅರಿಶಿಣ ಕುಂಕುಮ, ಕೊರಳಲ್ಲಿ ಚಾಟಿ , ತೋಳಲ್ಲಿ ಪಂಚಲೋಹದ ಬಳೆ ಆತನ ವೇಷಭೂಷಣ. ಕೈಯಲ್ಲಿ ತಟ್ಟೆ ಹಿಡಿದು ಅತ ಅಂಗಡಿಗಳ ಮುಂದೆ ನಿಲ್ಲುತ್ತಿದ್ದ. ಅವರು ಕೊಡೋ ೫ ಪೈಸೆ, ೧೦ಪೈಸೆಯನ್ನು ತಟ್ಟೆಗೆ ಹಾಕಿಕೊಳ್ಳುತ್ತಿದ್ದ. ಆಗಾಗ ತಟ್ಟೆಯನ್ನು ನೆಲದ ಮೇಲಿಟ್ಟು, ಕೊರಳಲ್ಲಿ ಹಾಕಿಕೊಂಡಿದ್ದ ಚಾಟಿಯನ್ನು ಬಲಗೈಲಿ ಹಿಡಿದು, ತನ್ನ ಮೈಗೆ ಹೊಡೆದುಕೊಳ್ಳುತ್ತಿದ್ದ. ಆತ ನಮಗೆ ಹೊಡೆಯದಿದ್ದರೂ, ನನಗೆ ನೋವಾದಂತೆ ನಾನು ತತ್ತರಿಸಿದ್ದೆ. ಅಪ್ಪ ಬಿಗಿಯಾಗಿ ಕೈಯಿಡಿದುಕೊಂಡು ನನ್ನನ್ನು ಮುನ್ನಡೆಸುತ್ತಿದ್ದ.&lt;br /&gt;ಸಂತೆ ಮುಗಿಸಿ ಲಿಂಗಣ್ಣನ ಅಂಗಡಿ ಬಳಿಗೆ ಬರುತ್ತಿದ್ದೆವು. ಬಾಯಿತುಂಬ ಎಲೆಅಡಿಕೆ ತುಂಬಿಕೊಂಡಿರುತ್ತಿದ್ದ ಲಿಂಗಣ್ಣ ನಗೋನು. ಸನ್ನೆ ಮೂಲಕವೇ ಉತ್ತರಿಸೋನು. ಏನಾದ್ರೂ ಹೇಳೋ ತುರ್ತು ಬರದ ಹೊರತು, ಬಾಯಲ್ಲಿನ ಎಲೆಅಡಿಕೆ ತಪ್ಪೆಯನ್ನು ಉಗಿಯುತ್ತಿರಲಿಲ್ಲ. ಎಲೆಅಡಿಕೆ ರಸ, ಬಾಯಿಯ ಕಟವಾಯಿಯಿಂದ ಕೆಳಕ್ಕಿಳಿದಿರೋದು. ಅಪ್ಪ ಸಿಜರ್ ಸಿಗರೇಟ್ ಪಡೆದು, ಬೆಂಕಿ ಹಚ್ಚಿ ಹೊಗೆ ಬಿಡ್ತಾಯಿದ್ದ. ತಲಾ ೧೦ಪೈಸೆಗೆ ಬಟಾಣಿಯೋ, ಉಪ್ಪುಗಡಲೆಯೋ ಯಾವುದೋ ಒಂದು ನನ್ನ ಮತ್ತು ನನ್ನಣ್ಣನ ಜೇಬು ಸೇರುತ್ತಿತ್ತು. ನಾವು ಒಂದೊಂದೇ ಕಾಳನ್ನು ಬಾಯಲ್ಲಿ ಹಾಕಿಕೊಳ್ತಾಯಿದ್ವಿ. ಮನೆಗೆ ಬರೋ ಹೊತ್ತಿಗೆ ಸಂಜೆ ಆಗಿರ್‍ತಾಯಿತ್ತು.&lt;br /&gt;ಸೀಮೆ ಎಣ್ಣೆ ಸ್ಟೋವ್ ಹಚ್ಚಿ, ಅಮ್ಮ ಕಾಫಿಗೆ ಇಟ್ಟು ತರಕಾರಿಯನ್ನು ನೆಲದ ಮೇಲೆ ಸುರಿಯೋಳು. ಬದನೆಕಾಯಿ ಚೆನ್ನಾಗಿಲ್ಲ, ಸೊಪ್ಪು ಬಾಡಿದೆ ಎಂದು ಅಮ್ಮ ಗೊಣಗುತ್ತಿದ್ದಳು. ಅದು ಎಷ್ಟು ? ಇದು ಎಷ್ಟು ? ಎಂದು ಅಪ್ಪ ವಿವರಿಸುತ್ತಿದ್ದ. ಕಾಫಿ ಲೋಟಗಳನ್ನು ಅಮ್ಮ ನಮ್ಮ ಮುಂದೆ ಇಡೋಳು. ಲೋಟದ ಮೇಲಿನ ಹೆಚ್.ಸಿ.ಎನ್, ಹೆಚ್.ಸಿ.ಆರ್ ಮತ್ತು ಹೆಚ್.ಸಿ.ಎ. ಇನ್ಸಿಯಲ್‌ಗಳನ್ನು ನಾವು ಪದೇಪದೇ ಓದುತ್ತಿದ್ದವು. ಬ್ರೆಡ್ ಇದ್ದರೆ ಅಮ್ಮ ಕಾಫಿ ಜತೆ ಕೊಡೋಳು.&lt;br /&gt;ಕಬ್ಬಾಕ್ಷಿ ಸೊಪ್ಪುನ ಕ್ಲೀನ್ ಮಾಡಿ, ಅಮ್ಮ ಬಸ್ಸಾರ್‌ಗೆ ರೆಡಿ ಮಾಡೋಳು. ಬಿಸಿ ಬಿಸಿ ಮುದ್ದೆ ಜತೆ ಸಾಂಬರ್ ಹಾಕಿಕೊಂಡು ತಿನ್ನೋದು ಒಂದು ಸಂಭ್ರಮ. ‘ಮುದ್ದೇ.. ನಾ’ ಎಂದು ನಾನೂ ಅಣ್ಣನಂತೆಯೇ ಗೊಣಗುತ್ತಿದ್ದೆ. ಆದರೆ ಮುದ್ದೆ ಯಾಕೋ ಹೊಟ್ಟೆಗೆ ಸಲೀಸಾಗಿ ಸೇರಿ ಬಿಡುತ್ತಿತ್ತು. ಈಗಲೂ ನನಗೆ ಮುದ್ದೆ ಇಷ್ಟವೆ.&lt;br /&gt;ಸಂತೆಯಲ್ಲಿ ಸಿಗದ ವಸ್ತುಗಳೇ ಅಪರೂಪ. ಬೀದಿ ಬದಿಯಲ್ಲಿಯೇ ಪಕೋಡಗಳನ್ನು ಮಾರೋರು. ‘ಧೂಳು ಅವೆಲ್ಲ ತಿನ್ನಬಾರದು’ ಅನ್ನೋನು ಅಪ್ಪ. ನನ್ನ ಫ್ರೆಂಡ್ ಹೆಂಜಾರಿ, ತುಳಸಿರಾಮ ಸಂತೆಯಿಂದ ಪಕೋಡಗಳನ್ನು ಕೊಂಡು ತರೋರು. ಬಸ್‌ಸ್ಟಾಂಡ್‌ನಲ್ಲಿ ಲಕ್ಷ್ಮಣಪ್ಪ ನ ಹಣ್ಣಂಗಡಿ ಪಕ್ಕದಲ್ಲಿರೋ ನಾಗರಾಜಪ್ಪ ತನ್ನ ಅಂಗಡಿಯಲ್ಲಿ ೫೦ ಪೈಸೆಗೊಂದು ಮೆಣಸಿನಕಾಯಿ ಬಜ್ಜಿ ಮಾರೋನು. ಆದ್ರೆ ಸಂತೆಯಲ್ಲಿ ನಾಕಾಣಿಗೆ ಸಿಗೋದು. ಪಕೋಡಗಳು ಬರೀ ೧೦ ಪೈಸೆ. ಒಂದು ರೂಪಾಯಿಗೆ ೧೦ ಪಕೋಡ ತಂದು ಹೆಂಜಾರಿ ತಿನ್ನೋನು. ನನಗೂ ತಿನ್ನು ಅಂತಾ ಕೊಡೋನು. ನಾನು ಭಯದಿಂದಲೇ ಒಂದು ದಿನ ಒಂದೇ ಒಂದು ತಿಂದಿದ್ದೆ. ಅಪ್ಪ-ಅಮ್ಮನ ಎಚ್ಚರಿಕೆ ಮಾತುಗಳು, ಪಕೋಡ ತಿನ್ನದಂತೆ ತಡೆದಿದ್ದವು. ಜತೆಗೆ ಅದರ ರುಚಿಯೂ ಅಷ್ಟರಲ್ಲಿಯೇ ಇತ್ತು.&lt;br /&gt;ಈಗಲೂ ಸಂತೆ ನಡೆಯುತ್ತೆ, ಖುಷಿಯಲ್ಲಿ ತಿರುಗಾಡಲು ಬಾಲ್ಯವಿಲ್ಲ. ಅದಕ್ಕೂ ಹೆಚ್ಚಿನದಾಗಿ ನನ್ನ ಕೈಹಿಡಿದು ನಡೆಸೋಕೆ ಅಪ್ಪ ಇಲ್ಲ. ಯಾಕೋ ಪಟ್ಟನಾಯಕನಹಳ್ಳಿಗೆ ಹೋಗಲು ಮನಸ್ಸೆ ಬರೋದಿಲ್ಲ. ಚೆಡ್ಡಿ ದೋಸ್ತು ಶೆಟ್ಟಿ ಮಂಜ ಅಂಗಡಿ ನೋಡಿಕೊಂಡು ಚೆನ್ನಾಗಿದ್ದಾನೆ.&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-3411895199050766301?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/3411895199050766301/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=3411895199050766301' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/3411895199050766301'/><link rel='self' type='application/atom+xml' href='http://www.blogger.com/feeds/2189102912389204330/posts/default/3411895199050766301'/><link rel='alternate' type='text/html' href='http://kanasinaramane.blogspot.com/2008/05/blog-post_2891.html' title='ಅಪ್ಪನ ಜತೆ ಸವಿಸವಿ ಸಂತೆ'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-5032254937981958099</id><published>2008-05-10T00:16:00.000+05:30</published><updated>2008-05-10T00:18:03.483+05:30</updated><title type='text'>ಸೀರಿಯಸ್ ಜೋಕ್ಸ್!</title><content type='html'>&lt;strong&gt;ಭಲೇ ಗೌಡ!&lt;/strong&gt;&lt;br /&gt;ದೇವೇಗೌಡರು ದೇಶದ ಬಗ್ಗೆ ಯೋಚನೆ ಮಾಡುತ್ತಾ ಮಲಗಿದ್ದರು. ಯಾಕೋ ಕಣ್ಬಿಟ್ಟು ನೋಡ್ತಾರೆ, ಪಕ್ಕದಲ್ಲಿ ಬ್ರಹ್ಮದೇವ! ಕೂಡಲೇ ಗೌಡ್ರು ತಮ್ಮ ಎರಡೂ ಕೈಗಳನ್ನೂ ಜೋಡಿಸಿ, ಅಡ್ಡಡ್ಡ ಬಿದ್ದರು. ಆಗ ಬ್ರಹ್ಮದೇವ ‘ಬೇಕಾದ ವರ ಕೇಳು’ ಎಂದ.&lt;br /&gt;‘ಸಡನ್ನಾಗಿ ವರಕೇಳು ಎಂದರೆ ಕಷ್ಟ. ನಾಳೆ ಬಾ ಯೋಚಿಸಿ ಬರೆದಿಡ್ತೀನಿ’ ಎಂದ ದೇವೇಗೌಡರು ಸ್ವಲ್ಪ ಟೈಮ್ ಕೇಳಿದರು. ಹಗಲು ರಾತ್ರಿ ನಿದ್ದೆ ಗೆಟ್ಟು ಬೇಡಿಕೆಗಳ ದೊಡ್ಡ ಪಟ್ಟಿಯನ್ನೇ ಸಿದ್ಧ ಮಾಡಿದರು. ದೇವರು ಬಂದಾಗ ದೊಡ್ಡದೊಂದು ಪಟ್ಟಿಯನ್ನು ಕೊಟ್ಟರು. ಪಟ್ಟಿ ಓದಿದ ಬ್ರಹ್ಮದೇವ ನಾಪತ್ತೆ!&lt;br /&gt;ಯಾಕೆ ಅಂದ್ರೆ: ಮರೆವಿನಲ್ಲಿ ಗೌಡರು ತಮ್ಮ ಬೇಡಿಕೆ ಪಟ್ಟಿ ಬದಲು, ಜೆಡಿಎಸ್ ಪ್ರಣಾಳಿಕೆ ಪಟ್ಟಿಯನ್ನು ಕೊಟ್ಟಿದ್ದರು!&lt;br /&gt;&lt;strong&gt;*&lt;/strong&gt;&lt;br /&gt;&lt;strong&gt;ಯಡ್ಡಿ ಖುಷಿ!&lt;/strong&gt;&lt;br /&gt;ಯಡಿಯೂರಪ್ಪ ಬಲು ಖುಷಿಯಲ್ಲಿದ್ದರು. ಈ ಹಿಂದೆ ಎರಡೂ ಕಿವಿಗೆ ದೇವೇಗೌಡರು ಹೂವು ಮುಡಿಸಿದ್ದಾರೆ. ಎರಡೂ ಕಿವಿ ಖಾಲಿಯಿಲ್ಲದ ಕಾರಣ, ಮುಂದಿನ ಸಲ ಗೌಡರ ಹೂವು ಮುಡಿಸೋ ಪ್ರಯತ್ನ ಫಲಿಸೋದಿಲ್ಲ ಅನ್ನೋದು ಅವರ ನಂಬಿಕೆ. ಆದರೆ ದೇವೇಗೌಡರು ಈ ಸಲ ಹೂವಿಡೋ ಹಳೇ ಐಡಿಯಾ ಪಕ್ಕಕ್ಕಿಟ್ಟು, ನಾಮ ಹಾಕಲು ಮುಂದಾಗಿದ್ದಾರೆ. ತಿರುಪತಿಯಿಂದ ಒಂದು ಲೋಡು ನಾಮದ ಉಂಡೆ ತರಿಸಿದ್ದಾರೆ ಅನ್ನೋದು ಅವರಿಗೆ ಗೊತ್ತಿರಲಿಲ್ಲ!&lt;br /&gt;*&lt;br /&gt;&lt;strong&gt;ಹಡಗಲ್ಲಿ ನಾಡಿನ ನಾಯಕರು!&lt;/strong&gt;&lt;br /&gt;ದೇವೇಗೌಡ, ಎಸ್.ಎಂ.ಕೃಷ್ಣ, ಯಡಿಯೂರಪ್ಪ, ಖಗೆ, ಧರ್ಮಸಿಂಗ್ ಸೇರಿದಂತೆ ನಾಡಿನ ಪ್ರಮುಖರೆಲ್ಲರೂ ಹಡಗು ಹತ್ತಿದ್ದರು. ಒಂದು ತೂತಿನ ಪರಿಣಾಮ ನೀರು ಒಳ ಬರುತ್ತಿತ್ತು. ಒಂದು ವೇಳೆ ಹಡಗು ಮುಳುಗಿದರೆ ಯಾರು ಉಳಿಯುತ್ತಾರೆ?&lt;br /&gt;ತುಂಟ ಮತದಾರನ ಉತ್ತರ : ಯಾರು ಉಳಿಯುವರೋ ಖಾತ್ರಿ ಇಲ್ಲ, ಕನ್ನಡಿಗರಂತೂ ಉಳಿಯುತ್ತಾರೆ!&lt;br /&gt;*&lt;br /&gt;&lt;strong&gt;ಎಲೆಕ್ಷನ್ ಗಾದೆಗಳು&lt;br /&gt;&lt;/strong&gt;* ಮತದಾರರಿಗೊಂದು ಕಾಲ, ಎಂಎಲ್‌ಎಗಳಿಗೊಂದು ಕಾಲ!&lt;br /&gt;* ಬಿ ಫಾರಂಗೋದ ಮಾನ, ಇನ್ನೊಂದು ಪಕ್ಷಕ್ಕೆ ಜಿಗಿದರೆ ಬರುತ್ತಾ?&lt;br /&gt;* ಎಲ್ಲಾ ಶಾಸಕರ ಮನೆ ದೋಸೆಯೂ ತೂತೇ.&lt;br /&gt;* ಗೆದ್ದ ಪಕ್ಷದ ಬಾಲ ಹಿಡಿ&lt;br /&gt;* ಗೆಲ್ಲರಾರದ ಅಭ್ಯರ್ಥಿ ಕ್ಷೇತ್ರ ಡೊಂಕು ಎಂದ!&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-5032254937981958099?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/5032254937981958099/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=5032254937981958099' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/5032254937981958099'/><link rel='self' type='application/atom+xml' href='http://www.blogger.com/feeds/2189102912389204330/posts/default/5032254937981958099'/><link rel='alternate' type='text/html' href='http://kanasinaramane.blogspot.com/2008/05/blog-post_3903.html' title='ಸೀರಿಯಸ್ ಜೋಕ್ಸ್!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>1</thr:total></entry><entry><id>tag:blogger.com,1999:blog-2189102912389204330.post-8770265943741711197</id><published>2008-05-10T00:09:00.000+05:30</published><updated>2008-05-10T00:14:04.621+05:30</updated><title type='text'>ನಮಗೂ ಕ್ಷೇಮ! ದೇವರಿಗೂ ಕ್ಷೇಮ!!</title><content type='html'>ಅದು ಬಿಎಂಟಿಸಿ ಬಸ್ಸು. ಸೀಟ್ ಸಿಕ್ಕಿರಲಿಲ್ಲ. ಬೇಸರದಿಂದಲೇ ಕಂಬಿ ಹಿಡಿದು ನೇತಾಡುತ್ತಿದ್ದೆ. ಎಂದಿನಂತೆ ಮೇಖ್ರಿ ಸರ್ಕಲ್‌ನಲ್ಲಿ ಟ್ರಾಫಿಕ್ ಜಾಮ್. ಇವತ್ತು ಕೆಲಸಕ್ಕೆ ಲೇಟಾಗುತ್ತಿರುವುದನ್ನು ಅರಿತ ಮನಸ್ಸು ಅಸಹನೆಯಿಂದ ಕುದಿಯುತ್ತಿತ್ತು. ಅಷ್ಟರಲ್ಲಿಯೇ ಹಿಂದಿದ್ದ ಇಬ್ಬರು ಯುವಕರ ಮಾತು ಯಾಕೋ ಕುತೂಹಲಕಾರಿಯಾಗಿದೆ ಅನ್ನಿಸಿತು. ಬೇಡವೆಂದರೂ ಕಿವಿಗಳು ಅತ್ತಲೇ ತಿರುಗಿದವು. ನನ್ನಂತೆಯೇ ಅನೇಕರ ಕಿವಿಗಳು ಆ ದಿಕ್ಕಿನತ್ತಲೇ ಬಾಗಿದ್ದವು.&lt;br /&gt;ಜೀನ್ಸ್ ಪ್ಯಾಂಡ್, ನೀಲಿ ಟೀ ಶರ್ಟ್ ಧರಿಸಿದ್ದ ಯುವಕ, ಜತೆಯಲ್ಲಿದ್ದವನಿಗೆ ಮಾರ್ಗದರ್ಶನ ನೀಡುತ್ತಿದ್ದ. ಬಹುಶಃ ಅವರಿಬ್ಬರೂ ಒಂದು ಕಾಲದ ಗೆಳೆಯರಿರಬಹುದು. ತುಂಬಾ ದಿನಗಳ ನಂತರ ಆಕಸ್ಮಿಕವಾಗಿ ಬಸ್‌ನಲ್ಲಿ ಭೇಟಿಯಾಗಿದ್ದಾರೆ ಅನ್ನಿಸಿತು. ಜೀನ್ಸ್ ಪ್ಯಾಂಡ್‌ಧಾರಿ ಭಾಷಣ ಆರಂಭಿಸಿದ್ದ. ತನ್ನ ಬದುಕಿನ ಏರಿಳಿತಗಳು, ಇತ್ತೇಚೆಗಿನ ಉನ್ನತಿ ಬಗ್ಗೆ ಹೇಳುತ್ತಿದ್ದ.&lt;br /&gt;‘ನೋಡು ಮಗಾ, ಇಂಗ್ಲಿಷ್ ಬರೋದಿಲ್ಲ ಎಂಬ ಕೀಳರಿಮೆ ಬೇಡ. ಯಾರಿಗೂ ಶುದ್ಧ ಇಂಗ್ಲಿಷ್ ಗೊತ್ತಿಲ್ಲ. ಇವತ್ತಿನಿಂದಲೇ ತಪ್ಪೋ ಸರಿಯೋ ಮಾತು ಶುರು ಮಾಡು. ಕೆಲಸ ಚಿಕ್ಕದಾದರೂ ಪರವಾಗಿಲ್ಲ ಮುಂದುವರಿಸು. ಜಾಬ್ ವೆಬ್‌ಸೈಟ್‌ಗಳಿಗೆ ಬಯೋಡೇಟಾ ಕಳಿಸು. ದುಡಿಯೋದಕ್ಕಿಂತಲೂ ಮೊದಲು ಅನುಭವ ಸಂಪಾದಿಸಲು ಪ್ರಯತ್ನಿಸು. ಕೆಲಸ ಗೊತ್ತಿದ್ದರೆ, ಇಂದು ಯಾರು ಬೇಕಾದರೂ ಕರೆದು ಅವಕಾಶ ಕೊಡ್ತಾರೆ. ನನ್ನೇ ನೋಡು, ಬರೀ ೫೦೦೦ ರೂಪಾಯಿಗೆ ಅಲ್ಲಿ ಸೇರಿದೆ. ಈಗ ೨೦ಸಾವಿರ ಬರ್‍ತಾಯಿದೆ. ಏನಾದರೂ ಮಾಡಿ ಇನೋಸಿಸ್‌ನಲ್ಲಿ ಕೆಲಸ ಗಿಟ್ಟಿಸಿದರೆ, ೩೦-೪೦ ಸಾವಿರ ಎಣಿಸಬಹುದು...’ ಮಾತು ಪ್ರವಾಹದಂತೆ ಹರಿಯುತ್ತಿತ್ತು. ಇನ್ನೊಬ್ಬ ಬಾಯಿಬಿಟ್ಟುಕೊಂಡು ಕೇಳುತ್ತಿದ್ದ.&lt;br /&gt;‘ನಿನಗೇನಿದೆ ಕಷ್ಟ? ಅದರ ೧೦ರಷ್ಟು ತಾಪತ್ರಯ ನನಗಿತ್ತು. ವರ್ಷದ ಹಿಂದೆ ಕಾಯಿಲೆ ಬಿದ್ದು, ಒಂದು ತಿಂಗಳು ಹಾಸಿಗೆ ಹಿಡಿದಿದ್ದೆ. ಏನು ಮಾಡಿದ್ದರೂ ಕೈಗೆ ಬರ್ತಾ ಇರಲಿಲ್ಲ. ಆಗ ನಮ್ಮ ಸೋದರ ಮಾವ, ನನ್ನ ಪಾಲಿಗೆ ದೇವರ ಥರಾ ಬಂದರು’.&lt;br /&gt;‘ಏನ್ ಮಾಡಿದರು?’&lt;br /&gt;‘ಪ್ರಾರ್ಥನೆ ಮಾಡೋದಕ್ಕೆ ಹೇಳಿದರು..’&lt;br /&gt;‘ಪ್ರಾರ್ಥನೆನಾ?’&lt;br /&gt;‘ಹೌದು. ಯೇಸು ಪ್ರಭುವಿನ ಪ್ರಾರ್ಥನೆಯನ್ನು ಅಂದಿನಿಂದ ನಾನು ಶುರು ಮಾಡಿದೆ. ಬೆಳಗ್ಗೆ ಒಂದು ೧೦ ನಿಮಿಷ ಪ್ರಾರ್ಥನೆ ಮಾಡ್ತೀನಿ. ಸಮಸ್ಯೆ ಬಂದಾಗಲೆಲ್ಲ, ಯೇಸು ಪ್ರಭುವನ್ನು ನೆನಪು ಮಾಡಿಕೊಳ್ಳುತ್ತೇನೆ. ವಾರಕ್ಕೊಮ್ಮೆ ಚರ್ಚ್‌ಗೆ ಹೋಗ್ತೀನಿ. ಯೇಸು ಪ್ರಭು ದೆಸೆಯಿಂದ ಕಲ್ಲಿನಂಥ ಕಷ್ಟಗಳು ಕರಗಿ ನೀರಾಗುತ್ತವೆ. ಬೇಕಿದ್ದರೇ ನೀನೂ ಟ್ರೈ ಮಾಡು.. ಕಳಕೊಳ್ಳೋದೇನಿದೆ.. ಒಳ್ಳೆಯದಾಗುತ್ತೆ ಅಂದ್ರೆ, ಪ್ರಾರ್ಥನೆ ಮಾಡೋದು ತಪ್ಪಾ? ನನಗಂತೂ ಒಳ್ಳೆಯದಾಗಿದೆ. ನಿನಗೂ ಒಳ್ಳೆಯದಾಗಲಿ ಅಂಥ ಇಷ್ಟೆಲ್ಲಾ ಹೇಳಿದೆ. ಇದರ್‍ಮೇಲೆ ನಿನ್ನಿಷ್ಟ.. ’ ಎಂದ ಆ ಯುವಕ ತನ್ನ ಸ್ಟಾಪ್ ಬಂದ ತಕ್ಷಣ, ಟಾಟಾ ಹೇಳುತ್ತ ಇಳಿದು ಹೋದ. ತನ್ನ ಗೆಳೆಯನಿಗೆ ಹೇಳುವಂತೆ, ಹಿಡೀ ಬಸ್‌ಗೆ ಆತ ತಾನು ಏನು ಹೇಳಬೇಕಾಗಿದ್ದೋ ಅದನ್ನು ಹೇಳಿದ್ದ.&lt;br /&gt;***&lt;br /&gt;ಗೆಳೆಯ ಕುಮಾರ ಬಿಪಿಎಡ್ ಮಾಡಿ ನಾಲ್ಕಾರು ವರ್ಷಗಳಾಗಿತ್ತು. ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಸೃಷ್ಟಿಸುವಂತೆ, ತಲೆಯಲ್ಲಿ ಬೆಳ್ಳಿ ಕೂದಲ ಸಂತತಿ ಹೆಚ್ಚುತ್ತಿತ್ತು. ಯಾವ ಕೆಲಸವಾದರೂ ಪರವಾಗಿಲ್ಲ ಮಾಡೋದಕ್ಕೆ ರೆಡಿ ಎನ್ನುತ್ತಿದ್ದವನಿಗೆ ಊರಲ್ಲಿನ ಕಾನ್ವೆಂಟ್‌ನಲ್ಲಿ ಕೊನೆಗೂ ಕೆಲಸ ಸಿಕ್ಕಿತು. ಆದರೆ ಆ ಕೆಲಸವನ್ನು ಕೊಡಲು ಆಡಳಿತ ಸಂಸ್ಥೆ ಹಿಂದೆ ಮುಂದೆ ನೋಡಿತ್ತು. ಡಬ್ಬಲ್ ಡಿಗ್ರಿ ಸರದಾರನಿಗೆ ಮೂರಂಕೆಯ ಸಂಬಳ ಕೊಡೋದು ಹೇಗೆ ಎಂಬುದು ಅವರ ತಳಮಳ. ಸಂಬಳಕ್ಕಿಂತಲೂ ಕೆಲಸ ದೊಡ್ಡದು ಎಂಬ ಮನಸ್ಥಿತಿ ಆತನದು. ಕೆಲಸ ಸಿಕ್ಕಿದ ದಿನ ನನಗೆ ಟೀ ಕೊಡಿಸಿ, ಮುಖ ಅರಳಿಸಿದ್ದ.&lt;br /&gt;ಆ ಮಧ್ಯೆ ದೈಹಿಕ ಶಿಕ್ಷಕರ ನೇಮಕಾತಿಗಾಗಿ ಸರಕಾರ, ಅರ್ಜಿ ಆಹ್ವಾನಿಸಿತು. ಸಿಇಟಿ ಪರೀಕ್ಷೆ ಆತನ ಪಾಲಿಗೆ ಸ್ವರ್ಗದ ರಹದಾರಿಯಂತೆ ಕಾಣಿಸಿತ್ತು.&lt;br /&gt;ಅರ್ಜಿ ಗುಜರಾಯಿಸಿದ ಆತ ಬೆಂಗಳೂರಿಗೆ ಹೊರಟ. ಒಂದಷ್ಟು ಪುಸ್ತಕ ತಂದು, ಕಷ್ಟಪಟ್ಟು ಓದುವುದು, ಆ ಮೂಲಕ ಹಠ ಹಿಡಿದು ಕೆಲಸ ಗಿಟ್ಟಿಸುವ ಕನಸು ಆತನದು.&lt;br /&gt;ಈ ಮಧ್ಯೆ ಧರ್ಮಸ್ಥಳಕ್ಕೆ ಹೋಗುವ ಬಯಕೆ ಮನದಲ್ಲಿ ಬಂತು. ಬಹುದಿನದಿಂದ ಬಾಕಿ ಉಳಿದಿದ್ದ ಟೂರ್ ನೆನಪಾಯಿತು. ಧರ್ಮಸ್ಥಳದಲ್ಲಿ ಹರಕೆ ಕಟ್ಟಿದ. ‘ಕೆಲಸ ಸಿಕ್ಕರೆ ನಾನು ಮುಡಿ ಕೊಡ್ತಿನಿ, ಕೈ ಬಿಡಬೇಡವೋ ಮಂಜುನಾಥಾ..’ ಎಂದು ಬೇಡಿಕೊಂಡ. ಮಂಜುನಾಥ ಕೈ ಹಿಡಿದನೋ ಅಥವ ಕುಮಾರನ ಶ್ರಮಕ್ಕೆ ಫಲ ಸಿಕ್ಕಿತೋ ಗೊತ್ತಿಲ್ಲ. ಅವನಂತೂ ‘ಎಲ್ಲವೂ ಮಂಜುನಾಥನ ದಯೆ’ ಎನ್ನುತ್ತಾನೆ. ಆತನ ಮನೆಯಲ್ಲೀಗ ಮಂಜುನಾಥನ ದೊಡ್ಡ ಪಟ ಗೋಡೆಯನ್ನು ಅಲಂಕರಿಸಿದೆ.&lt;br /&gt;***&lt;br /&gt;ಈಗ ಒಂದು ಪ್ರಶ್ನೆ. ಮೇಲಿನ ಎರಡೂ ಪ್ರಕರಣಗಳಲ್ಲಿ ದೇವರು ಕೈಹಿಡಿದನೋ ಅಥವಾ ಎಲ್ಲವೂ ಕಾಕತಾಳಿಯವೋ? ಅವರವರ ಭಾವಕ್ಕೆ ತಕ್ಕಂತೆ ಉತ್ತರಗಳು ರೂಪುಗೊಳ್ಳುತ್ತವೆ. ಆ ವಿಚಾರ ಬಿಡಿ. ದೇವರ ಶಕ್ತಿ ಪರೀಕ್ಷಿಸುವ ಬದಲು, ನಮ್ಮೊಳಗಿನ ಶಕ್ತಿಯನ್ನು ಬಳಸಿಕೊಳ್ಳುವುದರಲ್ಲಿಯೇ ಹೆಚ್ಚು ಖುಷಿಯಿದೆ ಎಂದು ಅಂದುಕೊಳ್ಳುವುದೇ ನಮಗೂ ಮತ್ತು ದೇವರಿಗೂ ಕ್ಷೇಮ.&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-8770265943741711197?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/8770265943741711197/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=8770265943741711197' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/8770265943741711197'/><link rel='self' type='application/atom+xml' href='http://www.blogger.com/feeds/2189102912389204330/posts/default/8770265943741711197'/><link rel='alternate' type='text/html' href='http://kanasinaramane.blogspot.com/2008/05/blog-post_10.html' title='ನಮಗೂ ಕ್ಷೇಮ! ದೇವರಿಗೂ ಕ್ಷೇಮ!!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-4769641381248231133</id><published>2008-05-06T00:51:00.001+05:30</published><updated>2008-05-06T00:55:10.550+05:30</updated><title type='text'>ಹಾಗೇ ಸುಮ್ಮನೆ..</title><content type='html'>&lt;font color="#33cc00"&gt;ಅಪ್ಪ &lt;/font&gt;&lt;br /&gt;ಅವನು ಅತೀ ಅವಸರದಲ್ಲಿ ಹೊರಟಿದ್ದ. ನೆತ್ತಿಯನ್ನು ಕೆಂಡದಂಥ ಬಿಸಿಲು ಸುಡುತ್ತಿತ್ತು. ಕಾಲಲ್ಲಿ ಚಪ್ಪಲಿ ಬೇರೆಯಿಲ್ಲ. ಕೆಂಪಗೆ ಕಾದ ಕಬ್ಬಿಣದ ಸಲಾಕೆ ಮೇಲೆ ಪಾದವೂರಿದಂತೆ ಅವನಿಗೆ ಅನ್ನಿಸುತ್ತಿತ್ತು.&lt;br /&gt;ಹೆಂಡತಿ ಔಷಧ ಮುಗಿದು ವಾರವಾಗಿತ್ತು. ಔಷಧ ಇಲ್ಲದೇ ಕೆಮ್ಮು ಉಬ್ಬಸದ್ದೇ ಸದಾ ಅಬ್ಬರದ ಸದ್ದು. ಹಾಸಿಗೆಯಲ್ಲಿ ಅವಳದು ಸದಾ ನರಳಾಟ. ಮೂರು ತಿಂಗಳಿಂದ ಮನೆ ಬಾಡಿಗೆ ಕಟ್ಟಿಲ್ಲ ಎಂದು ಮಾಲೀಕ, ಕಡೆಯ ಗಡುವು ಕೊಟ್ಟು ಹೋಗಿದ್ದ. ಇನ್ನೂ ಏನೇನೋ ತಾಪತ್ರಯ. ಎಲ್ಲವೂ ನೆನಪಾಯಿತು.&lt;br /&gt;ಕೊನೆಗೂ ಪೋಸ್ಟ್ ಆಫೀಸ್‌ಗೆ ಬಂದು ಎಂ.ಓ. ಫಾರಂ ಪಡೆದ. ನಡುಗುವ ಕೈಯಲ್ಲಿಯೇ ಎಂ.ಓ.ಫಾರಂ ತುದಿಯಲ್ಲಿರುವ ಸಂದೇಶ ಎಂಬ ಜಾಗದಲ್ಲಿ, ‘ಮಗನೇ ನಾವಿಲ್ಲಿ ಕ್ಷೇಮ. ಚೆನ್ನಾಗಿ ಓದು. ಪ್ರವಾಸಕ್ಕೆ ಹೊರಟಿರುವ ವಿಷಯ ನಿನ್ನ ಪತ್ರ ಓದಿದ ಮೇಲೆ ತಿಳಿಯಿತು. ಹಣ ಎಂ.ಓ ಮಾಡಿದ್ದೇನೆ. ಬಳಸಿಕೋ.. ’ ಎಂದು ಎರಡು ಸಾಲು ಬರೆದು, ಐದು ನೂರು ರೂಪಾಯಿ ನೋಟುಗಳನ್ನು ಎಣಿಸಿದ.&lt;br /&gt;&lt;font color="#33cc00"&gt;ಮಗ&lt;/font&gt;&lt;br /&gt;ಅವನ ಅಪ್ಪ ಬಲು ಗಟ್ಟಿ. ಎಂಥಾ ಹಲ್ಲು ನೋವಿದ್ದರೂ, ಅದರ ಆಯಸ್ಸು ಮುಗಿದಿದ್ದರೂ ಕೀಳಲು ವೈದ್ಯರಿಗೆ ಅವಕಾಶ ನೀಡಿರಲಿಲ್ಲ. ನೋಡನೋಡುತ್ತಲೇ ಹಲ್ಲುಗಳು ಅಪ್ಪನ ಬಾಯನ್ನು ಖಾಲಿ ಮಾಡಿದವು. ಕೆಳದವಡೆಯಲ್ಲಿ ಒಂದೆರಡುಮೂರು... ಮೇಲ್ ದವಡೆಯಲ್ಲಿ ಒಂದೆರಡು -ಹೀಗೆ ಮೊಮ್ಮಗ ಸುಲಭವಾಗಿ ಅಪ್ಪನ ಹಲ್ಲನ್ನು ಎಣಿಸುತ್ತಿದ್ದ. ನನಗೆ ಆಗ ಒಳ್ಳೆ ಸಂಬಳವೇನೋ ಬರ್ತಾಯಿತ್ತು. ಆದರೆ ಖರ್ಚುಗಳು ಸಂಬಳವನ್ನು ತಿಂದು ತೇಗುತ್ತಿದ್ದವು.&lt;br /&gt;ಅಪ್ಪ ಅಳಿದುಳಿದ ಹಲ್ಲಿನಲ್ಲಿಯೇ ತಿನ್ನುವುದನ್ನು ಕಲಿತಿದ್ದ. ಬೆರಳಲ್ಲಿಯೇ ಮೂಳೆ ಬಿಡಿಸಿ, ಮಾಂಸವನ್ನು ಚಪ್ಪರಿಸುತ್ತಿದ್ದ. ಕಡಲೆ ಬೀಜವನ್ನು ನುಣ್ಣಗೆ ಕುಟ್ಟಿಸಿಕೊಂಡು ತಿನ್ನುತ್ತಿದ್ದ. ಅವನಿಗೆ ಹಾಗೆ ಮಾಡುವುದನ್ನು ಬಿಟ್ಟರೆ ಬೇರೆ ದಾರಿಯಾದರೂ ಏನಿತ್ತು? ಅಪ್ಪನಿಗೆ ಹಲ್ಲು ಕಟ್ಟಿಸಬೇಕು ಎಂದು ಅಂದುಕೊಳ್ಳುತ್ತಿದ್ದೆ. ಆವಾಗ, ಇವಾಗ ಎಂದು ಅಂದುಕೊಳ್ಳುತ್ತಲೇ ಇದ್ದೆ. ಅಪ್ಪ ಅವಸರವಿದ್ದವನಂತೆ, ನಮ್ಮ ಹಂಗು ಯಾಕೆ ಎಂಬಂತೆ ಬೊಚ್ಚು ಬಾಯಲ್ಲಿಯೇ ಅಗಲಿದ.&lt;br /&gt;ಈಗ ಅಮ್ಮನ ಹಲ್ಲುಗಳೂ ಸಡಿಲವಾಗಿವೆ. ಹಳೆ ಕೆಲಸದ ಪಿಎಫ್ ಹಣ ಬಂದ ಮೇಲೆ ಹಲ್ಲು ಕಟ್ಟಿಸಬೇಕು. ಅವಳಿಗೀಗೀಗ ಚಪಾತಿ ತಿನ್ನಲು ಸಹಾ ಕಷ್ಟವಾಗುತ್ತಿದೆ.&lt;br /&gt;&lt;font color="#33cc00"&gt;ಅಮ್ಮ&lt;/font&gt;&lt;br /&gt;ಅವಳ ಪ್ರಪಂಚದಲ್ಲಿ ಗಂಡ-ಮಕ್ಕಳು ಬಿಟ್ಟರೆ ಬೇರೆಯವರಿಗೆ ಜಾಗವೇ ಇಲ್ಲ. ತೊಟ್ಟಿಲಲ್ಲಿದ್ದ ಮಗ ಹಠ ಮಾಡಿದರೆ, ಇವಳು ಹರಕೆ ಕಟ್ಟುತ್ತಿದ್ದಳು. ತಾನು ನಂಬಿದ್ದ, ಪ್ರತಿ ಶನಿವಾರ ಶ್ರದ್ಧಾ ಭಕ್ತಿಯಿಂದ ಓದುತ್ತಿದ್ದ ಶ್ರೀರಾಮನ ಪೂಜಾ ಮಹಾತ್ಮೆ ಪುಸ್ತಕವನ್ನು ಮಗನ ತಲೆ ಕೆಳಗಿಟ್ಟು, ‘ಶ್ರೀರಾಮಚಂದ್ರ ಕಾಪಾಡಪ್ಪಾ ’ ಅನ್ನುತ್ತಿದ್ದಳು. ಮನೆ, ಮಕ್ಕಳಿಗಾಗಿ ವಾರಕ್ಕೆರಡು ದಿನ ಊಟ ಬಿಟ್ಟಳು. ಮಗನ ಬಗ್ಗೆ ಮೇಷ್ಟ್ರುಗಳು ಒಳ್ಳೆ ಮಾತಾಡಿದಾಗ, ಆಕೆ ಮುಖ ಅರಳಿದ ತಾವರೆ.&lt;br /&gt;ಊರಿನ ಸಾಧುವೊಬ್ಬ ನಿನ್ನ ಮಗ ನವೆಂಬರ್‌ನಲ್ಲಿ ಹುಟ್ಟಿದ್ದಾನೆ. ನವೆಂಬರ್‌ನಲ್ಲಿಯೇ ಕನ್ನಡ ರಾಜ್ಯೋತ್ಸವ, ನಿನ್ನ ಮಗ ಮುಂದೆ ಮಹಾತ್ಮ ಆಗುತ್ತಾನೆ ಎಂದು ಹೇಳಿದ್ದ. ಅಂದು ಆ ಸಾಧುವಿಗೆ ಹೊಟ್ಟೆ ತುಂಬ ಊಟ ಹಾಕಿದ್ದಳು. ಮಗ ನಕ್ಕಾಗ, ಅವಳೂ ನಗುತ್ತಿದ್ದಳು. ಮಗನಿಗೇನಾದರೂ ಗಾಯವಾದರೆ, ಅದರ ನೋವೆಲ್ಲವನ್ನೂ ತಾನೇ ಅನುಭವಿಸುತ್ತಿದ್ದಳು. ಅಂಥ ಅಮ್ಮನ ಕಣ್ಣಲ್ಲಿ ಒಂದು ದಿನ ನೀರು ಬಂತು. ಕಾರಣ; ಅಂದು ಮಗನ ಮದುವೆ ದಿನ! ಮದುವೆ ಎಲ್ಲಿ? ಯಾವಾಗ? ಈ ಬಗ್ಗೆ ಆಕೆಗೆ ಏನೂ ಗೊತ್ತಿರಲಿಲ್ಲ!&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-4769641381248231133?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/4769641381248231133/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=4769641381248231133' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/4769641381248231133'/><link rel='self' type='application/atom+xml' href='http://www.blogger.com/feeds/2189102912389204330/posts/default/4769641381248231133'/><link rel='alternate' type='text/html' href='http://kanasinaramane.blogspot.com/2008/05/blog-post_06.html' title='ಹಾಗೇ ಸುಮ್ಮನೆ..'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-2542098988982095169</id><published>2007-12-08T18:54:00.000+05:30</published><updated>2008-12-11T09:19:23.002+05:30</updated><title type='text'>ರಮ್ಯಾ ಸ್ವಲ್ಪ ಗಂಭೀರವಾಗಿ ಕೂತು ಈ ಪತ್ರ ಓದು ಪ್ಲೀಸ್..</title><content type='html'>&lt;a href="http://4.bp.blogspot.com/_eDo9m8Nl3wg/R1qcVc1uMdI/AAAAAAAAADQ/kyqVS-Q9BO4/s1600-h/ramya.jpg"&gt;&lt;img id="BLOGGER_PHOTO_ID_5141593816929546706" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_eDo9m8Nl3wg/R1qcVc1uMdI/AAAAAAAAADQ/kyqVS-Q9BO4/s320/ramya.jpg" border="0" /&gt;&lt;/a&gt; ರಮ್ಯಾ ಮೇಡಂಗೆ ನಮಸ್ಕಾರ.&lt;br /&gt;&lt;div&gt;&lt;/div&gt;&lt;br /&gt;&lt;div&gt;ಹುಟ್ಟುಹಬ್ಬದ ಸಂಭ್ರಮ(ನ.29)ದಲ್ಲಿರುವ ನಿಮಗೆ ಮೊದಲು ಶುಭಾಶಯಗಳು. &lt;/div&gt;&lt;br /&gt;&lt;div&gt;ನೀವು ಚೆನ್ನಾಗಿರಬೇಕು.. ಇನ್ನಷ್ಟು ಚಿತ್ರಗಳಲ್ಲಿ ಅಭಿನಯಿಸಬೇಕು... ಇದು ನನ್ನೊಬ್ಬನ ಆಶಯ ಮಾತ್ರವಲ್ಲ. ನನ್ನಂಥ ಲಕ್ಷಾಂತರ ಕನ್ನಡ ಪ್ರೇಮಿಗಳ ಆಶಯ. ಜನ್ಮದಿನದ ಖುಷಿಯಲ್ಲಿರುವ ನಿಮಗೆ ಒಂದಷ್ಟು ಕಹಿಗುಳಿಗೆ ಸಹಾ ನೀಡುತ್ತಿದ್ದೇನೆ. ಕಹಿಗುಳಿಗೆಗಳು ಆರೋಗ್ಯಕ್ಕೆ ಹಿತಕರ ಅನ್ನೋದು ನಿಮಗೆ ಗೊತ್ತಿದೆ ಎನ್ನುವುದು ನನ್ನ ಭಾವನೆ. ಈ ಮಾತು ಕೇಳಿ ನೀವು ಎಂದಿನ ಸ್ಟೈಲಲ್ಲಿ ನಗ್ತೀರಾ ಅನ್ನೋದು ನನಗೆ ಗೊತ್ತಿದೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಕನ್ನಡ ಚಿತ್ರರಂಗದಲ್ಲಿ ನಂ.1ಸ್ಥಾನದಲ್ಲಿ ಮೆರೆದವರು ಮಾಲಾಶ್ರೀ. ಅವರ ನಂತರ ಆ ಸ್ಥಾನ ತುಂಬಲು ಯಾರು ಬರಲೇ ಇಲ್ಲ. ನೀವು ಆ ಸ್ಧಾನ ತುಂಬುವಿರಿ ಎಂಬ ವಿಶ್ವಾಸ ನಮಗಿತ್ತು. ಆಗತ್ಯಕ್ಕಿಂತ ಜಾಸ್ತಿಯೇ ನಾವು ನಿಮ್ಮನ್ನು ಒಪ್ಪಿಕೊಂಡೆವು. ನಿಮ್ಮ ತರ್ಲೆ ಕಿರಿಕಿರಿ ಏನೇ ಇರಲಿ.. ಎಲ್ಲರಲ್ಲೂ ಇವಳು ನಮ್ಮುಡುಗಿ ಅನ್ನೋ ಭಾವ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಸುಂಟರಗಾಳಿ ಚಿತ್ರದಲ್ಲಿ ರಕ್ಷಿತಾ ಕುಣಿದ ಪರಿ ನೋಡಿ,'ನಾನಂತೂ ಆ ಥರಾ ಪಾತ್ರಗಳಲ್ಲಿ ಅಭಿನಯಿಸೋದಿಲ್ಲ. ಅವ್ಳು ಒಳ್ಳೆ ಕ್ಲಬ್ ಡ್ಯಾನ್ಸರ್ ಥರಾ ಕುಣಿದಿದ್ದಾಳೆ'ಎಂದು ನೀವು ಹೇಳಿದ್ದು ನಮಗಿನ್ನೂ ನೆನಪಿದೆ. ನನಗೆ ಅಂಥಾ ದೃಶ್ಯದಲ್ಲಿ ಕಾಣಿಸಿಕೊಳ್ಳೋದು ಇಷ್ಟವಿಲ್ಲ. ನನಗೆ ನಿಜಕ್ಕೂ ಹಿಂಸೆಯಾಗುತ್ತೆ ಎಂದು ನೀವು ಹೇಳಿದ ಕೆಲವೇ ದಿನಗಳಲ್ಲಿ ತೆರೆ ಮೇಲೆ ಜೂಲಿ ಚಿತ್ರ ಬಂತು. ಜೂಲಿ ಚಿತ್ರ ಹೇಗಿತ್ತು ಅನ್ನೋದು ನಿಮಗೂ ಗೊತ್ತು. ಜೂಲಿ ಚಿತ್ರದಲ್ಲಿ ನಿಮ್ಮ ಅವತಾರಾ ಕಂಡು ರಕ್ಷಿತಾ ಸಹಾ ನಾಚಿಕೊಂಡರು! ಯಾಕೆ ಹೀಗೆ?&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಸುದೀಪ್ ಗೆ ಅಪ್ಪಿಕೊಳ್ಳೋದಕ್ಕೆ ಬರೋದಿಲ್ಲ... ಆದಿತ್ಯನಿಗೆ ಕಿಸ್ ಮಾಡೋದಿಕ್ಕೆ ಬರೋದಿಲ್ಲ ಎಂದೆಲ್ಲ ನೀವು ಹೇಳಿದಿರಿ ಎಂದು ಪತ್ರಿಕೆಗಳು ಬರೆದಿದ್ದವು. ಒಂದು ಹಂತದಲ್ಲಿ ನಿಮ್ಮ ಮತ್ತು ರಕ್ಷಿತಾ ನಡುವಿನ ಕೋಳಿ ಜಗಳ, ಪ್ರೇಕ್ಷಕರಿಗೆ ಕಾಸಿಲ್ಲದ ಮನರಂಜನೆಯಾಗಿತ್ತು. ಆಮೇಲೆ ಬಂದ ತನನಂ ತನನಂ ಚಿತ್ರದಲ್ಲಿ ನೀವು ಚೆನ್ನಾಗಿಯೇ ಅಭಿನಯಿಸಿದಿರಿ, ಆದರೆ ಚಿತ್ರ ಗೆಲ್ಲಲಿಲ್ಲ. ಆ ವಿಷ್ಯಾ ಬಿಡಿ.ಒಂದು ವಿಷ್ಯಾ ಹೇಳಲಾ, ರಕ್ಷಿತಾಗಿಂತಲೂ ನೀವೇ ಅದೃಷ್ಟವಂತರು. ಟಿ.ಎನ್.ಸೀತಾರಾಂ, ನಾಗತಿಹಳ್ಳಿ ಚಂದ್ರಶೇಖರ್, ಕವಿತಾ ಲಂಕೇಶ್ ಸೇರಿದಂತೆ ಅನೇಕ ಉತ್ತಮ ನಿರ್ದೇಶಕರ ಜೊತೆ ಕೆಲಸ ಕಲಿಯೋ ಅವಕಾಶ ನಿಮ್ಮದಾಗಿದೆ. ಆದರೂ ನೀವು ಮನಸ್ಸಿನಲ್ಲಿ ಉಳಿಯೋ ಅಂಥಾ ಒಂದು ಚಿತ್ರದಲ್ಲೂ ಕಾಣಿಸಿಕೊಳ್ಳಲಿಲ್ಲ. ಚಿತ್ರರಂಗ ನಿಮ್ಮನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ, ನೀವು ಚಿತ್ರರಂಗವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲವೋ ಗೊತ್ತಾಗುತ್ತಿಲ್ಲ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನಿಮ್ಮಲ್ಲಿ ರೂಪವಿತ್ತು, ಪ್ರತಿಭೆಯಿತ್ತು, ಎಲ್ಲರ ಸೆಳೆಯುವ ಮಾದಕತೆ ಇತ್ತು, ಕನ್ನಡತಿ ಎಂಬ ವಿಶೇಷ ಹೆಗ್ಗಳಿಕೆಯೂ ಇತ್ತು. ಹೀಗಾಗಿ ನೀವು ಕನ್ನಡ ಚಿತ್ರರಂಗದ ರಾಣಿಯಾಗಿ ಮೆರೆಯಬಹುದಿತ್ತು. ರಾಧಿಕಾ ಬೇರೆ ಕಾರಣಕ್ಕೆ ಸ್ಯಾಂಡಲ್ ವುಡ್ ನಲ್ಲಿ ಅಪ್ರಸ್ತುತರಾದರು. ರಕ್ಷಿತಾ ಮದುವೆಯಾದರು. ಮನೆ ಆಗ ಖಾಲಿ ಇತ್ತು. ಅದರಲ್ಲೂ ರಕ್ಷಿತಾ ಮನೆಗೆ ಹೋದ ತಕ್ಷಣ, ನೀವು ರಾಣಿಯಾಗ್ತೀರಾ ಎಂದು ಎಲ್ಲರೂ ಹೇಳುತ್ತಿದ್ದರು. ಆದರೆ ಆ ರೀತಿ ಆಗಲಿಲ್ಲ. ಹೊಸಬರ ಅಲೆಯಲ್ಲಿ ನೀವು ಕೊಚ್ಚಿ ಹೋದಿರಿ.ಈಗಂತೂ ನೀವು ಪತ್ತೇನೇ ಇಲ್ಲ. ಆಯಮ್ಮನ ಕೊಬ್ಬು ಜಾಸ್ತಿಯಾಗಿದೆ.. ಹೀಗಾಗಿ ಆ ಸಿನಿಮಾದಿಂದ ಕೈಬಿಡಲಾಯಿತು..ಈ ಸಿನಿಮಾದಿಂದ ಕೈಬಿಡಲಾಯಿತು ಎಂದು ಆಗಾಗ ಮಾತ್ರ ನಾವು ನಿಮ್ಮ ಬಗ್ಗೆ ಓದುತ್ತಿರುತ್ತೇವೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ತಮಿಳಲ್ಲಿ ಅವಕಾಶಕ್ಕಾಗಿ ನೀವು ಅಂಗಲಾಚುತ್ತಿರುವಿರಿ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅಂಗಲಾಚುವ ಸ್ಥಿತಿ ನಿಮಗೆ ಬರಬಾರದಿತ್ತು. ಇಷ್ಟಕ್ಕೂ ಕನ್ನಡಿಗರು ಏನ್ ಕಮ್ಮಿ ಮಾಡಿದ್ದಾರೆ.. ಯಾಕೆ ನೀವು ತಮಿಳಿಗೆ ಹೋದಿರಿ? ಹೋದದ್ದು ಯಾಕೆ? ಆ ಚಿತ್ರಗಳ ಸ್ಟಿಲ್ ಗಳನ್ನು ಕಂಡರೆ, ನಮ್ಮ ಮೈ ಎಲ್ಲಾ ಉರಿದು ಹೋಗುತ್ತಿದೆ. ಆ ಪರಿಯಲ್ಲಿ ನೀವು ಕಾಣಿಸಿಕೊಳ್ಳುವುದನ್ನು ನಾವಂತೂ ಖಂಡಿಸುತ್ತೇವೆ.ನೀವು ಈಗಲೂ ಸ್ಯಾಂಡಲ್ ವುಡ್ ಗೆ ಬನ್ನಿ.. ಸ್ವಲ್ಪ ದಿನ ಕಾದರೆ ಪ್ರಪಂಚ ಮುಳುಗೋದಿಲ್ಲ. ಕೆಲಸಕ್ಕೆ ಬಾರದ ನೂರು ಚಿತ್ರಗಳಲ್ಲಿ ಕಾಣಿಸಿಕೊಳ್ಳೋದಕ್ಕಿಂತ, ಒಂದೈದು ಒಳ್ಳೆ ಚಿತ್ರದಲ್ಲಿ ಅಭಿನಯಿಸಿದರೆ, ಅದೇ ಸಾರ್ಥಕತೆ. ತಾರಾ ಮತ್ತು ಜಯಮಾಲಾ ರೀತಿ ರಾಷ್ಟ್ರಪ್ರಶಸ್ತಿ ಪಡೆಯೋ ಹಂಬಲ ನಿಮಗಿಲ್ವಾ? &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಚರ್ಮ ಸುಕ್ಕಾಗುವ ಮುನ್ನ ಕಾಸು ಬಾಚೋದು ನಿಮ್ಮ ಉದ್ದೇಶ ಆಗಿರಲಿಕ್ಕಿಲ್ಲ ಎಂದು ನಾವಂದು ಕೊಂಡಿದ್ದೇವೆ. ಇಷ್ಟರ ಮೇಲೆ ನಿಮ್ಮಿಷ್ಟ.ಮತ್ತೆ ಶುರುವಾಗಲಿ ರಮ್ಯ ಚೈತ್ರ ಕಾಲ..&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-2542098988982095169?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/2542098988982095169/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=2542098988982095169' title='2 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/2542098988982095169'/><link rel='self' type='application/atom+xml' href='http://www.blogger.com/feeds/2189102912389204330/posts/default/2542098988982095169'/><link rel='alternate' type='text/html' href='http://kanasinaramane.blogspot.com/2007/12/blog-post.html' title='ರಮ್ಯಾ ಸ್ವಲ್ಪ ಗಂಭೀರವಾಗಿ ಕೂತು ಈ ಪತ್ರ ಓದು ಪ್ಲೀಸ್..'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_eDo9m8Nl3wg/R1qcVc1uMdI/AAAAAAAAADQ/kyqVS-Q9BO4/s72-c/ramya.jpg' height='72' width='72'/><thr:total>2</thr:total></entry><entry><id>tag:blogger.com,1999:blog-2189102912389204330.post-646228791741345415</id><published>2007-10-10T19:04:00.000+05:30</published><updated>2007-10-10T19:09:10.532+05:30</updated><title type='text'>20ತಿಂಗಳ ಸಂಸಾರಕ್ಕೆ ಬೆಂಕಿಬಿದ್ದಿದೆ! ಈಗ ಮರು ಮದುವೆ?</title><content type='html'>&lt;span style="color:#009900;"&gt;ಇದು ರಾಜಕಾರಣವೇ? ಅಲ್ಲ. ಖಂಡಿತ ಅಲ್ಲ. ಕರ್ನಾಟಕದಲ್ಲಿ ಸದ್ಯಕ್ಕೆ ನಡೆಯುತ್ತಿರುವುದು ರಾಜಕಾರಣ ಅಲ್ಲವೇ ಅಲ್ಲ. ಬೇಕಿದ್ದರೆ ಇದನ್ನು ಕುತಂತ್ರ ಕಾರಣ ಅನ್ನೋಣ. ಕುರ್ಚಿಕಾರಣ ಅನ್ನೋಣ.. ಸ್ವಾರ್ಥಕಾರಣ ಅನ್ನೋಣ. ಅಪ್ಪಮಕ್ಕಳ ಮಮಕಾರಣ ಅನ್ನೋಣ. ಇನ್ನೂ ಬೇಕಿದ್ದರೇ ರಾಜಕೀಯ ವ್ಯಭಿಚಾರ ಎಂದು ಗುರ್ತಿಸೋಣ. ರಾಜಕಾರಣ ಅನ್ನುವ ಪದಕ್ಕೆ ಶಬ್ದಕೋಶದಲ್ಲಿ ಒಳಜಗಳ ಎಂದೂ ಸಹಾ ವ್ಯಾಖ್ಯಾನ ಮಾಡಲಾಗಿದೆ. ಆ ವಿಷಯ ಬಿಡಿ.&lt;/span&gt;&lt;br /&gt;&lt;br /&gt;ರಾಜಕಾರಣದಲ್ಲಿ ಇಂದಿನ ಮಿತ್ರ, ನಾಳೆಯ ವೈರಿ. ನಿನ್ನೆಯ ವೈರಿ, ಇಂದಿನ ಮಿತ್ರ. ಇಲ್ಲಿ ಎಲ್ಲವೂ ಅಂದರೆ ಅಸಾಧ್ಯವೂ ಸಾಧ್ಯ. ಪತ್ರಿಕೆ ಅಥವಾ ಟೀವಿಯಲ್ಲಿ ರಾಜಕಾರಣಿಗಳ ಹೇಳಿಕೆ ನೋಡಿ ಕೆಲವರು ಮೋಸ ಹೋಗುತ್ತಾರೆ. ಬೆಳಗ್ಗೆ ಬಾಯಿಗೆ ಬಂದಂತೆ ಬೈದವರು, ರಾತ್ರಿ ಜೊತೆಯಲ್ಲಿ ಬಾರಲ್ಲಿ ಕೂತು ವಿಸ್ಕಿ ಹೀರುತ್ತಾರೆ. ಬಾಗಿಲಲ್ಲಿ ನಿಂತವರು ಕುರ್ಚಿ ಹತ್ತುತ್ತಾರೆ. ಕುರ್ಚಿ ಮೇಲಿದ್ದವರನ್ನು ಎತ್ತಿಕೊಂಡು ಹೋಗಿ ಬೀದಿಯಲ್ಲಿ ಹಾಕುತ್ತಾರೆ.&lt;br /&gt;&lt;br /&gt;ಬಿಜೆಪಿ ಶನಿವಾರ(ಅ.5) ಬೆಂಬಲ ವಾಪಸ್ ಪಡೆಯುವುದಾಗಿ ಹೇಳಿದೆ. ಹೀಗೆ ಹೇಳದೇ ಅದಕ್ಕೆ ಬೇರೆ ದಾರಿಗಳು ತಾನೇ ಏನಿದ್ದವು? ಜೆಡಿಎಸ್ ಜೊತೆ ಸಖ್ಯ ಮಾಡಿ, ತಕ್ಕ ಪಾಠ ಕಲಿತೆವು ಎಂದು ಸಿನ್ಹಾ ಹೇಳುತ್ತಾರೆ. ವಿಶ್ವಾಸ ದ್ರೋಹ, ನಂಬಿಕೆ ದ್ರೋಹ ಎಂಬ ಪದಗಳು ಬಳಕೆಯಾಗಿವೆ. ಇವೆಲ್ಲವೂ ನಿರೀಕ್ಷಿತ ಎಂದು ಕಡಲೆ ಕಾಯಿ ಮಾರುವ ಹುಡುಗ ಹೇಳ್ತಾನೆ. ಆದರೆ ಈ ಅಂಶ ಬಿಜೆಪಿ ನಾಯಕರಿಗೆ ಅರ್ಥವಾಗಲು 20ತಿಂಗಳು ಬೇಕಾಯಿತು. ದೇವೇಗೌಡರ ರಾಜಕೀಯ ಬದುಕನ್ನು ಒಂದು ಸಲ ನೋಡಿದರೆ, ಸಾಕು ಅವರು ಯಾರ್ಯಾರಿಗೆ ಏನೇನು ಮಾಡಿದ್ದಾರೆ ಎಂಬುದು ಸುಸ್ಪಷ್ಟ.&lt;br /&gt;&lt;br /&gt;ಪಕ್ಷಕ್ಕಾಗಿ ವಚನ ದ್ರೋಹವಾದರೂ ಚಿಂತೆಯಿಲ್ಲ ಅಂದಿದ್ದಾರೆ ಮುಖ್ಯಮಂತ್ರಿ ಕುಮಾರಸ್ವಾಮಿ. ಈವತ್ತು ಬಿಜೆಪಿಯವರು ಮಾತ್ರವಲ್ಲ, ಸಾಮಾನ್ಯ ಜನರೂ ಸಹಾ ಮುಖ್ಯಮಂತ್ರಿ ಮಾಡಿದ್ದು ತಪ್ಪು ಎಂದು ಕೂಗಿ ಹೇಳುತ್ತಿದ್ದಾರೆ. ಸತ್ಯವೇ ಭಗವಂತನೆಂಬ ಪುಣ್ಯಕೋಟಿಯ ಸಂಸ್ಕೃತಿ ಈ ನೆಲದ್ದು. ಇಂಥ ನೆಲದಲ್ಲಿ ಒಬ್ಬ ವ್ಯಕ್ತಿ, ಅದೂ ರಾಜ್ಯದ ಮುಖ್ಯಮಂತ್ರಿ ಸುಳ್ಳುಗಳ ಪೋಣಿಸಿದರೆ ಏನರ್ಥ? ಅಂಥ ಸುಳ್ಳುಗಾರ ಮುಖ್ಯಮಂತ್ರಿಯಿಂದ ಆಳಿಸಿಕೊಂಡದ್ದಕ್ಕೆ ಜನ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ ಎಂದು ಹೇಳಿದರೆ, ದೊಡ್ಡ ತಪ್ಪಾಗುವುದಿಲ್ಲ.&lt;br /&gt;&lt;br /&gt;ಬೆಂಗಳೂರಿನಲ್ಲಿ ರಾಮಸೇತು ವಿವಾದಕ್ಕೆ ಸಂಬಂಧಿಸಿದಂತೆ ಕರುಣಾನಿಧಿ ಪುತ್ರಿ ಮನೆ ಮೇಲೆ ದಾಳಿ ನಡೆದದ್ದು, ಬಸ್ ಸುಟ್ಟದ್ದು ನಮಗೆ ಬೇಸರವಾಗಿದೆ. ಬಳ್ಳಾರಿ ಗಣಿ ವಿವಾದದಿಂದ ಅಸಮಾಧಾನವಾಗಿದೆ. ಬಿಜೆಪಿ ಕೋಮುವಾದಿ.. ಹೀಗಾಗಿ ಅಧಿಕಾರ ಹಸ್ತಾಂತರ ಮಾಡುವುದಿಲ್ಲ ಎಂದು ಕುಮಾರಸ್ವಾಮಿ ಹೇಳುತ್ತಿದ್ದಾರೆ. ಕಾರಣಗಳ ಪಟ್ಟಿ ಮಾಡುತ್ತಿದ್ದಾರೆ. ಇವು ಕಾರಣಗಳಾಗದೇ, ಕೇವಲ ಪಿಳ್ಳೆ ನೆವಗಳು ಅಷ್ಟೇ ಎಂಬುದು ಯಾರಿಗೆ ಗೊತ್ತಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಲು ಬಿಜೆಪಿ ಗ್ರೀನ್ ಸಿಗ್ನಲ್ ತೋರಿಸಿದ್ದರೇ, ಈ ಮಾತುಗಳ ಹೊರಬರುತ್ತಿದ್ದವೇ? ಕಳೆದ 20ತಿಂಗಳಿಂದ ಬಿಜೆಪಿ ಮೈತ್ರಿ ರುಚಿಯಾಗಿತ್ತು. ಕುರ್ಚಿ ಬಿಡಬೇಕಾದ ಈ ಸಂದರ್ಭದಲ್ಲಿ ಮೈತ್ರಿ ಕಹಿಯಾಗಿದೆ.&lt;br /&gt;&lt;br /&gt;ಅಧಿಕಾರ ಹಸ್ತಾಂತರದ ಬಗ್ಗೆ ಅಪನಂಬಿಕೆ ಬೇಡ ಎಂದು ಸಾವಿರ ಸಾವಿರ ಸಲ ಹೇಳುತ್ತಿದ್ದ ಕುಮಾರಸ್ವಾಮಿ, ಅ.2ರಂದು ಚಂದನವಾಹಿನಿಯಲ್ಲಿ ತಮ್ಮ ಮಾತನ್ನು ಪುನರುಚ್ಚರಿಸಿದ್ದರು. ಪ್ರಜೆಗಳೊಂದಿಗಿನ ನೇರ ಪೋನ್ ಇನ್ ಕಾರ್ಯಕ್ರಮದಲ್ಲಿ ಅಧಿಕಾರ ಕೊಡಲು ನಾನು ತಯಾರು ಎಂದಿದ್ದರು. ಗಾಂಧಿ ವಿಚಾರಗಳನ್ನು ಮಾತಿನ ಮಧ್ಯೆ ಪ್ರಸ್ತಾಪಿಸಿ, ಆದರ್ಶವಾದಿಯ ಸೋಗು ಹಾಕಿದ್ದರು. ಆದರೆ ಇಂದು? ನಡೆ ಮತ್ತು ನುಡಿ ನಡುವಿನ ಅಂತರ ಬಟಾ ಬಯಲು. ಬೆತ್ತಲಾಗುವ ಧೈರ್ಯ ಮತ್ತು ತಾಕತ್ತು ಸುಮ್ಮನೇ ದಕ್ಕುವುದಿಲ್ಲ.&lt;br /&gt;&lt;br /&gt;ಈ ಸರ್ಕಾರದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರಗಳಿಗಿಂತಲೂ  ಅಧಿಕಾರ ಹಸ್ತಾಂತರವೇ ಪ್ರಮುಖವಾಗಿ ಚರ್ಚೆಯಾಯಿತು. ಬಿಜೆಪಿಯಂತೂ ಕೂಸು ಹುಟ್ಟುವ ಮುನ್ನವೇ ಕುಲಾವಿ ಸಿದ್ಧಪಡಿಸಿತ್ತು. ಬಿಜೆಪಿ ಮರಳಿನ ಮನೆಯನ್ನು ಜೆಡಿಎಸ್ ಅಲೆ ಕೆಡವಿ ಹಾಕಿದೆ. ಇದರಿಂದ ಯಾರಿಗೆ ಲಾಭ ಮತ್ತು ನಷ್ಟ ಎನ್ನುವ ಲೆಕ್ಕಾಚಾರ ಎಲ್ಲೆಡೆ. ಅನಿವಾರ್ಯ ಕಾರಣಗಳಿಂದ ಚುನಾವಣೆಗೆ ರೆಡಿ ಎಂದು ಎಲ್ಲಾ ಪಕ್ಷಗಳು ಹೇಳುತ್ತಿವೆ. ಆದರೆ ಯಾರಿಗೂ ಸದ್ಯಕ್ಕೆ ಚುನಾವಣೆ ಎದುರಿಸುವ ಧೈರ್ಯವಿಲ್ಲ.&lt;br /&gt;&lt;br /&gt;ಸ್ಥಳೀಯ ಸಂಸ್ಥೆ ಚುನಾವಣೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ಚುನಾವಣೆ ಎಂದರೆ ಬೆಚ್ಚುತ್ತಿದೆ. ಈಗಾಗಿ ಇನ್ನೊಂದು ಸಲ ಮರು ಮೈತ್ರಿಗೆ ಒಲವು ತೋರುತ್ತಿದೆ. ಆದರೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ವಿಶ್ವನಾಥ್, ಜನಾರ್ದನ ಪೂಜಾರಿ ಸೇರಿದಂತೆ ದೇವೇಗೌಡರರನ್ನು ದ್ವೇಷಿಸುವ ದೊಡ್ಡ ಗುಂಪೇ ಕಾಂಗ್ರೆಸ್ ನಲ್ಲಿದೆ. ಹೇಗೋ ಅಧಿಕಾರ ಹಿಡಿಯೋಣ, ಇಪ್ಪತ್ತು ತಿಂಗಳು ತಳ್ಳೋಣ ಎಂಬ ಮನಸ್ಥಿತಿ ಕೆಲವರದು. ಇವರ ಅಭಿಪ್ರಾಯಗಳು ಏನೇ ಇರಲಿ, ಸೋನಿಯಾ ಮೇಡಂ ಕೈತೋರಿದದ್ದ ಮಾತ್ರ ಕಾಂಗ್ರೆಸ್ ನಡೆಯುತ್ತದೆ. ಇದು ಬೆಳಕಿನಲ್ಲಿರುವ ರಹಸ್ಯ.    &lt;br /&gt;&lt;br /&gt;ಸಿನಿಮಾ ನಟರೂ ಸಹಾ ನಾಚಬೇಕು. ಈ ದೇವೇಗೌಡ, ಕುಮಾರಸ್ವಾಮಿ ಸಿನಿಮಾ ರಂಗದಲ್ಲಿದ್ದಿದ್ದರೆ ಇಷ್ಟು ಹೊತ್ತಿಗೆ ಕರ್ನಾಟಕಕ್ಕೆ ಆಸ್ಕರ್ ಎಂದೋ ಸಿಗುತ್ತಿತ್ತು ಎನ್ನುವ ಗೇಲಿ ಬಿಜೆಪಿ ಪಾಳಯದಲ್ಲಿದೆ. ಬಿಜೆಪಿ ನಾಯಕರು ಅಮ್ಮ ತಾಯಿ ಎನ್ನುತ್ತಾ ಅಧಿಕಾರಕ್ಕಾಗಿ ಜೆಡಿಎಸ್ ಬಾಗಿಲು ತಟ್ಟಿದ್ದನ್ನು ಕಂಡಿರುವ ಕಾಂಗ್ರೆಸ್ ಮುಸಿಮುಸಿ ನಗುತ್ತಿದೆ.ದಕ್ಷಿಣ ಭಾರತದಲ್ಲಿ ಖಾತೆ ತೆರೆಯುವ ಹಂಬಲದಿಂದ 20ತಿಂಗಳ ಹಿಂದೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ ಅದರ ಕನಸು ನನಸಾಗಲಿಲ್ಲ. ಹತ್ತಾರು ದಶಕಗಳಿಂದ ವಿರೋಧ ಪಕ್ಷದಲ್ಲಿ ಕೂತು, ಎಂದಾದರೂ ಒಂದು ದಿನ ಮುಖ್ಯಮಂತ್ರಿ ಕುರ್ಚಿ ಏರುತ್ತೇನೆ ಎಂಬ ವಿಶ್ವಾಸ ಯಡಿಯೂರಪ್ಪ ಅವರಿಗಿತ್ತು. ಆ ಕನಸು ಭಗ್ನವಾಗಿದೆ.&lt;br /&gt;&lt;br /&gt;2004ರಲ್ಲಿ ನಡೆದ ಚುನಾವಣೆಯಲ್ಲಿ 225 ಸ್ಥಾನಗಳಲ್ಲಿ 79 ಸ್ಥಾನ ಗಳಿಸಿ, ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್ 68, ಕಾಂಗ್ರೆಸ್ 79 ಮತ್ತು ಇತರೆ ಪಕ್ಷಗಳು 23 ಸ್ಥಾನ ಪಡೆದಿದ್ದವು. ಅಧಿಕಾರದಿಂದ ಕಾಂಗ್ರೆಸನ್ನು ದೂರವಿಡಲು ಮತದಾರ ಪ್ರಭು ನೀಡಿದ ಜನಾದೇಶವನ್ನು ಕಸದ ಬುಟ್ಟಿಗೆ ಎಸೆಯಲಾಯಿತು. ಮತ್ತೆ ಕಾಂಗ್ರೆಸ್ ಅಧಿಕಾರ ಹಿಡಿಯಿತು. ಈ ಹೊತ್ತಿನಲ್ಲಿ ರೆಸಾರ್ಟ್ ರಾಜಕಾರಣ ನಡೆಸಿದ್ದು ಕುಮಾರಸ್ವಾಮಿ. ಬಿಜೆಪಿ ಜೊತೆ ವ್ಯವಹಾರ ಕುದುರಿಸಿ, ಮುಖ್ಯಮಂತ್ರಿ ಕುರ್ಚಿ ಹತ್ತಿಯೇ ಬಿಟ್ಟರು.&lt;br /&gt;&lt;br /&gt;ತಾವು ಮುಖ್ಯಮಂತ್ರಿ ಕುರ್ಚಿ ಹತ್ತಿದ ವಿಧಾನ ಸರಿಯಿಲ್ಲ ಎಂಬುದು ಜೆಡಿಎಸ್ ಗೆ ಗೊತ್ತಿತ್ತು. ಅಪರಾಧಿ ಪ್ರಜ್ಞೆ ಬಿಜೆಪಿಯಲ್ಲೂ ಇತ್ತು. ಜನರ ಅಸಹ್ಯವನ್ನು ಅಳಿಸಿಹಾಕಲು ಒಳ್ಳೆ ಸರ್ಕಾರವನ್ನು ನೀಡುವ ಅನಿವಾರ್ಯತೆ ದೋಸ್ತಿಗಳ ಮುಂದಿತ್ತು. ಈ ನಿಟ್ಟಿನಲ್ಲಿ ಹತ್ತಾರು ಜನಪರ ಕಾರ್ಯಕ್ರಮಗಳು ಜಾರಿಗೆ ಬಂದವು. ಕಳೆದ 50ವರ್ಷಗಳಲ್ಲಿ ಆಗದ ಕೆಲಸಗಳು ಬರೀ 20ತಿಂಗಳಲ್ಲಿ ಆದವು ಎಂಬುದನ್ನು ವಿರೋಧಿಗಳೂ ಸಹಾ ಒಪ್ಪುತ್ತಾರೆ. ಕುಮಾರಸ್ವಾಮಿ ಜನಸಾಮಾನ್ಯರ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡರು. ಎಲ್ಲವೂ ಓಕೆ. ಆದರೆ ಅವರು ಸಂಪಾದಿಸಿದ ಪುಣ್ಯವೆಲ್ಲ, ಈಗ ನೀರು ಪಾಲು.&lt;br /&gt;&lt;br /&gt;ಮುಖ್ಯಮಂತ್ರಿ ಸ್ಥಾನ ಪಡೆಯಲು ಈವರೆಗೆ, ಮೌನವೇ ಆಭರಣ ಎಂಬಂತೆ ವರ್ತಿಸಿದ ಯಡಿಯೂರಪ್ಪ ಈಗ ನಿಧಾನವಾಗಿ ಬಾಯಿ ಬಿಡುತ್ತಿದ್ದಾರೆ. ಕೈಗೆ ಬಂದದ್ದು, ಬಾಯಿಗೆ ಬರಲಿಲ್ಲವಲ್ಲ ಎಂಬ ನೋವು ಅವರ ಮನದಾಳದಲ್ಲಿ. ನಂಬಿದ ದೇವರು ನಡುನೀರಲ್ಲಿ ಕೈಬಿಟ್ಟನಲ್ಲ ಎಂಬುದು ಅವರ ಬಾಧೆ.&lt;br /&gt;&lt;br /&gt;2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿ ನಿಂತಾಗ, ಯಡಿಯೂರಪ್ಪ ಮನೆಯ ಸೂಟ್ ಕೇಸ್ ನಲ್ಲಿದ್ದ ಇಸ್ತ್ರಿ ಮಾಡಿದ್ದ ಸಫಾರಿಯನ್ನು ಹೊರ ತೆಗೆದಿದ್ದರು. ಹೇಗಾದರೂ ಮಾಡಿ ಮುಖ್ಯಮಂತ್ರಿಯಾದರೆ ಸಾಕು ಎಂದು ಕಂಡಕಂಡವರ ಕಾಲು ಹಿಡಿದರು. ಆದರೆ ಎಲ್ಲರೂ ಕೈಕೊಟ್ಟರು. ದೇವೇಗೌಡ ಮುನಿಸಿಕೊಂಡರೂ, ಗೌಡಾಜೀ ಎಂದು ಬಾಗಿಲಲ್ಲಿ ನಿಲ್ಲುತ್ತಿದ್ದರು. ಆದರೆ ಯೂವುದು ಫಲ ನೀಡಲಿಲ್ಲ. ಯಡಿಯೂರಪ್ಪ ಅವರನ್ನು ನೋಡಿದರೆ ಒಂದು ಕಡೆ ಅನುಕಂಪ, ಇನ್ನೊಂದು ಕಡೆ ಅಸಹ್ಯ.&lt;br /&gt;&lt;br /&gt;ನಾಟಕ ಅರ್ಧಕ್ಕೆ ಮುಗಿದಿದೆ. ಜಮ್ಮ ಮತ್ತು ಕಾಶ್ಮೀರ ಮಾದರಿಯಲ್ಲಿ ರಚನೆಯಾದ ಸರ್ಕಾರ, ಅರ್ಧದಲ್ಲೇ ಕುಸಿದಿದೆ. ಕಳ್ಳನನ್ನು ನಂಬಿದರೂ, ಸುಳ್ಳನನ್ನು ನಂಬಬಾರದು ಎಂಬ ಭಾವ ಬಿಜೆಪಿಯಲ್ಲಿದೆ. ಈ ಸಮಯದಲ್ಲಿ ಕಾಂಗ್ರೆಸ್, ತನ್ನ ಮನೆಯ ಬಾಗಿಲು ತೆರೆದುಕೊಂಡು ಕುಳಿತಿದೆ.. ಜೆಡಿಎಸ್ ಒಳಗೆ ಕಾಲಿಟ್ಟರೇ ಸಾಕು ಎಂಬುದು ಅದರ ಮನಸ್ಥಿತಿ. ರಾಜ್ಯ ರಾಜಕಾರಣವನ್ನು ರಾಜ್ಯಪಾಲರು ನೋಡುತ್ತಿದ್ದಾರೆ. ಅವರು ಏನ್ ಮಾಡ್ತಾರೋ ನೋಡೋಣ.ನೋಡೋದಷ್ಟೇ ಸದ್ಯಕ್ಕೆ ಮತದಾರ ಪ್ರಭುವಿನ ಅನಿವಾರ್ಯತೆ.&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-646228791741345415?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/646228791741345415/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=646228791741345415' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/646228791741345415'/><link rel='self' type='application/atom+xml' href='http://www.blogger.com/feeds/2189102912389204330/posts/default/646228791741345415'/><link rel='alternate' type='text/html' href='http://kanasinaramane.blogspot.com/2007/10/20.html' title='20ತಿಂಗಳ ಸಂಸಾರಕ್ಕೆ ಬೆಂಕಿಬಿದ್ದಿದೆ! ಈಗ ಮರು ಮದುವೆ?'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-6259292385726112277</id><published>2007-09-08T16:22:00.000+05:30</published><updated>2008-12-11T09:19:23.228+05:30</updated><title type='text'>ಅವಳ ಮೇಲೆ ಹಸಿದ ಹೆಬ್ಬುಲಿಯಂತೆ ಅವನೇಕೆ ಹಾರುತ್ತಾನೆ?</title><content type='html'>&lt;a href="http://4.bp.blogspot.com/_eDo9m8Nl3wg/RuKBNg4J0MI/AAAAAAAAACU/AY_snRm3mjI/s1600-h/rape-victim1.jpg"&gt;&lt;img id="BLOGGER_PHOTO_ID_5107786996555305154" style="FLOAT: left; MARGIN: 0px 10px 10px 0px; CURSOR: hand" alt="" src="http://4.bp.blogspot.com/_eDo9m8Nl3wg/RuKBNg4J0MI/AAAAAAAAACU/AY_snRm3mjI/s320/rape-victim1.jpg" border="0" /&gt;&lt;/a&gt;&lt;br /&gt;&lt;div&gt;'ನನಗೆ ಒಬ್ಬ ಮಗ. ಅವನನ್ನು ಮತ್ತು ನನ್ನನ್ನು ನೋಡಿಕೊಳ್ಳುವುದಕ್ಕೆ, ಜೊತೆಗೆ ಅಡುಗೆ ಮಾಡುವುದಕ್ಕೆ ಒಬ್ಬ ಹೆಂಗಸು ಬೇಕು. ಅಡುಗೆಯವಳನ್ನು ಇಟ್ಟುಕೊಂಡರೆ ಅವಳು ಮನೆಯವಳಾಗುವುದಿಲ್ಲ. ಅವಳಿಗೆ ಸಂಬಳಗಿಂಬಳ ಕೊಡಬೇಕಾಗುತ್ತದೆ. ಅದಕ್ಕೆ ನಾನು ಮದುವೆಯಾಗಲು ನಿರ್ಧರಿಸಿದೆ. ನಿಮ್ಮ ಮಗಳನ್ನು ಕೊಟ್ಟರೇ, ನಾನು ಮದುವೆಯಾಗುತ್ತೇನೆ' ಇದು ಈಟೀವಿಯಲ್ಲಿ ರಾತ್ರಿ 10ಕ್ಕೆ'ಮಂಥನ'ಸೀರಿಯಲ್ ನಲ್ಲಿ ಬರುವ ಒಂದು ಸಂಭಾಷಣೆ ತುಣುಕು. &lt;/div&gt;&lt;div&gt; &lt;/div&gt;&lt;div&gt;&lt;br /&gt;ಅಡುಗೆ ಕೆಲಸಕ್ಕಾಗಿ ಮತ್ತು ಅಗತ್ಯಗಳ ಪೂರೈಕೆಗಾಗಿ ಮದುವೆಯಾಗುತ್ತಿರುವುದಾಗಿ ಆ ಪಾತ್ರಧಾರಿ ಸ್ಪಷ್ಟವಾಗಿ ಹೇಳುತ್ತಾನೆ. ಇತರರು ಹೇಳುವುದಿಲ್ಲ. ಅಷ್ಟೇ ವ್ಯತ್ಯಾಸ. ಆದರೆ ಪುರುಷ ಪ್ರಧಾನ ಸಮಾಜ ಬಾಯಲ್ಲಿ ಹೇಳುವುದೇ ಬೇರೆ, ಕೃತಿಯಲ್ಲಿ ಮಾಡುವುದೇ ಬೇರೆ! &lt;/div&gt;&lt;div&gt; &lt;/div&gt;&lt;div&gt;&lt;br /&gt;ಹೆಣ್ಣೆಂದರೆ ಹೂವು, ಹೆಣ್ಣೆಂದರೆ ಚೆಲುವು, ಹೆಣ್ಣೆಂದರೆ ಅಮೃತ, ಹೆಣ್ಣೆಂದರೆ ಸ್ವರ್ಗ.. ಹೀಗೆ ಹೆಣ್ಣನ್ನು ನಾನಾ ರೀತಿ ಹೊಗಳಿ ಅಟ್ಟಕ್ಕೇರಿಸುವುದನ್ನು ಪುರುಷರು ನಿಲ್ಲಿಸಿಲ್ಲ. ಮತ್ತೊಂದು ಕಡೆ ಹೆಣ್ಣನ್ನು ಬಹು ಮಂದಿ ಆಸೆ ಮತ್ತು ಅಗತ್ಯಗಳ ಪೂರೈಸುವ ಭೋಗ ವಸ್ತುವಿನಂತೆಯೇ ನೋಡುತ್ತಾ ಬಂದಿದ್ದಾರೆ. &lt;/div&gt;&lt;div&gt; &lt;/div&gt;&lt;div&gt;&lt;br /&gt;ಹೆಣ್ಣಿನ ಸ್ವಾತಂತ್ರ್ಯದ ಪ್ರಶ್ನೆ ಒಂದು ಕಡೆ ಇರಲಿ, ಅವಳು ಬಾಳುವುದಕ್ಕೆ ಅವಕಾಶ ನೀಡುತ್ತಿಲ್ಲ. ಅನ್ನಪೂರ್ಣೆಯೆಂದು ಹಾಡಿಹೊಗಳುವ ಭಾರತದಲ್ಲೂ ಹೆಣ್ಣಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ವಿಶ್ವದೆಲ್ಲೆಡೆ ಹೆಣ್ಣಿನ ಮೇಲೆ ನಿತ್ಯ ಅತ್ಯಾಚಾರ! ಅಮೆರಿಕಾದಲ್ಲಂತೂ ಲೈಂಗಿಕ ಶೋಷಣೆ ಪ್ರಕರಣಗಳಿಗೆ ಲೆಕ್ಕವೇ ಇಲ್ಲ. &lt;/div&gt;&lt;div&gt; &lt;/div&gt;&lt;div&gt;&lt;br /&gt;ಅಮೆರಿಕಾದಲ್ಲಿ ಪ್ರತಿ ಆರು ನಿಮಿಷಕ್ಕೆ ಒಂದರಂತೆ ಲೈಂಗಿಕ ಕಿರುಕುಳ ಅಥವಾ ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ನೊಂದು ಬಳಲಿದ ಮಹಿಳೆಯ ಆಕ್ರಂಧನ, ನಾಲ್ಕು ಗೋಡೆಗಳ ದಾಟುತ್ತಿಲ್ಲ. ಲಭ್ಯವಿರುವ ಅಂಕಿ ಅಂಶಗಳು ಹೇಳುವಂತೆ ಶೇ.85ರಷ್ಟು ದಾಳಿಗಳು ಮತ್ತು ಶೇ.84ರಷ್ಟು ಅತ್ಯಾಚಾರಗಳು ವರದಿಯಾಗುವುದಿಲ್ಲ. ಊಹಿಸಿ ಕಾಮುಕ ಪುರುಷರ ದೌರ್ಜನ್ಯದ ಪರಮಾವಧಿ ಎಷ್ಟಿದೆ ಎಂಬುದನ್ನು? &lt;/div&gt;&lt;div&gt; &lt;/div&gt;&lt;div&gt;&lt;br /&gt;ಪುರಾಣಗಳಲ್ಲಿ ಒಬ್ಬೊಬ್ಬ ದುಶ್ಯಾಸನ ಮತ್ತು ಕೀಚಕರಿದ್ದರು. ಆದರೆ ಇಂದು? ಈ ಆಧುನಿಕ ದುಶ್ಯಾಸನರಿಂದ ರಕ್ಷಿಸಲು, ಮಾನ ಕಾಯಲು ಕೃಷ್ಣ ಪರಮಾತ್ಮ ಎಷ್ಟು ಉದ್ದದ ಸೀರೆ ನೀಡಿದರೂ ಫಲಕಾರಿಯಾಗುವುದಿಲ್ಲ. &lt;/div&gt;&lt;div&gt; &lt;/div&gt;&lt;div&gt;&lt;br /&gt;ನಾವು ಇಂಟರ್ ನೆಟ್ ಬಿಚ್ಚಿಕೊಂಡು ಕೂತರೇ, ಅತ್ಯಾಚಾರಕ್ಕೆ ಒಳಗಾದ ಸಾವಿರಾರು ನತದೃಷ್ಟರ ಕತೆಗಳು ಕಣ್ಮುಂದೆ ಬರುತ್ತವೆ. ಅದಿರಲಿ ಪುರುಷ ಯಾಕೆ ಅತ್ಯಾಚಾರ ಮಾಡುತ್ತಾನೆ ಎಂಬ ಬಗ್ಗೆ ಎಲ್ಲೂ ಸ್ಪಷ್ಟವಾದ ಉತ್ತರ ಸಿಗುವುದಿಲ್ಲ. &lt;/div&gt;&lt;div&gt; &lt;/div&gt;&lt;div&gt;&lt;br /&gt;ಒಂದೇ ಸಮನೇ ಹುಡುಗಿಯ ಹಿಂದೆ ಸುತ್ತಿದ ಪ್ರೇಮಿ(ಇವನೆಂಥಾ ಪ್ರೇಮಿ?), ಹುಡುಗಿ ಅಡ್ಡಡ್ಡ ತಲೆಯಾಡಿಸಿ ಒಲ್ಲೆ ಎಂದರೆ, ರಾಕ್ಷಸನಾಗುತ್ತಾನೆ. ಕೊನೆಗೆ ಯಾವುದೋ ಆಸಿಡ್ ತಂದು ತಲೆ ಮೇಲೆ ಸುರಿಯುತ್ತಾನೆ. ಯಾಕೆ ಹೀಗೆ? ತನ್ನ ವಿಫಲ ಪ್ರೇಮದ ನೋವು ನುಂಗಲು ಹೀಗೆ ಮಾಡುತ್ತಾನೆಯೇ? ಸೇಡಿನಿಂದ ಹೀಗೆ ಮಾಡುತ್ತಾನೆಯೇ? ಅಥವಾ ತನ್ನ ಶಕ್ತಿ ಪ್ರದರ್ಶನಕ್ಕಾಗಿ ಈ ಕೆಲಸ ಮಾಡುತ್ತಾನೆಯೇ? &lt;/div&gt;&lt;div&gt; &lt;/div&gt;&lt;div&gt;&lt;br /&gt;ಮನಶಾಸ್ತ್ರಜ್ಞರ ಪ್ರಕಾರ; ಅತ್ಯಾಚಾರ ಎನ್ನುವುದು ಒಬ್ಬ ದುರ್ಬಲ ವ್ಯಕ್ತಿ, ತನ್ನ ಶಕ್ತಿ ಸಾಮಾರ್ಥ್ಯ ಪ್ರದರ್ಶಿಸಲು ಬಳಸಿಕೊಳ್ಳುವ ಸಂದರ್ಭ. ಲೈಂಗಿಕ ತೃಷೆ ತೀರಿಸಿಕೊಳ್ಳುವ ಒಂದು ಯತ್ನ. &lt;/div&gt;&lt;div&gt; &lt;/div&gt;&lt;div&gt;&lt;br /&gt;ಬದುಕಿನಲ್ಲಿ ಯಶಸ್ಸು ಕಾಣದ ವ್ಯಕ್ತಿಯೊಬ್ಬ ತನ್ನ ಕೊರತೆಗಳನ್ನು ಅತ್ಯಾಚಾರದ ಮುಖಾಂತರ ತುಂಬಿಕೊಳ್ಳಲು ಯತ್ನಿಸುತ್ತಾನೆ. ಈ ಯತ್ನದಲ್ಲಿ ಸೋಲದಿರಲು ಅಸಹಾಯಕರು, ಮುಗ್ದರು, ಮಕ್ಕಳು ಮತ್ತು ಅಮಾಯಕ ಹೆಣ್ಣುಮಕ್ಕಳನ್ನೇ ಹುಡುಕುತ್ತಾನೆ.&lt;br /&gt;ಇಷ್ಟು ಮಾತ್ರವಲ್ಲ ತೀವ್ರ ಒತ್ತಡಕ್ಕೆ ಒಳಗಾದ ವ್ಯಕ್ತಿ, ಹೆಣ್ಣಿಗೆ ಪಾಠ ಕಲಿಸಲು ಅತ್ಯಾಚಾರವನ್ನು ಮಾಡುತ್ತಾನೆ. ಶಕ್ತಿ ಪ್ರದರ್ಶನದ ಮುಖಾಂತರ, ಹಿಂಸೆ ಮುಖಾಂತರ, ಬೆದರಿಕೆ ಮುಖಾಂತರ ಅತ್ಯಾಚಾರ ಮಾಡಿ, ಹುಸಿ ಗೆಲುವನ್ನು ತನ್ನದಾಗಿಸಿಕೊಳ್ಳುತ್ತಾನೆ. ಮಾದಕ ವಸ್ತುಗಳ ಸೇವನೆ, ಹಾರ್ಮೋನ್ ಗಳ ಏರಿಳಿತಗಳೂ ಸಹಾ ಅತ್ಯಾಚಾರಕ್ಕೆ ದಾರಿ ಮಾಡಬಹುದು ಎನ್ನುತ್ತಾಓರೆ ವಿಜ್ಞಾನಿಗಳು. &lt;/div&gt;&lt;div&gt; &lt;/div&gt;&lt;div&gt;&lt;br /&gt;ಯಾರು ಏನೇ ಹೇಳಲಿ.. ಅತ್ಯಾಚಾರ ಮಾಡುವುದು ಎಷ್ಟು ತಪ್ಪೋ, ಅತ್ಯಾಚಾರಕ್ಕೆ ಒಳಗಾಗುವುದೂ ಅಷ್ಟೇ ತಪ್ಪು! ನನ್ನ ವಾದ ವಿಚಿತ್ರವಾಗಿ ತೋರಬಹುದು. ಆದರೆ ಒಂದು ಕ್ಷಣ ಯೋಚಿಸಿ. ಇಂತಹ ಸಂದರ್ಭಗಳು ಬಾರದಂತೆ ಅನೇಕ ಸಲ ನಾವು ಎಚ್ಚರವಹಿಸಬಹುದು.ಇಂತಹ ಸಂದರ್ಭಗಳು ಎದುರಾದರೆ, ನಮ್ಮನ್ನು ನಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಪೂರ್ವಸಿದ್ಧತೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಬಲ್ಲವರು ಹೇಳಿದರೆ ಒಳ್ಳೆಯದು. &lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-6259292385726112277?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/6259292385726112277/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=6259292385726112277' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/6259292385726112277'/><link rel='self' type='application/atom+xml' href='http://www.blogger.com/feeds/2189102912389204330/posts/default/6259292385726112277'/><link rel='alternate' type='text/html' href='http://kanasinaramane.blogspot.com/2007/09/blog-post.html' title='ಅವಳ ಮೇಲೆ ಹಸಿದ ಹೆಬ್ಬುಲಿಯಂತೆ ಅವನೇಕೆ ಹಾರುತ್ತಾನೆ?'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_eDo9m8Nl3wg/RuKBNg4J0MI/AAAAAAAAACU/AY_snRm3mjI/s72-c/rape-victim1.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-8298274984847330542</id><published>2007-08-21T09:45:00.000+05:30</published><updated>2008-12-11T09:19:23.273+05:30</updated><title type='text'>ಗಂಡಂದಿರ ಗೋಳಿನ ಕತೆಗಳಿಗೆ ಇಲ್ಲವೇ ಕೊನೆ?</title><content type='html'>&lt;a href="http://4.bp.blogspot.com/_eDo9m8Nl3wg/Rspoeg4J0LI/AAAAAAAAACM/4rwduYp3LeI/s1600-h/harassment1.jpg"&gt;&lt;img id="BLOGGER_PHOTO_ID_5101004401381331122" style="FLOAT: right; MARGIN: 0px 0px 10px 10px; CURSOR: hand" alt="" src="http://4.bp.blogspot.com/_eDo9m8Nl3wg/Rspoeg4J0LI/AAAAAAAAACM/4rwduYp3LeI/s320/harassment1.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ! ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ.&lt;/span&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;span style="color:#333333;"&gt;ಮೋಹನ್ ಮತ್ತು ಮಂಗಳಾ ಹೊಸ ದಂಪತಿಗಳು. ಮದುವೆಯಾಗಿ ಮೊನ್ನೆಗಷ್ಟೇ 9ತಿಂಗಳು ಪೂರ್ಣಗೊಂಡಿವೆ. ಪ್ರತಿರಾತ್ರಿಯೂ ಬೇರೆ ಮನೆ ಮಾಡಿ, ಇಲ್ಲಿ ನನಗೆ ಉಸಿರುಗಟ್ಟುತ್ತಿದೆ ಎಂದು ಮಂಗಳಾ ಹೇಳುತ್ತಲೇ ಇದ್ದಾಳೆ. ಮೋಹನ್ ಮನೆಗೆ ಹಿರಿಯ ಮಗ. ತಂಗಿ ಮದುವೆ, ತಮ್ಮನ ವಿದ್ಯಾಭ್ಯಾಸ, ಅಪ್ಪ ಅಮ್ಮನ ಆರೈಕೆ ಮತ್ತಿತರ ಜವಾಬ್ದಾರಿಗಳು ಅವನ ಮೇಲಿದೆ. ಈಗ ಮನೆಯಿಂದ ಕಾಲ್ ಕಿತ್ತರೆ ಚೆನ್ನಾಗಿರುವುದಿಲ್ಲ ಎಂಬ ತಿಳಿವಳಿಕೆ ಅವನಿಗಿದೆ. ಹೆಂಡತಿಗಾಗಿ ಹೆತ್ತವರ ಬಿಡಲು ಆತನಿಗೆ ಮನಸ್ಸಿಲ್ಲ.&lt;/span&gt;&lt;/div&gt;&lt;br /&gt;&lt;div&gt;&lt;span style="color:#333333;"&gt;&lt;/span&gt;&lt;/div&gt;&lt;br /&gt;&lt;div&gt;ಮಂಗಳಾ ಹಟ ಮಾತ್ರ ದಿನೇದಿನೇ ಹೆಚ್ಚುತ್ತಿದೆ. ಹಬ್ಬಕ್ಕೆಂದು ತವರಿಗೆ ಹೋದವಳು, ಮತ್ತೆ ಗಂಡನ ಮನೆಗೆ ಬರಲೇ ಇಲ್ಲ. ಬಾ ಎಂದು ಗಂಡ ಕರೆದರೆ, ಬೇರೆ ಮನೆ ಮಾಡು ಎನ್ನುವ ಶರತ್ತು ಅವಳಿಂದ. ಕೊನೆಗೆ ಬೇಸತ್ತ ಮೋಹನ, ಬೇರೆ ಮನೆ ಮಾಡುವುದು ಅಸಾಧ್ಯ ಎಂದು ಘೋಷಿಸುತ್ತಾನೆ. ಆಗ ಮಂಗಳಾ ತನ್ನ ನಿಜ ಬಣ್ಣ ಪ್ರದರ್ಶಿಸುತ್ತಾಳೆ.ನಿಮ್ಮ ಜೊತೆಗೆ ನಿಮ್ಮ ಅಪ್ಪಅಮ್ಮನ ವಿರುದ್ಧವೂ ನಾನು ಪೊಲೀಸರಿಗೆ ದೂರು ನೀಡುತ್ತೇನೆ. ವರದಕ್ಷಿಣೆಗಾಗಿ ನನ್ನನ್ನು ಹಿಂಸಿಸುತ್ತಿರುವುದಾಗಿ ಹೇಳುತ್ತೇನೆ ಎಂದು ಮಂಗಳಾ ಬ್ಲಾಕ್ ಮೇಲ್ ಶುರುಮಾಡುತ್ತಾಳೆ. ಮೋಹನ್ ಜಾಗದಲ್ಲಿ ನೀವಿದ್ದರೆ ಏನು ಮಾಡುವಿರಿ?&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;***&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಸೆಪ್ಟೆಂಬರ್ 11ರ ಘಟನೆಯಿಂದ ಪ್ರವೀಣ್ ಕಂಗೆಟ್ಟಿದ್ದಾನೆ. ಅಮೆರಿಕವೂ ಸಾಕು, ಅಲ್ಲಿನ ಕೆಲಸವೂ ಸಾಕು ಎಂದು ಅಡ್ಡಡ್ಡ ಕೈಮುಗಿದು, ತವರಿಗೆ ಮರಳಿದ್ದಾನೆ. ಭಾರತದಲ್ಲಿಯೇ ಏನಾದರೂ ಮಾಡುವ ಹಂಬಲ ಅವನದು. ಆದರೆ ಆತನ ಪತ್ನಿ ನಾಗಮಣಿಗೆ ಇದೆಲ್ಲವೂ ಇಷ್ಟವಿಲ್ಲ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಗಂಡ ಮತ್ತೆ ಅಮೆರಿಕಾಗೆ ಹೋಗಬೇಕು. ಡಾಲರ್ ಗಟ್ಟಲೇ ದುಡಿಯಬೇಕು. ಅವನು ಒಲ್ಲೆ ಎಂದ ತಕ್ಷಣ,ನಾಗಮಣಿ ಬುಸ್ ಬುಸ್ ಎನ್ನುತ್ತಾಳೆ. ವರದಕ್ಷಿಣೆ ಕೇಸಿನ ಪ್ರಸ್ತಾಪವಾಗುತ್ತದೆ.ಪ್ರವೀಣ್ ತನ್ನ ಹೆಂಡತಿಯ ಬೆದರಿಕೆಗೆ ಸೊಪ್ಪು ಹಾಕುವುದಿಲ್ಲ. ನಿಜಕ್ಕೂ ಪೊಲೀಸ್ ಠಾಣೆ ಮೆಟ್ಟಿಲು ಹತ್ತುವ ನಾಗಮಣಿ ಪ್ರವೀಣ್ ವಿರುದ್ಧ ಸುಳ್ಳು ದೂರು ಸಲ್ಲಿಸುತ್ತಾಳೆ. ಕೋರ್ಟಲ್ಲಿ ಕೇಸು ನಡೆಯುತ್ತದೆ. ತನ್ನ ಚಾರಿತ್ರ್ಯವನ್ನು ಸಾಬೀತು ಪಡಿಸಿಕೊಳ್ಳಲು ಪ್ರವೀಣ ಪಡುವ ಕಷ್ಟ, ಆದ ಅವಮಾನಕ್ಕೆ ಯಾರು ಪರಿಹಾರ ನೀಡುತ್ತಾರೆ?&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;***&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮೇಲಿನ ಎರಡು ಪ್ರಕರಣಗಳ ಓದಿದಾಗಲೇ, ನಿಮಗೆ ವಿಚಾರ ಅರ್ಥವಾಗಿದೆ ಎಂದು ನಾನು ಭಾವಿಸುತ್ತೇನೆ. ಹೌದು ವರದಕ್ಷಿಣೆ ಕಿರುಕುಳ ತಡೆ ಕಾಯ್ದೆಯ ದುರುಪಯೋಗ ಇಂದು ಹೆಚ್ಚುತ್ತಿದೆ. ಈ ಕಾಯ್ದೆ ಎಷ್ಟು ನ್ಯಾಯಪರವಾಗಿದೆ ? ಎಂಬ ಪ್ರಶ್ನೆ ಈದಿನಗಳಲ್ಲಿ ಪ್ರಸ್ತುತ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಈ ಕಾಯ್ದೆಯ ಅಡ್ಡಪರಿಣಾಮಗಳ ಬಗ್ಗೆ ಕಾನೂನು ಪಂಡಿತರು ಯೋಚಿಸಿಲ್ಲ. ನೊಂದು ಬೆಂದ ಹೆಂಗಳೆಯರ ರಕ್ಷಣೆಗಾಗಿ ರೂಪುಗೊಂಡ ವರದಕ್ಷಿಣೆ ಕಾಯ್ದೆ, ಇಂದು ಅನೇಕ ಅಮಾಯಕ ಪುರುಷರ ಪಾಲಿಗೆ ಸಿಂಹಸ್ವಪ್ನವಾಗಿದೆ. ಈ ಕಾಯ್ದೆಯನ್ನಿಟ್ಟುಕೊಂಡು ಕೆಲ ದುಷ್ಟ ಮಹಿಳೆಯರು ಶೋಷಿಸುತ್ತಿದ್ದಾರೆ. ದುರಂತವೆಂದರೆ ಪೋಷಕರು ಮತ್ತು ಕೆಲ ಮಹಿಳಾ ಪರ ಸಂಘಟನೆಗಳು ಈ ಕೃತ್ಯದಲ್ಲಿ ಭಾಗಿಯಾಗುತ್ತಿವೆ. ಸುಳ್ಳು ದೂರುಗಳಿಂದಾಗಿ ಅನೇಕ ಅಮಾಯಕರು ಮತ್ತು ಮುಕ್ತರು ಜೈಲು ಪಾಲಾಗಿದ್ದಾರೆ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನ್ಯಾಯಾಂಗದಲ್ಲಿನ ಯಾವ ಕಾನೂನು ಸಹಾ ಪುರುಷರ ರಕ್ಷಣೆಗೆ ಇಲ್ಲ. ಎಲ್ಲವೂ ಮಹಿಳೆಯರ ಪರವಾಗಿಯೇ ಇವೆ. ಮದುವೆಯಾದ ಪುರುಷರ ಗೌರವ ಮತ್ತು ಹಕ್ಕುಗಳ ಸಂರಕ್ಷಣೆಗಾಗಿ ಒಂದು ಕಾಯ್ಯೆದೆಯನ್ನು ರೂಪಿಸುವಂತೆ ಆಗಾಗ ಕೆಲ ಸಂಘಟನೆಗಳು ಒತ್ತಾಯಿಸುತ್ತಾ ಬಂದಿವೆ. ಮಾನವ ಹಕ್ಕುಗಳ ದಿನದಂದು ಇಂತಹ ಧ್ವನಿಗಳು ಹೆಚ್ಚು ಕೇಳಿ ಬರುತ್ತವೆ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಪತ್ನಿಯಿಂದಾದ ಶೋಷಣೆಯ ವಿರುದ್ಧ ದೂರು ನೀಡುವ ಗಂಡಂದಿರಿಗೆ ನ್ಯಾಯಾ ಸಿಗುತ್ತಿಲ್ಲ. ಕೆಲವೆಡೆ ವಿಚಾರಣೆ ನಾಟಕವೂ ಇಲ್ಲ. ದೆಹಲಿ, ಮುಂಬೈ, ಕೋಲ್ಕತಾ ಮತ್ತಿತರ ಪಟ್ಟಣದಲ್ಲಿ ಶೋಷಿತ ಪತಿಯಂದಿರ ಸಂಖ್ಯೆ ಹೆಚ್ಚುತ್ತಿದೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;'ನಿಮ್ಮ ಹೆಂಡತಿ ನಿಮ್ಮನ್ನು ಶೋಷಿಸುತ್ತಾಳಾ? ಕೂಡಲೇ ಈ ಸಂಖ್ಯೆಗೆ ಕಾಲ್ ಮಾಡಿ' ಎನ್ನುವ ಫಲಕಗಳು ನವದೆಹಲಿಯ ಜನದಟ್ಟನೆ ಪ್ರದೇಶಗಳಲ್ಲಿ ಇಂದು ಕಾಣಿಸುತ್ತವೆ. ಈ ಫಲಕಗಳಲ್ಲಿ ಒಂದು ಮೊಬೈಲ್ ಸಂಖ್ಯೆ ಇರುತ್ತದೆ. ಆ ಮೊಬೈಲ್ ಸಂಖ್ಯೆಯ ವಕೀಲ, ಶೋಷಿತ ಗಂಡಂದಿರ ರಕ್ಷಣೆಗೆ ನಿಲ್ಲುವ ಭರವಸೆ ನೀಡುತ್ತಿದ್ದಾನೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಪುರುಷರ ಪರವಾಗಿ ದೆಹಲಿಯಲ್ಲಿ ಈಗ ಅನೇಕ ಸಂಘಟನೆಗಳು ತಲೆ ಎತ್ತಿವೆ. ಕೋಲ್ಕತಾದಲ್ಲಿ ಬ್ರದರ್ ಆರ್ಗನೈಸೇಸನ್ , ಈ ನಿಟ್ಟಿನಲ್ಲಿ ಗುರ್ತಿಸಿಕೊಂಡಿದೆ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;ಇದೆಲ್ಲ ಯಾಕೆ ?&lt;/strong&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಈಗಿನ ಯುವತಿಯರು 'ನಾನು, ನನ್ನ ಗಂಡ, ನನ್ನ ಮಕ್ಕಳು' ಎಂದಷ್ಟೇ ಯೋಚಿಸುತ್ತಾರೆ. ಯೋಚನೆ ಅನುಷ್ಠಾನಕ್ಕೆ ಮುಂದಾದಾಗ, ವರದಕ್ಷಿಣೆ ಕಾನೂನು ಅವರಿಗೆ ಅಸ್ತ್ರವಾಗುತ್ತದೆ. ಮಗಳಿಗೆ ಬುದ್ಧಿ ಹೇಳಬೇಕಾದ ಅಪ್ಪ ಅಮ್ಮ, ತಮ್ಮ ಜವಾಬ್ದಾರಿ ಮರೆತು, ಮಗಳ ಬೆಂಬಲಕ್ಕೆ ನಿಲ್ಲುವ ಉದಾಹರಣೆಗಳೂ ಸಮಾಜದಲ್ಲಿವೆ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಹುಚ್ಚು ವರ್ತನೆ ಅಥವಾ ಯಾವುದೋ ಕಾರಣದಿಂದ ಮದುವೆಯಾದ ಹುಡುಗಿ ಆತ್ಮಹತ್ಯೆಗೆ ಶರಣಾದರೆ, ಅಳಿಯನ ಮೇಲೆ ಗೂಬೆ ಕೂರಿಸುವ ಅತ್ತೆ-ಮಾವಂದಿರ ಸಂಖ್ಯೆ ಕಡಿಮೆಯೇನಿಲ್ಲ.&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-8298274984847330542?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/8298274984847330542/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=8298274984847330542' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/8298274984847330542'/><link rel='self' type='application/atom+xml' href='http://www.blogger.com/feeds/2189102912389204330/posts/default/8298274984847330542'/><link rel='alternate' type='text/html' href='http://kanasinaramane.blogspot.com/2007/08/blog-post_7835.html' title='ಗಂಡಂದಿರ ಗೋಳಿನ ಕತೆಗಳಿಗೆ ಇಲ್ಲವೇ ಕೊನೆ?'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_eDo9m8Nl3wg/Rspoeg4J0LI/AAAAAAAAACM/4rwduYp3LeI/s72-c/harassment1.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-9149226802930497387</id><published>2007-08-21T09:34:00.000+05:30</published><updated>2008-12-11T09:19:23.479+05:30</updated><title type='text'>ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..</title><content type='html'>&lt;a href="http://3.bp.blogspot.com/_eDo9m8Nl3wg/RsplgQ4J0KI/AAAAAAAAACE/XTpQqujiBs0/s1600-h/friendship9.jpg"&gt;&lt;img id="BLOGGER_PHOTO_ID_5101001132911218850" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_eDo9m8Nl3wg/RsplgQ4J0KI/AAAAAAAAACE/XTpQqujiBs0/s320/friendship9.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;&lt;/span&gt;&lt;/div&gt;&lt;div&gt;&lt;span style="color:#009900;"&gt;ಸ್ನೇಹವೆಂದರೆ ವ್ಯಾಪಾರವೇ, ಸ್ನೇಹವೆಂದರೆ ಹರಟೆಯೇ, ಸ್ನೇಹವೆಂದರೆ ಬಂಧವೇ, ಸ್ನೇಹವೆಂದರೆ ಹುಚ್ಚಾಟವೇ? ಮೊನ್ನೆಯಷ್ಟೇ ಅಂತಾರಾಷ್ಟ್ರೀಯ ಸ್ನೇಹ ದಿನವನ್ನು ಎಲ್ಲೆಡೆ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಕೇಳಿ ಸ್ನೇಹದ ಮಹಾತ್ಮೆ.&lt;/span&gt;&lt;/div&gt;&lt;br /&gt;&lt;div&gt;&lt;span style="color:#009900;"&gt;&lt;/span&gt;&lt;/div&gt;&lt;br /&gt;&lt;div&gt;&lt;/div&gt;&lt;div&gt; &lt;/div&gt;&lt;div&gt; &lt;/div&gt;&lt;div&gt;*ನಾವು ಪರೀಕ್ಷೆಗೆ ಹೊರಟಾಗ ಬೆಸ್ಟ್ ಆಫ್ ಲಕ್ ಎಂದು ಹೇಳುವವ ಮಿತ್ರ. ಅದೇ ಪರೀಕ್ಷೆ ಹಾಲ್ ಗೆ ಬಂದು, ಕಾಫಿ ಚೀಟಿ ಎಸೆಯುವವ ಆಪ್ತಮಿತ್ರ! &lt;/div&gt;&lt;div&gt;&lt;br /&gt; &lt;/div&gt;&lt;div&gt;*ಏನಾದರೂ ಮಾಡಿ ನಾವು ಜೈಲು ಸೇರಿದಾಗ, ಜಾಮೀನು, ಕೋರ್ಟ್ ಎಂದು ನಮ್ಮ ಪರವಾಗಿ ಸುತ್ತಾಡುವವ ಮಿತ್ರ. ಪಕ್ಕದಲ್ಲೇ ಕೂತು, ಕಂಬಿ ಎಣಿಸುವವ ಆಪ್ತಮಿತ್ರ! &lt;/div&gt;&lt;div&gt;&lt;br /&gt; &lt;/div&gt;&lt;div&gt;ಮೇಲೆ ಪ್ರಸ್ತಾಪಿಸಿದಂತೆ ಮಿತ್ರ ಮತ್ತು ಆಪ್ತಮಿತ್ರನಿಗಿರುವ ವ್ಯತ್ಯಾಸವನ್ನು ನನ್ನ ಗೆಳೆಯ ಪ್ರಹ್ಲಾದ ಮೊನ್ನೆ ವ್ಯಾಖ್ಯಾನಿಸಿದ. ಪ್ರಹ್ಲಾದ ನಿಮಗೆ ಮಿತ್ರನೋ, ಆಪ್ತಮಿತ್ರನೋ ಎಂದು ಕೇಳಿ, ನನ್ನನ್ನು ಇಕ್ಕಟ್ಟಿಗೆ ತಳ್ಳಬೇಡಿ. ಪ್ರಹ್ಲಾದ ಹೇಳಿದ್ದು ಕುತರ್ಕ ಎಂದು ತಳ್ಳಿಹಾಕಿದರೂ, ಕೆಲವು ಸಲ ಹೌದಲ್ಲ ಅವ ಹೇಳಿದ್ದರಲ್ಲೂ ನಿಜಗಳಿವೆಯಲ್ಲ ಅನ್ನಿಸುತ್ತದೆ. &lt;/div&gt;&lt;div&gt;&lt;br /&gt; &lt;/div&gt;&lt;div&gt;ಅವನ್ಯಾರೋ, ಇವನ್ಯಾರೋ? ಗೆಳೆಯರಾಗುವ ಮುನ್ನ ಅಪರಿಚಿತರು. ನಂತರ ಫೆವಿಕಾಲ್ ಹಾಕಿದಂತೆ ಅಂಟಿಕೊಳ್ಳುತ್ತಾರೆ. ಪರಿಚಯಕ್ಕೆ ಕಾರಣಗಳಿರುತ್ತವೆಯೇ ಹೊರತು, ಗೆಳೆತನಕ್ಕೆ ಕಾರಣಗಳಿರುವುದಿಲ್ಲ. ಕಾರಣಗಳಿದ್ದರೇ, ಅದು ಗೆಳೆತನವಾಗಲು ಹೇಗೆ ಸಾಧ್ಯ?&lt;/div&gt;&lt;div&gt; &lt;/div&gt;&lt;div&gt;&lt;/div&gt;&lt;br /&gt;&lt;div&gt;ನಮ್ಮ ತಂದೆ ಹೇಳುತ್ತಿದ್ದರು. ನಾವು ಪರಿಚಿತರನ್ನೆಲ್ಲ ಗೆಳೆಯರೆಂದೇ ಕರೆಯುತ್ತೇವೆ. ಪರಿಚಿತರೇ ಬೇರೆ. ಗೆಳೆಯರೇ ಬೇರೆ. ನನ್ನ ಈ ಸುದೀರ್ಘ ಬದುಕಿನಲ್ಲಿ ನನಗೆ ಸಿಕ್ಕಿದ್ದು ಒಬ್ಬನೇ ಗೆಳೆಯ. ಅಂತ ಒಬ್ಬ ಗೆಳೆಯ ಸಿಕ್ಕರೂ ಸಾಕು,ನೂರಾನೇ ಶಕ್ತಿ ಬರುತ್ತದೆ ಎಂಬುದು ಅವರ ವಾದ. &lt;/div&gt;&lt;div&gt;&lt;br /&gt; &lt;/div&gt;&lt;div&gt;ಒಂದೇ ತರಗತಿಯಲ್ಲಿ ಓದಿದ ಮಾತ್ರಕ್ಕೆ, ಅಕ್ಕಪಕ್ಕ ಕೂತ ಮಾತ್ರಕ್ಕೆ, ಒಂದೇ ಕಚೇರಿಯಲ್ಲಿ ಕೆಲಸ ಮಾಡಿದ ಮಾತ್ರಕ್ಕೆ ಗೆಳೆಯರಾಗಲು ಸಾಧ್ಯವೇ? ಎರಡು ಹೃದಯಗಳಲ್ಲಿ ಸ್ನೇಹದ ಹೊಳೆ ಹರಿಯದಿದ್ದರೇ, ಬಂಧವೂ ಇಲ್ಲ, ಸಂಬಂಧವೂ ಇಲ್ಲ.&lt;/div&gt;&lt;div&gt; &lt;/div&gt;&lt;div&gt;&lt;/div&gt;&lt;div&gt;ಸ್ನೇಹದ ಬಗ್ಗೆ ದಿನಕ್ಕೆ ಹತ್ತು ಎಸ್ಎಂಎಸ್ ಕಳಿಸುವ ವ್ಯಕ್ತಿಯ ಬಳಿ, ಒಂದೇ ಒಂದು ಸಹಾಯ ಕೇಳಿ ನೋಡಿ. ಆತ ನಿಮಗಾಗಿ ಯಾರೋ ಕಳಿಸಿದ ಎಸ್ಎಂಎಸ್ ಗಳನ್ನಷ್ಟೇ Forward ಮಾಡುತ್ತಾರೆ. ಎಸ್ಎಂಎಸ್ ಸೇವೆ ಅವರ ಮೊಬೈಲ್ ನಲ್ಲಿ ಉಚಿತವಿದ್ದರೇ ಮಾತ್ರ. ಇಂಥವರನ್ನು ಎಸ್ಎಂಎಸ್ ಗೆಳೆಯರು ಎನ್ನಬಹುದು. &lt;/div&gt;&lt;div&gt;&lt;br /&gt; &lt;/div&gt;&lt;div&gt;ನಾನು ಪದವಿ ಓದುವಾಗ ಒಬ್ಬ ಪರಿಚಿತನಾಗಿದ್ದ. ಏನಾದರೂ ಸಹಾಯ ಬೇಕಿದ್ದರೆ ಮಾತ್ರ ಜೊತೆಯಲ್ಲಿರುತ್ತಿದ್ದ. ಈಗಲೂ ಅವನು ಕರೆ ಮಾಡಿದನೆಂದರೆ, ಮೊದಲ ಮಾತು :'ನಟೇಶ ನಿನ್ನಿಂದ ನನಗೊಂದು help ಆಗಬೇಕಿತ್ತಲ್ಲ..'ನಾನು ಇಲ್ಲ ಎಂದರೆ, ಫ್ರೆಂಡ್ ಗಾಗಿ ಇಷ್ಟೂ ಮಾಡುವುದಿಲ್ಲವೇ ಎಂಬ ಒಗ್ಗರಣೆ ಬೇರೆ ಇರುತ್ತದೆ. &lt;/div&gt;&lt;div&gt;&lt;br /&gt; &lt;/div&gt;&lt;div&gt;ಇನ್ನೂ ಕೆಲವರಿರುತ್ತಾರೆ. ಅವರಿಗೆ ಅವರ ಕಷ್ಟಗಳಷ್ಟೇ ದೊಡ್ಡವು. ಸಮಯ ಸಿಕ್ಕರೇ ಸಾಕು, ಕಷ್ಟಗಳ ಪಟ್ಟಿಯನ್ನು ಒಪ್ಪಿಸುತ್ತಿರುತ್ತಾರೆ. ಸದಾ ಅನುಕಂಪವನ್ನು ಕೋರುತ್ತಿರುತ್ತಾರೆ. ಅವರದು ಮುಗಿಯದ ಗೋಳು. ಕಷ್ಟಗಳಿಲ್ಲದ ಮನುಷ್ಯ ಜಗತ್ತಿನಲ್ಲಿ ಯಾರಿದ್ದಾನೆ ಹೇಳಿ. ಕಷ್ಟಗಳ ಮಧ್ಯೆಯೂ ಬದುಕುತ್ತಿರುವ ನಾವು ದೊಡ್ಡ ಮಹಾತ್ಮರು ಎಂದು ಬಿಂಬಿಸಿಕೊಳ್ಳುವ ಕೆಲವರ ಕಾಯಿಲೆಗೆ, ಔಷಧಿಯಿಲ್ಲ. &lt;/div&gt;&lt;div&gt;&lt;br /&gt; &lt;/div&gt;&lt;div&gt;ಜಾಗತೀಕರಣದ ಈ ದಿನಗಳಲ್ಲಿ ಗೆಳೆತನವನ್ನು ವ್ಯವಹಾರವಾಗಿ ಬದಲಿಸಿಕೊಳ್ಳಿ ಎನ್ನುವ ಸಲಹೆಗಳೂ ಇವೆ. ಎಲ್ಐಸಿ ಪಾಲಿಸಿಗಾಗಿ ಗಂಟು ಬೀಳುವ ಗೆಳೆಯರಿದ್ದಾರೆ. ನಮ್ಮ ಪಾಲಿಸಿ ಜೊತೆಗೆ, ನಮ್ಮ ಆಪ್ತರ ಪಾಲಿಸಿಗಳನ್ನೂ ಕೊಡಿಸಬೇಕಂತೆ. ಇವರನ್ನು ಪಾಲಿಸಿ ಮಿತ್ರ ಅನ್ನೋಣವೇ? &lt;/div&gt;&lt;div&gt;&lt;br /&gt; &lt;/div&gt;&lt;div&gt;ಸ್ನೇಹ ಮಾಡುವುದು ಕಷ್ಟ, ಅದನ್ನು ಉಳಿಸಿಕೊಳ್ಳುವುದು ಕಷ್ಟ ಅನ್ನುತ್ತಾರೆ ಕೆಲವರು. ಉಳಿಸಿಕೊಳ್ಳಲು ಅದೇನು ಕದ್ದ ದುಡ್ಡಾ? ಉಳಿಯಲಿಲ್ಲ ಎಂದರೆ ಅಲ್ಲಿ ಸ್ನೇಹವಿರಲಿಲ್ಲ ಎಂದರ್ಥ. ಪರಸ್ಪರ ಅವಶ್ಯಕತೆಗಳಿದ್ದವು ಅಷ್ಟೆ. &lt;/div&gt;&lt;div&gt;&lt;br /&gt; &lt;/div&gt;&lt;div&gt;ನನಗೊಬ್ಬ ಒಳ್ಳೆಯ ಗೆಳೆಯ ಸಿಕ್ಕಲಿಲ್ಲ ಎಂದು ನಾವು ಆಗಾಗ ಗೊಣಗುತ್ತಿರುತ್ತೇವೆ. ಅಥವಾ ಯಾರಿಗಾದರೂ ಹೇಳುತ್ತಿರುತ್ತೇವೆ. ಆದರೆ, 'ನಾನು ಒಳ್ಳೆ ಗೆಳೆಯನೇ?' ಈ ಪ್ರಶ್ನೆಯನ್ನು ನಮಗೆ ನಾವೇ ಕೇಳಿಕೊಳ್ಳಬೇಕು. ಯಾವುದು ನಮ್ಮತ್ರ ಇರೋದಿಲ್ವೋ ಅದನ್ನು ಇನ್ನೊಬ್ಬರಲ್ಲಿ ಹುಡುಕುವ ಸ್ವಭಾವ ನಮ್ಮದು. ಅದು ತಪ್ಪೇನಲ್ಲ ಬಿಡಿ.. &lt;/div&gt;&lt;div&gt;&lt;br /&gt; &lt;/div&gt;&lt;div&gt;ಸ್ನೇಹಕ್ಕೆ ಜೈ.. &lt;/div&gt;&lt;div&gt;&lt;br /&gt; &lt;/div&gt;&lt;div&gt;ಕೊನೆಯದಾಗಿ ಗೆಳೆತನಕ್ಕೆ ಸಂಬಂಧಿಸಿದ ಒಂದು ಎಸ್ಎಂಎಸ್ ಓದಿಕೊಳ್ಳಿ : &lt;/div&gt;&lt;div&gt;&lt;br /&gt; &lt;/div&gt;&lt;div&gt;&lt;em&gt;ಪ್ರೀತಿ ಎನ್ನುವುದು ಫ್ಯಾಷನ್&lt;/em&gt;&lt;/div&gt;&lt;div&gt;&lt;em&gt;ಗೆಳೆತನ ಎಂಬುದು ಓಷನ್&lt;/em&gt;&lt;/div&gt;&lt;div&gt;&lt;em&gt;ಫ್ಯಾಷನ್ ಬದಲಾಗುತ್ತದೆ&lt;/em&gt;&lt;/div&gt;&lt;div&gt;&lt;em&gt;ಓಷನ್ ಎಂದೂ ಬದಲಾಗದು&lt;/em&gt; &lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-9149226802930497387?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/9149226802930497387/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=9149226802930497387' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/9149226802930497387'/><link rel='self' type='application/atom+xml' href='http://www.blogger.com/feeds/2189102912389204330/posts/default/9149226802930497387'/><link rel='alternate' type='text/html' href='http://kanasinaramane.blogspot.com/2007/08/blog-post_21.html' title='ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ..'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eDo9m8Nl3wg/RsplgQ4J0KI/AAAAAAAAACE/XTpQqujiBs0/s72-c/friendship9.jpg' height='72' width='72'/><thr:total>1</thr:total></entry><entry><id>tag:blogger.com,1999:blog-2189102912389204330.post-3007364329437374620</id><published>2007-08-20T13:32:00.000+05:30</published><updated>2008-12-11T09:19:23.537+05:30</updated><title type='text'>ಈ ತರ್ಕವನ್ನು ಒಪ್ಪಿ, ನಿಮ್ಮ ಬಾಳಸಂಗಾತಿಗೂ ತಿಳಿಸಿ!</title><content type='html'>&lt;a onblur="try {parent.deselectBloggerImageGracefully();} catch(e) {}" href="http://4.bp.blogspot.com/_eDo9m8Nl3wg/RslLHw4J0JI/AAAAAAAAAB8/Ra38I6pRHRg/s1600-h/fourth_finger.jpg"&gt;&lt;img style="margin: 0pt 10px 10px 0pt; float: left; cursor: pointer;" src="http://4.bp.blogspot.com/_eDo9m8Nl3wg/RslLHw4J0JI/AAAAAAAAAB8/Ra38I6pRHRg/s320/fourth_finger.jpg" alt="" id="BLOGGER_PHOTO_ID_5100690649725390994" border="0" /&gt;&lt;/a&gt;&lt;br /&gt;&lt;span style="color: rgb(0, 153, 0);" class="kanuni"&gt;&lt;i&gt;ಇದು ತಮಾಷೆಯಂತೆ ಕಂಡರೂ, ಬದುಕಿನ ಸತ್ಯವನ್ನು ಹೊಂದಿದೆ! ಮದುವೆ ಕನಸು  ಕಂಡವರು, ಮದುವೆಗೆ ಸಿದ್ಧರಾದವರು, ಮದುವೆಯಾಗಿ ಸಂಸಾರ ನಡೆಸುತ್ತಿರುವ ಮಂದಿ, ಈ ಬಗ್ಗೆ ತಿಳಿದರೆ  ಒಳ್ಳೆಯದು. ದಾಂಪತ್ಯ ಎನ್ನುವುದು ಹಾಲು ಜೇನು.&lt;br /&gt;&lt;br /&gt;&lt;/i&gt;&lt;/span&gt;&lt;span class="kanuni"&gt;ಮದುವೆ ಸಂದರ್ಭದಲ್ಲಿ ಉಂಗುರವನ್ನು ನಾಲ್ಕನೇ ಬೆರಳಿಗೆ ಯಾಕೆ ಹಾಕುತ್ತಾರೆ? ಈ ಪ್ರಶ್ನೆಗೆ  ವಿಚಿತ್ರಾನ್ನದ ಭಟ್ಟರು ಏನೇನೋ ತರ್ಕಗಳನ್ನು ಈ ಹಿಂದೆ ಮಂಡಿಸಿದ್ದರು. ಆ ವಿಚಾರಗಳನ್ನು ಬಿಟ್ಟು,  ಎಲ್ಲರೂ ಒಪ್ಪುವಂತಹ ಮತ್ತು ಸಮಾಧಾನ ಹೊಂದುವಂತಹ ಕಾರಣವೊಂದನ್ನು ಎಲ್ಲೋ ಓದಿದ ನೆನಪು. ಅದನ್ನು  ನಿಮ್ಮ ಗಮನಕ್ಕೆ ತರುತ್ತಿದ್ದೇನೆ. ಈ ಸತ್ಯವನ್ನು ಜಗತ್ತಿಗೆ ಸಾರಿದವರು  ಚೈನಾದವರು.&lt;br /&gt;&lt;br /&gt;ಮೊದಲಿಗೆ ಹೆಬ್ಬೆರಳು ನಮ್ಮ ಹೆತ್ತವರನ್ನು ಪ್ರತಿನಿಧಿಸುತ್ತದೆ ಎಂದು  ಭಾವಿಸೋಣ. ಎರಡನೇ ಬೆರಳು(ತೋರು ಬೆರಳು) ನಮ್ಮ ಜೊತೆ ಒಡಹುಟ್ಟಿದವರನ್ನು, ಮಧ್ಯದ ಬೆರಳು  ನಮ್ಮನ್ನು, ನಾಲ್ಕನೇ ಬೆರಳು(ಉಂಗುರದ ಬೆರಳು) ಬಾಳ ಸಂಗಾತಿಯನ್ನು, ಕೊನೆಯದು ಅಂದರೆ ಕಿರುಬೆರಳು  ನಮ್ಮ ಮಕ್ಕಳನ್ನು ಪ್ರತಿನಿಧಿಸುತ್ತದೆ ಎಂದು ಕಲ್ಪಿಸಿಕೊಳ್ಳೋಣ.&lt;br /&gt;&lt;br /&gt;ಮೊದಲು ಎರಡೂ ಕೈಗಳನ್ನು  ಎದುರುಬದುರು ಇಟ್ಟುಕೊಳ್ಳಿ. ಮಧ್ಯದ ಬೆರಳನ್ನು ಬಗ್ಗಿಸಿ. ಚಿತ್ರದಲ್ಲಿರುವಂತೆ ಉಳಿದ  ಬೆರಳುಗಳನ್ನು ಜೋಡಿಸಿ.&lt;br /&gt;&lt;br /&gt;ಈಗ ನೋಡಿ ತಮಾಷೆ ನೆಪದಲ್ಲಿನ ಆಸಲಿ ಸತ್ಯ ಹೊರಬೀಳುತ್ತದೆ. ಯಾವ  ಬೆರಳನ್ನು ಕದಲಿಸದೇ, ನಿಮ್ಮ ಹೆಬ್ಬೆರಳುಗಳನ್ನು ಬೇರೆ ಮಾಡಿ. ಅದು ಸುಲಭ ಸಾಧ್ಯವಾಗುತ್ತದೆ.  ಹೆಬ್ಬೆರಳನ್ನು ಹೆತ್ತವರು ಎಂದು ಭಾವಿಸಲಾಗಿದ್ದು, ಅಪ್ಪ ಅಥವಾ ಅಮ್ಮ ಕೊನೆ ತನಕ ನಮ್ಮ ಜೊತೆ  ಇರುವುದಿಲ್ಲ ಎಂಬುದನ್ನು ಅರಿಯಬಹುದಾಗಿದೆ.&lt;br /&gt;&lt;br /&gt;ಅದೇ ರೀತಿ ಎರಡನೇ ಬೆರಳನ್ನು ಅಗಲಿಸಿ. ಅದೂ  ಸಾಧ್ಯ. ಸಹೋದರ ಅಥವಾ ಸಹೋದರಿ ಶಾಶ್ವತವಲ್ಲ. ಬೇರೆ ಬೇರೆ ಕಡೆ ವಾಸ ಮಾಡಬೇಕಾಗುತ್ತದೆ. ಅಗಲಿಕೆ  ಸಹಜವಾದದ್ದೇ ಎಂಬ ಪಾಠ ನಮಗೆ ತಿಳಿಯುತ್ತದೆ.&lt;br /&gt;&lt;br /&gt;ಅದೇ ರೀತಿ ಕಿರುಬೆರಳು(ಮಕ್ಕಳು)ಗಳ  ಅಗಲಿಸಿ. ಯಾವುದೇ ಕಷ್ಟವಿಲ್ಲದೇ ಈ ಕೆಲಸ ಮಾಡಬಹುದು. ಮದುವೆ ಮತ್ತಿರ ಕಾರಣದಿಂದ ಮಕ್ಕಳು ನಮ್ಮಿಂದ  ದೂರವಾಗುತ್ತಾರೆ ಅಲ್ಲವೇ ?&lt;br /&gt;&lt;br /&gt;ಈಗ ಉಗುರದ ಬೆರಳುಗಳನ್ನು ಅಂದರೆ ನಿಮ್ಮ ಬಾಳಸಂಗಾತಿ ಎಂದು  ಕಲ್ಪಿಸಲಾಗಿರುವ ಬೆರಳನ್ನು ದೂರ ಮಾಡಲು ಯತ್ನಿಸಿ. ಅದು ಅಸಾಧ್ಯ! ಅಂದರೆ ಅದು ಗಂಡ ಹೆಂಡತಿಯ  ನಂಟನ್ನು ವಿವರಿಸುತ್ತದೆ. ಇಬ್ಬರೂ ಸುದೀರ್ಘ ಕಾಲ ಒಬ್ಬರ ಜೊತೆ ಇನ್ನೊಬ್ಬರು ಇರಲೇ ಬೇಕು.  ಅಂಟಿಕೊಂಡು ಬದುಕಿದರೆ ಸ್ವರ್ಗ ಸುಖ ಎಂಬ ಸತ್ಯವನ್ನು ಬಿಂಬಿಸುತ್ತದೆ.&lt;/span&gt;&lt;br /&gt;&lt;br /&gt;&lt;!--end print text--&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-3007364329437374620?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/3007364329437374620/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=3007364329437374620' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/3007364329437374620'/><link rel='self' type='application/atom+xml' href='http://www.blogger.com/feeds/2189102912389204330/posts/default/3007364329437374620'/><link rel='alternate' type='text/html' href='http://kanasinaramane.blogspot.com/2007/08/blog-post_20.html' title='ಈ ತರ್ಕವನ್ನು ಒಪ್ಪಿ, ನಿಮ್ಮ ಬಾಳಸಂಗಾತಿಗೂ ತಿಳಿಸಿ!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://4.bp.blogspot.com/_eDo9m8Nl3wg/RslLHw4J0JI/AAAAAAAAAB8/Ra38I6pRHRg/s72-c/fourth_finger.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-1439669435942962838</id><published>2007-08-10T19:01:00.000+05:30</published><updated>2008-12-11T09:19:24.181+05:30</updated><title type='text'>ಬರ್ತ್ ಡೇ ಖುಷಿಯಲ್ಲಿರೋ ಮಾಲಾಶ್ರೀ ಗಮನಕ್ಕೆ..</title><content type='html'>&lt;a href="http://2.bp.blogspot.com/_eDo9m8Nl3wg/RrxqnCGfAEI/AAAAAAAAAB0/wJQ5GNBxgj8/s1600-h/malashri.jpg"&gt;&lt;img id="BLOGGER_PHOTO_ID_5097066097088069698" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_eDo9m8Nl3wg/RrxqnCGfAEI/AAAAAAAAAB0/wJQ5GNBxgj8/s320/malashri.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;ಹುಟ್ಟೋ ಹೆಣ್ಣುಮಕ್ಕಳ ಹೆಸರಿಗೆ ಶ್ರೀಗಳು ಸೇರಿಕೊಳ್ಳುವಷ್ಟು ನಟಿ ಮಾಲಾಶ್ರೀ ಜನಪ್ರಿಯರಾಗಿದ್ದರು. ಇಂದು(ಆಗಸ್ಟ್ 10) ಅವರ ಹುಟ್ಟಿದ ದಿನ.&lt;/span&gt;&lt;br /&gt;&lt;br /&gt;ಒಂದು ಕಾಲದಲ್ಲಿ ಕನ್ನಡ ಚಿತ್ರರಂಗವನ್ನು ಅಕ್ಷರಶಃ ಆಳಿದ 'ದುರ್ಗಿ' ಈ ಮಾಲಾಶ್ರೀ. ರಾಣಿ ಮಹಾರಾಣಿಯಂತೆ ಮಿಂಚಿ, ಪ್ರೇಕ್ಷಕರ ಕನಸಿನ ರಾಣಿಯಾಗಿ ನಿದ್ದೆಗೆಡಿಸಿದ್ದು ಇದೇ ಮಾಲಾಶ್ರೀ. ಅದೆಲ್ಲಾ ಈಗ ಮಾಲಾಶ್ರೀ ಪಾಲಿಗೆ ಗತ ವೈಭವ! ಆದರೆ ಈಗಲೂ ಅವರ ಬಣ್ಣದ ಮೋಹ ಇಂಗಿಲ್ಲ. ಕಿರಣ್ ಬೇಡಿಯಾಗಿ ನಿಮ್ಮ ಮುಂದೆ ನಿಲ್ಲಲ್ಲಿದ್ದೇನೆ ಎಂದು ಪತ್ರಕರ್ತರ ಬಳಿ ಅವರು ಆಗಾಗ ಹೇಳುತ್ತಿರುತ್ತಾರೆ.&lt;br /&gt;&lt;br /&gt;ನಂಜುಂಡಿ ಕಲ್ಯಾಣ ಚಿತ್ರದಿಂದ ಆರಂಭಗೊಂಡ ಮಾಲಾಶ್ರೀ ಅವರ ಚಿತ್ರಯಾತ್ರೆ, ಅನೇಕ ದಿಗ್ವಿಜಯಗಳ ಸಾಧಿಸಿದೆ. ಒಬ್ಬ ನಟನಿಗಿಂತಲೂ ಹೆಚ್ಚಿನ ಜನಪ್ರಿಯತೆ ಮತ್ತು ಶಕ್ತಿ ಅವರಿಗಿತ್ತು. ಹೀಗಾಗಿಯೇ ಒಂದು ಸಲ; 'ನನ್ನ ಜೊತೆ ನಾಯಿಮರಿ ಪಾತ್ರ ಮಾಡಿದರೂ ಚಿತ್ರ ನೂರು ದಿನ ಓಡುತ್ತೆ'ಎಂದು ಗರ್ವದಿಂದ ಮಾತನಾಡಿದ್ದರು.ಆ ಮಾತನ್ನು ಅವರು ದಕ್ಕಿಸಿಕೊಂಡಿದ್ದರು. ಆ ಮಾತು ಬಿಡಿ. ನಟನೆಯ ವಿಷಯಕ್ಕೆ ಬಂದರೆ, ಒಬ್ಬ ನಟಿಯಾಗಿ ಮಾಲಾಶ್ರೀ ಮಾಡಿದ ಪಾತ್ರಗಳು ಒಂದಕ್ಕಿಂತ ಒಂದು ವಿಭಿನ್ನ.&lt;br /&gt;&lt;br /&gt;ಗ್ಲಾಮರ್ ಪಾತ್ರಗಳಿಂದ ಹಿಡಿದು ಬಜಾರಿ ಪಾತ್ರದವರೆಗೆ, ಗಂಡುಬೀರಿಯಂತೆ ಬಡಿದಾಡುವ ಪಾತ್ರದವರೆಗೆ ಮಾಲಾಶ್ರೀ ಮಿಂಚಿದ್ದೇ ಮಿಂಚಿದ್ದು. ಆ ಮುಖಾಂತರ ದಶಕಗಳ ಕಾಲ ಕನ್ನಡ ಚಿತ್ರರಂಗದಲ್ಲಿ ನಂಬರ್ ಒನ್ ನಟಿಯಾಗಿ, ಅವರು ಇತಿಹಾಸ ನಿರ್ಮಾಣ ಮಾಡಿದವರು. ರಾಮಾಚಾರಿ, ಪೊಲೀಸನ ಹೆಂಡತಿ, ಸಿಬಿಐ ದುರ್ಗಾ, ಮಾಲಾಶ್ರೀ ಮಾಮಾಶ್ರೀ, ಎಸ್.ಪಿ.ಭಾರ್ಗವಿ, ಕಿತ್ತೂರಿನ ಹುಲಿ, ಬೆಳ್ಳಿ ಕಾಲುಂಗುರ ಚಿತ್ರಗಳು ಮಾಲಾಶ್ರೀ ಅಭಿನಯದ ಪ್ರಮುಖ ಚಿತ್ರಗಳು.&lt;br /&gt;&lt;br /&gt;ಮಗಳು ಮತ್ತು ಗಂಡನ ಜೊತೆ ಸಂತೃಪ್ತ ಗೃಹಿಣಿಯಾಗಿ ಮಾಲಾಶ್ರೀ ಇಂದು ಆರಾಮವಾಗಿದ್ದಾರೆ. ಚಿತ್ರ ನಿರ್ಮಾಣದಲ್ಲಿ ಪತಿ ದೇವರು ರಾಮುಗೆ ಸಹಕಾರ ನೀಡುತ್ತಿದ್ದಾರೆ. ಸೋಲಿನ ಮೇಲೆ ಸೋಲು ಕಂಡರೂ, ರಾಮು ಧೈರ್ಯ ಕುಂದಿಲ್ಲ. ಕಾರಣ ಅವರಿಂದೆ ಮಾಲಾಶ್ರೀ ಇದ್ದಾರೆ.&lt;br /&gt;&lt;br /&gt;ತವರು ರಾಜ್ಯ ಆಂಧ್ರಪ್ರದೇಶವನ್ನು ಮರೆಯುವಷ್ಟು ಪ್ರೀತಿಯ ಹೊಳೆ ಹರಿಸಿದ ಕನ್ನಡ ಪ್ರೇಕ್ಷಕರಿಗೆ, ಮಾಲಾಶ್ರೀ ಏನಾದರೂ ಕೊಡಬೇಕು. ಅದು ಅವರ ಕರ್ತವ್ಯ. ಜೊತೆಗೆ ಋಣದ ಪ್ರಶ್ನೆ. ಮಚ್ಚು, ಕೊಚ್ಚು ಚಿತ್ರಗಳ ಜೊತೆಗೆ ಒಂದಷ್ಟು ಸದಭಿರುಚಿಯ ಚಿತ್ರಗಳನ್ನು ನೀಡುವತ್ತ ಮಾಲಾಶ್ರೀ ಯೋಚಿಸಲಿ.&lt;br /&gt;&lt;br /&gt;ಹುಟ್ಟು ಹಬ್ಬದ ಶುಭಾಶಯ ದುರ್ಗಮ್ಮ.. ನೀನು ನೂರು ಕಾಲ ತಣ್ಣಗೆ ಬಾಳಮ್ಮ..&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-1439669435942962838?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/1439669435942962838/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=1439669435942962838' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/1439669435942962838'/><link rel='self' type='application/atom+xml' href='http://www.blogger.com/feeds/2189102912389204330/posts/default/1439669435942962838'/><link rel='alternate' type='text/html' href='http://kanasinaramane.blogspot.com/2007/08/blog-post_10.html' title='ಬರ್ತ್ ಡೇ ಖುಷಿಯಲ್ಲಿರೋ ಮಾಲಾಶ್ರೀ ಗಮನಕ್ಕೆ..'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_eDo9m8Nl3wg/RrxqnCGfAEI/AAAAAAAAAB0/wJQ5GNBxgj8/s72-c/malashri.jpg' height='72' width='72'/><thr:total>1</thr:total></entry><entry><id>tag:blogger.com,1999:blog-2189102912389204330.post-4617603133422602926</id><published>2007-08-01T18:39:00.000+05:30</published><updated>2008-12-11T09:19:24.353+05:30</updated><title type='text'>ಜಗತ್ತಿನಲ್ಲಿ ಯಾರನ್ನೂ ನಾ ಪ್ರೀತಿಸುವುದಿಲ್ಲ..</title><content type='html'>&lt;a href="http://3.bp.blogspot.com/_eDo9m8Nl3wg/RrCIeSGfADI/AAAAAAAAABs/vFS-_M04ryQ/s1600-h/Friendship.jpg"&gt;&lt;img id="BLOGGER_PHOTO_ID_5093721232392519730" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_eDo9m8Nl3wg/RrCIeSGfADI/AAAAAAAAABs/vFS-_M04ryQ/s320/Friendship.jpg" border="0" /&gt;&lt;/a&gt;&lt;br /&gt;&lt;div&gt;ನಾ ಯಾರನ್ನೂ ಪ್ರೀತಿಸುವುದಿಲ್ಲ..&lt;/div&gt;&lt;div&gt;ನನ್ನ ಪ್ರೀತಿ ಪಾತ್ರರೆಲ್ಲ ದೂರ ಬಹುದೂರ!&lt;/div&gt;&lt;div&gt;ಮತ್ತಷ್ಟು ಜನರ ಪ್ರೀತಿಸಿ &lt;/div&gt;&lt;div&gt;ನಾ ಬಾಣಲೆಯಿಂದ ಬೆಂಕಿಗೆ ಹಾರಲೇ? &lt;/div&gt;&lt;div&gt;ಕೊಟ್ಟಂತೆ ಕೊಟ್ಟು, ಮತ್ತೆ ಕಿತ್ತು ಕೊಳ್ಳುವ &lt;/div&gt;&lt;div&gt;ಅವನ ಆಟಕ್ಕೆ ನಾ ಜೋಕರ್ ಆಗಬೇಕೇ? &lt;/div&gt;&lt;br /&gt;&lt;div&gt;&lt;/div&gt;&lt;div&gt;ಅದೊಂದು ದಿನ ನಾ ಊಹಿಸಿರಲಿಲ್ಲ.. &lt;/div&gt;&lt;div&gt;ಶೂನ್ಯ ತುಂಬಿದ ಮನೆಗೆ ಬೆಳಕು ತಂದ&lt;/div&gt;&lt;div&gt;ನನ್ನ ಕಣ್ಣು ಹೊರೆಸಿದ.. ಹೆದರಬೇಡ &lt;/div&gt;&lt;div&gt;ನಾನಿದ್ದೇನೆ ಅಂದ. ಅಮ್ಮನಂತೆ ಮಡಿಲಿಗೆ&lt;/div&gt;&lt;div&gt;ಹಾಕಿಕೊಂಡು, ಜಗತ್ತು ಇಷ್ಟೇ ಅಲ್ಲ ಎಂದ&lt;/div&gt;&lt;div&gt;ಆಗ ನಮಗಿಂತ ಸುಖಿಗಳು ಇಲ್ಲ ಅನ್ನಿಸಿತು!&lt;/div&gt;&lt;br /&gt;&lt;div&gt;&lt;/div&gt;&lt;div&gt;ಜಗತ್ತಿನ ಕಣ್ ಕುಕ್ಕುವಂತೆ ಊರು ಸುತ್ತಿದೆವು&lt;/div&gt;&lt;div&gt;ಮನಸ್ಸನ್ನು ಹಗುರ ಮಾಡಿಕೊಂಡೆವು&lt;/div&gt;&lt;div&gt;ರಸ್ತೆ ಬದಿ ನಿಂತು, ಕನಸ ಹಂಚಿಕೊಂಡೆವು&lt;/div&gt;&lt;div&gt;ನೆನಪುಗಳ ಹೆಕ್ಕಿ ತೆಗೆದು, ಸಂಭ್ರಮಿಸಿದೆವು&lt;/div&gt;&lt;div&gt;ಸಿಕ್ಕಿದ್ದನ್ನೆಲ್ಲ ತಿಂದು, ತೃಪ್ತಿಯಿಂದ ತೇಗಿದೆವು!&lt;/div&gt;&lt;div&gt;ಮಳೆಯಲ್ಲಿ ನೆಂದೆವು. ಬಿಸಿಲಲ್ಲಿ ಬೆಂದೆವು&lt;/div&gt;&lt;br /&gt;&lt;div&gt;&lt;/div&gt;&lt;div&gt;ಯಾವುದೋ ಮುನಿಸು, ಯಾಕೋ ಕೋಪ&lt;/div&gt;&lt;div&gt;ಮಾತು ಇಲ್ಲವಾದಾಗ ಮೌನದಲ್ಲೂ ಮಾತು&lt;/div&gt;&lt;div&gt;ನಮ್ಮಿಬ್ಬರ ನಡುವಿನ ಸೇತುವೆ &lt;/div&gt;&lt;div&gt;ಯಾವ ಗಾಳಿ ಮಳೆಗೂ ಜಗ್ಗಲಿಲ್ಲ&lt;/div&gt;&lt;div&gt;ನಾ ಬೈದಾಗ ಆತ ಹೇಗೇಗೋ ನಗುತ್ತಿದ್ದ &lt;/div&gt;&lt;div&gt;ಆಗಾಗ ನೋವಾಗದಂತೆ ಕಾಲೆಳೆಯುತ್ತಿದ್ದ&lt;/div&gt;&lt;br /&gt;&lt;div&gt;&lt;/div&gt;&lt;div&gt;ಅವನಂತಾಗಲು ನನಗೆ ಆಗಾಗ ಆಸೆ&lt;/div&gt;&lt;div&gt;ಹೇಳಲಾಗದ ಅಸೂಯೆ ಬೆರೆತ ಹೆಮ್ಮೆ&lt;/div&gt;&lt;div&gt;ಈ ಅಮಾಯಕನಿಗೆ ಜಗತ್ತೆಲ್ಲಿ &lt;/div&gt;&lt;div&gt;ಮೋಸಮಾಡುವುದೋ ಎಂಬ ದಿಗಿಲು&lt;/div&gt;&lt;div&gt;ಬೆತ್ತಲಾಗಲು ಇಬ್ಬರಲ್ಲೂ ಪೈಪೋಟಿ&lt;/div&gt;&lt;div&gt;ಆದರೂ ಏನೂ ಹೇಳಲಾಗದ ಅಸಹಾಯಕತೆ! &lt;/div&gt;&lt;br /&gt;&lt;div&gt;&lt;/div&gt;&lt;div&gt;ನಾಲೆಯಿಂದ ನಾನು ಒಂಟಿ &lt;/div&gt;&lt;div&gt;ಯಾರ ಜೊತೆ ನಗಲಿ? ಯಾರೊಂದಿಗೆ &lt;/div&gt;&lt;div&gt;ಜಗಳ ಕಾಯಲಿ? ಅವನಿಗೆ ನನ್ನಂಥವರು &lt;/div&gt;&lt;div&gt;ಸಿಗಬಹುದು! ನನಗ್ಯಾರು ಸಿಗುತ್ತಾರೆ? &lt;/div&gt;&lt;div&gt;ಜಗದ ಸಂತೆಯಲ್ಲಿ ನಾ ಮತ್ತೆ ಒಂಟಿ. &lt;/div&gt;&lt;div&gt;ಧೈರ್ಯ ಸಾಲದು ಮತ್ತೆ ಜಂಟಿಯಾಗಲು&lt;/div&gt;&lt;br /&gt;&lt;div&gt;&lt;/div&gt;&lt;div&gt;ಜಗತ್ತಿನ ನಿಯಮವೇ ವಿಚಿತ್ರ &lt;/div&gt;&lt;div&gt;ಬೇಕು ಎಂದದ್ದು ಸಿಕ್ಕಿದರೆ ಅವನಿಗೆಲ್ಲಿಯ &lt;/div&gt;&lt;div&gt;ಗೌರವ? ಭೂಮಿ ಗುಂಡಗಿದೆ &lt;/div&gt;&lt;div&gt;ಮತ್ತೆ ಸಿಗೋಣ.. ಸಿಕ್ಕಾಗ ಕೂತು &lt;/div&gt;&lt;div&gt;ಜಗತ್ತಿಗೆ ಗೋಲಿ ಹೊಡೆಯೋಣ.. &lt;/div&gt;&lt;div&gt;ಹೋಗಿ ಬಾ ಗೆಳೆಯ... ಬದುಕು ಬಂಗಾರವಾಗಲಿ.. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-4617603133422602926?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/4617603133422602926/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=4617603133422602926' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/4617603133422602926'/><link rel='self' type='application/atom+xml' href='http://www.blogger.com/feeds/2189102912389204330/posts/default/4617603133422602926'/><link rel='alternate' type='text/html' href='http://kanasinaramane.blogspot.com/2007/08/blog-post.html' title='ಜಗತ್ತಿನಲ್ಲಿ ಯಾರನ್ನೂ ನಾ ಪ್ರೀತಿಸುವುದಿಲ್ಲ..'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eDo9m8Nl3wg/RrCIeSGfADI/AAAAAAAAABs/vFS-_M04ryQ/s72-c/Friendship.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-6125548883952501377</id><published>2007-07-26T16:29:00.000+05:30</published><updated>2008-12-11T09:19:24.846+05:30</updated><title type='text'>ಯಾರ್ಯಾರ ಗ್ರಹಚಾರ ಹೇಗೇಗಿದೆ?</title><content type='html'>&lt;a href="http://3.bp.blogspot.com/_eDo9m8Nl3wg/RqiBhSGfACI/AAAAAAAAABk/Kf-fWcqpg1Q/s1600-h/astrology.jpg"&gt;&lt;img id="BLOGGER_PHOTO_ID_5091461787537047586" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://3.bp.blogspot.com/_eDo9m8Nl3wg/RqiBhSGfACI/AAAAAAAAABk/Kf-fWcqpg1Q/s320/astrology.jpg" border="0" /&gt;&lt;/a&gt;&lt;br /&gt;&lt;div&gt;ನನ್ನೂರಿನ ಸುಳ್ಳು ಸುಳ್ಳು ಶಾಸ್ತ್ರಿಗಳು ಭವಿಷ್ಯ ಹೇಳೋದಕ್ಕೆ ನಿಂತರೆ, ಅದು ನಿಜವಾಗುತ್ತೆ.. ಇಲ್ಲದಿದ್ದರೆ ಅದು ಸುಳ್ಳು ಆಗುತ್ತೆ. ಇವೆರಡು ಬಿಟ್ಟರೆ ಬೇರೇನೂ ಆಗೋದಿಲ್ಲ! ಅಷ್ಟೊಂದು ಕರಾರುವಕ್ಕಾಗಿ ಅವರು ಭವಿಷ್ಯ ನುಡಿಯುತ್ತಾರೆ.&lt;br /&gt;&lt;/div&gt;&lt;div&gt;'ನಮ್ಮಹಳ್ಳಿ ಕೆರೆಗೆ ಯಾವಾಗ ನೀರು ಬರುತ್ತೆ?' ಅಂದ್ರೆ, 'ಜೋರಾಗಿ ಮಳೆ ಬಂದ ಮಾರನೇ ದಿನ' ಎಂದು ಅವರು ಖಚಿತವಾಗಿ ಹೇಳುತ್ತಾರೆ. ಪೀಠಿಕೆ ಇಷ್ಟು ಸಾಕು. ಅವರು ರಾಶಿ ಭವಿಷ್ಯ ಬರೆದಿದ್ದಾರೆ. ನಿಮ್ಮ ಗ್ರಹಚಾರ ಏನಿದೆಯೋ ಓದಿ ತಿಳಿಯಿರಿ..&lt;br /&gt;&lt;/div&gt;&lt;div&gt;&lt;strong&gt;ಮೇಷ :&lt;/strong&gt; ಧನಯೋಗವಿದೆ. ಹಾಗಂತ ನೀವು ಕೈಕಟ್ಟಿ ಕೂತರೇ ಆಗೋದಿಲ್ಲ. ಯಾರದಾದರೂ ತಲೆ ಹೊಡೆಯಲೇ ಬೇಕು ಅಥವಾ ಸೌಂಡ್‌ ಪಾರ್ಟಿಯಾಗಿರೋ ಹುಡುಗಿಗೆ ಡವ್‌ ಹೊಡೆದು ಮದುವೆಯಾಗಿ ಬಿಡಿ. ಅದೆಲ್ಲಾ ಕಷ್ಟ ಅನ್ನಿಸಿದರೇ ಯಾರನ್ನಾದರೂ ಕಿಡ್ನಾಫ್‌ ಮಾಡಿ. ರಾಜಯೋಗ ಬಂದಾಗ ನೀವು ಕಾರ್ಯಪ್ರವೃತ್ತರಾಗದಿದ್ರೆ ಬದುಕಿಡೀ ಪಶ್ಚತ್ತಾಪ ಅನುಭವಿಸಬೇಕಾಗುತ್ತೆ !&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -100, ಶುಭದಿನ -ವಾರದ ಎಲ್ಲಾ ದಿನ.&lt;br /&gt;&lt;/div&gt;&lt;div&gt;&lt;strong&gt;ವೃಷಭ :&lt;/strong&gt; ವಿದ್ಯೆ ನೈವೇದ್ಯಆಗಿದೆ. ಆದರೂ ನಿಮಗೆ ಯಾಕೆ ಓದೋ ಹುಚ್ಚು? ನೇರವಾಗಿ ಸರಸ್ವತಿಬರೋದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಕಳ್ಳ ಬಾಗಿಲಲ್ಲಿ ಪ್ರಯತ್ನಿಸಿ. ಪರೀಕ್ಷೆ ಬರೆಯೋದನ್ನು ಯೋಚಿಸಲೇಬೇಡಿ. ಯಾರನ್ನಾದರೂ ಸರಿಯಾದ ಪಾರ್ಟಿಯನ್ನು ಹಿಡಿದು ರೇಟ್‌ ಫಿಕ್ಸ್‌ ಮಾಡಿ, ಮಾಕ್ಸ್‌ಕಾರ್ಡ್‌ನ ಖರೀದಿಗೆ ಪ್ರಯತ್ನಿಸಿ.&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -000, ಶುಭದಿನ- ಒಂದೂ ಇಲ್ಲ.&lt;br /&gt;&lt;/div&gt;&lt;div&gt;&lt;strong&gt;ಮಿಥುನ :&lt;/strong&gt; ಸಿಡುಕುವುದರಿಂದ ನಿಮಗೆ ಸಾಕಷ್ಟು ಲಾಭಗಳಿವೆ. ಜನರು ನಿಮಗೆ ಗೌರವ ಕೊಡುತ್ತಾರೆ. ವಿಶೇಷವಾಗಿ ಮನೆಗೆ ಬರೋ ನೆಂಟರ ಸಂಖ್ಯೆ ಕಡಿಮೆಯಾಗಲಿದೆ. ಹೆಂಡತಿ ನಿಮ್ಮ ಕೆಂಡದಂತಹ ಮುಖ ನೋಡಿ, ಸೀರೆಗೀರೆ ಎಂದು ತಲೆ ತಿನ್ನೋದಿಲ್ಲ. ಮಕ್ಕಳು, ಚಾಕ್ಲೆಟ್‌-ಬಿಸ್ಕೆಟ್‌ ಅಂಥ ಪೀಡಿಸೋದಿಲ್ಲ.&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -ಹಾಗಂದ್ರೆ ಏನು?, ಶುಭದಿನ -ಮಂಗಳವಾರ&lt;br /&gt;&lt;/div&gt;&lt;div&gt;&lt;strong&gt;ಕರ್ಕಾಟಕ :&lt;/strong&gt; ಫೋನ್‌ ಮೂಲಕ ಸುನಾಮಿ ಪ್ರವೇಶಿಸಲಿದೆ ಜಾಗೃತರಾಗಿರಿ! ನಿಮ್ಮ ಪ್ರೀತಿಯ ಹುಡುಗಿಗೆ ಈಗ ಮೂರು ತಿಂಗಳು. ನಿಮ್ಮನ್ನು ದೇವರೂ ಸಹಾ ಕಾಪಾಡೋ ಸ್ಥಿತಿಯಲ್ಲಿಲ್ಲ! ಮಹಿಳೆಯರಿಗೆ ಕೆಟ್ಟ ಸುದ್ದಿ. ನಿಮ್ಮ ಗುಟ್ಟುಗಳು ನಿಮ್ಮ ಗಂಡನಿಗೆ ಗೊತ್ತಾಗಲಿದೆ.&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -111, ಶುಭದಿನ -ಅದರ ಆಸೆ ಬಿಡಿ.&lt;br /&gt;&lt;/div&gt;&lt;div&gt;&lt;strong&gt;ಸಿಂಹ :&lt;/strong&gt; ಪುರುಷರಿಗೆ ವಿವಾಹದ ಗಂಡಾಂತರವಿದೆ. ಹುಲಿ ಇಲಿಯಾಗುವ ದಿನಗಳನ್ನು ಎದುರಿಸಲು ಸಜ್ಜಾಗಿ. ಮದುವೆಯಾಗುವುದಕ್ಕಿಂತಲೂ ಬಾವಿಗೆ ಹಾರೋದೇ ಸುಲಭ ಅನ್ನಿಸೋದಾದ್ರೆ ನಿಮ್ಮ ನಿರ್ಣಯ ಸರಿಯಾಗಿದೆ. ಮಹಿಳೆಯರಿಗೆ ಅದೃಷ್ಟದ ದಿನಗಳು. ಅವು ಮುಗಿಯುವ ಮೊದಲೇ ಯಾರನ್ನಾದರೂ ಬಕ್ರನಾ ಕಟ್ಟಿಕೊಳ್ಳಿ.&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -1001, ಶುಭದಿನ -ಕಾದು ನೋಡಿ.&lt;br /&gt;&lt;/div&gt;&lt;div&gt;&lt;strong&gt;ಕನ್ಯಾ :&lt;/strong&gt; ಬಹಳ ದಿನಗಳಿಂದಲೂ ನಾಯಿ ಸಾಕಬೇಕು ಅನ್ನೋ ಬಯಕೆ ಈಗ ಫಲಿಸಲಿದೆ. ಅಂದ್ರೆ ನಿಮಗೆ ಟೂ-ಇನ್‌-ಒನ್‌ ನಾಯಿ ಸಿಕ್ತಾಯಿದೆ! ಹೌದು ಹೆಣ್ಣುಮಕ್ಕಳಿಗೆ ಮದುವೆಯೋಗವಿದೆ. ಡೈವರ್ಸ್‌ ಯೋಗ ಸಹಾ...&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -501, ಶುಭದಿನ -ಶುಕ್ರವಾರ&lt;br /&gt;&lt;/div&gt;&lt;div&gt;&lt;strong&gt;ತುಲಾ :&lt;/strong&gt; ನಿಮಗೆ ಟಿ.ವಿಯಲ್ಲಿ ಕಾಣಿಸೋ ಯೋಗವಿದೆ. ಬಹುಶಃ, ಕ್ರೆೃಂಡೈರಿ ಅಥವಾ ಕುರಿಗಳು ಸಾರ್‌ ಕಾರ್ಯಕ್ರಮದಲ್ಲೋ ಸ್ಪಷ್ಟವಾಗಿ ಹೇಳಲಾಗುತ್ತಿಲ್ಲ.ಅದೃಷ್ಟ ಸಂಖ್ಯೆ-0000000000, ಶುಭದಿನ-ನಿಮಗೇ ಗೊತ್ತಲ್ಲ!&lt;br /&gt;&lt;/div&gt;&lt;div&gt;&lt;strong&gt;ವೃಶ್ಚಿಕ :&lt;/strong&gt; ಬಾಸ್‌ಗೆ ನಿಮ್ಮ ಕರ್ತವ್ಯ ಪ್ರಜ್ಞೆ ತುಂಬಾ ಇಷ್ಟವಾಗಿದೆ. ಮತ್ತಷ್ಟು ಇಷ್ಟವಾಗಲಿದೆ. ಮಾಮೂಲಿನ ಹತ್ತುಗಂಟೆ ಜೊತೆಯಲ್ಲಿ, ಇನ್ನೂ ನಾಲ್ಕು ಗಂಟೆಯ ಕೆಲಸದ ಹೊರೆ ನಿಮ್ಮ ಮೇಲೆ ಬೀಳಲಿದೆ. ಭಾನುವಾರವೂ ಕೆಲಸಮಾಡಬೇಕಾದ ಪರಿಸ್ಥಿತಿ ಬರಬಹುದು. ಯಾವುದಕ್ಕೂ ರೆಡಿಯಾಗಿರಿ.&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -3333, ಶುಭದಿನ -ಎಲ್ಲವೂ ಮುಗಿದಿವೆ.&lt;br /&gt;&lt;/div&gt;&lt;div&gt;&lt;strong&gt;ಮಕರ :&lt;/strong&gt; ಇನ್ನು ಮುಂದೆಯಾದ್ರೂ ನೀವು ನಗೋದನ್ನ ಕಲಿತರೆ, ಬಾಳು ಬಂಗಾರವಾಗುತ್ತೆ. ಇಲ್ಲದಿದ್ರೆ ಹೆಣಭಾರವಾಗುತ್ತೆ. ಬದುಕಿದ್ದಾಗಲೇ ನಗ್ರಿ, ಸತ್ತಮೇಲೆ ನಗೋದಕ್ಕೆ ಆಗೋದಿಲ್ಲ(ಬಾಯಲ್ಲಿ ಅಕ್ಕಿಕಾಳು ತುಂಬಿರ್ತಾರೆ!).&lt;/div&gt;&lt;div&gt; &lt;/div&gt;&lt;div&gt;ಅದೃಷ್ಟ ಸಂಖ್ಯೆ -999, ಶುಭದಿನ -ಎಲ್ಲಾ ನಿಮ್ಮ ಕೈಯಲ್ಲೇ ಇದೆ.&lt;br /&gt;&lt;/div&gt;&lt;div&gt;&lt;strong&gt;ಧನು :&lt;/strong&gt; ಈ ವಾರ ಅನಾರೋಗ್ಯ ಸಾಮಾನ್ಯ ಬಿಡಿ. ನಿಮ್ಮ ಕೆಮ್ಮನ್ನು ನೆವಮಾಡಿಕೊಂಡು, ನರ್ಸಿಂಗ್‌ ಹೋಮ್‌ನವರು ಸಾವಿರಗಟ್ಟಲೇ ಬಿಲ್‌ ಮಾಡ್ತಾರೆ. ನೀವು ಪಾರಾಗಲು ಸಾಧ್ಯವೇ ಇಲ್ಲ. ಆದರೂ ನಿಮ್ಮ ಕೆಮ್ಮು ನಿಲ್ಲೋದಿಲ್ಲ. ಮನೆಯಲ್ಲಿರೋ ಮೆಣಸು, ಅಥವಾ ಇಂಗ್ಲೀಷ್‌ ಟಾನಿಕನ್ನು ಪ್ರಯೋಗಿಸಿ ನೋಡಿ?&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -0, ಶುಭದಿನ -ವೈದ್ಯರಿಂದ ದೂರವಿದ್ದ ದಿನ&lt;br /&gt;&lt;/div&gt;&lt;div&gt;&lt;strong&gt;ಕುಂಭ :&lt;/strong&gt; ನೀವು ಬಿಸ್ಕೆಟ್‌ ಹಾಕುತ್ತಿದ್ದ ಹುಡುಗಿ/ಹುಡುಗ ನಿಮಗೆ ಒಲಿಯುತ್ತಾರೆ. ಯಾವುದಕ್ಕೂ ಒಮ್ಮೆ ಅವರ ಗಂಡ/ಹೆಂಡತಿಯ ಅನುಮತಿ ಪಡೆದರೆ ಸೂಕ್ತ.&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -420, ಶುಭದಿನ -ವಾರದ ಎಲ್ಲಾ ದಿನ&lt;br /&gt;&lt;/div&gt;&lt;div&gt;&lt;strong&gt;ಮೀನ :&lt;/strong&gt; ನಿದ್ರೆಯಲ್ಲಿ ಹೆಚ್ಚು ಕಾಲ ಕಳೆಯಲು ಪ್ರಯತ್ನಿಸಿ. ನಿದ್ರೆಯಲ್ಲಿಯೇ ಸುಖವಿದೆ. ನಿದ್ರೆಯಲ್ಲೂ ನಿಮ್ಮ ಹೆಂಡತಿ ಪ್ರಾಣ ಹಿಂಡಿದ್ರೆ ನಿಮ್ಮ ದುರಾದೃಷ್ಟ. ನಿಮ್ಮ ಗಂಡನ ಜೊತೆ ಹೆಣಗಿಹೆಣಗಿ ಸಾಕಾಗಿದೆಯೇ, ಪೋಲಿಸ್‌ಗೊಂದು ಕಂಪ್ಲೆಂಟ್‌ ಕೊಡಿ.&lt;br /&gt;&lt;/div&gt;&lt;div&gt;ಅದೃಷ್ಟ ಸಂಖ್ಯೆ -333, ಶುಭದಿನ -ವಾರದ ಎಂಟನೇ ದಿನ&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-6125548883952501377?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/6125548883952501377/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=6125548883952501377' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/6125548883952501377'/><link rel='self' type='application/atom+xml' href='http://www.blogger.com/feeds/2189102912389204330/posts/default/6125548883952501377'/><link rel='alternate' type='text/html' href='http://kanasinaramane.blogspot.com/2007/07/blog-post_26.html' title='ಯಾರ್ಯಾರ ಗ್ರಹಚಾರ ಹೇಗೇಗಿದೆ?'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eDo9m8Nl3wg/RqiBhSGfACI/AAAAAAAAABk/Kf-fWcqpg1Q/s72-c/astrology.jpg' height='72' width='72'/><thr:total>1</thr:total></entry><entry><id>tag:blogger.com,1999:blog-2189102912389204330.post-5187844601075127065</id><published>2007-07-20T18:51:00.000+05:30</published><updated>2008-12-11T09:19:25.086+05:30</updated><title type='text'>ಸುರಿಯುತ್ತಲೇ ಇದೆ ಮಳೆ</title><content type='html'>&lt;a href="http://1.bp.blogspot.com/_eDo9m8Nl3wg/RqC4Sn7cYUI/AAAAAAAAABc/mFBxqpVyvEA/s1600-h/rain.jpg"&gt;&lt;img id="BLOGGER_PHOTO_ID_5089270209024123202" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://1.bp.blogspot.com/_eDo9m8Nl3wg/RqC4Sn7cYUI/AAAAAAAAABc/mFBxqpVyvEA/s320/rain.jpg" border="0" /&gt;&lt;/a&gt;&lt;br /&gt;&lt;div&gt;ನನಗೆ ಈಚೀಚೆಗೆ ಮಳೆ&lt;/div&gt;&lt;div&gt;ಎಂದರೆ ಭಯ! ಅಸಹ್ಯ, ಜಿಗುಪ್ಸೆ..&lt;/div&gt;&lt;div&gt;ಒಂದೊಂದು ಹನಿ&lt;/div&gt;&lt;div&gt;ಮೈ ಮೇಲೆ ಬಿದ್ದರೂ ಯಾತನೆ&lt;/div&gt;&lt;div&gt;ಅಲ್ಲೆಲ್ಲ ಬೊಬ್ಬೆಗಳು!&lt;/div&gt;&lt;div&gt;&lt;/div&gt;&lt;br /&gt;&lt;div&gt;ಸುರಿಯುತ್ತಲೇ ಇದೆ ಮಳೆ&lt;/div&gt;&lt;div&gt;ಮುಗಿಯದ ಕಣ್ಣೀರಿನಂತೆ! &lt;/div&gt;&lt;div&gt;ಯಾಕೆ ಮಗು ಮಲಗಲಿಲ್ವೇ&lt;/div&gt;&lt;div&gt;ನಿದ್ದೆ ಬರುತ್ತಿಲ್ವೇ ಎಂದು ಕೇಳೋರಿಲ್ಲ..&lt;/div&gt;&lt;div&gt;ನಾನು ಎಚ್ಚರವಾಗಿದ್ದೇನೆ ದೆವ್ವದಂತೆ!&lt;/div&gt;&lt;br /&gt;&lt;div&gt;&lt;/div&gt;&lt;div&gt;ಹೊರಗಡೆ ಜಿಟಿಜಿಟಿ ಮಳೆ&lt;/div&gt;&lt;div&gt;ಒಳಗೆ ನಾ ಒಂಟಿ&lt;/div&gt;&lt;div&gt;ಮಳೆಯನ್ನು ನೋಡುವ ಬೆರಗು&lt;/div&gt;&lt;div&gt;ನನ್ನಲ್ಲಿ ಉಳಿದಿಲ್ಲ..&lt;/div&gt;&lt;div&gt;ನಾನು ನಿಜಕ್ಕೂ ಬದುಕಿದ್ದೇನೆಯೇ?&lt;/div&gt;&lt;br /&gt;&lt;div&gt;&lt;/div&gt;&lt;div&gt;ಗಡಿಯಾರ ಓಡುತ್ತಿದೆ.. 10,11,12..&lt;/div&gt;&lt;div&gt;ನಿಂತ ಮಳೆ.. ಶುರುವಾದ ಮಳೆ&lt;/div&gt;&lt;div&gt;ಎಲ್ಲವೂ ಗೊತ್ತಾಗುತ್ತಿದೆ...&lt;/div&gt;&lt;div&gt;ದೀಪ ಆರಿಸಲು ಮನಸ್ಸಾಗುತ್ತಿಲ್ಲ..&lt;/div&gt;&lt;div&gt;ನನ್ನ ಪಾಲಿಗೆ ಉಳಿದ ಬೆಳಕು ಅದೊಂದೇ &lt;/div&gt;&lt;br /&gt;&lt;div&gt;&lt;/div&gt;&lt;div&gt;ಸದ್ಯಕ್ಕೆಎಲ್ಲವೂ ಖಾಲಿ... ಹೆದರಿಸುವ&lt;/div&gt;&lt;div&gt;ನಾಳೆಗಳು ನಿದ್ದೆ ಕೆಡಿಸುವ ದೆವ್ವಗಳು..&lt;/div&gt;&lt;div&gt;ಮಳೆ ಬಂದು ಭೂಮಿ ತಂಪಾಗುತ್ತದೆ..&lt;/div&gt;&lt;div&gt;ನನ್ನ ಎದೆ ನೆನೆಯುವಂತಹ ಮಳೆ&lt;/div&gt;&lt;div&gt;ಮುಂದೆಯಾದರೂ ಇದೆಯೋ ಇಲ್ಲವೋ?&lt;/div&gt;&lt;br /&gt;&lt;div&gt;&lt;/div&gt;&lt;div&gt;ಎಲ್ಲೋ ಗುಡುಗಿದ ಶಬ್ದ.. ಮತ್ತೆ ಮಳೆ..&lt;/div&gt;&lt;div&gt;ಹಾಸಿದ ಹಾಸಿಗೆ ಮೇಲೆ ನಾನು..&lt;/div&gt;&lt;div&gt;ನನ್ನ ಜೊತೆಗೆ ದಿಂಬು, ಅದರ ಮೇಲೆ&lt;/div&gt;&lt;div&gt;ಕಪ್ಪು ಹಸಿರು ಚೌಕಿನ ಉಲ್ಲನ್ ರಗ್ಗು..&lt;/div&gt;&lt;div&gt;ಅವಕ್ಕೂ ನನ್ನ ಸಂಗ ಬೇಡವೆನ್ನಿಸಿರಬೇಕು!&lt;/div&gt;&lt;br /&gt;&lt;div&gt;&lt;/div&gt;&lt;div&gt;ಉಲ್ಲಾಸದ ಹೂಮಳೆ ಎಂದು &lt;/div&gt;&lt;div&gt;ಹೊಟ್ಟೆತುಂಬಿದವರು ಕುಣಿದು ಕುಪ್ಪಳಿಸಲಿ..&lt;/div&gt;&lt;div&gt;ದೇವರಿಗಿಂತಲೂ ಹೆಚ್ಚು ಮಳೆಯನ್ನು&lt;/div&gt;&lt;div&gt;ನಾ ದ್ವೇಷಿಸುತ್ತೇನೆ.. ಸಾಧ್ಯವಿದ್ದಿದ್ದರೆ,&lt;/div&gt;&lt;div&gt;ಕುತ್ತಿಗೆ ಹಿಡಿದು ಉಸಿರು ನಿಲ್ಲಿಸುತ್ತಿದ್ದೆ!&lt;/div&gt;&lt;br /&gt;&lt;div&gt;&lt;/div&gt;&lt;div&gt;ಓ ಸುತ್ತಲೂ ಅಂಧಕಾರ.. &lt;/div&gt;&lt;div&gt;ಇದ್ದಒಂದೇ ಒಂದು ಬೆಳಕು ಸಹಾ ಕಣ್ಮರೆ..&lt;/div&gt;&lt;div&gt;ಪಾಪಿ ಮಳೆ ದೀಪ ಆರಿಸಿತು.. &lt;/div&gt;&lt;div&gt;ನೀನುಏನು ಬೇಕಾದರೂ ಆರಿಸಬಹುದು&lt;/div&gt;&lt;div&gt;ನನ್ನೆದೆಯ ಅಗ್ನಿಕುಂಡ ಆರಿಸಲಾರೇ..&lt;/div&gt;&lt;br /&gt;&lt;div&gt;&lt;/div&gt;&lt;div&gt;ತಾಕತ್ತಿದ್ದರೆ ಪ್ರಯತ್ನಿಸು..&lt;/div&gt;&lt;div&gt;ನಿನಗೆ ಒಳ್ಳೆಯದಾಗಲಿ..&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-5187844601075127065?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/5187844601075127065/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=5187844601075127065' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/5187844601075127065'/><link rel='self' type='application/atom+xml' href='http://www.blogger.com/feeds/2189102912389204330/posts/default/5187844601075127065'/><link rel='alternate' type='text/html' href='http://kanasinaramane.blogspot.com/2007/07/blog-post_20.html' title='ಸುರಿಯುತ್ತಲೇ ಇದೆ ಮಳೆ'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_eDo9m8Nl3wg/RqC4Sn7cYUI/AAAAAAAAABc/mFBxqpVyvEA/s72-c/rain.jpg' height='72' width='72'/><thr:total>1</thr:total></entry><entry><id>tag:blogger.com,1999:blog-2189102912389204330.post-4631416764100175423</id><published>2007-07-18T19:17:00.000+05:30</published><updated>2008-12-11T09:19:25.266+05:30</updated><title type='text'>ಹೆಂಗಸರಿಗಾಗಿ ಮಾತ್ರ!</title><content type='html'>&lt;a href="http://1.bp.blogspot.com/_eDo9m8Nl3wg/Rp4dhH7cYTI/AAAAAAAAABU/Mf7EKjXLO1g/s1600-h/wife1.gif"&gt;&lt;img id="BLOGGER_PHOTO_ID_5088537083876499762" style="FLOAT: left; MARGIN: 0px 10px 10px 0px; CURSOR: hand" alt="" src="http://1.bp.blogspot.com/_eDo9m8Nl3wg/Rp4dhH7cYTI/AAAAAAAAABU/Mf7EKjXLO1g/s320/wife1.gif" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;ಈ ಲೇಖನವನ್ನು ಹೆಂಗಸರಷ್ಟೇ ಓದಬೇಕು. ಹೆಂಗ(ಹ)ಸು ಅಲ್ಲದ ಗಂಡ(ಹ)ಸು ಓದಬೇಕು ಅನ್ನಿಸಿದರೆ, ಹೆಂಗಸರ ಅನುಮತಿ ಪಡೆಯುವುದು ಕಡ್ಡಾಯ.&lt;/span&gt; &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮಾತೃ ಸ್ವರೂಪಿ, ದೈವ ಸ್ವರೂಪಿ ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸಿರುವ ಪುರುಷ ಸಮುದಾಯ, ಯುಗಯುಗಗಳಿಂದಲೂ ಸ್ತ್ರೀಶೋಷಣೆಯನ್ನು ನಾನಾ ರೂಪದಲ್ಲಿ ತೀವ್ರಗೊಳಿಸುತ್ತಲೇ ಬಂದಿದೆ. ಆ ಬಾಣವನ್ನು ತಿರುಗುಬಾಣವನ್ನಾಗಿಸುವ ತಂತ್ರಗಳು ನಿಮಗಾಗಿ ಅನಾವರಣಗೊಂಡಿವೆ!&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;‘ಅಪ್ಪನಿಗೆ ತಕ್ಕ ಮಗ’ ಎಂಬ ಬಿರುದು ಪಡೆಯುವ ಹುಚ್ಚಲ್ಲಿ ಕಾಡಿಗೆ ಹೋದ ರಾಮ, ಪಾಪ ಸೀತೆಯನ್ನೂ ಜೊತೆಗೆ ಕರೆದೊಯ್ದ! ಗಂಡನ ಜೊತೆ ಕಲ್ಲು-ಮುಳ್ಳು ತುಳಿಯುವುದು ನನ್ನ ಹಣೆಬರಹ ಅಂದುಕೊಂಡ ಸೀತೆ ವನವಾಸ ಮುಗಿಸಿದ್ದಳು. ನಂತರ ಸಿಂಹಾಸನವೇರಿದ ರಾಮ, ಆದೇ ಸ್ವಾಮಿ ನಿಮ್ಮ ಮಹಾಮಹಿಮ ಶ್ರೀರಾಮ, ಸೀತಾದೇವಿಯನ್ನು ಕಾಡಿಗೆ ಅಟ್ಟಿದ್ದು ಸರಿಯೇ? ಅದೂ ತುಂಬು ಗರ್ಭಿಣಿಯನ್ನು. ಭ್ರೂಣಹತ್ಯೆಯ ಸಿಸ್ಟಮ್‌ ಆಗ ಇದ್ದಿದ್ದರೆ, ಅನುಮಾನದ ಪಿಶಾಚಿ ಅದಕ್ಕೂ ಹಿಂದೆ ಮುಂದೆ ನೋಡ್ತಾಯಿರಲಿಲ್ಲ ಅನ್ನಿಸುತ್ತೆ! &lt;/div&gt;&lt;br /&gt;&lt;div&gt;&lt;br /&gt;ಪತಿದೇವ ಸತ್ತ ಕೂಡಲೇ ಸತಿ, ಅವನ ಚಿತೆಗೆ ಹಾರಬೇಕಂತೆ. ‘ಗಂಡ ಸತ್ತರೆ ಹೆಂಡತಿ ವಿಧವೆ, ಹೆಂಡ್ತಿ ಸತ್ತರೆ ಗಂಡನಿಗೆ ಮದುವೆ’ -ಯಾಕೆ ಈ ದಬ್ಬಾಳಿಕೆಯ ಕಾನೂನು? ಸರಿ ಬಿಡಿ, ಕಾಲ ಬದಲಾಗಿದೆ. ಹೆಣ್ಣು ಬದಲಾಗಿದ್ದಾಳೆ. ಪ್ಯಾಂಟ್‌ಉ-ಶರ್ಟ್‌ಉ ತೊಟ್ಟು ಅವನಿಗೆ ಸರಿಸಮನಾಗಿ ಬೆಳೆದಿದ್ದಾಳೆ. ಆದ್ರೆ ಇಷ್ಟನ್ನೇ ಕ್ರಾಂತಿಯಂದ್ರೆ, ದೇವೇಗೌಡ್ರು ಸಹಾ ನಗ್ತಾರೇ? ನಿಜವಾದ ಕ್ರಾಂತಿ ಅಂದ್ರೆ; ಹೆಣ್ಣು ಗಂಡಿನ ಡ್ರೆಸ್‌ ತೊಟ್ಟಂತೆ, ಗಂಡಿಗೆ ಹೆಣ್ಣಿನ ಡ್ರೆಸ್‌ ತೊಡಿಸಬೇಕು? ಅರ್ಥವಾಯ್ತಾ? &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮಹಿಳಾ ಮಣಿಗಳೇ, ಸ್ತ್ರೀಸಿಂಹಗಳೇ ನಿಮ್ಮ ಉನ್ನತಿಗಾಗಿ, ಪುರುಷರ ಅವನತಿಗಾಗಿ ನಾನು ಸಾಕಷ್ಟು ಅಧ್ಯಯನ ಮಾಡಿ ಒಂದಷ್ಟು ಸಂಗತಿಗಳನ್ನು ಕಂಡುಹಿಡಿದಿದ್ದೇನೆ. ಪುಣ್ಯಕ್ಕೆ ಯಾವ ವಿಶ್ವವಿದ್ಯಾಲಯವೂ ಪಿಎಚ್‌ಡಿ-ಗಿಎಚ್‌ಡಿ ಕೊಟ್ಟಿಲ್ಲ! ಅದನ್ನು ನೀವೆಲ್ಲಾ ಪಾಲಿಸಬೇಕು ಅನ್ನೋದು ನನ್ನ ವಿನಂತಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;ಸಂಡೇ ಹೀಗೆ ಮಾಡಿ :&lt;/strong&gt; ಗಂಡನಿಗೆ ಭಾನುವಾರ ರಜೆ ಇದ್ದೇ ಇರುತ್ತೆ. ನೀವು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಪೇಪರ್‌ನಲ್ಲಿ ಮತ್ತು ಟೀವಿಯಲ್ಲಿ ಬರೋ ಮಾಹಿತಿಗಳನ್ನು ಬರೆದಿಟ್ಟುಕೊಂಡು, ಸಂಡೇಗೆ ಸ್ಕೆಚ್‌ ಹಾಕಬೇಕು. ಶನಿವಾರದಿಂದಲೇ ಪತಿದೇವರನ್ನು ಒಲಿಸಿಕೊಳ್ಳಲು ಪ್ರಯತ್ನಿಸಿ. ಕನಿಷ್ಟ ಆ ತರಹ ನಟಿಸಿ! &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಶನಿವಾರ ರಾತ್ರಿ ಮನೆಯಲ್ಲಿ ಆಡುಗೆ ಮಾಡಲೇ ಬೇಡಿ(ಕೆಲಸ ಕೆಡುತ್ತೆ) ಹೋಟೆಲ್‌ನಿಂದ ಊಟ ತನ್ನಿ! ಆದರೆ, ಅದನ್ನು ನಾನೇ ನಿಮಗಾಗಿ ತಯಾರಿಸಿದ್ದೆ ಅಂತ ಒಂದಿಷ್ಟು ಪೂಸಿ ಬಿಡಿ. ಅಲ್ಲಿಗೆ ನಿಮ್ಮ ಹಾದಿಗೆ ಗಂಡ ಅನ್ನೋ ಪ್ರಾಣಿ ಬಂದಿರ್ತಾನೆ!ಬೆಳಿಗ್ಗೆ ನಿಮ್ಮ ಸವಾರಿ ‘ಜುಂ’ ಅಂಥ ಶುರುವಾಗಲಿ. ನಿಮ್ಮ ಪಿಳ್ಳೆಪಿಸುಗನ್ನು ಬೇಕಾದರೆ ಜೊತೆಗೆ ಕಟ್ಟಿಕೊಳ್ಳಿ. ಹೇಗೂ ಅವನ್ನು ಸಮಾಧಾನ ಮಾಡೋಕೆ, ನಿಮ್ಮ ಪತಿದೇವರು ಇದ್ದೇ ಇರ್ತಾರೆ! &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಸರಿ, ಎಲ್ಲಾ ಆದ ಮೇಲೆ ಒಂದು ಸ್ಯಾರಿ ಅಂಗಡಿಗೆ ಗೂಳಿಯ ತರಹ ನುಗ್ಗಿ ಬಿಡಿ. ಗಡಿಯಾರದ ಹಂಗನ್ನು ಮರೆತು, ಸ್ಯಾರಿ ಸೆಲೆಕ್ಷನ್‌ನಲ್ಲಿ ಮೈಮರೆಯಿರಿ. ನಾನಾ ಸ್ಯಾರಿ ತೋರಿಸಿ-ತೋರಿಸಿ ಅಂಗಡಿಯವನಿಗೆ ಬೇಸರವಾದರೂ, ನೋಡಿ-ನೋಡಿ ನಿಮಗಂತೂ ಬೇಸರವಾಗಬಾರದು! ನಿಮ್ಮ ಮನಸ್ಸಿಗೆ ಇಷ್ಟ ಆಗಲಿಲ್ಲ ಅಂದ್ರೆ ಇನ್ನೊಂದು ನಾಲ್ಕು ಅಂಗಡಿಗೆ ನುಗ್ಗಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮಧ್ಯಾಹ್ನ ಆಯಿತು ಹೊಟ್ಟೆ ಕಚ್ಚುತ್ತಿದೆ ಅನ್ನಿಸಿದ್ರೆ ಅಲ್ಲೇ ಪಕ್ಕದಲ್ಲಿರೋ ಹೋಟೆಲ್‌ಗೆ ದಾಳಿ ಮಾಡಿ. ಪಾಪ ನಿಮ್ಮನ್ನು ಕಟ್ಟಿಕೊಂಡ ಪುಣ್ಯ(?)ಕ್ಕೆ ಗಂಡ ಸುಮ್ಮನೇ ಹಿಂದೆ ಬರ್ತಾನೆ, ಬಿಲ್‌ ಕೋಡೋಕೆ!. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಕೊನೆಗೆ ಯಾವುದಾದರೂ ಅಂಗಡಿಯಲ್ಲಿ ಇದೊಂದು, ಇದು ನಿಮ್ಮಮ್ಮನಿಗೆ, ಅದು ನಿಮ್ಮ ತಂಗಿಗೆ ಅಂತೆಲ್ಲಾ ಹೇಳಿ ಒಂದು ನಾಲ್ಕು ಸೀರೆ ಪ್ಯಾಕ್‌ ಮಾಡಿಸಿ. ಮನೆಗೆ ಬಂದ ಮೇಲೆ ಸೀರೆಗಳನ್ನು ನಿಮ್ಮ ಬೀರುವಿನಲ್ಲಿ ಜೋಪಾನವಾಗಿ ಎತ್ತಿಡಿ!&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;ಚಾಲೂ ಆಗಿ :&lt;/strong&gt; ಅಡಿಗೆ ಮನೆ ಎನ್ನುವ ಸೆರೆಮನೆಯಿಂದ ಸದಾ ದೂರವಿಡಿ. ಹೊಸರುಚಿ ಹೆಸರಲ್ಲಿ ಅಡಿಗೆ ಗಬ್ಬೆಬ್ಬಿಸಿದ್ರೆ(ಉಪು, ಹುಳಿ, ಖಾರ), ಪಾಪ ನಿಮ್ಮ ಗಂಡನೇ ಶರಣಾಗ್ತಾನೆ. ಬೇರೆ ದಾರಿಯೇ ಇಲ್ಲ! ನಿಮ್ಮ ಗಂಡನ ಮೇಲೆ ಅತಿಯಾದ ಪ್ರೀತಿಯಿರುವವರಂತೆ ಆಗಾಗ ಕೆಲವು ಟ್ರಿಕ್ಸ್‌ ಮಾಡ್ತಾನೇ ಇರಬೇಕು(ಎಷ್ಟೆಲ್ಲಾ ಸೀರಿಯಲ್‌ ನೋಡ್ತೀರಾ? ನಿಮಗೆ ಇದು ಗೊತ್ತಿಲ್ಲವೇ?). &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನಿಮ್ಮ ಗಂಡ ಅಥವಾ ಮಕ್ಕಳು ಅಥವಾ ನಿಮ್ಮ ಅತ್ತೆ ಯಾರಿಗಾದರೂ ಸರಿ, ಸಣ್ಣಪುಟ್ಟ ಕಷ್ಟಕ್ಕೆಲ್ಲಾ ತಲೆಕೆಡಿಸಿಕೊಳ್ಳಿ(ಕೂದಲನ್ನು ಮಾತ್ರ ಕೆಡಿಸಿಕೊಳ್ಳಿ). ದೇವರಿಗೆ ಅವರ ಹೆಸರಲ್ಲಿ ಎಲ್ಲಾ ಹರಕೆ ಕಟ್ಟಿ. ಬೇಕು ಅಂದ್ರೆ ನಿಮ್ಮ ಯಜಮಾನ್ರ ಮಂಡೆ ಕೊಡ್ತೀನಿ ಅಂತಾ ಧಾರಾಳವಾಗಿ ಹರಕೆ ಕಟ್ಟಬಹುದು! ಹೀಗೆ ಹರಕೆ ನೆಪದಲ್ಲಿ ಕನಿಷ್ಟ ವರ್ಷಕ್ಕೆರಡು ಸಲ ಆದ್ರೂ ಟೂರ್‌ ಮಾಡಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮನೆಯಲ್ಲಿದ್ದಾಗಲೂ ಅಷ್ಟೇ. ಆ ದೇವಸ್ಥಾನ, ಈ ದೇವಸ್ಥಾನ ಅಂತಾ ಬೇಕಾದ ಸಿನಿಮಾಗಳನ್ನು ನೋಡೋದು ಮರೀಬೇಡಿ!ಅಡಿಗೆ ಕೆಲಸದಿಂದ ತಪ್ಪಿಸಿಕೊಂಡಂತೆಯೇ, ಬಟ್ಟೆ ಒಗೆಯುವ ಕೆಲಸದಿಂದ ಸಹಾ ಪಾರಾಗಬಹುದು! ಬಟ್ಟೆ ತೊಳೆಯೋ ನೆಪದಲ್ಲಿ ಅಥವಾ ಐರನ್‌ ಮಾಡೋ ನೆಪದಲ್ಲಿ ನಿಮ್ಮ ಗಂಡನ ಒಳ್ಳೊಳ್ಳೆ ಬಟ್ಟೆಗಳನ್ನು ಚಿಂದಿ ಮಾಡಿ! ಮತ್ತೆ ನಿಮಗೆ ಆ ಕೆಲಸ ಹೇಳಿದ್ರೆ ನನ್ನನ್ನು ಕೇಳಿ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ನಿಮ್ಮ ಮಾತನ್ನು ನಿಮ್ಮ ಗಂಡ ಕೇಳದೇ ಇನ್ಯಾರು ಕೇಳ ಬೇಕು? ಡೈವರ್ಸ್‌ ಮಂತ್ರವನ್ನು ಆಗಾಗ ಪಠಿಸುತ್ತಿರಿ. ‘ನಿಮ್ಮ ಹೆಸರು ಬರೆದಿಟ್ಟು ಆತ್ಯಹತ್ಯೆ ಮಾಡಿಕೊಳ್ತೇನೆ... ವರದಕ್ಷಿಣೆ ಕೇಸ್‌ಗೆ ಬೇಲ್‌ ಇಲ್ಲ...’ ಅನ್ನೋದನ್ನು ಆಗಾಗ ನೆನಪು ಮಾಡ್ತಾಯಿರಿ. ಅಂತಹ ಕ್ರೆೃಂ ಕಾರ್ಯಕ್ರಮಗಳು ಟೀವಿಯಲ್ಲಿ ಬಂದಾಗ, ಗಂಡನಿಗೆ ತಪ್ಪದೇ ತೋರಿಸುವುದು ನಿಮ್ಮ ಕರ್ತವ್ಯ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;ಅಭಿನಯಶ್ರೀ :&lt;/strong&gt; ಜೀವನದಲ್ಲಿ ಅದರಲ್ಲೂ ಗಂಡನ ಮುಂದೆ ನೀವು ಎಷ್ಟು ಚೆನ್ನಾಗಿ ಅಭಿನಯಿಸುವಿರೋ, ಅಷ್ಟು ಸುಖ ನಿಮ್ಮದಾಗುತ್ತದೆ. ನಿಮ್ಮ ಗಂಡನ ಜುಜುಬಿ ಸಂಪಾದನೆ, ನಿಮ್ಮ ಮೇಕಪ್ಪಿಗೆ ಸಹಾ ಸಾಕಾಗುತ್ತಿಲ್ಲ ಅನ್ನಿಸಿದ್ರೆ, ಗಂಡನನ್ನು ಓಟಿ ಮಾಡಲು ಪ್ರೇರೇಪಿಸಿ. ಬಿಡುವಿನ ವೇಳೆಯಲ್ಲಿ(ಭಾನುವಾರವೂ ಸೇರಿದಂತೆ)ಪಾರ್ಟ್‌ ಟೈಂ ಕೆಲಸ ಮಾಡುವಂತೆ ಮೆದುಳನ್ನು ಕೆಡಿಸಿ, ಗೊಬ್ಬರ ಮಾಡಿ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮದುವೆಯಾಗಿ ಗಂಡನ ಮನೆಗೆ ಹೆಜ್ಜೆಯಿಟ್ಟ ತಕ್ಷಣ, ಅತ್ತೆಯನ್ನು ‘ಅಮ’್ಮ ಅಂತಾ, ಮಾವನನ್ನು ‘ಅಪ್ಪ’ ಅನ್ನುತ್ತಾ ಮಾತಲ್ಲಿಯೇ ಮಂದಿರ ಕಟ್ಟಿ. ಮಗನನ್ನು ಅವರ ಪಾಲಿಗೆ ವಿಲನ್‌ನಂತೆ ಸೃಷ್ಟಿ ಮಾಡಿ. ಅತ್ತೆ ಮನೆಯಲ್ಲಿದ್ದರೆತಲೆಕೆಡಿಸಿಕೊಳ್ಳಬೇಡಿ. ನಯವಾದ ಮಾತುಗಳಿಂದಲೇ ಮನೆಕೆಲಸವನ್ನು ಅವಳಿಗೆ ಒರಗಿಸಿಬಿಡಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಬೆಳಿಗ್ಗೆಯಿಂದ ರಾತ್ರಿ 12ರವರೆಗೆ ಟೀವಿ ನೋಡಿ. ಸೀರಿಯಲ್‌ಗಳಲ್ಲಿ ಚೆಲುವೆಯರು ಧರಿಸಿರೋ ಸೀರೆಗಳನ್ನು ಗಮನಿಸಿದ್ರೆ, ನಿಮ್ಮ ಸೀರೆ ಸೆಲೆಕ್ಷನ್‌ ಸುಲಭವಾಗುತ್ತೆ. ಒಡವೆಗಳನ್ನು ವಿಶೇಷವಾಗಿ ಗಮನಿಸಿ. ಗ್ಲಿಸರಿನ್‌ ಬಾಟಲ್‌ ಅನ್ನು ಸದಾ ಪಕ್ಕದಲ್ಲಿಟ್ಟುಕೊಳ್ಳಿ. ಸಣ್ಣಪುಟ್ಟದ್ದಕ್ಕೆಲ್ಲಾ ಲೀಟರ್‌ಗಟ್ಟಲೇ ಕಣ್ಣೀರು ಸುರಿಸಿ. ಕಣ್ಣೀರಿಗೆ ಸೋಲದ ಗಂಡ(ಹ)ಸು ಯಾವುದೂ ಇಲ್ಲ! ಅದು ನಿಮಗೆ ಗೊತ್ತಿರಲಿ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;‘ನಮ್ಮಪ್ಪನ ಮನೇಲಿ ಹೆಂಗೆಲ್ಲಾ ಇದ್ದೆ? ಎಂಥೆಂಥ ಗಂಡುಗಳು ನನ್ನ ಮೆಚ್ಚಿದ್ದರು. ನನ್ನ ಗ್ರಹಚಾರ ನೀವು ಗಂಟು ಬಿದ್ರಿ’ ಅಂತ ಮೊಟಕುತ್ತಿರಿ. ಗಂಡ(ಹ)ಸು ಮೆತ್ತಾಗಾಗದಿದ್ರೆ ಕೇಳಿ. ನಿಮ್ಮ ಅಕ್ಕಪಕ್ಕದ ಮಹಿಳಾ ಸಂಘ ಹಾಗೂ ವನಿತಾ ಜಾಗೃತಿ ಮಂಡಳಿಗಳ ಸದಸ್ಯತ್ವ ಪಡೆಯಿರಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮಹಿಳಾ ಸಂಘಗಳು ಪುರುಷರಿಗೆ ಮಂಗಳಾರತಿ ಎತ್ತಿದ್ದನ್ನು ರೆಕ್ಕೆಪುಕ್ಕ ಕಟ್ಟಿ ನಿಮ್ಮ ಗಂಡನ ಮುಂದೆ ಬಣ್ಣಿಸಿ. ನಿಮ್ಮ ಗತ್ತು-ದೌಲತ್ತುಗಳ ಪ್ರದರ್ಶನಕ್ಕೆ ಆಗಾಗ ಸನ್ಮಾನಗಳನ್ನು ಮಾಡಿಸಿಕೊಳ್ಳಿ. ಸಂಘ ಸಂಸ್ಥೆಗಳಿಗೆ ಉದಾರವಾಗಿ ದೇಣಿಗೆ ನೀಡಿದ್ರೆ ಸನ್ಮಾನಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ಆಗ ನಿಮ್ಮ ಬಗ್ಗೆ ಗಂಡನಿಗೆ ಒಂದು ಮೂಲೆಯಲ್ಲಿ ಭಯ ಹುಟ್ಟುತ್ತೆ! ಭಯಯಿದ್ರೆ ನಿಮ್ಮ ತಾಳಕ್ಕೆ ಹೆಜ್ಜೆ ಹಾಕ್ತಾನೆ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಸದ್ಯಕ್ಕೆ ಇಷ್ಟು ಸಾಕು. ಮತ್ತಷ್ಟು ‘ಮನೆಹಾಳ್‌’ ಐಡಿಯಾಗಳೊಂದಿಗೆ ಇನ್ನೊಂದು ಸಲ ಬರ್ತೇನೆ.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;strong&gt;(ಎಚ್ಚರಿಕೆ : ಈ ಲೇಖನ ಓದುವುದು ಗಂಡಸರ ಆರೋಗ್ಯಕ್ಕೆ ಒಳ್ಳೆಯದು!)&lt;/strong&gt;&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-4631416764100175423?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/4631416764100175423/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=4631416764100175423' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/4631416764100175423'/><link rel='self' type='application/atom+xml' href='http://www.blogger.com/feeds/2189102912389204330/posts/default/4631416764100175423'/><link rel='alternate' type='text/html' href='http://kanasinaramane.blogspot.com/2007/07/blog-post_1576.html' title='ಹೆಂಗಸರಿಗಾಗಿ ಮಾತ್ರ!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_eDo9m8Nl3wg/Rp4dhH7cYTI/AAAAAAAAABU/Mf7EKjXLO1g/s72-c/wife1.gif' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-893131920200761300</id><published>2007-07-18T19:13:00.000+05:30</published><updated>2008-12-11T09:19:25.528+05:30</updated><title type='text'>ಹುಟ್ಟಿದ ಹಬ್ಬದದಿನ 'ದುರಂತ ನಾಯಕಿ' ಕಲ್ಪನಾ ನೆನಪು!</title><content type='html'>&lt;a href="http://2.bp.blogspot.com/_eDo9m8Nl3wg/Rp4ZqX7cYSI/AAAAAAAAABM/tu0_qb3bVZY/s1600-h/kalpana.jpg"&gt;&lt;img id="BLOGGER_PHOTO_ID_5088532844743778594" style="DISPLAY: block; MARGIN: 0px auto 10px; CURSOR: hand; TEXT-ALIGN: center" alt="" src="http://2.bp.blogspot.com/_eDo9m8Nl3wg/Rp4ZqX7cYSI/AAAAAAAAABM/tu0_qb3bVZY/s320/kalpana.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;ಏನೇ ಆಗಲಿ, ಮಿನುಗುತಾರೆ ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.&lt;/span&gt; &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಕನ್ನಡ ಚಿತ್ರರಂಗದ ದುರಂತ ನಾಯಕಿಯರಲ್ಲಿ ಕಲ್ಪನಾ ಸಹಾ ಒಬ್ಬರು! ಇಂದು ಅವರನ್ನು ನೆನೆಯಲೊಂದು ನೆಪ ಸಿಕ್ಕಿದೆ. ಬದುಕಿದ್ದಷ್ಟು ವರ್ಷ, ಚಿತ್ರರಸಿಕರ ರಂಜಿಸಿದವರು ಕಲ್ಪನಾ. ಇಂದು(ಜು.18) ಅವರು ನಮ್ಮೊಂದಿಗೆ ಇದ್ದಿದ್ದರೆ, ಸಂಭ್ರಮದ ಹ್ಯಾಪಿ ಬರ್ತ್‌ ಡೇ ಹೇಳಬಹುದಿತ್ತು.. ಆ ಅವಕಾಶ ನಮಗೆನಿಮಗೆ ಇಲ್ಲ ಬಿಡಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಬೆಳ್ಳಿಮೋಡ, ಶರಪಂಜರ, ಎರಡು ಕನಸು ಮತ್ತಿತರ ಚಿತ್ರಗಳಲ್ಲಿನ ಪಾತ್ರಗಳು ಕಲ್ಪನಾಗೆ 'ದುರಂತ ನಾಯಕಿ' ಎಂಬ ಬಿರುದನ್ನೇ ಕೊಟ್ಟಿದ್ದವು. ಬಾಳಸಂಗಾತಿಯಾಗಲು ಆತ ಬಂದೇ ಬರುತ್ತಾನೆ.. ನನ್ನನ್ನು ಆತ ಮದುವೆಯಾಗುತ್ತಾನೆ ಎಂಬ ಕಲ್ಪನಾರ ಕನಸು, ಕಲ್ಪನೆಯೇ ಆಯಿತು. ಮುರಿದ ಮನಸ್ಸು, ಆತ್ಮಹತ್ಯೆಗೆ ಪ್ರೇರಣೆ ನೀಡಿತು. ಕೈ ಬೆರಳಿನಲ್ಲಿದ್ದ ವಜ್ರದ ಉಂಗುರ , ಸಾವಿಗೆ ನೆರವು ನೀಡುವುದಾಗಿ ಹೇಳಿತು! ನೆರವನ್ನು ಕಲ್ಪನಾ ನಿರಾಕರಿಸಲಿಲ್ಲ. ಆ ಮೂಲಕ ಬದುಕಿಗೆ ಮಧ್ಯದಲ್ಲಿ ಫುಲ್‌ಸ್ಟಾಪ್ ಇಟ್ಟು, ನಿಜ ಬದುಕಿನಲ್ಲೂ ಕಲ್ಪನಾ 'ದುರಂತ ನಾಯಕಿ'ಯೇ ಆದರು ಎನ್ನುತ್ತಾರೆ ಕೆಲವರು. ಕಲ್ಪನಾಗೆ ಕೈಕೊಟ್ಟವರು ಯಾರು? ಉತ್ತರಿಸಲು ಅವರಿಲ್ಲ.. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಸ್ತ್ರೀ ನಾಟಕ ಮಂಡಳಿ ಮುಖಾಂತರ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಮಿನುಗುತಾರೆ. ಅವರು ಹುಟ್ಟಿದ್ದು ಮಂಗಳೂರಿನಲ್ಲಿ. ಕೃಷ್ಣಮೂರ್ತಿ ಮತ್ತು ಜಾನಕಮ್ಮ ದಂಪತಿಗಳ ಮಗಳಾದ ಕಲ್ಪನಾಗೆ, ಹೈಸ್ಕೂಲಿನಲ್ಲಿದ್ದಾಗಲೇ ನಾಟಕಗಳತ್ತ ಆಸಕ್ತಿ. ಮುಖಕ್ಕೆ ಬಣ್ಣ ಬಳಿಸಿಕೊಳ್ಳುವ ಹಂಬಲ. ಅವರ ಅಭಿನಯಕ್ಕೆ ವೇದಿಕೆ ಕಲ್ಪಿಸಿದ್ದು ; ರಂಗಭೂಮಿಯ ಗುಡಿಗೇರಿ ಬಸವರಾಜು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;'ಸಾಕುಮಗಳು' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಕಲ್ಪನಾ, ಕೃಷ್ಣಗಾರುಡಿ, ಸಂಸಾರ ನೌಕೆ, ಬೆಳ್ಳಿ ಮೋಡ, ನಾಂದಿ, ಬಂಗಾರದ ಹೂ, ಗೆಜ್ಜೆಪೂಜೆ, ಶರಪಂಜರ, ಉಯ್ಯಾಲೆ, ಸರ್ವಮಂಗಳ ಹೀಗೆ ಸುಮಾರು 50ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. 3ಸಲ ರಾಜ್ಯ ಸರ್ಕಾರದ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದಿದ್ದ ಕಲ್ಪನಾಗೆ ಪುಸ್ತಕ ಓದುವ ಹವ್ಯಾಸವೂ ಇತ್ತು.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ತಮ್ಮ ಹೃದಯಸ್ಪರ್ಶಿ ಅಭಿನಯದಿಂದಾಗಿಯೇ, ಕಲ್ಪನಾ ಇಂದಿಗೂ ಮಿನುಗುತಾರೆ ಆಗಿಯೇ ಉಳಿದಿದ್ದಾರೆ. 'ಮುದ್ದಿನ ಗಿಣಿಯೇ ಬಾರೋ....', 'ಅರೆರೆರೇ ಗಿಣಿರಾಮ..' ಮತ್ತಿತರ ಹಾಡುಗಳು ಟೀವಿಯಲ್ಲಿ ಬಂದಾಗಲೆಲ್ಲಾ ಕಲ್ಪನಾ ಕಣ್ಮುಂದೆ ನಿಲ್ಲುತ್ತಾರೆ. ಏನೇ ಆಗಲಿ, ಕಲ್ಪನಾ ಇನ್ನು ಸ್ವಲ್ಪ ದಿನ ನಮ್ಮ ಜೊತೆ ಇರಬೇಕಿತ್ತು.&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-893131920200761300?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/893131920200761300/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=893131920200761300' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/893131920200761300'/><link rel='self' type='application/atom+xml' href='http://www.blogger.com/feeds/2189102912389204330/posts/default/893131920200761300'/><link rel='alternate' type='text/html' href='http://kanasinaramane.blogspot.com/2007/07/blog-post_8982.html' title='ಹುಟ್ಟಿದ ಹಬ್ಬದದಿನ &apos;ದುರಂತ ನಾಯಕಿ&apos; ಕಲ್ಪನಾ ನೆನಪು!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_eDo9m8Nl3wg/Rp4ZqX7cYSI/AAAAAAAAABM/tu0_qb3bVZY/s72-c/kalpana.jpg' height='72' width='72'/><thr:total>1</thr:total></entry><entry><id>tag:blogger.com,1999:blog-2189102912389204330.post-452145057149645811</id><published>2007-07-17T17:17:00.000+05:30</published><updated>2008-12-11T09:19:25.803+05:30</updated><title type='text'>ಇಂದು ಪ್ರೀತಿ! ನಾಳೆಯೇ ಮದುವೆ! ನಾಡಿದ್ದು ವಿಚ್ಛೇದನ!</title><content type='html'>&lt;a href="http://2.bp.blogspot.com/_eDo9m8Nl3wg/Rpysz37cYQI/AAAAAAAAAA4/6ljO0e03dyY/s1600-h/divorce.jpg"&gt;&lt;img id="BLOGGER_PHOTO_ID_5088131686208397570" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_eDo9m8Nl3wg/Rpysz37cYQI/AAAAAAAAAA4/6ljO0e03dyY/s320/divorce.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;ಹಿಂದೆ ಹೆಂಡತಿ ಬಿಟ್ಟವನು, ಗಂಡನ ಬಿಟ್ಟವಳು ಎಂದು ಸಂಬಂಧ ಒಲ್ಲೆ ಎಂದವರನ್ನು ಸಮಾಜ ದೂಷಿಸುತ್ತಿತ್ತು! ಆದರೆ ಇಂದು? ಯಾರು ಮನೆ ದೋಸೆ ನೆಟ್ಟಗಿದೆ?&lt;/span&gt; &lt;/div&gt;&lt;div&gt; &lt;/div&gt;&lt;div&gt;ಉದ್ಯಾನ ನಗರಿ, ಐಟಿ ನಗರಿ ಎಂಬ ಖ್ಯಾತಿಯ ಬೆಂಗಳೂರು, ವಿಚ್ಛೇದಿತರ ನಗರಿ ಎಂದು ಸದ್ಯದಲ್ಲೇ ಕುಖ್ಯಾತವಾದರೆ ಅಚ್ಚರಿಯೇನಿಲ್ಲ! &lt;/div&gt;&lt;br /&gt;&lt;div&gt;&lt;br /&gt;ನವದೆಹಲಿಯನ್ನು ಹೊರತುಪಡಿಸಿದರೆ, ಬೆಂಗಳೂರಿನಲ್ಲಿಯೇ ವಿಚ್ಛೇದನಗಳು ಹೆಚ್ಚು. ಪ್ರತಿ ವರ್ಷ 4ಸಾವಿರಕ್ಕೂ ಅಧಿಕ ಮಂದಿ, ವೈವಾಹಿಕ ಸಂಬಂಧವನ್ನು ಮುರಿದುಕೊಳ್ಳುತ್ತಿದ್ದಾರೆ ಎನ್ನುತ್ತವೆ ಅಂಕಿಅಂಶಗಳು. ಈ ವಿಚಾರ ಕೇಳಿ ವಕೀಲರು, ಸಿಹಿ ಹಂಚಿದರಂತೆ ಎಂಬುದು ಕೇವಲ ಕುಹಕ!&lt;/div&gt;&lt;br /&gt;&lt;div&gt;&lt;br /&gt;ಹಿಂದಿನ ಮದುವೆಗೂ, ಇಂದಿನ ಮದುವೆಗೂ ವ್ಯತ್ಯಾಸಗಳಿವೆ. ಮದುವೆ ಎನ್ನುವುದು ಮೊದಲು, ಮನೆಮಂದಿ ಸಂಭ್ರಮಿಸುವ ಹಬ್ಬವಾಗಿತ್ತು. ಮನೆಗೆ ಬರುವ ಸೊಸೆ, ಗಂಡನ ಜೊತೆಗೆ ಮನೆಮಂದಿ ಜೊತೆಗೂ ಹೊಂದಿಕೊಳ್ಳಬೇಕಿತ್ತು. ಸಂಸಾರದಲ್ಲಿ ಸರಿಗಮವಿತ್ತು. ಎಲ್ಲೂ ಅಪಸ್ವರವಿರಲಿಲ್ಲ. ಗಂಡಹೆಂಡಿರ ಜಗಳ ಉಂಡು ಮಲಗಿದರೆ ಮುಗಿಯುತ್ತಿತ್ತು. ಮುಗಿಯದಿದ್ದರೆ, ಮನೆ ಹಿರಿಯರು ಬುದ್ಧಿ ಹೇಳಿ ಮುಗಿಸುತ್ತಿದ್ದರು. ಆದರೆ ಈಗ? ಇಂದು ಪ್ರೀತಿ, ನಾಳೆ ಮದುವೆ, ನಾಡಿದ್ದು ವಿಚ್ಛೇದನ! &lt;/div&gt;&lt;br /&gt;&lt;div&gt;&lt;br /&gt;ಈಗಿನ ಗಂಡಹೆಂಡಿರ ಜಗತ್ತಿನಲ್ಲಿ ಯಾರೂ ಇಲ್ಲ! ಯಾರೂ ಅವರಿಗೆ ಬೇಕಾಗಿಲ್ಲ! ಮುನಿದರೆ ಸಮಾಧಾನ ಹೇಳಲು ಮನೆಯಲ್ಲಿ ಹಿರಿಯರಿಲ್ಲ! ಇದ್ದರೂ ಅವರ ಮಾತಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ. ಅವಸರದ ಆಧುನಿಕ ಜಗತ್ತು ನಮ್ಮನ್ನು ಎಲ್ಲಿಗೆ ತಂದು ನಿಲ್ಲಿಸುತ್ತದೆಯೋ? &lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-452145057149645811?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/452145057149645811/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=452145057149645811' title='2 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/452145057149645811'/><link rel='self' type='application/atom+xml' href='http://www.blogger.com/feeds/2189102912389204330/posts/default/452145057149645811'/><link rel='alternate' type='text/html' href='http://kanasinaramane.blogspot.com/2007/07/blog-post.html' title='ಇಂದು ಪ್ರೀತಿ! ನಾಳೆಯೇ ಮದುವೆ! ನಾಡಿದ್ದು ವಿಚ್ಛೇದನ!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_eDo9m8Nl3wg/Rpysz37cYQI/AAAAAAAAAA4/6ljO0e03dyY/s72-c/divorce.jpg' height='72' width='72'/><thr:total>2</thr:total></entry><entry><id>tag:blogger.com,1999:blog-2189102912389204330.post-5888124074316409899</id><published>2007-07-04T09:47:00.000+05:30</published><updated>2008-12-11T09:19:26.214+05:30</updated><title type='text'>ಟಾಪ್‌-5 : ಇದು ಒಂದು ಮುತ್ತಿನ ಕಥೆ!</title><content type='html'>&lt;a href="http://3.bp.blogspot.com/_eDo9m8Nl3wg/RosgzQ68lcI/AAAAAAAAAAw/FCBf4A_3_Tg/s1600-h/raj.jpg"&gt;&lt;img id="BLOGGER_PHOTO_ID_5083192669505361346" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_eDo9m8Nl3wg/RosgzQ68lcI/AAAAAAAAAAw/FCBf4A_3_Tg/s320/raj.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;&lt;/span&gt; &lt;/div&gt;&lt;div&gt;&lt;span style="color:#009900;"&gt;&lt;/span&gt; &lt;/div&gt;&lt;div&gt;&lt;span style="color:#009900;"&gt;ರಾಜ್‌ಕುಮಾರ್‌ ಎಲ್ಲಿಂದಲೋ ಬಂದವರಲ್ಲ.. ನಮ್ಮಂತೆಯೇ ನಮ್ಮ ಮಧ್ಯೆಯೇ ಇದ್ದವರು. ಎತ್ತರೆತ್ತರ ಬೆಳೆದವರು. ಅವರು ಬೆಳೆಯುವುದರ ಹಿಂದೆ ಶ್ರಮದ ಬೆವರಿತ್ತು. ರಾಜ್‌ರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪದೇ ಪದೇ ಕೇಳಲ್ಪಡುವ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು...&lt;/span&gt;&lt;/div&gt;&lt;br /&gt;&lt;div&gt;&lt;span style="color:#009900;"&gt;&lt;/span&gt;&lt;/div&gt;&lt;br /&gt;&lt;div&gt;&lt;strong&gt;&lt;/strong&gt; &lt;/div&gt;&lt;div&gt;&lt;strong&gt;&lt;/strong&gt; &lt;/div&gt;&lt;div&gt;&lt;strong&gt;&lt;/strong&gt; &lt;/div&gt;&lt;div&gt;&lt;strong&gt;ರಾಜ್‌ ಇಷ್ಟವಾಗಲು 5 ಕಾರಣಗಳು :&lt;/strong&gt;&lt;br /&gt;&lt;/div&gt;&lt;div&gt;1. ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗಲಿಲ್ಲ.&lt;br /&gt;2. ಜಾತಿಯಿಂದ ಗುರ್ತಿಸಿಕೊಳ್ಳಲಿಲ್ಲ.&lt;br /&gt;3. ರಾಜಕೀಯಕ್ಕೆ ಹೋಗಲಿಲ್ಲ.&lt;br /&gt;4. ಕೀರ್ತಿ ಕಿರೀಟ ತಲೆ ಮೇಲೆ ಕುಂತರೂ, ವಿನಯವಂತಿಕೆ ಬಿಡಲಿಲ್ಲ.&lt;br /&gt;5. ಹತ್ತಿದ ಏಣಿ ಒದೆಯದೇ, ಅಭಿಮಾನಿಗಳ ದೇವರೆಂದು ಗುರ್ತಿಸುವ ಬುದ್ದಿ.&lt;br /&gt;&lt;/div&gt;&lt;div&gt;&lt;strong&gt;ರಾಜ್‌ ಹೆಗ್ಗಳಿಕೆ ಕಾರಣವಾದ 5 ಅಂಶಗಳು :&lt;/strong&gt;&lt;br /&gt;&lt;/div&gt;&lt;div&gt;&lt;br /&gt;1. ಗಾಯಕ ಮತ್ತು ನಾಯಕನಾಗಿ ಯಶಸ್ಸು.&lt;br /&gt;2. ಸುಸ್ಪಷ್ಟ ಕನ್ನಡ.&lt;br /&gt;3. ಎಲ್ಲಾ ಪಾತ್ರಕ್ಕೂ ಸೈ..&lt;br /&gt;4. ಸ್ಯಾಂಡಲ್‌ವುಡ್‌ ಇತಿಹಾಸ ಶ್ರೀಮಂತಗೊಳಿಸಿದ್ದು.&lt;br /&gt;5. ನಟನಾಗಿ ಉಳಿಯದೇ ನಾಡು-ನುಡಿಗಾಗಿ ಕೈ ಎತ್ತಿದ್ದು.&lt;br /&gt;&lt;/div&gt;&lt;div&gt;&lt;strong&gt;ರಾಜ್‌ ಬಗೆಗಿನ 5 ಟೀಕೆಗಳು :&lt;/strong&gt;&lt;br /&gt;&lt;/div&gt;&lt;div&gt;&lt;br /&gt;1. ಅಗತ್ಯಕ್ಕಿಂತ ಹೆಚ್ಚಿನ ಮುಗ್ಧತೆ.&lt;br /&gt;2. ನರಹಂತಕ ವೀರಪ್ಪನ್‌ ಅಂಗಳದಿ ನಿಂತು, ‘ನನ್ನನ್ನು ಇಲ್ಲಿಂದ ನಾಡಿಗೆ ಕರೆಸಿಕೊಳ್ಳಿ’ ಎಂದು ಸರ್ಕಾರಕ್ಕೆ ಧೈನ್ಯತೆಯಿಂದ ಕೈಜೋಡಿಸಿದ್ದು.&lt;br /&gt;3. ರಾಜ್‌ ಅಭಿಮಾನಿ ಸಂಘ, ರಜನಿ ಮತ್ತು ಚಿರಂಜೀವಿ ಅಭಿಮಾನಿ ಸಂಘದಂತೆ ಹೆಚ್ಚು ಸಮಾಜಮುಖಿಯಾಗಲಿಲ್ಲ. ಕೆಲವು ಸಲ ಅಭಿಮಾನಿ ಸಂಘದ ಪುಂಡಾಟಕ್ಕೆ ರಾಜ್‌ ಕಡಿವಾಣ ಹಾಕಲಿಲ್ಲ.&lt;br /&gt;4. ತಮ್ಮೊಳಗಿನ ಶಕ್ತಿಯನ್ನು ಬಳಸಿಕೊಂಡು, ಕರ್ನಾಟಕವನ್ನು ಸಮರ್ಥವಾಗಿ ಬಲಪಡಿಸಲಿಲ್ಲ. &lt;/div&gt;&lt;div&gt;5. ಟೀಕೆ ಮಾಡುವುದಕ್ಕಾಗಿಯೇ ಕೆಲವು ಟೀಕೆಗಳು..&lt;br /&gt;&lt;/div&gt;&lt;div&gt;&lt;strong&gt;ರಾಜ್‌ ನಾಡಿಗೇನು ಕೊಟ್ಟರು? 5 ವಿಚಾರಗಳು...&lt;/strong&gt;&lt;br /&gt;&lt;/div&gt;&lt;div&gt;&lt;br /&gt;1. ತಮ್ಮೆರಡು ಕಣ್ಣುಗಳ ಕೊಟ್ಟು, ಕೋಟ್ಯಂತರ ಅಭಿಮಾನಿಗಳಿಗೆ ಪ್ರೇರಣೆ ನೀಡಿದರು. ಸಾವಿರಾರು ದೃಷ್ಟಿಹೀನರಿಗೆ ಈ ಪರಿಣಾಮ, ಭರವಸೆಯ ಬೆಳಕು.&lt;br /&gt;2. ತಮ್ಮ ಚಿತ್ರಗಳ ಮೂಲಕ ಕೌಟುಂಬಿಕ ಸಾಮರಸ್ಯಕ್ಕೆ ಕೊಡುಗೆ.&lt;br /&gt;3. ಕೊನೆ ಉಸಿರಿಡುವ ತನಕ, ಅಭಿಮಾನಿಗಳಿಗೆ ಪ್ರೀತಿಯ ಸಿಂಚನ.&lt;br /&gt;4. ಇತಿಹಾಸ, ಪುರಾಣ, ಸಂತರ ಚಿತ್ರವನ್ನು ಮತ್ತು ನಾಡ ಸಂಸ್ಕೃತಿಯನ್ನು ತಮ್ಮ ಪಾತ್ರಗಳ ಮೂಲಕ, ರಾಜ್‌ ಎಲ್ಲರ ಎದೆಯಲ್ಲಿ ಬಿತ್ತಿದ್ದು..&lt;br /&gt;5. ತಮ್ಮ ಚಿತ್ರಗಳ ಮೂಲಕ ಶಿಕ್ಷಕನಂತೆ ನಿಂತು, ಸಭ್ಯ ಪ್ರಜೆಗಳ ಸೃಷ್ಟಿಸಿದ್ದು..&lt;br /&gt;&lt;/div&gt;&lt;div&gt;&lt;strong&gt;ರಾಜ್‌ ಯಶಸ್ಸಿನಿಂದಿನ 5 ಕಾರಣಗಳು :&lt;/strong&gt;&lt;/div&gt;&lt;div&gt; &lt;/div&gt;&lt;div&gt;1. ಪಾರ್ವತಮ್ಮ ರಾಜ್‌ ಕುಮಾರ್‌.&lt;br /&gt;2. ಕನ್ನಡತನಕ್ಕೆ ಅಂಟಿಕೊಂಡದ್ದು.&lt;br /&gt;3. ಅಭಿಮಾನಿಗಳ ಪ್ರೀತಿ.&lt;br /&gt;4. ಪ್ರತಿಭೆ ಮತ್ತು ಶ್ರಮದ ಸಮ್ಮಿಲನ.&lt;br /&gt;5. ಅದೃಷ್ಟ &lt;/div&gt;&lt;div&gt; &lt;/div&gt;&lt;div&gt;ಮೇಲಿನ ವಿಚಾರಗಳಿಗೆ ನಿಮ್ಮ ಸಮ್ಮತಿ ಇದೆಯಾ? ಅಥವಾ ಏನಾದರೂ ತಕರಾರಿದ್ದರೇ &lt;a class="kanuni" href="mailto:feedback@thatskannada.com"&gt;&lt;span style="color:#663366;"&gt;ನಾಲ್ಕು ಸಾಲು ಬರೆಯಿರಿ..&lt;/span&gt;&lt;/a&gt; &lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-5888124074316409899?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/5888124074316409899/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=5888124074316409899' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/5888124074316409899'/><link rel='self' type='application/atom+xml' href='http://www.blogger.com/feeds/2189102912389204330/posts/default/5888124074316409899'/><link rel='alternate' type='text/html' href='http://kanasinaramane.blogspot.com/2007/07/5.html' title='ಟಾಪ್‌-5 : ಇದು ಒಂದು ಮುತ್ತಿನ ಕಥೆ!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eDo9m8Nl3wg/RosgzQ68lcI/AAAAAAAAAAw/FCBf4A_3_Tg/s72-c/raj.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-2569151141121454164</id><published>2007-06-28T13:19:00.000+05:30</published><updated>2007-06-28T13:25:28.429+05:30</updated><title type='text'>ಇದು ನಾವು ನೋಡಿದ್ದು, ನಂಬಿದರೆ ನಂಬಿ ಬಿಟ್ಟರೆ ಬಿಡಿ..!?</title><content type='html'>&lt;a href="http://thatskannada.oneindia.in/pics/general/devi1.jpg"&gt;&lt;img style="FLOAT: left; MARGIN: 0px 10px 10px 0px; WIDTH: 320px; CURSOR: hand" alt="" src="http://thatskannada.oneindia.in/pics/general/devi1.jpg" border="0" /&gt;&lt;/a&gt;&lt;br /&gt;&lt;div&gt;&lt;span style="color:#009900;"&gt;ಈ ಕಾಲದಲ್ಲೂ ಇದೆಲ್ಲ ಏನ್ರೀ? ಚಂಡಿಯಂತೆ? ಚೌಡೇಶ್ವರಿಯಂತೆ ಎಂದು ಬಾಯಿ ಸೊಟ್ಟಗೆ ಮಾಡಬೇಡಿ. ವಿಜ್ಞಾನ ಲೋಕಕ್ಕೆ ಸವಾಲು ಹಾಕುವಂತಹ ನಿದರ್ಶನವೊಂದು ನಮ್ಮ ನಡುವೆಯೇ ಇದೆ!!!&lt;/span&gt;&lt;/div&gt;&lt;br /&gt;&lt;div&gt;&lt;span style="color:#009900;"&gt;&lt;/span&gt;&lt;/div&gt;&lt;br /&gt;&lt;div&gt;ನಂಬೋರು ನಂಬಬಹುದು. ನಂಬಲ್ಲ ಅನ್ನೋರು, ಕಾರಣ ಕೊಟ್ಟರೇ, ಒಳ್ಳೆಯದು. ಕಾರಣ ಸದ್ಯಕ್ಕೆ ತೋಚುತ್ತಿಲ್ಲ ಎಂದ ಮಾತ್ರಕ್ಕೆ ವಿಚಾರವಂತರೆಲ್ಲರೂ, ದೇವರಿಗೆ ಅಡ್ಡಡ್ಡ ಬೀಳಿ ಎಂದು ಹೇಳುವುದು ನನ್ನ ಉದ್ದೇಶವಲ್ಲ. ಹೀಗೂ ಉಂಟು? ಅದೇ, ಯಾಕೆ ಹೀಗೆ ಎಂಬುದು ಜಗತ್ತಿಗೆ ಗೊತ್ತಾದರೆ ಒಳ್ಳೆಯದು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮಂತ್ರಕ್ಕಿಂತಲೂ ಉಗುಳೇ ಜಾಸ್ತಿಯಾಯಿತು ಎಂದು ಬೇಸರಿಸಿಕೊಳ್ಳಬೇಡಿ. ಇನ್ನು ನೇರವಾಗಿ ವಿಚಾರಕ್ಕೆ ಬರುತ್ತೇನೆ. ಹಾಸನಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೆಗ್ಗಡಿಗೆರೆ ಅನ್ನುವುದು ಒಂದು ಕುಗ್ರಾಮ. ಆದರೆ ಅದೀಗ ಜಯಮ್ಮ ಎಂಬಾಕೆಯಿಂದ, ಎಲ್ಲರ ಗಮನ ಸೆಳೆಯುತ್ತಿದೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಈ ಜಯಮ್ಮ ಎಂಬ ಮಹಿಳೆ ಕಳೆದ 8ವರ್ಷದಿಂದ ಅನ್ನ-ನೀರು ಮುಟ್ಟಿಲ್ಲ. ಹಾಸಿಗೆ ಬಿಟ್ಟು ಎದ್ದಿಲ್ಲ! ಆಕೆಯನ್ನು ಸಾಕ್ಷಾತ್ ಚೌಡೇಶ್ವರಿದೇವಿ ಎಂದು ನಂಬುವ ಮಂದಿ ಗ್ರಾಮದಲ್ಲಿ ಬಹುಸಂಖ್ಯಾತರು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಕತ್ತಲ ಕೋಣೆಯ ಹಾಸಿಗೆ ಮೇಲೆ ದಪ್ಪನೆಯ ಉಲ್ಲನ್ ರಗ್ಗಿನಡಿ ಮಲಗಿರುವ ಜಯಮ್ಮ, ಕಳೆದ 8ವರ್ಷಗಳಲ್ಲಿ 3 ಸಲ ಮಾತ್ರ ಹಾಸಿಗೆ ಬಿಟ್ಟು ಎದ್ದಿದ್ದಾಳೆ. ಬಯಲಿಗೆ ಬಂದಿದ್ದಾಳೆ. ಊರಲ್ಲಿ ಚೌಡೇಶ್ವರಿ ಉತ್ಸವವಿದ್ದರೇ ಮಾತ್ರ, ಅವಳು ಹಾಸಿಗೆ ಬಿಟ್ಟು ಮೇಲಕ್ಕೆ ಏಳುತ್ತಾಳೆ. ದೇವಸ್ಥಾನಕ್ಕೆ ಬರುತ್ತಾಳೆ. ಆಮೇಲೆ ತಾನುಂಟು, ತನ್ನ ಹಾಸಿಗೆಯುಂಟು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಹಾಸಿಗೆ ಮೇಲೆ ಮಲಗುವ ಅವಳು ಬದುಕಿದ್ದಾಳೆ ಅನ್ನುವುದಕ್ಕೆ ಒಂದೇ ನಿದರ್ಶನ, ಉಸಿರಾಟ! ಇಂಥದ್ದೊಂದು ವಿಲಕ್ಷಣ ಸಂಗತಿಯನ್ನು ಟೀವಿ 9ತಂಡ, ತಮ್ಮ ಕ್ಯಾಮೆರಾದಲ್ಲಿ ಸೆರೆ ಹಿಡಿದಿದೆ. ಕಳೆದ ಭಾನುವಾರ 'ಹೀಗೂ ಉಂಟು?!' ಕಾರ್ಯಕ್ರಮದಲ್ಲಿ, ಜಯಮ್ಮನ ಬಗ್ಗೆ ಸಾಕಷ್ಟು ವಿಚಾರಗಳು ಪ್ರಸ್ತಾಪವಾದವು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಜಯಮ್ಮ ಮೊದಲು ಹೀಗಿರಲಿಲ್ಲ. ಎಲ್ಲ ಹೆಣ್ಣು ಮಕ್ಕಳಂತೆಯೇ ಇದ್ದಳು. ಮನೆ ಹಿತಕ್ಕಾಗಿ ಕೂಲಿ ಮಾಡುತ್ತಿದ್ದಳು. ಸಮಾಜದಲ್ಲಿ ನಮ್ಮದೂ ಒಂದು ಮನೆ ಅಂತ ಆಗಲಿ ಎಂದು ಕಾಸಿಗೆ ಕಾಸು ಸೇರಿಸುತ್ತಿದ್ದಳು. ಆಕೆ ದಿಟ್ಟೆ, ಜೊತೆಗೆ ಸ್ವಾಭಿಮಾನಿ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಇನ್ನೂ ವಿಚಿತ್ರವೆಂದರೆ ಜಯಮ್ಮ ಮದುವೆ ಸಹಾ ಆಗಿದ್ದಾಳೆ. ಹೊಳೆ ನರಸೀಪುರದ ಗಂಡನ ಮನೆಯಲ್ಲಿ ಆಕೆ ಒಂದು ದಿನ ಸಹಾ ಸರಿಯಾಗಿ ಸಂಸಾರ ಮಾಡಿಲ್ಲ. ಪ್ರಥಮ ರಾತ್ರಿಯ ದಿನವೇ, ಜಯಮ್ಮನನ್ನು 'ಅಕ್ಕ' ಎಂದು ಸ್ವತಃ ಆಕೆಯ ಗಂಡನೇ ಸಂಬೋಧಿಸಿದ್ದಾನೆ. ಹೆಂಡತಿಯನ್ನು ತವರಿಗೆ ಬಿಟ್ಟು, ಈ ಸಂಸಾರ ಬೇಡ ಎಂದು ವಾಪಸ್ಸು ಹೋಗಿದ್ದಾನೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಜಯಮ್ಮ ಊಟ ಮಾಡುತ್ತಿಲ್ಲ ಎಂದು ಆಕೆಯ ಅಣ್ಣ ರಮೇಶ್ ಮತ್ತು ಮನೆಯವರು ತಲೆ ಕೆಡಿಸಿಕೊಂಡಿದ್ದಾರೆ. ಸಾಲ-ಶೂಲ ಮಾಡಿ, ಮನೆಯಲ್ಲಿರುವ ಚಿನ್ನಾಭರಣ ಮಾರಿ, ತಮಗೆ ಸಾಧ್ಯವಿರುವ ವೈದ್ಯರನ್ನೆಲ್ಲ ಸಂಪರ್ಕಿಸಿದ್ದಾರೆ. ವೈದ್ಯರೆಲ್ಲರೂ, ದಿಕ್ಕು ತೋಚದೇ ಆಕಾಶ ನೋಡಿದಾಗ ರಮೇಶ್ ಕಕ್ಕಾಬಿಕ್ಕಿಯಾಗಿದ್ದಾನೆ. ಕೊನೆಗೆ ತಂಗಿಯನ್ನು ಮನೆಗೆ ಕರೆತಂದಿದ್ದಾನೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಮಗಳ ಹಾಸಿಗೆಯ ಪಕ್ಕವೇ ಕೂತಿರುವ ತಾಯಿಗೆ, ಮಗಳು ಸುಧಾರಿಸಿಕೊಂಡರೆ ಸಾಕು ಎನ್ನುವ ಆಸೆ. ಎದ್ದು ಊಟ ಮಾಡಿದರೆ ಸಾಕು ಎಂಬ ಬಯಕೆ. ಚೌಡೇಶ್ವರಿ ಉತ್ಸವ ಮೂರ್ತಿ ಮನೆ ಬಳಿಗೆ ಬಂದರೆ, ಜಯಮ್ಮ ಎದ್ದು ಕೂರುತ್ತಾಳೆ ಎಂಬ ಸಂಗತಿಯನ್ನು ಟೀವಿ 9 ತಂಡ ಪರೀಕ್ಷಿಸಿದೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಜನರು ಹೇಳುವಂತೆ, ಚೌಡೇಶ್ವರಿ ದೇವಿಯ ವಿಗ್ರಹ ಮನೆ ಬಾಗಿಲಿಗೆ ಬಂದ ತಕ್ಷಣ, ಹಾಸಿಗೆಯಿಂದ ತೆವಲಿಕೊಂಡು ಹೊರಬರುವ ಜಯಮ್ಮ ಭಕ್ತಿ ಭಾವದಿಂದ ನಡೆದುಕೊಳ್ಳುತ್ತಾರೆ. ನಂತರ ತಾವಾಗಿಯೇ ಎದ್ದು ನಿಲ್ಲುತ್ತಾರೆ. ಶುಭ್ರವಾಗಿ ಸ್ನಾನ ಮಾಡಿ, ಮಡಿ ಸೀರೆ ಉಟ್ಟು, ಚೌಡೇಶ್ವರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾರೆ. ದೇವಸ್ಥಾನದವರೆಗೆ ನಡೆದುಕೊಂಡು ಹೋಗುತ್ತಾರೆ. ಅವರ ಮುಖದಲ್ಲಿ ಆಯಾಸ ಕಾಣಿಸುವುದೇ ಇಲ್ಲ. ಈ ಪ್ರಕ್ರಿಯೆ ಸತತ 4ಗಂಟೆ ನಡೆಯಿತು. ನಂತರ ಯಥಾ ಪ್ರಕಾರ, ಜಯಮ್ಮ ಹಾಸಿಗೆ ಸೇರಿದರು. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಟೀವಿ 9ತಂಡ ನೀರು ಕುಡಿಸುವ ಪ್ರಯತ್ನ ಮಾಡಿತು. ಬಲವಂತಕ್ಕೆ ನೀರು ಕುಡಿದ ಜಯಮ್ಮ, ಕೆಲವೇ ಸೆಕೆಂಡ್‌ಗಳಲ್ಲಿ ನೀರನ್ನೆಲ್ಲ ವಾಂತಿ ಮಾಡಿದಳು. ಜಯಮ್ಮನಿಗೆ ತಿನ್ನೋದಕ್ಕೆ ಆಸೆ. ಆದರೆ ತಿಂದದ್ದೆಲ್ಲ ವಾಂತಿಯಾಗುತ್ತೆ. ವಾಂತಿಯಲ್ಲಿ ರಕ್ತದ ಉಂಡೆಗಳು ಬೀಳುತ್ತವೆ ಎಂಬುದು ಅವರ ತಾಯಿಯ ವಿವರಣೆ. &lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಇದೆಲ್ಲಾ ಯಾಕೆ ಅನ್ನೋ ಪ್ರಶ್ನೆಗೆ ಜಯಮ್ಮನ ಅಣ್ಣ ರಮೇಶ್ ಉತ್ತರ ನೀಡಿದ್ದಾರೆ. ನಮ್ಮದು ಚೌಡೇಶ್ವರಿ ದೇವಿಯನ್ನು ಪೂಜಿಸುವ ಕುಟುಂಬ. ದೇವಿಗೆ ಅಪಚಾರ ಮಾಡಿದ ನಮ್ಮ ತಂದೆ ಕುಷ್ಟರೋಗಕ್ಕೆ ಬಲಿಯಾದರು. ದೇವಿಯ ಅವಕೃಪೆಯಿಂದ ಹೀಗೆಲ್ಲ ಆಗುತ್ತಿದೆ ಅನ್ನುತ್ತಾರೆ ರಮೇಶ್.&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;ಜಯಮ್ಮನನ್ನು ಊರಿನ ಜನ ಚೌಡೇಶ್ವರಿಯೆಂದೇ ನಂಬಿದ್ದಾರೆ. ಆಕೆಯನ್ನು ಗೇಲಿ ಮಾಡಿದವರು ಅಷ್ಟಕಷ್ಟಗಳಿಗೆ ಸಿಲುಕಿದ ಉದಾಹರಣೆಗಳೂ ಇವೆಯಂತೆ. ಅವರವರ ನಂಬಿಕೆ ಅವರವರಿಗಿರಲಿ. 8ವರ್ಷ ಏನನ್ನೂ ತಿನ್ನದೇ, ಕುಡಿಯದೇ ಜೀವಂತ ಶವದಂತೆ ಹಾಸಿಗೆ ಮೇಲೆ ಬದುಕಲು ಸಾಧ್ಯವೇ? ಅದು ಹೇಗೆ? ಚೌಡೇಶ್ವರಿ ಬಂದಾಗ ಜಯಮ್ಮನ ಮೈಗೆ ಎಲ್ಲಿಂದ ಅಷ್ಟೊಂದು ಶಕ್ತಿ ಬರುತ್ತದೆ? ಮೂರನೇ ಜಗತ್ತಿನ ಇಂಥ ವಿಪರೀತಗಳನ್ನು ಸೀಳಿನೋಡುವುದಕ್ಕೆ ಯಾವ ಪ್ರಯೋಗಾಲಯ, ಯಾವ ಸಂಶೋಧಕನಿಗೆ ಆಸಕ್ತಿಯಿದೆ?&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-2569151141121454164?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/2569151141121454164/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=2569151141121454164' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/2569151141121454164'/><link rel='self' type='application/atom+xml' href='http://www.blogger.com/feeds/2189102912389204330/posts/default/2569151141121454164'/><link rel='alternate' type='text/html' href='http://kanasinaramane.blogspot.com/2007/06/blog-post_28.html' title='ಇದು ನಾವು ನೋಡಿದ್ದು, ನಂಬಿದರೆ ನಂಬಿ ಬಿಟ್ಟರೆ ಬಿಡಿ..!?'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-6152223784806586317</id><published>2007-06-25T16:58:00.000+05:30</published><updated>2008-12-11T09:19:26.475+05:30</updated><title type='text'>ನಟನೆ ಬಿಟ್ಟುಬೇರೆ ಗೊತ್ತಿಲ್ಲ..ನೀವು ಕೈಬಿಡಲಿಲ್ಲ-ಗಣೇಶ್‌</title><content type='html'>&lt;a href="http://3.bp.blogspot.com/_eDo9m8Nl3wg/RoERWSzyFRI/AAAAAAAAAAo/LCKl9HyJBXs/s1600-h/ganesh_moulya.jpg"&gt;&lt;img id="BLOGGER_PHOTO_ID_5080360929354454290" style="FLOAT: left; MARGIN: 0px 10px 10px 0px; CURSOR: hand" alt="" src="http://3.bp.blogspot.com/_eDo9m8Nl3wg/RoERWSzyFRI/AAAAAAAAAAo/LCKl9HyJBXs/s320/ganesh_moulya.jpg" border="0" /&gt;&lt;/a&gt;&lt;br /&gt;&lt;div&gt;&lt;div&gt;ಟ್ವಿಂಕಲ್‌ ಟ್ವಿಂಕಲ್‌ ಲಿಟ್ಟಲ್‌ ಸ್ಟಾರ್‌... ಗಣೇಶ್‌ ಈಗ ಸೂಪರ್‌ ಸ್ಟಾರ್‌’ ಅಂದರೆ ತಪ್ಪಾಗುತ್ತದೆ! ಹೌದು. ‘ಮುಂಗಾರು ಮಳೆ’ಯಿಂದ ಗಣೇಶ್‌ ‘ಸ್ಟಾರ್‌’ಆದರು ಅನ್ನುವಂತಿಲ್ಲ! ಕಾರಣ; ಗಣೇಶ್‌ ಮೊದಲೂ ಸ್ಟಾರ್‌ ಆಗಿದ್ದವರೇ...ಉದಯ ಟೀವಿಯ ‘ಕಾಮಿಡಿ ಟೈಂ’ ಮೂಲಕ ಗಣೇಶ್‌, ನಾಡಿನ ಮನೆಮನೆಯಲ್ಲೂ ಅಭಿಮಾನಿಗಳ ಸೃಷ್ಟಿಸಿಗೊಂಡವರು.&lt;br /&gt;&lt;br /&gt;ಸೂರ್ಯಕಾಂತಿ ಹೂವಿನಂತೆ ಮುಖವರಳಿಸಿ, ಚಿನಕುರುಳಿಯಂತೆ ಮಾತು ಪೋಣಿಸುವ ಈ ಗಣೇಶ್‌ ಇಷ್ಟವಾಗಲು ಕಾರಣಗಳು ಅನೇಕ. ಪಕ್ಕದ ಮನೆ ಹುಡುಗನಂತೆ, ಈ ಹುಡುಗ ನಗ್ತಾನೆ. ಮಾತಾಡ್ತಾನೆ. ಹೀರೋಯಿಸಂನಿಂದ ಹೊರಬಂದು ಎಲ್ಲರೊಂದಿಗೆ ಬೆರೆಯುತ್ತಾನೆ. ಇದು ಅವರನ್ನು ಹತ್ತಿರದಿಂದ ಕಂಡವರು ಹೇಳುವ ಮಾತು.&lt;br /&gt;&lt;br /&gt;ಆದರೆ ಒಂದಂತೂ ನಿಜ. ಶ್ರದ್ಧೆ-ಛಲ ಇದ್ದರೆ ಯಾರು ಬೇಕಾದರೂ ನಾಯಕನಾಗಬಹುದು ಅನ್ನುವುದಕ್ಕೆ ಗಣೇಶ್‌ ನಮ್ಮ ಮುಂದಿನ ಉದಾಹರಣೆ. ಗಾಂಧಿನಗರದಲ್ಲಿ ಅವರು ತುಳಿದ ಸೈಕಲ್‌ ವೆಸ್ಟ್‌ಆಗಿಲ್ಲ. ಅವರಿಗೀಗ ಕಾದದ್ದಕ್ಕೆ ಬಡ್ಡಿ ರೂಪದಲ್ಲಿ... ಚಕ್ರಬಡ್ಡಿ ರೂಪದಲ್ಲಿ ಪ್ರತಿಫಲ ಸಿಕ್ಕಿದೆ. ಅದೃಷ್ಟ ಬಾಗಿಲಿಗೆ ಬಂದು ತಗೋತಗೋ ಎಂದಿದೆ. ಗಣೇಶ್‌ರ ಇನ್ನೊಂದು ಆಸ್ತಿ ನಗೆ. ಈ ಹುಡುಗನ ನಗೆಗೆ ಸೋಲದವರ್ಯಾರು... (ಯೋಗರಾಜ್‌ ಭಟ್‌ಗೆ ಗಣೇಶ್‌ರ ನಗೆಮೊಗ ತುಂಬಾ ಇಷ್ಟವಾಯಿತಂತೆ! ).&lt;br /&gt;&lt;br /&gt;ಈಗಂತೂ ಗಣೇಶ್‌ ಬಿಜಿ. ಈ ಮಧ್ಯೆಯೂ ಬಿಡುವು ಮಾಡಿಕೊಂಡು ಅವರು ಸಂದರ್ಶನ ನೀಡಿದ್ದಾರೆ. ಮಾತುಕತೆಯ ವಿವರ ನಿಮ್ಮ ಮುಂದೆ.&lt;br /&gt;&lt;br /&gt;&lt;strong&gt;ನೀವು ಹೀರೋ ಆಗಲಿಲ್ಲ ಅಂದ್ರೆ ಏನ್‌ ಆಗ್ತಾಯಿದ್ರಿ?&lt;/strong&gt;&lt;br /&gt;&lt;br /&gt;ಏನೂ ಇಲ್ಲ. ಗಣೇಶ್‌ ಆಗಿಯೇ ಇರ್ತಾಯಿದ್ದೆ! ಸಿನಿಮಾಗೆ ಯಾಕೆ ಬಂದೆ ಅಂದ್ರೆ, ನನಗೆ ಅಭಿನಯ ಬಿಟ್ರೆ ಬೇರೇನೂ ಗೊತ್ತಿಲ್ಲ..&lt;br /&gt;&lt;br /&gt;&lt;strong&gt;‘ಮುಂಗಾರು ಮಳೆ’ ಬಗ್ಗೆ ಹೇಳಿ? ನಿಮಗೆ ಇಷ್ಟವಾದ ಹಾಡು-ಸನ್ನಿವೇಶ- ಯಾವುದು?&lt;/strong&gt;&lt;br /&gt;&lt;br /&gt;ಹೇಳೋದು ಅಂದ್ರೆ, ಸಕತ್ತು ಖುಷಿಯಾಗುತ್ತಿದೆ. ನಾನು ಹೇಳೋದನ್ನು ಪ್ರೇಕ್ಷಕರು ಹೇಳುತ್ತಿದ್ದಾರೆ. ಸಾಕಲ್ವಾ? ನನಗೆ ಎಲ್ಲಾ ಹಾಡು ಇಷ್ಟ. ಅದರಲ್ಲೂ ‘ಅನಿಸುತಿದೆ ಯಾಕೋ ಇಂದು.. ’ ಸಕತ್ತು ಇಷ್ಟ. ಇಷ್ಟದ ಸನ್ನಿವೇಶ -ಹೆಂಡ ಕುಡೀತಾ, ಮಳೆಯಲ್ಲಿ ನೆನೆಯುತ್ತಾ, ಮನದ ಮಾತುಗಳ ಹೇಳುವುದು...&lt;br /&gt;&lt;br /&gt;&lt;strong&gt;ನಿಮ್ಮ ಊರು? ನಿಮ್ಮ ಹಿನ್ನೆಲೆ.. ವಿದ್ಯಾಭ್ಯಾಸ ಇತ್ಯಾದಿ.. ಬಗ್ಗೆ ಒಂದೆರಡು ಮಾತು...&lt;/strong&gt;&lt;br /&gt;&lt;br /&gt;ನನ್ನೂರು, ನೆಲಮಂಗಲ ಬಳಿಯ ಅಡಕೆಮಾರನಹಳ್ಳಿ. ತಂದೆ -ಕಿಷನ್‌, ತಾಯಿ-ಸುಲೋಚನಾ. ನಾನು ಮೂರನೆಯವನು. ನನ್ನ ತಮ್ಮಂದಿರ ಹೆಸರು ಮಹೇಶ್‌ ಮತ್ತು ಉಮೇಶ್‌. ನಮ್ಮಜ್ಜಿ ಸೀತಮ್ಮ. ಈಗ ಬೆಂಗಳೂರಿನ ವಿಜಯನಗರದಲ್ಲಿ ವಾಸ.&lt;br /&gt;&lt;br /&gt;&lt;strong&gt;ಸಿನಿಮಾಗೆ ಯಾಕೆ ಬಂದ್ರಿ?&lt;/strong&gt;&lt;br /&gt;&lt;br /&gt;ವಿದ್ಯೆ ಅರ್ಧಕ್ಕೆ ನೈವೇದ್ಯೆ ಆಯಿತು. ಬಲವಂತಕ್ಕೆ ನೆಲಮಂಗಲದಲ್ಲಿ ಡಿಪ್ಲೋಮೋ ಇನ್‌ ಎಲೆಕ್ಟ್ರಾನಿಕ್ಸ್‌ ಮಾಡ್ತೆ. ಅಲ್ಲಿಗೆ ಸುಸ್ತಾದೆ. ಬಣ್ಣದ ಬದುಕಲ್ಲಿ ಅನ್ನ ಹುಡುಕಿಕೊಳ್ಳೋದು ಅನಿವಾರ್ಯ ವಾಯಿತು. ಸೈಕಲ್‌ ತುಳಿಯೋದು ಮುಂದುವರೆಯಿತು.&lt;br /&gt;&lt;br /&gt;&lt;strong&gt;ನಿಮ್ಮ ಮೊದಲ ಸಿನಿಮಾ?&lt;/strong&gt;&lt;br /&gt;&lt;br /&gt;‘ಠಪೋರಿ’ . ಈ ಚಿತ್ರದಲ್ಲಿ ಖಳನಟನ ಪಾತ್ರ ನನ್ನದು. ಖಳನಟ ಹಾಸ್ಯನಟನಾಗಿ, ನಾಯಕನಟನಾದ. ಎಲ್ಲವೂ ಅಭಿಮಾನಿ ದೇವರ ಆಶೀರ್ವಾದ. ಈ ಗಣೇಶ್‌ನ ಅಭಿಮಾನಿಗಳು ಮುಂದೇನು ಮಾಡ್ತಾರೋ ನೋಡೋಣ...&lt;br /&gt;&lt;br /&gt;&lt;strong&gt;ಹೊಸ ಟ್ರೆಂಡ್‌ ಬರ್ತಾಯಿದೆ... ಇದರ ಬಗ್ಗೆ ಹೇಳಿ?&lt;/strong&gt;&lt;br /&gt;&lt;br /&gt;ಬರಲಿ. ಇದು ಒಂದು ಥರಹಾ ಒಳ್ಳೆಯದು ಅಲ್ವಾ ಸಾರ್‌... ‘ಹಳೇ ಬೇರು, ಹೊಸ ಚಿಗುರು ಸೇರಿರಲು ...’ಅನ್ನೋ ಕವಿವಾಣಿಯೇ ಇದೆ.&lt;br /&gt;&lt;br /&gt;&lt;strong&gt;‘.. ಮಳೆ ’ ಯಶಸ್ಸಿನಲ್ಲಿ ನಿಮ್ಮ ಪಾತ್ರವೆಷ್ಟು? ಮಳೆ ಪಾತ್ರವೆಷ್ಟು? ಯೋಗರಾಜ ಭಟ್‌ ಪಾತ್ರವೆಷ್ಟು? ಹಾಡುಗಳ ಪಾತ್ರವೆಷ್ಟು?&lt;/strong&gt;&lt;br /&gt;&lt;br /&gt;(ನಗು) ಹೀಗೆ ಪರ್ಸೆಂಟೇಚ್‌ ಲೆಕ್ಕದಲ್ಲಿ ಹಂಚೋದು ಕಷ್ಟ. ಒಟ್ಟಾರೆ ಇದು ಟೀಮ್‌ ವರ್ಕ್‌.&lt;br /&gt;&lt;br /&gt;&lt;strong&gt;‘ಮುಂಗಾರು ಮಳೆ’ ಯಶಸ್ಸಿಗೆ ಕಾರಣ?&lt;/strong&gt;&lt;br /&gt;&lt;br /&gt;ಕಾರಣ ಗೊತ್ತಿಲ್ಲ. ಇದೊಂದು ಮ್ಯಾಜಿಕ್‌ ಇರಬಹುದಾ? ಸಾಧಿಸಲೇ ಬೇಕು ಎಂದು ಹೊರಟವರ ಯಶಸ್ಸಿದು. ಯಶಸ್ಸಿನ ಕಾರಣ ಗೊತ್ತಾಗಿ ಬಿಟ್ಟರೆ, ಇಂಥ ಚಿತ್ರಗಳು ಇನ್ನಷ್ಟು ಬರುತ್ತೆ! ಸೋಲಿಗೆ ಕಾರಣ ಇರುತ್ತೆ. ಗೆಲುವಿಗೆ ಕಾರಣ ಇರೋದಿಲ್ಲ. ಸಿನಿಮಾ ಗೆದ್ದಿದೆ. ಪ್ರೇಕ್ಷಕರಿಗೆ ಇಷ್ಟವಾಗಿದೆ. 76ಸೆಂಟರ್‌ನಲ್ಲಿ ಮುನ್ನುಗ್ಗುತ್ತಿದೆ. ನನಗಂತೂ ಸಕತ್ತು ಖುಷಿ.&lt;br /&gt;&lt;br /&gt;&lt;strong&gt;ಸಿನಿಮಾ ಆರಂಭಿಸಿದಾಗ ಏನನ್ನಿಸಿತು?&lt;/strong&gt;&lt;br /&gt;&lt;br /&gt;ಸಿನಿಮಾ ಸ್ಕಿೃೕಪ್ಟ್‌ ಕಂಡಾಗಲೇ, ಗೆಲುವಿನ ವಾಸನೆ ಬಡಿದಿತ್ತು... ಪ್ರೇಕ್ಷಕರು ನಮ್ಮ ಕೈಬಿಡಲಿಲ್ಲ. ನಿರೀಕ್ಷೆ ನಿಜವಾಯಿತು.&lt;br /&gt;&lt;br /&gt;&lt;strong&gt;ಸಿನಿಮಾದಲ್ಲಿ ದೇವದಾಸ(ಮೊಲ) ಸತ್ತ... ಆಮೇಲೆ ಏನಾಯ್ತು?&lt;/strong&gt;&lt;br /&gt;&lt;br /&gt;ಈಗ ನಮ್ಮ ಫಾರಂ ಹೌಸ್‌ನಲ್ಲಿದ್ದಾನೆ. ಎಂಟು ಮಕ್ಕಳಿಗೆ ಜನ್ಮ ನೀಡಿ ಆರಾಮವಾಗಿದ್ದಾನೆ. ಸಂಸಾರ ನಡೆದಿದೆ.&lt;br /&gt;&lt;br /&gt;&lt;strong&gt;ಮದುವೆ ಯೋಚನೆ ಇದೆಯಾ? ಪ್ರೀತಿ-ಪ್ರೇಮ-ಪ್ರಣಯ ಏನಾದರೂ ಉಂಟಾ...?&lt;/strong&gt;&lt;br /&gt;&lt;br /&gt;ಮದುವೆ ಸದ್ಯಕ್ಕಿಲ್ಲ. ಅಯ್ಯಾಯ್ಯೋ, ಪ್ರೀತಿ-ಪ್ರೇಮ-ಪ್ರಣಯ ಅವೆಲ್ಲ ಏನಿಲ್ಲ ಬಿಡಿ.. (ಮಾತಲ್ಲಿ ನಾಚಿಕೆ).&lt;br /&gt;ಮುಂದಿನ ಚಿತ್ರಗಳು?ರೇಖಾ ಜೊತೆ ‘ಹುಡುಗಾಟ’ ಚಿತ್ರೀಕರಣ ನಡೆದಿದೆ. ಎಸ್‌. ನಾರಾಯಣ್‌ರ ‘ಚೆಲುವಿನ ಚಿತ್ತಾರ’ ಮತ್ತು ರಮೇಶ್‌ ಯಾದವ್‌ರ ‘ಕೃಷ್ಣ’ ಚಿತ್ರಗಳನ್ನು ಸದ್ಯಕ್ಕೆ ಒಪ್ಪಿಕೊಂಡಿದ್ದೇನೆ. ಮುಂದೆ ನೋಡೋಣ.&lt;br /&gt;&lt;br /&gt;&lt;strong&gt;ತೆಲುಗು-ತಮಿಳಿನಿಂದ ಆಫರ್‌ ಬಂದ್ರೆ, ಗಣೇಶ್‌ ಹೋಗ್ತಾರಾ?&lt;/strong&gt;&lt;br /&gt;&lt;br /&gt;ಯಾಕೆ ಹೋಗಬೇಕು ಸಾರ್‌.. ಕನ್ನಡದವರು ನನ್ನನ್ನು ಚೆನ್ನಾಗಿಯೇ ನೋಡಿಕೊಂಡಿದ್ದಾರಲ್ಲ.. ಊಟಕ್ಕಂತೂ ಕೊರತೆಯಿಲ್ಲ. ಅಲ್ವಾ?&lt;br /&gt;&lt;br /&gt;&lt;strong&gt;ನಿಮ್ಮ ಯಶಸ್ಸಿನ ಬಗ್ಗೆ ತವರೂರು ಅಡಕೆಮಾರನಹಳ್ಳಿ ಜನ ಏನ್‌ ಅಂತಾರೆ?&lt;/strong&gt;&lt;br /&gt;&lt;br /&gt;ಅವರಿಗೆ ಸಕತ್ತು ಖುಷಿಯಾಗಿದೆ. ಆ ಜನ ತೋರಿಸಿದ ಅಕ್ಕರೆಗೆ ನಾನು ಋಣಿ.&lt;br /&gt;&lt;br /&gt;&lt;strong&gt;ನಿಮ್ಮ ಅಭಿಮಾನಿಗಳಿಗೆ ಏನ್‌ ಹೇಳ್ತೀರಾ?&lt;/strong&gt;&lt;br /&gt;&lt;br /&gt;ನಗಿಸುತ್ತಾ ಇರಿ.. ಯಾರನ್ನೂ ನೋಯಿಸಬೇಡಿ.. ಬದುಕಿನಲ್ಲಿ ಏನಾದರೂ ಸಾಧನೆ ಮಾಡಿ... ಗಣೇಶ್‌ ನಿಮ್ಮವನು... ನಿಮ್ಮ ಹುಡುಗ...&lt;/div&gt;&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-6152223784806586317?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/6152223784806586317/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=6152223784806586317' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/6152223784806586317'/><link rel='self' type='application/atom+xml' href='http://www.blogger.com/feeds/2189102912389204330/posts/default/6152223784806586317'/><link rel='alternate' type='text/html' href='http://kanasinaramane.blogspot.com/2007/06/blog-post_25.html' title='ನಟನೆ ಬಿಟ್ಟುಬೇರೆ ಗೊತ್ತಿಲ್ಲ..ನೀವು ಕೈಬಿಡಲಿಲ್ಲ-ಗಣೇಶ್‌'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_eDo9m8Nl3wg/RoERWSzyFRI/AAAAAAAAAAo/LCKl9HyJBXs/s72-c/ganesh_moulya.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-2594622984114912114</id><published>2007-06-23T18:27:00.000+05:30</published><updated>2007-06-23T18:48:02.011+05:30</updated><title type='text'>ಕತ್ತಲೊಳಗಿನ ಮಾಸಿದ ಬಣ್ಣಗಳು!</title><content type='html'>&lt;a href="http://thatskannada.oneindia.in/pics/general2/skin_money3.jpg"&gt;&lt;img style="DISPLAY: block; MARGIN: 0px auto 10px; WIDTH: 320px; CURSOR: hand; TEXT-ALIGN: center" alt="" src="http://thatskannada.oneindia.in/pics/general2/skin_money3.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://thatskannada.oneindia.in/pics/general2/skin_money3.jpg"&gt;&lt;/a&gt;&lt;br /&gt;&lt;br /&gt;&lt;div&gt;ನಾನೂ ಬದುಕಬೇಕೆಂದು ಇಲ್ಲಿಗೆ ಬಂದವಳು&lt;/div&gt;&lt;div&gt;ಬಂದು ಏನೇನನ್ನೋ ಪಡೆದವಳು!&lt;/div&gt;&lt;div&gt;ಪಡೆದೆನೆಂದು ಖುಷಿಯಿಂದ ನಲಿದವಳು!&lt;br /&gt;&lt;/div&gt;&lt;div&gt;*&lt;br /&gt;&lt;/div&gt;&lt;div&gt;ಹೀಗೆ ಬದುಕಬೇಕೆಂದು ಕನಸುಕಂಡವಳಲ್ಲ..&lt;/div&gt;&lt;div&gt;ಇಲ್ಲಿಂದ ಹೊರಹೋಗಲು ಬಾಗಿಲುಗಳಿಲ್ಲ&lt;/div&gt;&lt;div&gt;ಈಗ ಹೋದರೂ ಪ್ರಯೋಜನವೇನಿಲ್ಲ..&lt;/div&gt;&lt;div&gt;ನನ್ನಲ್ಲೀಗ ಕಳೆದುಕೊಳ್ಳುವುದಕ್ಕೆ ಏನೂ ಉಳಿದಿಲ್ಲ..&lt;br /&gt;&lt;/div&gt;&lt;div&gt;*&lt;br /&gt;&lt;/div&gt;&lt;div&gt;ನನ್ನ ನಂಬಿದವರನ್ನು ಬದುಕಿಸುತ್ತಿರುವೆ&lt;/div&gt;&lt;div&gt;ಸುಳ್ಳುಸುಳ್ಳೇ ನಾನೂ ಬದುಕುತ್ತಿರುವೆ &lt;/div&gt;&lt;div&gt;ನನ್ನದೂ ಒಂದು ಬದುಕೇ ಎನ್ನುವೆ!&lt;br /&gt;&lt;/div&gt;&lt;div&gt;*&lt;br /&gt;&lt;/div&gt;&lt;div&gt;ನನ್ನ ಬದುಕಿನ ಪುಟಗಳಲ್ಲಿನ ವ್ಯತ್ಯಾಸ&lt;/div&gt;&lt;div&gt;ನಾನು ಮಾಡುತ್ತಿರುವ ಈ ವ್ಯವಸಾಯ&lt;/div&gt;&lt;div&gt;ಹೆತ್ತವಳಿಗೆ, ಹೆತ್ತವನಿಗೆ ಚೆನ್ನಾಗಿ ಗೊತ್ತು..&lt;/div&gt;&lt;div&gt;ಹಣದ ವಾಸನೆ, ಹೆಣದ ವಾಸನೆಯ ಇಲ್ಲವಾಗಿಸಿದೆ.&lt;br /&gt;&lt;/div&gt;&lt;div&gt;*&lt;br /&gt;&lt;/div&gt;&lt;div&gt;ಮುಡಿದ ಮಲ್ಲಿಗೆ ಹೂವು ಮತ್ತೇರಿಸುತ್ತಿಲ್ಲ&lt;/div&gt;&lt;div&gt;ಅವನು ಕೊಟ್ಟ ಮುತ್ತು ಕಾವೇರಿಸುತ್ತಿಲ್ಲ&lt;/div&gt;&lt;div&gt;ಆ ಆಲಿಂಗನದಲ್ಲಿ ನಿಜಕ್ಕೂ ನಾನಿಲ್ಲ!&lt;br /&gt;&lt;/div&gt;&lt;div&gt;*&lt;br /&gt;&lt;/div&gt;&lt;div&gt;ಎಷ್ಟು ದಿನವೋ ಈ ದೇಹದ ವ್ಯಾಪಾರ..&lt;/div&gt;&lt;div&gt;ನಾನಂತೂ ಬಲುಬಲು ದಣಿದಿದ್ದೇನೆ?&lt;/div&gt;&lt;div&gt;ನೀವುಗಳೂ ಸಕತ್ತು ಹಸಿದಿದ್ದೀರಿ!&lt;/div&gt;&lt;div&gt;ನನ್ನ ಸುತ್ತಲ ಕತ್ತಲ ಜಗತ್ತಿಗೆ ಜಯವಾಗಲಿ..&lt;/div&gt;&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-2594622984114912114?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/2594622984114912114/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=2594622984114912114' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/2594622984114912114'/><link rel='self' type='application/atom+xml' href='http://www.blogger.com/feeds/2189102912389204330/posts/default/2594622984114912114'/><link rel='alternate' type='text/html' href='http://kanasinaramane.blogspot.com/2007/06/blog-post_23.html' title='ಕತ್ತಲೊಳಗಿನ ಮಾಸಿದ ಬಣ್ಣಗಳು!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-7135965969701091849</id><published>2007-06-22T17:51:00.001+05:30</published><updated>2010-04-07T19:03:08.265+05:30</updated><title type='text'>ನ್ಯಾನೋ ಕವಿತೆಗಳು: ನಿಮ್ಮ ಬೊಗಸೆಗೆ ಒಂದೈದು ಮಳೆ ಹನಿಗಳು!</title><content type='html'>&lt;a href="http://1.bp.blogspot.com/_eDo9m8Nl3wg/RnvAYSzyFQI/AAAAAAAAAAg/QJMibT93cmc/s1600-h/rain.jpg"&gt;&lt;img id="BLOGGER_PHOTO_ID_5078864528388789506" style="margin: 0px 10px 10px 0px; float: left;" alt="" src="http://1.bp.blogspot.com/_eDo9m8Nl3wg/RnvAYSzyFQI/AAAAAAAAAAg/QJMibT93cmc/s320/rain.jpg" border="0" /&gt;&lt;/a&gt;&lt;br /&gt;&lt;div&gt;&lt;span style="color: rgb(0, 153, 0);"&gt;ಮತ್ತೆ ಮಳೆ ಸುರಿಯುತಿದೆ... ಎಲ್ಲ ನೆನಪಾಗುತಿದೆ...&lt;/span&gt;&lt;br /&gt;&lt;br /&gt;&lt;strong&gt;ಹನಿ 1&lt;/strong&gt;&lt;br /&gt;&lt;br /&gt;ಮೊದಲು ತಲೆ ಸವರಿದ&lt;br /&gt;ನಾನು ಅಮ್ಮನೆಂದುಕೊಂಡೆ!&lt;br /&gt;ಆಮೇಲೆ ಹಣೆಗೆ ಮುತ್ತಿಟ್ಟ...&lt;br /&gt;ಕೆನ್ನೆ ಸವರಿದ.. ಅರೇರೇರೇ...&lt;br /&gt;ತುಟಿಗೆ ತುಟಿ ಸೇರಿಸಿದ...&lt;br /&gt;ಮೈತುಂಬ ಅವನ ಮುತ್ತಿನ ಮುದ್ರೆಗಳು!&lt;br /&gt;ಸಹಿಸಲಾರೇ ಈ ಅತ್ಯಾಚಾರ..&lt;br /&gt;ನಾನು ನನ್ನ ಹುಡುಗನಿಗಷ್ಟೇ ಸ್ವಂತ!&lt;br /&gt;ಸಂಜೆಯೇ ಅಂಗಡಿಗೆ ಹೋಗಿ&lt;br /&gt;ಛತ್ರಿ ತಂದೆ!ಇನ್ನು ನಾನು ನನ್ನಿಷ್ಟ!&lt;br /&gt;&lt;br /&gt;&lt;strong&gt;ಹನಿ 2&lt;/strong&gt;&lt;br /&gt;&lt;strong&gt;&lt;/strong&gt;&lt;br /&gt;ಬಾ ಎಂದಾಗ ಬರಲಿಲ್ಲ&lt;br /&gt;ಎರಡು ಹನಿಗಳನ್ನು ಚೆಲ್ಲಲಿಲ್ಲ&lt;br /&gt;ಬೇಡ ಎಂದಾಗ ಬಂದೆ...&lt;br /&gt;ಹೋಗು ಎಂದರೂ ಹೋಗಲಿಲ್ಲ...&lt;br /&gt;ಈಗ ನಿನಗೇನು ತಲೆಕೆಟ್ಟಿದೆಯಾ?&lt;br /&gt;ನಿನ್ನ ಹುಡುಗಿ ಕೈ ಕೊಟ್ಟಳೆಂದು&lt;br /&gt;ಅಳುತ್ತಿರುವೆಯಾ?&lt;br /&gt;&lt;br /&gt;&lt;strong&gt;ಹನಿ 3&lt;/strong&gt;&lt;br /&gt;&lt;strong&gt;&lt;/strong&gt;&lt;br /&gt;ಅವಳು ಮಳೆ!&lt;br /&gt;ಅವಳು ಬಂದಾಗಲೆಲ್ಲಾನಾ ಕುಣಿಯುತ್ತೇನೆ!&lt;br /&gt;ನಾ ಕುಣಿಯಲೆಂದೇ ಅವಳು ಬರುತ್ತಾಳೆ!&lt;br /&gt;ಅವಳು ಬರಲೆಂದೇ ನಾನು ಕುಣಿಯುತ್ತೇನೆ!&lt;br /&gt;&lt;br /&gt;&lt;strong&gt;ಹನಿ 4&lt;/strong&gt;&lt;br /&gt;&lt;strong&gt;&lt;/strong&gt;&lt;br /&gt;ಮೋಡ ಮೋಡ ಡಿಕ್ಕಿ ಹೊಡೆದಾಗ&lt;br /&gt;ಭಯಾನಕ ಗುಡುಗು...&lt;br /&gt;ನನ್ನೆದೆಯಲ್ಲಿ ನಡುಕ!&lt;br /&gt;ಗುಡುಗಿನ ಭಯಕ್ಕೆ&lt;br /&gt;ಅವನ ತೆಕ್ಕೆಯಲ್ಲಿ ನಾನು&lt;br /&gt;ನನ್ನ ತೆಕ್ಕೆಯಲ್ಲಿಅವನು!&lt;br /&gt;&lt;br /&gt;&lt;strong&gt;ಹನಿ 5&lt;/strong&gt;&lt;br /&gt;&lt;br /&gt;ಮಳೆಯ ಒಂದೊಂದೇ ಹನಿಗಳನ್ನು&lt;br /&gt;ಜೋಪಾನವಾಗಿ ಸಂಗ್ರಹಿಸುತ್ತಿರುವೆ.&lt;br /&gt;ಆ ಹನಿಗಳ ಮಣಿಗಳಂತೆ ಪೋಣಿಸಿ&lt;br /&gt;ಹಾರ ಮಾಡುವ, ಆ ಹಾರದಿಂದಲೇ&lt;br /&gt;ನನ್ನ ಹುಡುಗಿಯ ಸಿಂಗರಿಸುವ&lt;br /&gt;ಹಂಬಲ,ಆಕಾಂಕ್ಷೆ, ಅತಿಯಾಸೆ ನನ್ನದು!&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-7135965969701091849?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/7135965969701091849/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=7135965969701091849' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/7135965969701091849'/><link rel='self' type='application/atom+xml' href='http://www.blogger.com/feeds/2189102912389204330/posts/default/7135965969701091849'/><link rel='alternate' type='text/html' href='http://kanasinaramane.blogspot.com/2007/06/blog-post_22.html' title='ನ್ಯಾನೋ ಕವಿತೆಗಳು: ನಿಮ್ಮ ಬೊಗಸೆಗೆ ಒಂದೈದು ಮಳೆ ಹನಿಗಳು!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_eDo9m8Nl3wg/RnvAYSzyFQI/AAAAAAAAAAg/QJMibT93cmc/s72-c/rain.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-3349584146992598009</id><published>2007-06-19T13:17:00.000+05:30</published><updated>2008-12-11T09:19:26.916+05:30</updated><title type='text'>ಸೌಂದರ್ಯ ಮರೆಯಾಗಿ ಆಯಿತು 3 ವರ್ಷ!</title><content type='html'>&lt;a href="http://2.bp.blogspot.com/_eDo9m8Nl3wg/RneLrizyFPI/AAAAAAAAAAY/qzls6s29x_I/s1600-h/soundarya.jpg"&gt;&lt;img id="BLOGGER_PHOTO_ID_5077680685078156530" style="FLOAT: left; MARGIN: 0px 10px 10px 0px; CURSOR: hand" alt="" src="http://2.bp.blogspot.com/_eDo9m8Nl3wg/RneLrizyFPI/AAAAAAAAAAY/qzls6s29x_I/s320/soundarya.jpg" border="0" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;span style="color:#009900;"&gt;ಇತ್ತಿಚೆಗಷ್ಟೇ ರಾಜ್‌ಕುಮಾರ್‌ರ ಪ್ರಥಮ ಪುಣ್ಯತಿಥಿ ಆಯಿತು. ಆ ಬೆನ್ನಲ್ಲಿಯೇ ಕನ್ನಡದ ಮನೆಮಗಳು ಸೌಂದರ್ಯಳ ಪುಣ್ಯತಿಥಿ. ಇಬ್ಬರಲ್ಲೂ ಇದ್ದ ಕಾಮನ್ ಗುಣವೆಂದರೇ; ನಿರ್ಮಲ ಕನ್ನಡ ಪ್ರೀತಿ!&lt;/span&gt;&lt;/div&gt;&lt;br /&gt;&lt;div&gt;&lt;br /&gt;ರಾಜ್ ಜೊತೆ ಅಭಿನಯಿಸಬೇಕು ಎಂದು ಪದೇಪದೇ ಹೇಳುತ್ತಿದ್ದ ಸೌಂದರ್ಯಗೆ ಅವಕಾಶ ಕೂಡಿ ಬರಲಿಲ್ಲ. ಆ ಮಾತು ಬಿಡಿ. ನಮ್ಮ ಜನರಿಗೆ ಮರೆವು ಜಾಸ್ತಿ. ಹೀಗಾಗಿಯೇ ಪಂಚಭಾಷಾ ತಾರೆಯಾಗಿ ಮಿಂಚಿದ ಸೌಂದರ್ಯ , ಇಂದು ಯಾರಿಗೂ ನೆನಪಾಗುತ್ತಿಲ್ಲ! &lt;/div&gt;&lt;br /&gt;&lt;div&gt;&lt;br /&gt;ಒಂದರ್ಥದಲ್ಲಿ ಸೌಂದರ್ಯ ಮತ್ತು ಕನ್ನಡ ಚಿತ್ರಪ್ರೇಮಿಗಳ ಮಧ್ಯೆ ಅಂತಹ ಬಾಂಧವ್ಯ ಕುದುರಲೇ ಇಲ್ಲ. ಹೀಗಾಗಿ ನೆರೆರಾಜ್ಯದಲ್ಲಿ ಸೌಂದರ್ಯ, ಕೆಲಸ ಹುಡುಕುತ್ತಾ ಹೊರಟರು. ಆದರೂ ಕನ್ನಡ ಚಿತ್ರರಂಗದ ಬಗ್ಗೆ ಆಕೆಗೆ ಅಪಾರ ಅಕ್ಕರೆ. &lt;/div&gt;&lt;div&gt;&lt;br /&gt;ದುಡಿದ ದುಡ್ಡನ್ನು ಕಬ್ಬಿಣದ ಪೆಟ್ಟಿಗೆಯಲ್ಲಿ ಬಚ್ಚಿಡುವ ನಾಯಕ ಅಥವಾ ನಾಯಕಿಯರ ಪರಂಪರೆ ಮುರಿದ ಸೌಂದರ್ಯ, `ದ್ವೀಪ'ದಂತಹ ಚಿತ್ರಕ್ಕೆ ನಾಯಕಿ ಮತ್ತು ನಿರ್ಮಾಪಕಿಯಾದರು. ಅವರ ಒಳತುಡಿತ ಬೇರೆಯೇ ಇತ್ತು. ಒಳ್ಳೆ ಚಿತ್ರಗಳ ನೀಡುವ ಕನಸು ಅವರ ಕಣ್ಣುಗಳಲ್ಲಿತ್ತು. ಆ ಮಧ್ಯೆಯೇ ಅವರು ಕಣ್ ಮುಚ್ಚಿದರು.&lt;/div&gt;&lt;br /&gt;&lt;div&gt;&lt;br /&gt;ಗ್ಲಾಮರ್‌ಗಿಂತಲೂ, ಸೌಂದರ್ಯರಲ್ಲಿ ಸಿನಿಮಾದ ಗ್ರಾಮರ್ ತುಂಬಿತುಳುಕುತ್ತಿತ್ತು. ಹೀಗಾಗಿ ಸೌಂದರ್ಯ ಅಂದರೆ ಅಭಿಮಾನಿಗಳಿಗೆ ವಿಶೇಷ ಅಕ್ಕರೆ. ವಿಶೇಷ ಗೌರವ. ವಿಶೇಷ ಭಾವ. ಸೌಂದರ್ಯ, ಪ್ರೇಕ್ಷಕರ ನಿದ್ದೆ ಕೆಡಿಸುವ ಕಾಮಿನಿಯಾಗಲಿಲ್ಲ.. ಗೆಳತಿಯಾದಳು.. ಅಮ್ಮನಾದಳು.. ತಂಗಿಯಾದಳು.. ಅಕ್ಕನಾದಳು.. ಇನ್ನು ಏನೇನೋ.. ದಟ್ ಈಸ್ ಸೌಂದರ್ಯ! &lt;/div&gt;&lt;div&gt;&lt;br /&gt;ಸೌಂದರ್ಯ ನಮ್ಮಿಂದ ದೂರಾವಾಗಿ ಮಂಗಳವಾರ(ಏ.೧೭)ಕ್ಕೆ ಮೂರು ವರ್ಷ. ತಮಿಳು, ತೆಲುಗು, ಹಿಂದಿ, ಮಲಯಾಳಂ, ಕನ್ನಡದಲ್ಲಿ ಮಿಂಚಿದ್ದ ಈ ಪಂಚಭಾಷಾ ತಾರೆಗಿದ್ದ ರಾಜಕೀಯದ ಹುಚ್ಚು, ಸಾವಿನ ಮನೆವರೆಗೆ ಕರೆದೊಯ್ದದ್ದು ನಿಜಕ್ಕೂ ನೋವಿನ ವಿಚಾರ. &lt;/div&gt;&lt;br /&gt;&lt;div&gt;&lt;br /&gt;ಬಿಜೆಪಿ ಕಾರ್ಯಕರ್ತೆಯಾಗಿದ್ದ ಸೌಂದರ್ಯ, ಹೈದರಾಬಾದ್‌ನ ವಿಧಾನಸಭಾ ಕ್ಷೇತ್ರವೊಂದಕ್ಕೆ ಚುನಾವಣಾ ಪ್ರಚಾರಕ್ಕೆ ಹೊರಟರು. ಅದು ೨೦೦೪ರ ಏ.೧೭. ಜಕ್ಕೂರು ವಿಮಾನ ನಿಲ್ದಾಣದಿಂದ ಹೊರಟ ಖಾಸಗಿ ವಿಮಾನ, ಕೆಲವೇ ಕ್ಷಣಗಳಲ್ಲಿ ಕೆಳಗಿಳಿಯಿತು. ಬೆಂಕಿ ಚೆಂಡಿನಂತೆ ಸೋಟಿಸಿತು. ನೋಡನೋಡುತ್ತಿದ್ದಂತೆಯೇ ಚೆಲುವಿನ ರಾಶಿ ಸೌಂದರ್ಯ, ಆಕೆಯ ಹೊಟ್ಟೆಯೊಳಗಿದ್ದ ಮಗು ಇಬ್ಬರೂ ಭಸ್ಮ. ಆಗವಳಿಗೆ ೩೨ವರ್ಷ.&lt;/div&gt;&lt;br /&gt;&lt;div&gt;&lt;br /&gt;`ಆಪ್ತಮಿತ್ರ' ನೋಡಿದಾಗಲೆಲ್ಲ, ಸೌಂದರ್ಯ ಕಾಡುತ್ತಾರೆ. ರಾರಾ ಎಂದಂತೆ ನನಗಂತೂ ಭಾಸವಾಗುತ್ತದೆ. ನಿಮಗೆ?&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;br /&gt;&lt;div&gt;&lt;/div&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-3349584146992598009?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/3349584146992598009/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=3349584146992598009' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/3349584146992598009'/><link rel='self' type='application/atom+xml' href='http://www.blogger.com/feeds/2189102912389204330/posts/default/3349584146992598009'/><link rel='alternate' type='text/html' href='http://kanasinaramane.blogspot.com/2007/06/blog-post_19.html' title='ಸೌಂದರ್ಯ ಮರೆಯಾಗಿ ಆಯಿತು 3 ವರ್ಷ!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_eDo9m8Nl3wg/RneLrizyFPI/AAAAAAAAAAY/qzls6s29x_I/s72-c/soundarya.jpg' height='72' width='72'/><thr:total>0</thr:total></entry><entry><id>tag:blogger.com,1999:blog-2189102912389204330.post-8656133096816238741</id><published>2007-06-14T18:24:00.000+05:30</published><updated>2007-06-14T18:34:23.317+05:30</updated><title type='text'>ತನುತನುವಿನಲೂ ಮಜವೊಂದೇ ನಿಜ!</title><content type='html'>&lt;span style="color:#009900;"&gt;&lt;/span&gt;&lt;br /&gt;&lt;span style="color:#009900;"&gt;ತನುತನುವಿನಲೂ ಮಜವೊಂದೇ ನಿಜ!ಕನ್ನಡದ ಮಟ್ಟಿಗೆ ಇದೊಂದು ಹೊಸ ಪೀಳಿಗೆಯ ಚಿತ್ರ! ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ `ಗಂಡ ಹೆಂಡತಿ' ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್(ತಿಲಕ್) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ..&lt;/span&gt;&lt;br /&gt;&lt;span style="color:#009900;"&gt;&lt;/span&gt;&lt;br /&gt;`ನನ್ನ ಎದೆಯ ಮೇಲೆ ನಿನ್ನ ಹಚ್ಚೆಯಿದೆ. ನನ್ನ ಉಸಿರನ್ನು ಹಿಡಿದು ನಿನ್ನ ಹೆಸರ ಬರೆಯಬಲ್ಲೆ.. ಮೈ ಬಿಸಿ ಏರಿದಾಗ ಇಳಿಸೋಕೆ ನಾನು ಬೇಕು. ಬಿಸಿ ಕಮ್ಮಿಯಾದ ಮೇಲೆ ಗಂಡ ಬೇಕಾ' ಎನ್ನುತ್ತಾನೆ ಬಾಯ್ ಫ್ರೆಂಡ್.&lt;br /&gt;&lt;br /&gt;`ನಾವಿಬ್ಬರೂ ಗಂಡ ಹೆಂಡತಿ ಆದ್ವಿ ಮುಂದೇನು? ಫ್ಯಾಮಿಲಿ ಫೋಟೊ ಬಂದದ್ದು ಬಿಟ್ಟರೆ ಬೇರೇನೂ ಆಗಲಿಲ್ಲ. ನಿಮಗೆ ಭಾವನೆಗಳೇ ಇಲ್ಲ ' ಅನ್ನೋದು ಹೆಂಡತಿ ದೂರು.&lt;br /&gt;&lt;br /&gt;`ನಿನ್ನ ಮದುವೆಯಾಗೋದಕ್ಕೆ ನಾನು ನಿಮ್ಮಪ್ಪನ ಕಾಲು ಹಿಡಿಯಲಿಲ್ಲ. ನೀನೇ ಬಯಸಿ ಮದುವೆಯಾದೆ. ಸ್ವಾರ್ಥ ಬಿಟ್ಟು ನಿನಗೆ ಬೇರೇನೂ ಗೊತ್ತಿಲ್ಲ. ನೀನು ನಿನ್ನ ಬಗ್ಗೆಯಷ್ಟೇ ಯೋಚಿಸ್ತೀಯ. ನಾವು ಬ್ಯಾಂಕಾಕ್‌ಗೆ ಬಂದದ್ದೇಕೆ? -ದುಡಿಯೋದಕ್ಕೆ. ಭಾವನೆಗಳಿಗಿಂತ ನನಗೆ ಬ್ಯುಸಿನೆಸ್ ದೊಡ್ಡದು' ಅನ್ನೋದು ಗಂಡನ ಸಮಜಾಯಿಷಿ.&lt;br /&gt;&lt;br /&gt;ಮೇಲಿನ ಈ ಮೂರು ಹೇಳಿಕೆಗಳೇ, ಚಿತ್ರದ ನಾಯಕಿ ಸಂಜನಾ ಬಟ್ಟೆ ಕಳಚಿದಂತೆ, ಕತೆಯನ್ನು ಕಳಚುತ್ತವೆ. ಈ ಮಧ್ಯೆ ಸಂಜನಾ ಮತ್ತು ತಿಲಕ್‌ರ ಚುಂಬನೋತ್ಸವಗಳು ಒಂದಾದ ಮೇಲೆ ಮತ್ತೊಂದರಂತೆ ಹಾಜರಾಗುತ್ತವೆ. ಈ ಸಂದರ್ಭ ಕನ್ನಡ ಪ್ರೇಕ್ಷಕರಿಗೆ ತುಸು ಹೊಸತು ಅನ್ನಿಸಬಹುದು. ಆಗ ಟಾಕೀಸ್‌ನಲ್ಲಿ ಪರಿಚಿತರ್‍ಯಾರಾದರೂ ಇದ್ದಾರಾ ಅಂತ ಕಣ್ಣಾಡಿಸಬಹುದು! ತೆರೆ ಮೇಲೆ ಬಿಸಿಯೇರುತ್ತಿದ್ದಂತೆಯೇ, ಪ್ರೇಕ್ಷಕರೂ ಬೆಚ್ಚಗಾಗಿರುತ್ತಾರೆ!&lt;br /&gt;&lt;br /&gt;ಅಂದ ಹಾಗೇ ಈ ಚಿತ್ರದಲ್ಲಿ ಮರ್ಡರ್ ಇದ್ದರೂ ಮಿಸ್ಟರಿ ಇಲ್ಲ. ರವಿಬೆಳಗೆರೆ ಇದ್ದರೂ ಕಡಕ್ ಮಾತಿಲ್ಲ(ಪಾತ್ರಕ್ಕೆ ಬೇರೊಬ್ಬರಿಂದ ಡಬ್ಬಿಂಗ್ ಮಾಡಿಸಲಾಗಿದೆ). ಚಿತ್ರ ಪೂರ್ತಿ ನಡೆಯೋದು ಬ್ಯಾಂಕಾಕ್‌ನಲ್ಲಿ. ಬಾಯ್ ಫ್ರೆಂಡ್‌ನ ಯಾಕೆ ಕೊಂದೆ ಅನ್ನೋದನ್ನು ಒಂದು ಕಡೆ ಸಂಜನಾ(ಆಕೆ ನಿಜ ನಾಮವೂ ಸಂಜನಾ! ಪೂರ್ವ ನಾಮ -ಅರ್ಚನಾ), ಇನ್ನೊಂದು ಕಡೆ ಸುಶೀಲ್(ವಿಶಾಲ್ ಹೆಗಡೆ) ಪೊಲೀಸ್ ಅಕಾರಿ(ರವಿ ಬೆಳಗೆರೆ)ಗೆ ಹೇಳ್ತಾ ಹೋಗ್ತಾರೆ. ಆ ಮೂಲಕ ಕತೆ ಬಿಚ್ಚಿಕೊಳ್ಳುತ್ತದೆ.&lt;br /&gt;&lt;br /&gt;ಕ್ರೈಂ ಇದ್ದರೂ, ಅನಗತ್ಯ ಕಿರುಚಾಟಗಳಿಲ್ಲ. ಯಾವುದೇ ಅಬ್ಬರಗಳಿಲ್ಲದೇ, ನಯವಾದ ಶೃಂಗಾರ ಕ್ರೀಡೆಯಂತೆ ಚಿತ್ರ ಸುದೀರ್ಘವಾಗಿ ಮುಂದುವರೆಯುತ್ತದೆ. ಚಿತ್ರ ಬೋರ್ ಆಗುತ್ತದೆ ಅನ್ನಿಸಿದಾಗಲೆಲ್ಲ, ಸಚಿನ್(ತಿಲಕ್) ಮತ್ತು ಸಂಜನಾರ ಚುಂಬನೋತ್ಸವ ಹಾಜರಾಗುತ್ತದೆ. ತುಟಿತುಟಿಗಳು ಸೇರಿದಾಗ ದೃಶ್ಯದ ಹಿನ್ನೆಲೆಯಲ್ಲಿ -&lt;br /&gt;&lt;span style="color:#009900;"&gt;ನಿದಿರಿಗೆ ರಜಾ&lt;br /&gt;ನೋವೆಲ್ಲ ವಜಾ&lt;br /&gt;ಇನ್ನೆಲ್ಲ ಮಜಾ&lt;br /&gt;ತನುತನುವಿನಲೂ&lt;br /&gt;ಮಜವೊಂದೇ ನಿಜ&lt;br /&gt;ತುಟಿ ಸಿಹಿಕಣಜ&lt;br /&gt;ಈ ಪ್ರತಿ ಇರುಳು&lt;br /&gt;ಕೊಡುಸುಖದ ಸಜ&lt;/span&gt;&lt;br /&gt;&lt;br /&gt;ಎನ್ನುವ ಹಾಡು ಕೇಳುಗರ ಆವರಿಸುತ್ತದೆ. ಬೆಳ್ಳೆತೆರೆಯನ್ನು ಮೊದಲ ಸಲ ಪ್ರವೇಶಿಸಿದ್ದರೂ ಬಾಯ್ ಫ್ರೆಂಡ್ ಪಾತ್ರದಲ್ಲಿ ತಿಲಕ್ ನೈಜವಾಗಿ ಅಭಿನಯಿಸಿದ್ದಾರೆ. ಜೊತೆಗೆ ಅನುಭವಿಸಿದ್ದಾರೆ. `ಓ ಮಲ್ಲಿಗೆಯೇ ವಿಲಾಸಿ, ಕಾಮದರಸಿ ಆಸೆ ತಂದವಳೇ..' ಅನ್ನುತ್ತಾ ಸಂಜನಾ ಕಂಡಾಗಲೆಲ್ಲ, ತೋಳ್ಬಲಗಳ ಪ್ರದರ್ಶಿಸುತ್ತಾರೆ. ಇವರಿಬ್ಬರ ಚೆಲ್ಲಾಟ.. ಮುದ್ದಾಟ.. ತುಂಟಾಟ ಕಂಡು ಸುಶೀಲ್ `ಮಾತು ಮುರಿದೇ ಮಾತಾಡದೇ . ಮೋಹಕ ಮೋಸವ ಮಾಡಿದೆ.. ' ಎಂದು ಗೋಳಾಡುತ್ತಾರೆ. ಹೆಂಡತಿಯನ್ನು ಉಳಿಸಿಕೊಳ್ಳಬೇಕು ಅಂತ ಮತ್ತೊಂದು ಕಡೆಯಿಂದ ಪ್ರಯತ್ನಿಸುತ್ತಾರೆ.&lt;br /&gt;&lt;br /&gt;`ಕಣ್ ಮುಚ್ಚಿಕೊಂಡು ಬೆಕ್ಕಿನಂತೆ ಹಾಲು ಕುಡಿಯಬೇಡ.. ನಿನ್ನ ಕತೆ ಎಲ್ಲ ನನಗೆ ಗೊತ್ತು' ಎಂದು ಗೆಳತಿ(ಮಂಜುಭಾಷಿಣಿ)ಒಂದು ಸಲ ಸಂಜನಾಗೆ ಕ್ಲಾಸ್ ತಗೋಳ್ತಾಳೆ. ಮನೆಯಲ್ಲಿನ ಮುದ್ದಾದ ಮಗಳು(ಅದವರ ಅಕ್ಕನ ಮಗಳಂತೆ, ಅವಳಿಗಾಗಿಯೇ ಸುಶೀಲ್‌ನ ಮದ್ವೆಯಾದದ್ದಂತೆ) ಸಂಚಲಿ, ಅಮ್ಮ ನನಗೆ ನೀನು ಬೇಕು ಎಂದು ಒಂದೇ ಕಣ್ಣಲ್ಲಿ ಅಳುತ್ತಿರುತ್ತಾಳೆ. ಆದರೂ ಈಯಮ್ಮನಿಗೆ ಸುಖದ ಮಜದ ಚಿಂತೆ.&lt;br /&gt;&lt;br /&gt;ಚಿತ್ರದ ಮೂಲಕ ನಿರ್ದೇಶಕ ರವಿ ಶ್ರೀವತ್ಸ, ಆಧುನಿಕ ಪ್ರೇಮಾಯಣವನ್ನು ಪರಿಚಯಿಸಿದ್ದಾರೆ. `ನಾವು ನೂರು ಸರಿ ಹೆಜ್ಜೆ ಹಾಕಿದರೂ ಪ್ರಯೋಜನವಿಲ್ಲ. ಒಂದೇ‌ಒಂದು ತಪ್ಪಿನ ಹೆಜ್ಜೆಯಿಂದ ಸಂಸಾರ ನರಕವಾಗುತ್ತದೆ' ಎಂಬುದನ್ನು ಪದೇಪದೇ ಪಾತ್ರಗಳ ಮೂಲಕ ಹೇಳಿಸುವ ಮೂಲಕ, ಒಂದು ಸಂದೇಶ ನೀಡಲು, ಚುಂಬನ ಚಳವಳಿ ಸಮರ್ಥಿಸಿಕೊಳ್ಳಲು ತಿಣುಕಾಡಿದ್ದಾರೆ. ಜೊತೆಗೆ ಗೆದ್ದಿದ್ದಾರೆ. ಜೊತೆಗೆ ಅಂಥದ್ದೊಂದು ಹಾಡು ಸಹಾ ಇದೆ -&lt;br /&gt;&lt;br /&gt;&lt;span style="color:#009900;"&gt;ಸಂಸಾರಕ್ಕೆ ಹೆಣ್ಣೆ ಕಣ್ಣು&lt;br /&gt;ಸಂಸಾರದಾದಿ ಹೆಣ್ಣು&lt;br /&gt;ಶೋಕೀಯಾ ಮೂಲ ಹೆಣ್ಣು&lt;br /&gt;ಶೋಕದ ಮೂಲ ಹೆಣ್ಣು&lt;br /&gt;ಸಂಗ್ರಾಮದಾದಿ ಹೆಣ್ಣು&lt;br /&gt;ಸಂತಾಪಕೆ ಕಾರಣ ಹೆಣ್ಣು&lt;/span&gt;&lt;br /&gt;&lt;span style="color:#009900;"&gt;&lt;/span&gt;&lt;br /&gt;`ಎಲ್ಲಾ ಕುಟುಂಬಗಳಲ್ಲೂ ಸಮಸ್ಯೆಗಳಿರುತ್ತವೆ. ಅದಕ್ಕೆ ನಾನು ಆರಿಸಿಕೊಂಡ ಮಾರ್ಗ ತಪ್ಪು. ಅದು ಪರಿಹಾರವಲ್ಲ' ಎಂದು ಹೆಂಡತಿ ಬಾಯಲ್ಲಿ ಹೇಳಿಸಿದ್ದಾರೆ. ಚಿತ್ರದ ಕಡೆಯ ಹದಿನೈದು ನಿಮಿಷ, ಈ ಬಗ್ಗೆಯೇ ರವಿ ಬೆಳಗೆರೆಯವರಿಂದ ಭಾಷಣ ಹೊಡೆಸಿದ್ದಾರೆ.&lt;br /&gt;&lt;br /&gt;ಅದೆಲ್ಲಾ ಸರಿ ಶ್ರೀವತ್ಸಾ, ಇಂಥ ಸಬ್ಜೆಕ್ಟ್‌ಗಳನ್ನು ಸಭ್ಯವಾಗಿ ಹೇಳೋದಕ್ಕೆ ಸಾಧ್ಯವಿಲ್ಲವೇ ಅನ್ನೋ ಪ್ರಶ್ನೆ ಕೇಳಬೇಕಾಗುತ್ತದೆ. `ಎಡಕಲ್ಲು ಗುಡ್ಡದ ಮೇಲೆ' ಚಿತ್ರದಲ್ಲಿ ಇಂಥದ್ದೇ ಕತೆಯಿದೆ. ಆದರೆ ಅಲ್ಲಿ ಒಂದಿಷ್ಟೂ ಅಸಭ್ಯತೆ ಇಲ್ಲ. ಮುತ್ತು-ಮತ್ತು-ರೋಮಾಂಚಕತೆಗಳನ್ನು ನಮ್ಮ ಹಳೆಯ ಚಿತ್ರಗಳಲ್ಲಿ ಸಂಕೇತಗಳ ಮೂಲಕ ಇನ್ನೂ ಪವರ್‌ಫುಲ್ ಆಗಿಯೇ ಹೇಳಿದ್ದಾರೆ ಅನ್ನೋ ಕೊಂಕು ತೆಗೆಯಬಹುದು.&lt;br /&gt;&lt;br /&gt;ನಮ್ಮ ಕನ್ನಡ ಮಾರ್ಕೆಟ್ ಇಂಥ ಚಿತ್ರಗಳನ್ನು ಹೇಗೆ ಸ್ವೀಕರಿಸುತ್ತೆ ಅನ್ನೋದು ಈ ಸಂದರ್ಭದಲ್ಲಿಯೇ ಪ್ರಕಟವಾಗಲಿದೆ. ಚಿತ್ರದ ಹಾಟ್ ದೃಶ್ಯಗಳನ್ನು ಇನ್ನಷ್ಟು ಹಾಟ್ ಆಗಿ ಮೂಡಿಸಲು ಸಂಜನಾ ಮೇಡಂ ಸಹಕರಿಸಿದ್ದಾರೆ. ನಿರ್ದೇಶಕರು ನಿರ್ದೇಶಿಸಿದ್ದಾರೆ. ನಿರ್ಮಾಪಕ ಶೈಲೇಂದ್ರ ಬಾಬು(ಗೌರಮ್ಮ, ಕುಟುಂಬ ನಿರ್ಮಾಪಕ) ನಿರ್ಮಾಣ ಮಾಡಿದ್ದಾರೆ. ಕಾಫಿ ರಾಘವೇಂದ್ರರ ಸಂಭಾಷಣೆ ಕೆಲವೆಡೆ ಕೈತಟ್ಟುವಂತಿದೆ. ಗುರುಕಿರಣ್ ಹಾಡುಗಳ ಕೆಲವು ಟ್ಯೂನ್‌ಗಳ ಅನುಕರಿಸಿದ್ದರೂ ಕೇಳಲು ಅಡ್ಡಿಯಿಲ್ಲ. ಛಾಯಾಗ್ರಹಣದ ಬಗ್ಗೆ ಹೆಸರಿಡುವಂತಿಲ್ಲ.&lt;br /&gt;&lt;br /&gt;&lt;span style="color:#3333ff;"&gt;ಚಿತ್ರ : ಗಂಡ ಹೆಂಡತಿ &lt;/span&gt;&lt;br /&gt;&lt;span style="color:#3333ff;"&gt;ನಿರ್ಮಾಣ : ಶೈಲೇಂದ್ರ ಬಾಬು &lt;/span&gt;&lt;br /&gt;&lt;span style="color:#3333ff;"&gt;ನಿರ್ದೇಶನ : ರವಿ ಶ್ರೀವತ್ಸ &lt;/span&gt;&lt;br /&gt;&lt;span style="color:#3333ff;"&gt;ಸಂಗೀತ : ಗುರು ಕಿರಣ್ &lt;/span&gt;&lt;br /&gt;&lt;span style="color:#3333ff;"&gt;ತಾರಾಗಣ : ಸಂಜನಾ, ತಿಲಕ್, ವಿಶಾಲ್ ಹೆಗಡೆ, ರವಿ ಬೆಳಗೆರೆ, ಮಂಜು ಭಾಷಿಣಿ ಮತ್ತಿತರರು.&lt;/span&gt;&lt;br /&gt;&lt;br /&gt;ಎಲ್ಲವೂ ಸರಿ; ಮಡದಿ-ಮಕ್ಕಳೊಂದಿಗೆ ಇಂಥ ಚಿತ್ರ ನೋಡೋದು ಹೇಗ್ರೀ?&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-8656133096816238741?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/8656133096816238741/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=8656133096816238741' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/8656133096816238741'/><link rel='self' type='application/atom+xml' href='http://www.blogger.com/feeds/2189102912389204330/posts/default/8656133096816238741'/><link rel='alternate' type='text/html' href='http://kanasinaramane.blogspot.com/2007/06/blog-post_14.html' title='ತನುತನುವಿನಲೂ ಮಜವೊಂದೇ ನಿಜ!'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-1364593711042843270</id><published>2007-06-09T17:41:00.001+05:30</published><updated>2010-04-07T19:09:17.298+05:30</updated><title type='text'>ನ್ಯಾನೋ ಕತೆಗಳು: ಅಮ್ಮಯ್ಯ ಅಮ್ಮಯ್ಯ ಬಾರೇ.. ಅಕ್ಕರೆ ಸಕ್ಕರೆ ತಾರೇ..</title><content type='html'>&lt;p&gt;&lt;span style="color: rgb(0, 153, 0);"&gt;ಇವು ನನಗೆ ಎಲ್ಲೋ ಸಿಕ್ಕ ಕತೆಗಳು? ನಂಬೋದಿಲ್ವಾ? -`ವಿಶ್ವ ಅಮ್ಮಂದಿರ ದಿನ'(ಮೇ.೧೩)ದ ಸಂದರ್ಭದಲ್ಲಿ ಮೂವರು ಅಮ್ಮಂದಿರ ಚಿತ್ರ ಇಲ್ಲಿದೆ. &lt;/span&gt; &lt;/p&gt;&lt;p&gt;&lt;strong&gt;ಅವಳ ಹೆಸರೇ ಅಮ್ಮ ಅಲ್ವಾ?&lt;/strong&gt;&lt;br /&gt;ನನ್ನಮ್ಮನ ಮೇಲೆ ನನಗೆ ಆವತ್ತು ಸಕತ್ತು ಸಿಟ್ಟು ಬಂದಿತ್ತು. ಎಲ್ಲಾ ಅನರ್ಥಕ್ಕೂ ಅವಳೇ ಕಾರಣ ಎನ್ನುವಷ್ಟು ದ್ವೇಷವೂ, ಜಿಗುಪ್ಸೆಯೂ ಉಂಟಾಗಿತ್ತು. ಅವಳನ್ನು ಕೊಂದು ಜೈಲಿಗೆ ಹೋಗಲೇ ಅನ್ನಿಸುವಷ್ಟು ಮನಸ್ಸಿನಲ್ಲಿದ್ದ ರಾಕ್ಷಸ ಅಬ್ಬರಿಸುತ್ತಿದ್ದ. ತಪ್ಪು ನನ್ನದೂ ಇರಬಹುದು! &lt;strong&gt;&lt;br /&gt;&lt;/strong&gt;&lt;br /&gt;ನನಗೆ ಅಪ್ಪ ಯಾರು ಎಂಬುದೇ ಗೊತ್ತಿಲ್ಲ. ನಾನು ಹುಡುಗನಾಗಿದ್ದಾಗ, ಮನೆಗೆ ಯಾರ್‍ಯಾರೋ ಬರ್ತಾ ಇದ್ದರು. ಬಂದವರು ನನಗೆ ಚಾಕಲೇಟ್ ಕೊಡ್ತಾಯಿದ್ದರು. ಅಮ್ಮ ಅವರ ಜೊತೆ ನಗ್ತಾನಗ್ತಾ ಮಾತಾಡ್ತಾಯಿದ್ದರು. ಅಕ್ಕಪಕ್ಕದ ಜನ ನನ್ನನ್ನು ಕಂಡು, ಒಂದು ಥರಾ ನಗ್ತಾಯಿದ್ದರು. ಯಾಕೋ ನನಗೆ ಅದೆಲ್ಲ ಆವಾಗ ಅರ್ಥವಾಗ್ತಾ ಇರಲಿಲ್ಲ. &lt;/p&gt;&lt;p&gt;ಏನೇನೋ ಮಾಡಿ, ಅಮ್ಮ ನನ್ನ ಓದಿಸಿದಳು. ನಾನು ಜ್ಞಾನವಂತನಾಗೋ ಹೊತ್ತಿಗೆ, ಅಮ್ಮ ದಣಿದಿದ್ದಳು. ಅಮ್ಮ ದಣಿಯಲು ಕಾರಣ ಸಹಾ ನನಗೆ ಗೊತ್ತಾಗಿತ್ತು! ಆದರೆ ಕೇಳುವಂತಿರಲಿಲ್ಲ. ಆ ಬಗ್ಗೆ ಚರ್ಚೆ ಮಾಡುವಂತಿರಲಿಲ್ಲ. ಆದರೆ ಮೊನ್ನೆ ಮನೆಗೆ ಬಂದಾಗ, ಅಂದು ಚಾಕಲೇಟ್ ಕೊಟ್ಟಿದ್ದ ಗಂಡಸು ಮನೆಯಲ್ಲಿದ್ದ! ನನ್ನ ಹೃದಯದ ಮೇಲೆ ಕೆಂಡದ ಮಳೆ.&lt;br /&gt;&lt;/p&gt;&lt;p&gt;ಬೆಳಗ್ಗೆ ಓದಿದ್ದ ಸುಭಾಷಿತ ನನ್ನನ್ನು ತಣ್ಣಗಾಗಿಸಿತು. `ಆಕೆ ಏನೇ ತಪ್ಪು ಮಾಡಿರಬಹುದು. ನೀವು ಕ್ಷಮಿಸಿ ಬಿಡಿ. ಯಾಕೆಂದರೆ, ಆಕೆ ನಿಮ್ಮ ತಾಯಿ'. ಹೌದು, ಅವಳು ನನ್ನಮ್ಮ. ಅವಳ ರಕ್ತ-ಮಾಂಸ ಹಂಚಿಕೊಂಡು, ಭೂಮಿಗೆ ಬಂದವನು ನಾನು! ಅವಳು ಅಮ್ಮ..&lt;br /&gt;***&lt;br /&gt;&lt;strong&gt;ಅಮ್ಮನ ನೆನಪೇ ಸಾಕು..&lt;/strong&gt;&lt;br /&gt;&lt;/p&gt;&lt;p&gt;ಎಲ್ಲವೂ ಮುಗಿದು ಹೋಯಿತು ಎಂದು ಅನ್ನಿಸುತ್ತಿತ್ತು. ಪ್ರಾಣ ಕಳೆದುಕೊಳ್ಳುವ ಬಯಕೆ ಮನದಲ್ಲಿ ಮೊಳೆಯುತ್ತಿತ್ತು. ಕಷ್ಟಪಟ್ಟು ಸಂಪಾದಿಸಿದ್ದ ಕೆಲಸವನ್ನು ಕಳೆದುಕೊಂಡು ಅಂದಿಗೆ, ನಾಲ್ಕು ದಿನ. ಕೆಲಸ ಹೋದದ್ದಕ್ಕಿಂತ ಅವಮಾನವೇ ಮನವನ್ನು ಕೊರೆಯುತ್ತಿತ್ತು. ಮೋಸಗಾರ ಎಂದು ಜಗತ್ತು ಕೇಕೆ ಹಾಕುತ್ತಿತ್ತು.&lt;br /&gt;&lt;/p&gt;&lt;p&gt;ಯಾವುದೋ ಒಂದು ಕ್ಷಣದ ದುರಾಸೆ, ನನ್ನನ್ನು ಬೆತ್ತಲು ಮಾಡಿ ಜಗದ ಮುಂದೆ ನಿಲ್ಲಿಸಿತ್ತು. ಇಷ್ಟು ವರ್ಷದ ನಿಯತ್ತು ಎಲ್ಲರಿಗೂ ಮರೆತು ಹೋಗಿತ್ತು. ಕೆಲಸ ಕಳೆದುಕೊಂಡ ವಿಚಾರ ಗೊತ್ತಾದ ಮರುಕ್ಷಣವೇ, ನನ್ನ ನಿಶ್ಚಿತಾರ್ಥ ಮುರಿದು ಬಿತ್ತು. ಜೀವಕ್ಕೆ ಜೀವ ಕೊಡ್ತೀನಿ ಎನ್ನುತ್ತಿದ್ದ ಮಾವನ ಮಗಳು, `ನಮ್ಮಪ್ಪ ಅಮ್ಮನ ಮನಸ್ಸು ನೋಯಿಸೋದು ಹೇಗೆ?' ಅಂದಳು.&lt;br /&gt;ಎಲ್ಲರೂ ನನ್ನನ್ನು ಕೈಬಿಟ್ಟಿದ್ದಾರೆ ಅನ್ನಿಸಿದಾಗ, ಅಮ್ಮ ನೆನಪಾದಳು. ಅಮ್ಮ ನೆನಪಾದ ತಕ್ಷಣ ಬೆಳಕು ಕಾಣಿಸಿತು.&lt;br /&gt;***&lt;br /&gt;&lt;/p&gt;&lt;p&gt;&lt;strong&gt;ಅಮ್ಮನ ಹಂಬಲ&lt;/strong&gt;&lt;br /&gt;&lt;/p&gt;&lt;p&gt;ಬದುಕಿದ್ದಾಗ ಎರಡು ಹನಿ ನೀರು ಬಿಡಲು ಬರಲು ಅವನಿಗೆ ಪುರುಸೊತ್ತಿಲ್ಲ. ಫೋನ್ ಮಾಡಿ, `ಜೀವ ಆಗಲೋ ಈಗಲೋ ಎನ್ನುವಂತಿದೆ. ಬೇಗ ಬನ್ನಿ' ಅಂದ್ರೆ, `ಇಗೋ ಬಂದೆ' ಅಂದವನು ಬಂದದ್ದು ಎಲ್ಲಾ ಮುಗಿದ ಮೇಲೆ! ಸಾಯೋ ಮುನ್ನ ಮಗನ ಮುಖ ನೋಡಬೇಕು ಎಂದು ಆ ತಾಯಿ ಎಷ್ಟು ಹಂಬಲಿಸಿದ್ದಳು. ಒಂದು ಸಣ್ಣ ಹಂಬಲವನ್ನು ಈಡೇರಿಸಲು ಅವನಿಂದ ಆಗಲಿಲ್ಲ. ಛೇ ಛೇ.&lt;br /&gt;&lt;/p&gt;&lt;p&gt;ಜನರಿಗೆ ಅಂಜಿ, ಹೆಣದ ಮುಂದೆ ಬಲವಂತದ ಕಣ್ಣೀರು ಸುರಿಸುತ್ತಿದ್ದಾನೆ. ಬದುಕಿದ್ದಾಗ ತಿರುಗಿ ನೋಡದೇ, ಈಗ ಸಮಾ, ಸಮಾ ತುಂಬಾ ಹೂವು.. ಕಾಯಿ ಮೇಲೆ ಕಾಯಿ ಒಡೆಯುತ್ತಿದ್ದಾನೆ.. ಬಡ್ಡೀ ಮಗ.. ಛೇ ಛೇ.&lt;br /&gt;&lt;/p&gt;&lt;p&gt;ಅವನು ಆ ತಾಯಿಗೆ ಒಂದು ರೀತಿ ಮೋಸ ಮಾಡಿದ. ನಾನು ಮಾಡಿದ್ದೇನು? ಹಾಸಿಗೆ ಕೆಳಗಿದ್ದ ಅಡಿಕೆ‌ಎಲೆ ಚೀಲದಿಂದ ಕವರ್‌ನಲ್ಲಿ ಸುತ್ತಿದ್ದ ನೋಟುಗಳನ್ನು ನನ್ನ ಮುಂದೆ ಹಾಕಿದ್ದಳು ಪುಣ್ಯಾತ್ಗಿತ್ತಿ. `ಇದರಲ್ಲಿ ೩೦೦೦ ಇದೆ. ನನ್ನ ಬೆಂಗಳೂರು ಆಸ್ಪತ್ರೆಗೆ ಸೇರಿಸೋ' ಎಂದು ಅಂಗಲಾಚಿದ್ದಳು.&lt;br /&gt;&lt;/p&gt;&lt;p&gt;`ಮಗ ಇರೋವಾಗ, ನಾನು ಆ ಕೆಲಸ ಮಾಡಿದ್ರೆ ಏನ್ ಚೆನ್ನಾಗಿರುತ್ತೆ. ಒಂದು ಸಲ ಅವನಿಗೆ ವಿಷಯ ತಿಳಿಸ್ತೀನಿ. ಅವನು ಆಸಕ್ತಿ ತೋರಿಸದಿದ್ದರೇ, ನಾನಿದ್ದೀನಿ' ಎಂದು ಭರವಸೆ ನೀಡಿದ್ದೆ. ಮಲಗಿದ ಜಾಗದಲ್ಲೇ ನಕ್ಕಿದ್ದಳು. ಅವಳು ಅಂದು ನಕ್ಕದ್ದರ ಅರ್ಥ ಇಂದು ಗೊತ್ತಾಗುತ್ತಿದೆ. ಆದರೆ ಸಮಯ ಮೀರೋಯ್ತಲ್ಲಾ..&lt;br /&gt;&lt;/p&gt;&lt;p style="color: rgb(51, 204, 0); font-weight: bold;"&gt;(ಇಂಥ ಒಂದೆರಡು ಪ್ಯಾರದ ಕತೆಗಳನ್ನು 'ನ್ಯಾನೋ ಕತೆ'ಗಳು ಎಂದು ಕರೆದಿದ್ದೇನೆ.. ಇದು ಕಥೆಯಾ? ಕನವರಿಕೆಯಾ?) &lt;/p&gt;&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-1364593711042843270?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/1364593711042843270/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=1364593711042843270' title='0 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/1364593711042843270'/><link rel='self' type='application/atom+xml' href='http://www.blogger.com/feeds/2189102912389204330/posts/default/1364593711042843270'/><link rel='alternate' type='text/html' href='http://kanasinaramane.blogspot.com/2007/06/blog-post_09.html' title='ನ್ಯಾನೋ ಕತೆಗಳು: ಅಮ್ಮಯ್ಯ ಅಮ್ಮಯ್ಯ ಬಾರೇ.. ಅಕ್ಕರೆ ಸಕ್ಕರೆ ತಾರೇ..'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>0</thr:total></entry><entry><id>tag:blogger.com,1999:blog-2189102912389204330.post-857461431648561764</id><published>2007-06-09T17:16:00.001+05:30</published><updated>2010-04-07T19:04:14.875+05:30</updated><title type='text'>ಕನಸಿನ ಮನೆಗೆ ಸ್ವಾಗತ</title><content type='html'>ಗೆಳೆಯರೇ,&lt;br /&gt;ಬದುಕಿಗೆ ಕನಸುಗಳು ಬೇಕು..&lt;br /&gt;ನಾನಂತೂ ಕನಸುಗಾರ..&lt;br /&gt;ನೀವು ಕನಸುಗಾರರಾದರೇ ಮಾತ್ರ ನನ್ನ ಮನೆಗೆ ಬನ್ನಿ..&lt;div class="blogger-post-footer"&gt;ಇದು ಮುಕ್ತಾಯವಲ್ಲ ಆರಂಭ!&lt;img width='1' height='1' src='https://blogger.googleusercontent.com/tracker/2189102912389204330-857461431648561764?l=kanasinaramane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://kanasinaramane.blogspot.com/feeds/857461431648561764/comments/default' title='Post Comments'/><link rel='replies' type='text/html' href='http://www.blogger.com/comment.g?blogID=2189102912389204330&amp;postID=857461431648561764' title='1 Comments'/><link rel='edit' type='application/atom+xml' href='http://www.blogger.com/feeds/2189102912389204330/posts/default/857461431648561764'/><link rel='self' type='application/atom+xml' href='http://www.blogger.com/feeds/2189102912389204330/posts/default/857461431648561764'/><link rel='alternate' type='text/html' href='http://kanasinaramane.blogspot.com/2007/06/blog-post.html' title='ಕನಸಿನ ಮನೆಗೆ ಸ್ವಾಗತ'/><author><name>ಹ.ಚ.ನಟೇಶ ಬಾಬು</name><uri>http://www.blogger.com/profile/05190781995658386863</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='21' src='http://bp2.blogger.com/_eDo9m8Nl3wg/SBR-feVPVqI/AAAAAAAAAEE/R_T-3YcY0HA/S220/natesh.jpeg'/></author><thr:total>1</thr:total></entry></feed>
