Wednesday, July 4, 2007

ಟಾಪ್‌-5 : ಇದು ಒಂದು ಮುತ್ತಿನ ಕಥೆ!


ರಾಜ್‌ಕುಮಾರ್‌ ಎಲ್ಲಿಂದಲೋ ಬಂದವರಲ್ಲ.. ನಮ್ಮಂತೆಯೇ ನಮ್ಮ ಮಧ್ಯೆಯೇ ಇದ್ದವರು. ಎತ್ತರೆತ್ತರ ಬೆಳೆದವರು. ಅವರು ಬೆಳೆಯುವುದರ ಹಿಂದೆ ಶ್ರಮದ ಬೆವರಿತ್ತು. ರಾಜ್‌ರ 79ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಪದೇ ಪದೇ ಕೇಳಲ್ಪಡುವ ಕೆಲವು ಪ್ರಶ್ನೆಗಳು ಮತ್ತು ಉತ್ತರಗಳು...


ರಾಜ್‌ ಇಷ್ಟವಾಗಲು 5 ಕಾರಣಗಳು :
1. ಕನ್ನಡ ಬಿಟ್ಟು ಬೇರೆ ಭಾಷೆಗೆ ಹೋಗಲಿಲ್ಲ.
2. ಜಾತಿಯಿಂದ ಗುರ್ತಿಸಿಕೊಳ್ಳಲಿಲ್ಲ.
3. ರಾಜಕೀಯಕ್ಕೆ ಹೋಗಲಿಲ್ಲ.
4. ಕೀರ್ತಿ ಕಿರೀಟ ತಲೆ ಮೇಲೆ ಕುಂತರೂ, ವಿನಯವಂತಿಕೆ ಬಿಡಲಿಲ್ಲ.
5. ಹತ್ತಿದ ಏಣಿ ಒದೆಯದೇ, ಅಭಿಮಾನಿಗಳ ದೇವರೆಂದು ಗುರ್ತಿಸುವ ಬುದ್ದಿ.
ರಾಜ್‌ ಹೆಗ್ಗಳಿಕೆ ಕಾರಣವಾದ 5 ಅಂಶಗಳು :

1. ಗಾಯಕ ಮತ್ತು ನಾಯಕನಾಗಿ ಯಶಸ್ಸು.
2. ಸುಸ್ಪಷ್ಟ ಕನ್ನಡ.
3. ಎಲ್ಲಾ ಪಾತ್ರಕ್ಕೂ ಸೈ..
4. ಸ್ಯಾಂಡಲ್‌ವುಡ್‌ ಇತಿಹಾಸ ಶ್ರೀಮಂತಗೊಳಿಸಿದ್ದು.
5. ನಟನಾಗಿ ಉಳಿಯದೇ ನಾಡು-ನುಡಿಗಾಗಿ ಕೈ ಎತ್ತಿದ್ದು.
ರಾಜ್‌ ಬಗೆಗಿನ 5 ಟೀಕೆಗಳು :

1. ಅಗತ್ಯಕ್ಕಿಂತ ಹೆಚ್ಚಿನ ಮುಗ್ಧತೆ.
2. ನರಹಂತಕ ವೀರಪ್ಪನ್‌ ಅಂಗಳದಿ ನಿಂತು, ‘ನನ್ನನ್ನು ಇಲ್ಲಿಂದ ನಾಡಿಗೆ ಕರೆಸಿಕೊಳ್ಳಿ’ ಎಂದು ಸರ್ಕಾರಕ್ಕೆ ಧೈನ್ಯತೆಯಿಂದ ಕೈಜೋಡಿಸಿದ್ದು.
3. ರಾಜ್‌ ಅಭಿಮಾನಿ ಸಂಘ, ರಜನಿ ಮತ್ತು ಚಿರಂಜೀವಿ ಅಭಿಮಾನಿ ಸಂಘದಂತೆ ಹೆಚ್ಚು ಸಮಾಜಮುಖಿಯಾಗಲಿಲ್ಲ. ಕೆಲವು ಸಲ ಅಭಿಮಾನಿ ಸಂಘದ ಪುಂಡಾಟಕ್ಕೆ ರಾಜ್‌ ಕಡಿವಾಣ ಹಾಕಲಿಲ್ಲ.
4. ತಮ್ಮೊಳಗಿನ ಶಕ್ತಿಯನ್ನು ಬಳಸಿಕೊಂಡು, ಕರ್ನಾಟಕವನ್ನು ಸಮರ್ಥವಾಗಿ ಬಲಪಡಿಸಲಿಲ್ಲ.
5. ಟೀಕೆ ಮಾಡುವುದಕ್ಕಾಗಿಯೇ ಕೆಲವು ಟೀಕೆಗಳು..
ರಾಜ್‌ ನಾಡಿಗೇನು ಕೊಟ್ಟರು? 5 ವಿಚಾರಗಳು...

1. ತಮ್ಮೆರಡು ಕಣ್ಣುಗಳ ಕೊಟ್ಟು, ಕೋಟ್ಯಂತರ ಅಭಿಮಾನಿಗಳಿಗೆ ಪ್ರೇರಣೆ ನೀಡಿದರು. ಸಾವಿರಾರು ದೃಷ್ಟಿಹೀನರಿಗೆ ಈ ಪರಿಣಾಮ, ಭರವಸೆಯ ಬೆಳಕು.
2. ತಮ್ಮ ಚಿತ್ರಗಳ ಮೂಲಕ ಕೌಟುಂಬಿಕ ಸಾಮರಸ್ಯಕ್ಕೆ ಕೊಡುಗೆ.
3. ಕೊನೆ ಉಸಿರಿಡುವ ತನಕ, ಅಭಿಮಾನಿಗಳಿಗೆ ಪ್ರೀತಿಯ ಸಿಂಚನ.
4. ಇತಿಹಾಸ, ಪುರಾಣ, ಸಂತರ ಚಿತ್ರವನ್ನು ಮತ್ತು ನಾಡ ಸಂಸ್ಕೃತಿಯನ್ನು ತಮ್ಮ ಪಾತ್ರಗಳ ಮೂಲಕ, ರಾಜ್‌ ಎಲ್ಲರ ಎದೆಯಲ್ಲಿ ಬಿತ್ತಿದ್ದು..
5. ತಮ್ಮ ಚಿತ್ರಗಳ ಮೂಲಕ ಶಿಕ್ಷಕನಂತೆ ನಿಂತು, ಸಭ್ಯ ಪ್ರಜೆಗಳ ಸೃಷ್ಟಿಸಿದ್ದು..
ರಾಜ್‌ ಯಶಸ್ಸಿನಿಂದಿನ 5 ಕಾರಣಗಳು :
1. ಪಾರ್ವತಮ್ಮ ರಾಜ್‌ ಕುಮಾರ್‌.
2. ಕನ್ನಡತನಕ್ಕೆ ಅಂಟಿಕೊಂಡದ್ದು.
3. ಅಭಿಮಾನಿಗಳ ಪ್ರೀತಿ.
4. ಪ್ರತಿಭೆ ಮತ್ತು ಶ್ರಮದ ಸಮ್ಮಿಲನ.
5. ಅದೃಷ್ಟ
ಮೇಲಿನ ವಿಚಾರಗಳಿಗೆ ನಿಮ್ಮ ಸಮ್ಮತಿ ಇದೆಯಾ? ಅಥವಾ ಏನಾದರೂ ತಕರಾರಿದ್ದರೇ ನಾಲ್ಕು ಸಾಲು ಬರೆಯಿರಿ..

No comments: